spot_img
spot_img

ಮುಂಬೈ ನಗರ : ಕಾರ್‌ಗಳಿಗೆ ಟೋಲ್ ಇಲ್ಲ….

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಮುಂಬೈ (ಮಹಾರಾಷ್ಟ್ರ): ಮುಂಬೈ ನಗರದಲ್ಲಿ ಪ್ರವೇಶ ಮಾಡುವ ಲಘು ಮೋಟಾರು ವಾಹನಗಳಿಗೆ ಟೋಲ್‌ ದರ ಮನ್ನಾ ಮಾಡುವುದಾಗಿ ಸೋಮವಾರ ಅಕ್ಟೋಬರ್ 14ರ ಮಧ್ಯ ರಾತ್ರಿಯಿಂದ ಈ ಹೊಸ ಆದೇಶ ಹೊರಡಿಸಿದೆ.

ಮುಂಬೈ ಮಹಾ ನಗರದ ಸುತ್ತಲೂ ಇರುವ ಐದು ಟೋಲ್ ಬೂತ್‌ಗಳಲ್ಲಿ ಕಾರುಗಳೂ ಸೇರಿದಂತೆ ಎಲ್ಲ ರೀತಿಯ ಲಘು ಮೋಟಾರು ವಾಹನಗಳಿಗೆ ಇನ್ಮುಂದೆ ಟೋಲ್ ಇರೋದಿಲ್ಲ.

ಇದೇ ವರ್ಷಾಂತ್ಯದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾರರ ಓಲೈಕೆಗೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಇಂಥಾದ್ದೊಂದು ತೀರ್ಮಾನ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಟೋಲ್ ಮನ್ನಾ ಮಾಡಬೇಕು ಅನ್ನೋದು ಜನರ ಬಹು ದಿನಗಳ ಬೇಡಿಕೆಯಾಗಿತ್ತು.

ಮುಂಬೈ ನಗರಕ್ಕೆ ಪ್ರವೇಶ ಪಡೆಯುವ ವಾಹನಗಳು ದಹೀಸರ್, ಆನಂದ್ ನಗರ, ವೈಶಾಲಿ, ಐರೋಲಿ ಹಾಗೂ ಮುಲುಂದ್‌ ಪ್ರದೇಶಗಳಲ್ಲಿ ಇರುವ ಟೋಲ್‌ಗಳನ್ನು ದಾಟಿ ಬರಬೇಕು. ಮುಂಬೈ ನಗರದ ಸುತ್ತಲೂ ಇರುವ ಎಲ್ಲಾ ಟೋಲ್‌ಗಳಲ್ಲೂ ಲಘು ಮೋಟಾರು ವಾಹನಗಳು ಇನ್ಮುಂದೆ ಹೆದ್ದಾರಿ ಟೋಲ್ ಹಣ ಕಟ್ಟಬೇಕಿಲ್ಲ ಎಂದು ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಚಿವ ದಾದಾಜಿ ದಗದು ಭೂಸೇ ಅವರು ಮಾಧ್ಯಮಗಳಿಗೆ ವಿವರಣೆ ನೀಡಿದ್ದಾರೆ.

2026ರವರೆಗೆ ಟೋಲ್ ಸಂಗ್ರಹ ಮಾಡಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಇದೀಗ 2024ಕ್ಕೇ ಟೋಲ್ ಸಂಗ್ರಹ ಮೊಟಕುಗೊಳ್ಳಲಿದೆ.

ಮುಂಬೈ ಸುತ್ತಲಿನ ಈ ಐದೂ ಟೋಲ್ ಬೂತ್‌ಗಳಲ್ಲಿ 45 ರೂ. ನಿಂದ 75 ರೂ. ವರೆಗೆ ಪ್ರತಿ ಲಘು ಮೋಟಾರು ವಾಹನ (ಎಲ್‌ಎಂವಿ) ಟೋಲ್ ಹಣ ಭರಿಸಬೇಕಿತ್ತು. ಆದರೆ ಈ ಎಲ್ಲಾ 5 ಟೋಲ್‌ ಬೂತ್‌ಗಳಲ್ಲಿ ಪ್ರತಿ ದಿನ 3.5 ಲಕ್ಷ ವಾಹನಗಳು ಪ್ರಯಾಣಿಸುತ್ತವೆ. ಹಲವು ತಿಂಗಳಿಂದ ಈ ಕುರಿತಾಗಿ ಚರ್ಚೆಗಳು ನಡೆಯುತ್ತಿದ್ದವು. ಇದೀಗ ನಮ್ಮ ಸರ್ಕಾರ ಇಂಥಾದ್ದೊಂದು ಕ್ರಾಂತಿಕಾರಿ ತೀರ್ಮಾನ ಕೈಗೊಂಡಿದೆ ಎಂದು ಸಚಿವರು ಹೇಳಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GBS SYMPTOMS PREVENTIVE MEASURES: ಶಿಶುಗಳಲ್ಲಿ ಕಂಡುಬರುವ ಈ ವೈರಸ್ ಲಕ್ಷಣಗಳೇನು?

Guntur, Andhra Pradesh News: ಪ್ರಸ್ತುತ ರಾಜ್ಯಾದ್ಯಂತ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಾಂಕ್ರಾಮಿಕವಲ್ಲದಿದ್ದರೂ, ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇತರ ಸೋಂಕುಗಳಿರುವ ಜನರಲ್ಲಿ...

INDIA AND QATAR SIGNED AN AGREEMENT:ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಮುಂದೆ ಬಂದ ಕತಾರ್

New Delhi News: ಕತಾರ್ INDIAದಲ್ಲಿ 10 ಬಿಲಿಯನ್ ಡಾಲರ್​​ ಹೂಡಿಕೆ ಮಾಡಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, 2 ರಾಷ್ಟ್ರಗಳು...

REMOTE AUSTRALIAN BEACH:ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ 157 ಡಾಲ್ಫಿನ್ಗಳು ಸಾವು

Arthur River (Australia) News: 157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ...

MAHA KUMBHMELA:75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ

Lucknow (Uttar Pradesh) News: ಪವಿತ್ರ KUMBHMELA ಸ್ನಾನಕ್ಕಾಗಿ ಜೈಲು ಸಚಿವರ ಮೇಲ್ವಿಚಾರಣೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿ.ವಿ.ರಾಮಶಾಸ್ತ್ರಿ ತಿಳಿಸಿದ್ದಾರೆ. ಸಂಗಮದಿಂದ...