spot_img
spot_img

MYLARA LINGESHWARA TEMPLE : ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಗೆ ತೆರೆ

spot_img
spot_img

Share post:

Vijayanagara News:

MYLARA LINGESHWARA TEMPLEದಲ್ಲಿ ಕಂಚಾವೀರರು ಮೈಜುಮ್ಮೆನಿಸುವ ಪವಾಡಗಳನ್ನು ಪ್ರದರ್ಶಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ವಿಶಿಷ್ಠ ಪದ್ಧತಿ. ಪಲ್ಲಕ್ಕಿಯೊಂದಿಗೆ ಆಗಮಿಸುವ ಕ್ಷೇತ್ರದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರ ಆಶೀರ್ವಾದ ಪಡೆಯುವ ಕಂಚಾವೀರರು ಕೈ ಪವಾಡ, ಕಾಲು ಪವಾಡ ಮತ್ತು ಸರಪಳಿ ಪವಾಡ ಎಂಬ ಮೂರು ವಿಭಾಗಗಳಲ್ಲಿ ಪವಾಡ ಮಾಡುತ್ತಾರೆ.

ನೋಡನೋಡುತ್ತಿದ್ದಂತೆ ಕೇಕೆ, ಚೀತ್ಕಾರಗಳ ನಡುವೆ ಕಾಲಿಗೆ ಬಗಣಿ ಗೂಟ ಬಡಿದುಕೊಳ್ಳುತ್ತಾರೆ. ಅದರಲ್ಲಿ ಮುಳ್ಳಿನ ಕಂಟಿಗಳನ್ನು ದಾಟಿಸಿಕೊಳ್ಳುತ್ತಾರೆ. ಸುಮಾರು 5 ಅಡಿ ಕಬ್ಬಿಣದ ಸಲಾಖೆಯನ್ನು ಕಾಲಿನೊಳಗಿನ ರಂಧ್ರದೊಳಗೆ ದಾಟಿಸುತ್ತಾರೆ. MYLARA LINGESHWARA TEMPLE ಕೈಪವಾಡದಲ್ಲಿ ಕೈಗೆ ಪಂಚಾರತಿ ಇರುವ ಕಬ್ಬಿಣ ಚುಚ್ಚಿಕೊಳ್ಳುತ್ತಾರೆ. ಪಂಚಾರತಿಗೆ ದೀಪ ಹಚ್ಚಿ ಮೈಲಾರಲಿಂಗೇಶ್ವರನಿಗೆ ಬೆಳಗುತ್ತಾರೆ.

ಕಬ್ಬಿಣದ ಸರಪಳಿಗಳನ್ನು ಏಳುಕೋಟಿ ಏಳುಕೋಟಿ ಎನ್ನುತ್ತಲೇ ಕ್ಷಣಾರ್ಧದಲ್ಲಿ ತುಂಡು ಮಾಡುತ್ತಾರೆ. ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಭರತ ಹುಣ್ಣಿಮೆಯ ಎರಡನೇ ದಿನ ಕಾರ್ಣಿಕೋತ್ಸವ ನೆರವೇರಿತು. ಇದಾದ ಮರುದಿನ ಕಂಚಾವೀರರು ಶ್ರೀ ಕ್ಷೇತ್ರ MYLARA LINGESHWARA TEMPLEದ ಪಕ್ಕದಲ್ಲಿರುವ ಗಂಗಮಾಳಮ್ಮ ದೇವಸ್ಥಾನದಲ್ಲಿ ವಿವಿಧ ಪವಾಡಗಳನ್ನು ಪ್ರದರ್ಶಿಸಿದ್ದು, ಭಕ್ತರು ಮೂಕವಿಸ್ಮಿತರಾದರು.

As if cutting the head and then assembling it:

ಇಲ್ಲಿ ಹಲವು ಶತಮಾನಗಳಿಂದ ಈ ರೀತಿಯ ಪವಾಡಗಳು ನಡೆಯುತ್ತಿವೆ. ಈ ಹಿಂದೆ ಕಂಚಾವೀರರು ತಮ್ಮ ಶಿರವನ್ನೇ ತುಂಡರಿಸಿ​, ನಂತರ ಜೋಡಿಸುವ ಪವಾಡ ಮಾಡುತ್ತಿದ್ದರಂತೆ. ಆದರೆ ಮೈಲಾರಲಿಂಗೇಶ್ವರ ಕನಸಲ್ಲಿ ಬಂದು ನಾನು ಒಮ್ಮೊಮ್ಮೆ ಕ್ಷೇತ್ರದಲ್ಲಿ ಇರುವುದಿಲ್ಲ.

ಕ್ಷೇತ್ರದಲ್ಲಿ ಇಲ್ಲದ ವೇಳೆ ಈ ರೀತಿಯ ಪವಾಡವಾದರೆ ಯಾವುದಾದರೂ ಅನಾಹುತವಾಗಬಹುದು.ಕಂಚಾವೀರರು ವಂಶಪಾರಂಪರ್ಯವಾಗಿ ಪವಾಡ ಆಚರಿಸಿಕೊಂಡು ಬರುತ್ತಾರೆ. ಇವರು ಪವಾಡ ಮಾಡಿದ ನಂತರ ಮದುವೆಯಾಗದ ಯುವಕರಿಗೆ ಮದುವೆ ಭಾಗ್ಯ ಕೂಡಿ ಬರುತ್ತದಂತೆ. ಮೈಲಾರದಲ್ಲಿ ಕಂಚಾವೀರರ ಮನೆತನಗಳಿದ್ದು ಅವರು ಮೈಲಾರಲಿಂಗೇಶ್ವರ ಭಕ್ತರಾಗಿದ್ದಾರೆ.

ದೇಹಕ್ಕೆ ಬಗಣಿ ಗೂಟ, ಸಲಾಕೆ, ಮುಳ್ಳಿನಕಂಟೆ, ಕೈಯಲ್ಲಿ ಆರತಿ ಚುಚ್ಚಿಕೊಂಡು ಬೆಳಗಿದರೂ ಇವರಿಗೆ ಯಾವುದೇ ನೋವು ಆಗುವುದಿಲ್ಲ ಎಂಬುದು ವಿಶೇಷ. ನನ್ನ ಆರಾಧಕರಿಗೆ ಕೇಡಾಗಬಾರದು ಎಂದು ತಿಳಿಸಿದ್ದರಿಂದ ಅಂದಿನಿಂದ ಇಲ್ಲಿ ಶಿರಚ್ಚೇದನ ಪವಾಡವನ್ನು ನಿಲ್ಲಿಸಲಾಗಿದೆ.

ಪ್ರತಿ ವರ್ಷ ಸುಮಾರು 32 ಕಂಚಾವೀರರ ಮನೆತನಗಳು ಇಂಥ ಪವಾಡ ಮಾಡುತ್ತವೆ. ಇಲ್ಲಿ ಮೈಲಾರಲಿಂಗೇಶ್ವರ ಮಣಿಕಾಸುರ ಮಲ್ಲಾಸುರನ ವಧೆ ಮಾಡಿದ ನಂತರ ಮಾನವನ ರಕ್ತ ಭೂಮಿ ಮೇಲೆ ಚೆಲ್ಲಬೇಕು ಎನ್ನುವ ಕಾರಣದಿಂದ ಇಂಥ ಪವಾಡ ಮಾಡುವ ಪರಂಪರೆ ಬೆಳೆದು ಬಂದಿದೆ.

ಈ ಪವಾಡಗಳೊಂದಿಗೆ ಪ್ರಸ್ತುತ ವರ್ಷದ ಮೈಲಾರಲಿಂಗೇಶ್ವರ ಜಾತ್ರೆಗೆ ವಿಧ್ಯುಕ್ತ ತೆರೆ ಬಿದ್ದಿದೆ ಎಂದು ದೇವಾಲಯದ ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್ ತಿಳಿಸಿದರು.  ಒಂದು ಹನಿ ರಕ್ತವೂ ಹೊರಬರದಿರುವುದು ಭಕ್ತರನ್ನು ಆಶ್ಚರ್ಯಗೊಳಿಸುತ್ತದೆ.

ಹೊಸ ಕಂಚಾವೀರರಿಗೆ ಹಿರಿಯ ಕಂಚಾವೀರರು ಮಾರ್ಗದರ್ಶನ ಮಾಡುವ ಮೂಲಕ ಪವಾಡಗಳನ್ನು ಮಾಡಿಸುತ್ತಾರೆ. ಕ್ಷೇತ್ರದ ಧರ್ಮದರ್ಶಿ ನೀಡುವ ಭಂಡಾರವನ್ನು ಇವರು ಗಾಯಕ್ಕೆ ಹಚ್ಚಿಕೊಂಡು ಮನೆಗಳಿಗೆ ತೆರಳುತ್ತಾರೆ.

ಇದನ್ನು ಓದಿರಿ : Delhi Railway Station Stampede: Railways Takes Several Measures To Avoid Untoward Incidents

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...