spot_img
spot_img

NAMMA METRO PRICE HIKE EFFECT:ದರ ಹೆಚ್ಚಳದ ಬಿಸಿ

spot_img
spot_img

Share post:

Bangalore News:

ಈ ಮೊದಲು ನಮ್ಮ METROದಲ್ಲಿ ದಿನಕ್ಕೆ 8.5 ಲಕ್ಷ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದರು. ಆದರೆ, ದರ ಏರಿಕೆ ಬಳಿಕ ಈ ಸಂಖ್ಯೆ ಅಂದಾಜು 6.3 ಲಕ್ಷಕ್ಕೆ ಇಳಿದಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಸಂಖ್ಯೆ ಕುಗ್ಗಿದೆ ಎನ್ನಲಾಗಿದೆ.ಬೆಂಗಳೂರು METRO ರೈಲು ಕಾರ್ಪೊರೇಷನ್​ ಲಿಮಿಟೆಡ್​ (ಬಿಎಂಆರ್​ಸಿಎಲ್​) ನಮ್ಮ METROದ ಪ್ರಯಾಣ ದರ ಹೆಚ್ಚಳ ಮಾಡಿದ್ದು, ಕೇವಲ ಸಾಮಾನ್ಯ ಜನರ ಅಸಮಾಧಾನಕ್ಕೆ ಮಾತ್ರ ಸೀಮಿತವಾಗದೇ ಅನೇಕ ಪ್ರತಿಭಟನೆ ಮತ್ತು ರಾಜಕೀಯ ಟೀಕೆಗೂ ಕಾರಣವಾಯಿತು.

ಇದಾದ ಬಳಿಕ ದರ ಪರಿಷ್ಕರಣೆ ನಡೆಸಿದಾದರೂ ಗಣನೀಯ METROದಲ್ಲಿ ಇಳಿಕೆ ಕಂಡಿಲ್ಲ. ಇದರ ಪರಿಣಾಮವಾಗಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ಕಂಡಿದೆ ಎಂದು ಬಿಎಂಆರ್​ಸಿಎಲ್​ ಮೂಲಗಳು ತಿಳಿಸಿವೆ.ಪ್ರಯಾಣಿಕರ ದರ ಕುಸಿತ ಒಪ್ಪಿಕೊಂಡಿರುವ ಹಿರಿಯ ಬಿಎಂಆರ್​ಸಿಎಲ್​ ಅಧಿಕಾರಿಗಳು, METRO ಪ್ರಯಾಣಿಕರಲ್ಲಿ 2.3 ಲಕ್ಷದಷ್ಟು ಕುಸಿತ ಕಂಡಿದ್ದು, ನಿರೀಕ್ಷಿಸಿದ ಆದಾಯವನ್ನು ಸಾಧಿಸಲು ಸಾಧ್ಯವಾಗಿಲ್ಲ. ಇದೀಗ ಫೆ.9 ದರ ಹೆಚ್ಚಳ ಜಾರಿಗಿಂತ ಮುಂಚಿದ್ದ ಆದಾಯದಷ್ಟೇ ಅಥವಾ ಅದಕ್ಕಿಂತ ಕಡಿಮೆಯಾಗಿದೆ ಎನ್ನಬಹುದು ಎಂದಿದ್ದಾರೆ.

ಫೆ.8ರಂದು ಬಿಎಂಆರ್​ಸಿಎಲ್​ ಕೆಲವು ವಿಭಾಗದಲ್ಲಿ ಶೇ 100ರಷ್ಟು ಹಾಗೇ ಪೀಕ್​ ಅವರ್​ಗಳಲ್ಲಿ ಶೇ 5ರಷ್ಟು ಹೆಚ್ಚುವರಿ ಚಾರ್ಜ್​ ವಿಧಿಸಿ ದರ ಹೆಚ್ಚಳ ಮಾಡಿತ್ತು. ಈ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತ್ತು. ಸಿಎಂ ಸಿದ್ದರಾಮಯ್ಯ ಅವರ ಮಧ್ಯಪ್ರವೇಶದಿಂದ ದರ ಇಳಿಕೆಗೆ ಬಿಎಂಆರ್​ಸಿಎಲ್​ ಮುಂದಾಯಿತು. ಆದರೂ, ಈ ಎಲ್ಲಾ ಹೊಂದಾಣಿಕೆಗಳು ಪ್ರಯಾಣಿಕರ ಸಂಖ್ಯೆ ಕುಸಿತ ತಡೆಯುವ ಪ್ರಯತ್ನಕ್ಕೆ ಫಲ ನೀಡಿಲ್ಲ.ಈಟಿವಿ ಭಾರತ್​ ಜೊತೆಗೆ ಮಾತನಾಡಿದ ಬಿಎಂಆರ್​ಸಿಎಲ್​ ಅಧಿಕಾರಿ ಯಶವಂತ್​ ಚವಾಣ್​, METRO ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಕುಸಿತ ಕಂಡಿಲ್ಲ. METRO ದರದ ಕುರಿತು ಚರ್ಚೆಗಳು ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.

Point to the State Government: METRO ದರ ಹೆಚ್ಚಳದ ಆರೋಪವನ್ನು ಸಿಎಂ ಸಿದ್ದರಾಮಯ್ಯ ಕೇಂದ್ರದತ್ತ ಬೊಟ್ಟು ಮಾಡಿದ್ದು, ರಾಜ್ಯ ಸರ್ಕಾರ ದರ ಪರಿಷ್ಕರಣೆ ಪ್ರಸ್ತಾಪ ಮಾಡಿದರೂ, ಅಂತಿಮ ನಿರ್ಧಾರ ಹೈ ಕೋರ್ಟ್​ ನ್ಯಾಯಮೂರ್ತಿ ನೇತೃತ್ವದ ಕೇಂದ್ರ ಮಂಡಳಿಯದ್ದು ಎಂದರು.

ಈ ದರ ಹೆಚ್ಚಳ ಕೇವಲ ರಾಜ್ಯ ಸರ್ಕಾರದ ನಿರ್ಧಾರವಲ್ಲ. ಇದನ್ನು ನಾವು ಪ್ರಸ್ತಾಪಿಸಿದರೂ ಇದಕ್ಕೆ ಕೇಂದ್ರ ಮಂಡಳಿ ಒಪ್ಪಿಗೆ ಅಗತ್ಯ ಎಂದಿದ್ದರು. METRO ದರ ಹೆಚ್ಚಳವೂ ಪ್ರಯಾಣಿಕರ ಆಕ್ರೋಶದ ಹೊರತಾಗಿ ರಾಜಕೀಯ ಆರೋಪ- ಪ್ರತ್ಯಾರೋಪಗಳಿಗೆ ಗುರಿಯಾಗಿದೆ. ದರ ಹೆಚ್ಚಳಕ್ಕೆ ಕಾರಣ ಕರ್ನಾಟಕ ಸರ್ಕಾರ ಎಂದು ಸಂಸದ ಪಿಸಿ ಮೋಹನ್​ ದೂರಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ ಅವರು, ಕರ್ನಾಟಕ ಕಾಂಗ್ರೆಸ್​ ನಿರ್ವಹಣೆ ಲೋಪ ಬೆಂಗಳೂರು METRO ಮೇಲೆ ಹಾನಿ ಮಾಡಿದೆ.

ದರ ಹೆಚ್ಚಳದಿಂದ ಪ್ರಯಾಣಿಕರ ಸಂಖ್ಯೆ 6.26 ಲಕ್ಷಕ್ಕೆ ಕುಸಿದಿದೆ ಎಂದು ಆರೋಪಿಸಿದ್ದಾರೆ.ದರ ಹೆಚ್ಚಳದ ವಿರುದ್ಧ ಜನ ಸಾಮಾನ್ಯರು ಹೆಚ್ಚಿನ ಆಕ್ರೋಶ ವ್ಯಕ್ತಪಡಿಸಿದ್ದು, METRO ಸಾಮಾನ್ಯ ಜನರಿಗಲ್ಲ ಎಂದರು. ಅಷ್ಟೇ ಅಲ್ಲದೇ, ನೂರಾರು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಬಿಎಂಸಿಎ ಸದಸ್ಯರ ಕೂಡ ಪ್ರತಿಭಟನೆ ಮಾಡಿ, ದರ ಹೆಚ್ಚಳವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದರು.

Public outrage:ಎಐಸಿಸಿಟಿಯು ಕಾರ್ಯಕರ್ತ ವಕೀಲರಾದ ಮೈತ್ರಿಯಿ ಕೃಷ್ಣ ಕೂಡ ಸಾರ್ವಜನಿಕ ಸಾರಿಗೆ ಕೈಗೆಟುಕುವ ದರದಲ್ಲಿ ಇರಬೇಕು. ಇದು ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಹೊರೆಯಾಗಬಾರದು ಎಂದಿದ್ದಾರೆ. ಬಿಎಂಸಿಎ ಕಾರ್ಯಕರ್ತ ರಾಜೇಶ್​ ಭಟ್​, ಬಿಎಂಆರ್​ಸಿಎಲ್​ ವಿರುದ್ಧ ಟೀಕಿಸಿದ್ದು, ಮೆಟ್ರೋವನ್ನು ಸಾರ್ವಜನಿಕರ ಒಳಿತಿಗಾಗಿ ಪರಿಚಯಿಸಿದ್ದೇ ಹೊರತು, ಲಾಭಕ್ಕೆ ಅಲ್ಲ. ಸಾಮಾನ್ಯ ಜನರ ಸಾಮಾಜಿಕ-ಆರ್ಥಿಕ ಸ್ಥಿತಿ ಅನುಸಾರ ಕೈಗೆಟುಕುವ ಮತ್ತು ತಡೆರಹಿತ ಸಾರ್ವಜನಿಕ ಸಾರಿಗೆಯನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.

ಅಲ್ಲದೇ, ಇದು ಸಾಂವಿಧಾನಿಕ ಹಕ್ಕು, ಆದರೂ ಪಾಲನೆಯಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.ಪರಿಸರ ಸಂಘಟನೆ ಗ್ರೀನ್​ಪೀಸ್​ ಇಂಡಿಯಾ ಕೂಡ ಈ ಕುರಿತು ಬಿಎಂಆರ್​ಸಿಎಲ್​ಗೆ ಜನರಿಗೆ ಅನುಕೂಲವಾಗುವಂತೆ ಕ್ರಮಕ್ಕೆ ಮುಂದಾಗಿ ದರ ಹೆಚ್ಚಳ ಹಿಂಪಡೆಯುವಂತೆ ಮನವಿ ಪತ್ರವನ್ನು ನೀಡಿದ್ದಾರೆ.ಪ್ರಯಾಣಿಕರ ಸಂಖ್ಯೆ ಏರಿಳಿತವಾಗುತ್ತಲೇ ಇರುತ್ತದೆ ಎಂದಿದೆ. ಇತ್ತೀಚಿನ ವರದಿಗಳ ಪ್ರಕಾರ ದೈನಂದಿನ ಪ್ರಯಾಣಿಕರ ಸಂಖ್ಯೆ ಮೊದಲಿಗೆ 7.78 ಲಕ್ಷಕ್ಕೆ ನಂತರ 7.62 ಲಕ್ಷಕ್ಕೆ ಇಳಿದಿದೆ.

ಪ್ರಯಾಣ ದರ ಏರಿಕೆಯ ಪರಿಣಾಮವನ್ನು ನಿರ್ಣಯಿಸಲು ಮಾರ್ಚ್ 1 ರಂದು ಪರಿಶೀಲನಾ ಸಭೆಯನ್ನು ನಿಗದಿಪಡಿಸಲಾಗಿದೆ. ಬಿಎಂಆರ್​ಸಿಎಲ್​ ಪತ್ರಿಕಾ ಪ್ರಕಟಣೆಯ ಪ್ರಕಾರ, ದೈನಂದಿನ METRO ಬಳಕೆದಾರರಲ್ಲಿ ಸುಮಾರು ಶೇ 46ರಷ್ಟು ಜನರು ಅಂದರೆ, ಸುಮಾರು 2.91 ಲಕ್ಷ ಪ್ರಯಾಣಿಕರು-ಪರಿಷ್ಕೃತ ದರ ರಚನೆಯಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.

 

ಇದನ್ನು ಓದಿರಿ :India Has Potential In Agri, Eco, Rural & Village Tourism, But Needs More Attention: Experts

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...