spot_img
spot_img

NAGPUR VIDARBHA ORANGES : ಕಿತ್ತಳೆಗೆ ಬೇಡಿಕೆ ಬರಬೇಕಾದರೆ ರೈತರಲ್ಲಿ ಇರುವ ಈ ತಪ್ಪು ತಿಳಿವಳಿಕೆ ಹೋಗಬೇಕಿದೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Amravati, Maharashtra News:

ಕಿತ್ತಳೆ ಬೆಳೆಗಾರರು ಈ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮತ್ತೊಮ್ಮೆ NAGPUR VIDARBHA ORANGES ಗೆ ಮಾರುಕಟ್ಟೆಯಲ್ಲಿ ರಾರಾಜಿಸುತ್ತದೆ. ಇದರಿಂದ ಕಿತ್ತಳೆ ಬೆಳೆಗಾರರು ಲಾಭ ಪಡೆಯಬಹುದು ಎಂದು ಜಲ್ಗಾಂವ್​ನ ಜಗದ್ವಿಖ್ಯಾತ ಕೃಷಿ ತಜ್ಞ ಡಾ ಕೆಬಿ ಪಾಟೀಲ್​ ತಿಳಿಸಿದ್ದಾರೆ. ಹಾಗಾದರೆ ಯಾವ ಕ್ರಮದ ಮೂಲಕ ವಿದರ್ಭ ಕಿತ್ತಳೆ ರುಚಿ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು ಎಂಬ ಕುರಿತು ವಿಶೇಷ ವರದಿ ಇಲ್ಲಿದೆ.

ಇಡೀ ಜಗತ್ತಿನಲ್ಲಿಯೇ ವಿದರ್ಭ (ನಾಗ್ಪುರ) ಕಿತ್ತಳೆಗೆ ಬೇಡಿಕೆ ಹೆಚ್ಚು. ಇದಕ್ಕೆ ಕಾರಣ ಅದರ ಸಿಹಿ. ಆದಾಗ್ಯೂ ಕಳೆದ ಕೆಲವು ವರ್ಷಗಳಿಂದ ಇಲ್ಲಿ ಕಿತ್ತಳೆ ಉತ್ಪಾದನೆ ತ್ರಾಸದಾಯಕವಾಗಿದೆ. ಕಿತ್ತಳೆ ಉತ್ಪಾದನೆ ಕುರಿತಾಗಿ ರೈತರಲ್ಲಿ ಅನೇಕ ತಪ್ಪು ಕಲ್ಪನೆಗಳು ಕೂಡ ಹರಡಿದೆ. ಕಿತ್ತಳೆ ಉತ್ಪಾದಕರು ತಂತ್ರಜ್ಞಾನದ ಜೊತೆ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಂಡರೆ, ಇದು ಮತ್ತೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.

Good land:

ವಿದರ್ಭದ ವರುಡ್​​, ಮೊರ್ಶಿ, ಅಂಜನ್​​ಗಾಂವ್​ ​​, ಸುರ್ಜಿ, ಅಕೋಟ್​, ಚಂದರ್​ಬಜಾರ್​, ನಾಗ್ಪುರ್​ಗಳಲ್ಲಿ ಹೆಚ್ಚು ಕಿತ್ತಳೆ ಬೆಳೆಯಲಾಗುತ್ತದೆ. ಈ ಸಂಪೂರ್ಣ ಪ್ರದೇಶಗಳು ಕಪ್ಪು ಮಣ್ಣಿನ ಭೂಮಿಯಾಗಿದೆ. ಕಪ್ಪು ಮಣ್ಣಿನ ಭೂಮಿಯಲ್ಲಿ ಮಾತ್ರ ಕಿತ್ತಳೆ ಬೆಳೆಯಲು ಸಾಧ್ಯ ಎಂಬ ತಪ್ಪು ತಿಳಿವಳಿಕೆ ಇದೆ. ಬ್ರೆಜಿಲ್​, ಸ್ಪೇನ್​, ಆಸ್ಟ್ರೇಲಿಯಾ, ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಕೊಲೊಂಬಿಯಾ, ಕೊಸ್ಟಾರಿಕಾ, ಇಸ್ರೇಲ್​ ಮತ್ತು ತೈವಾನ್​ನಲ್ಲಿ ಕೂಡ ಉತ್ತಮ ತಳಿಯ ಕಿತ್ತಳೆ ಬೆಳೆಯಲಾಗುತ್ತದೆ.

ಈ ದೇಶದಲ್ಲಿ ಕಿತ್ತಳೆಗೆ ಹನಿ ನೀರಾವರಿ ಮೂಲಕ ಬಂಪರ್​ ಬೆಳೆ ತೆಗೆಯಲಾಗುವುದು. ಇದರಿಂದ ಕಿತ್ತಳೆ ಉತ್ತಮವಾಗಿ ಬೆಳೆಯಲಾಗುವುದು. ಕಪ್ಪು ಫಲವತ್ತಾದ ಮಣ್ಣು ಮಾತ್ರವಲ್ಲದೇ, ಉತ್ತಮವಾಗಿ ಬರಿದಾದ ಭೂಮಿ ಕೂಡ ಇದಕ್ಕೆ ಅಗತ್ಯವಿದೆ ಎಂದು ಕೆಬಿ ಪಾಟೀಲ್​ ತಿಳಿಸಿದ್ದಾರೆ.

The cause of orange damage :

ಕಿತ್ತಳೆಯ ಕಾಂಡವನ್ನು ನಾನು ಮಣ್ಣಿನಲ್ಲಿ ಇಡುವಾಗ ಅದರ ಮೇಲೆ ರಾಂಕುರ್ ಸುಣ್ಣ ಅಥವಾ ಬೇರೆಯದ್ದೇ ಎಂಬುದು ತಿಳಿಯುವುದಿಲ್ಲ. NAGPUR VIDARBHA ORANGES ಬೀಜಗಳನ್ನು ಗಲ್ಗಲ್​ನಿಂದ ಸಿದ್ದಪಡಿಸಲಾಗುವುದು ಇವು ಪಂಜಾಬ್​​ನಿಂದ ಬರುತ್ತದೆ. ಈ ಕಿತ್ತಳೆಯ ಕಡ್ಡಿಗಳಿಂದ ಫೈಟೊಫ್ಥೋರಾ ಮತ್ತು ಗ್ರೀನಿಂಗ್ ಎಂಬ ರೋಗ ಕಾಣಿಸಿಕೊಳ್ಳುತ್ತದೆ.

ಕಳೆದ ವರ್ಷ, ಕೇಂದ್ರ ಸರ್ಕಾರದ ತಂಡವು ಅಂಜನಗಾಂವ್ ಸುರ್ಜಿ, ಅಕೋಟ್ ಮತ್ತು ಪರ್ತವಾಡದಲ್ಲಿ ಕಿತ್ತಳೆಯನ್ನು ಬೆಳೆದಿರುವುದು ಕಂಡು ಬಂದಿದೆ. ಇದಕ್ಕೆ ಮುಖ್ಯ ಕಾರಣ ಹಸಿರೀಕರಣ ಎಂಬ ರೋಗ ಎಂದು ಸ್ಪಷ್ಟವಾಗಿ ಹೇಳಲಾಗಿದೆ ಎಂದು ಪಾಟೀಲ್​ ವಿವರಿಸಿದರು.

Keep Orange Alive:

ನಾಗ್ಪುರಿ ಕಿತ್ತಳೆಯಿಂದ ವಿದರ್ಭ ಪ್ರಖ್ಯಾತಿ ಒಡೆದಿದೆ. ಇದು ಸಿಹಿ ಇದ್ದು, ಕಿತ್ತಳೆಯ ನೈಜತೆಯನ್ನು ಹಿಂದಿದೆ. ಕಿತ್ತಳೆ ಬೆಳೆಯಲ್ಲಿ ಹಳೆಯ ಕೃಷಿ ಮಾದರಿ ಮಾಯಾವಾಗಿದೆ. ಕೆಲವು ಬದಲಾವಣೆಗಳನ್ನು ಕೂಡ ವಿದರ್ಭ ಕಿತ್ತಳೆ ಬೆಳೆಗಾರರು ಅನುಸರಿಸಬೇಕಿದೆ ಎಂದರು.ಹೂವು ಹಣ್ಣಾಗಿ ಮಾರ್ಪಡುತ್ತದೆ. ಈ ಹಣ್ಣು ಬೆಳೆಯಬೇಕಾಗಿರುತ್ತದೆ .. ಈ ಹಣ್ಣು ಬೆಳೆಯುವಾಗ ಇದಕ್ಕೆ ಹನಿ ನೀರಾವರಿ ಮೂಲಕ ಸಮತೋಲಿತ ಪೋಷಕಾಂಶವನ್ನು ನೀಡಬೇಕು. ಕಿತ್ತಳೆ ಸಮೃದ್ಧವಾಗಿ ಬೆಳೆಯುವಂತೆ ನೋಡಿಕೊಳ್ಳುವುದು ಪ್ರಮುಖವಾಗಿದೆ.

ಬೆಳವಣಿಗೆ ಮಧ್ಯ ಭಾಗದಲ್ಲಿ ನೈಟ್ರೋಜನ್​ ಅವಶ್ಯಕವಾಗಿದೆ. ಅಂತಿಮ ಹಂತದಲ್ಲಿ ಸ್ವಲ್ಪ ಪ್ರಮಾಣದ ನೈಟ್ರೋಜನ್​ ಮತ್ತು ಹೆಚ್ಚಿನ ಪೊಟಾಶಿಯಂ ನೀಡಬೇಕಿರುವುದು ಅಗತ್ಯ. ಈ ಎಲ್ಲ ಪೋಷಕಾಂಶಗಳನ್ನು ನೀಡಿದರೆ ಕಿತ್ತಳೆ ಸಿಹಿಯಾಗಲು ಸಾಧ್ಯ ಎಂದು ಅವರು ವಿವರಣೆ ನೀಡಿದ್ದಾರೆ.

2007ರಲ್ಲಿ ಜಲಗಾಂವ್‌ನ ಜೈನ ನೀರಾವರಿ ಮೂಲಕ ಖಾಂಡೇಶ್‌ನಲ್ಲಿ ಬಾಳೆಹಣ್ಣಿನ ಮೇಲೆ ಫಾಸ್ಪರಿಕ್ ಆಮ್ಲವನ್ನು ಪ್ರಯೋಗಿಸಲಾಯಿತು. ಇದು ದೇಶದಲ್ಲೇ ಮೊದಲ ಪ್ರಯೋಗ. ಫಾಸ್ಪರಿಕ್ ಆಮ್ಲದ ಸಹಾಯದಿಂದ, ಮರಗಳ ಮೂಲ ವಲಯದಲ್ಲಿ ಪಿಎಚ್​ ಅನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಕಿತ್ತಳೆ ಮರದ ಬೇರುಗಳಲ್ಲಿ ಪಿಎಚ್​​ ಅನ್ನು ಕಡಿಮೆ ಮಾಡಲು ಫಾಸ್ಫರಿಕ್ ಆಮ್ಲ ಮುಖ್ಯವಾಗಿದೆ. ಇದರ ಬಳಕೆಯಿಂದ ಈ ಗಿಡಕ್ಕೆ ಸತು, ಫೆರಸ್, ಬೋರಾನ್, ಮೆಗ್ನೀಷಿಯಂ, ರಂಜಕ ಲಭ್ಯವಾಗುತ್ತದೆ. ಇದು ಗಿಡವನ್ನು ಆರೋಗ್ಯಕರವಾಗಿ ಮತ್ತು ಬಲವಾಗಿ ಮಾಡುತ್ತದೆ.

ಕಿತ್ತಳೆ ಗಿಡ ಆರೋಗ್ಯಕರವಾಗಿದ್ದರೆ, ಅದರ ಹಣ್ಣು ಕೂಡ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಹಣ್ಣಿನ ಬಣ್ಣ ಚೆನ್ನಾಗಿ ಕಾಣುತ್ತದೆ. ಇದರಿಂದ ಮತ್ತೆ ನಾಗ್ಪುರಿ ಕಿತ್ತಳೆ ದೊಡ್ಡ ಹೆಸರು ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಳೆಯ ಕಿತ್ತಳೆ ಗಿಡಗಳು 200ರಿಂದ 4000 ಹಣ್ಣನ್ನು ಉತ್ಪಾದನೆ ಮಾಡುತ್ತದೆ. ಇಷ್ಟು ಮಟ್ಟದಲ್ಲಿ ಯಾವ ಗಿಡವೂ ಹಣ್ಣು ನೀಡುವುದಿಲ್ಲ. ಮತ್ತೊಮ್ಮೆ ಹಳೆಯದರ ಜೊತೆಗೆ ಹೊಸ ವಿಧಾನ ಬಳಕೆ ಮಾಡಿ ನಾವು ವಿದರ್ಭದಲ್ಲಿ ಸಂಪತ್ತು ಸೃಷ್ಟಿಸಬಹುದು ಎನ್ನುತ್ತಾರೆ.

Orange Abundance:

ಕಪ್ಪು ಮಣ್ಣಿನಲ್ಲಿ ವಿದರ್ಭದಲ್ಲಿ ಬೆಳೆಯುತ್ತಿರುವ ಕಿತ್ತಳೆಗೆ ಈ ಮೊದಲು ರೈತರು ಹಸುವಿನ ಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಆದರೆ, ಇದೀಗ ಹಸುವಿನ ಗೊಬ್ಬರ ಸಿಗದೇ ಇರುವುದರಿಂದ ಇದರ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ . ಜೊತೆಗೆ ತಪ್ಪಾದ ಗುಡವನ್ನು ತಪ್ಪದ ಸ್ಥಳದಲ್ಲಿ ನೆಡಲಾಗುತ್ತಿದೆ. ಇದು ಕೂಡ ಬೆಳೆಗಾರರಿಗೆ ತೊಂದರೆ ನೀಡಿದೆ.

ಇಂತಹ ಸಮಸ್ಯೆಗಳನ್ನು ಪತ್ತೆ ಮಾಡಿ ಅದಕ್ಕೆ ಉತ್ತರ ಕಂಡು ಕೊಂಡಲ್ಲಿ ಮತ್ತೆ ಉತ್ತಮ ಕಿತ್ತಳೆ ಬೆಳೆಯನ್ನು ಪಡೆಯಬಹುದಾಗಿದೆ ಎನ್ನುತ್ತಾರೆ ಅಮರಾವತಿಯಲ್ಲಿನ ಶ್ರೀ ಶಿವಾಜಿ ಕೃಷಿ ಕಾಲೇಜ್​ನ ಕೃಷಿ ತಜ್ಞ ಪ್ರೊ. ರಾಜೇಂದ್ರ ಪಾಟೇಲ್​

ಇದನ್ನು ಓದಿರಿ : DK SHIVAKUMAR : ಬೆಳಗಾವಿಯಲ್ಲಿ ಕಪಿಲೇಶ್ವರನಿಗೆ ಡಿಸಿಎಂ ಡಿಕೆಶಿ ಕ್ಷೀರಾಭಿಷೇಕ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GBS SYMPTOMS PREVENTIVE MEASURES: ಶಿಶುಗಳಲ್ಲಿ ಕಂಡುಬರುವ ಈ ವೈರಸ್ ಲಕ್ಷಣಗಳೇನು?

Guntur, Andhra Pradesh News: ಪ್ರಸ್ತುತ ರಾಜ್ಯಾದ್ಯಂತ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಾಂಕ್ರಾಮಿಕವಲ್ಲದಿದ್ದರೂ, ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇತರ ಸೋಂಕುಗಳಿರುವ ಜನರಲ್ಲಿ...

INDIA AND QATAR SIGNED AN AGREEMENT:ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಮುಂದೆ ಬಂದ ಕತಾರ್

New Delhi News: ಕತಾರ್ INDIAದಲ್ಲಿ 10 ಬಿಲಿಯನ್ ಡಾಲರ್​​ ಹೂಡಿಕೆ ಮಾಡಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, 2 ರಾಷ್ಟ್ರಗಳು...

REMOTE AUSTRALIAN BEACH:ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ 157 ಡಾಲ್ಫಿನ್ಗಳು ಸಾವು

Arthur River (Australia) News: 157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ...

MAHA KUMBHMELA:75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ

Lucknow (Uttar Pradesh) News: ಪವಿತ್ರ KUMBHMELA ಸ್ನಾನಕ್ಕಾಗಿ ಜೈಲು ಸಚಿವರ ಮೇಲ್ವಿಚಾರಣೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿ.ವಿ.ರಾಮಶಾಸ್ತ್ರಿ ತಿಳಿಸಿದ್ದಾರೆ. ಸಂಗಮದಿಂದ...