spot_img
spot_img

NAXALITES KILL TWO MEN:ಪೊಲೀಸ್ ಮಾಹಿತಿದಾರರೆಂದು ಇಬ್ಬರು ನಾಗರಿಕರ ಹತ್ಯೆಗೈದ ನಕ್ಸಲರು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Danthewada (Chhattisgarh) News:

ಬಮನ್​ ಕಶ್ಯಪ್​ (29) ಮತ್ತು ಅನಿಸ್​ ರಾಮ್​ ಪೊಯಮ್​ (38) ಕೊಲೆಯಾದವರು. ಇವರು ಬರ್ಸೊರ್​ ಪೊಲೀಸ್​ ಠಾಣಾ ವ್ಯಾಪ್ತಿಯ ತೊಡ್ಮ ಗ್ರಾಮದವರು ಎಂದು ತಿಳಿದು ಬಂದಿದೆ. ಬುಧವಾರ ಇವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ ಎಂಬ ಅನುಮಾನದಿಂದ ನಕ್ಸಲರು ಇಬ್ಬರು ನಾಗರಿಕರನ್ನು ಕೊಲೆಗೈದ ಘಟನೆ ಛತ್ತೀಸ್​ಗಢದ ದಂಥೇವಾಡದಲ್ಲಿ ಬುಧವಾರ ನಡೆದಿದೆ.

ಈ ಕುರಿತು ಮಾಹಿತಿ ಸಿಕ್ಕ ಬಳಿಕ ಪೊಲೀಸ್ ತಂಡ ದಂಥೇವಾಡ-ಬಿಜಾಪುರ್​ ಗ್ರಾಮದ ಗಡಿಯಲ್ಲಿ ದಟ್ಟ ಅರಣ್ಯದಲ್ಲಿರುವ ಗ್ರಾಮಕ್ಕೆ ಆಗಮಿಸಿತು. ಕೊಲೆ ಬಗ್ಗೆ ಮತ್ತಷ್ಟು ಮಾಹಿತಿ ದೊರೆಯಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಸಾವನ್ನಪ್ಪಿದ ಕಶ್ಯಪ್​ ಈ ಪ್ರದೇಶದಲ್ಲಿ ಶಿಕ್ಷಾ ದೂತ್​ (ತಾತ್ಕಲಿಕ ಶಿಕ್ಷಕ)ಆಗಿ ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮಾವೋವಾದಿಗಳ ಪೂರ್ವ ಬಸ್ತಾರ್ ವಿಭಾಗದ ಆಮದೈ ಪ್ರದೇಶ ಸಮಿತಿಯ ಕರಪತ್ರಗಳು ಸ್ಥಳದಲ್ಲಿ ಪತ್ತೆಯಾಗಿದೆ. ಅದರಲ್ಲಿ ಇವರು ಪೊಲೀಸ್ ಮಾಹಿತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು NAXALITES ಆರೋಪಿಸಿದ್ದಾರೆ.

ಫೆ 6ರಂದು NAXALITESರು ದಂಥೇವಾಡ ಜಿಲ್ಲೆಯ ಮಾಜಿ ಸರಪಂಚ್​ ಅವರನ್ನು ಕೊಂದಿದ್ದರು. ಫೆ.4ರಂದು 30 ವರ್ಷದ ವ್ಯಕ್ತಿಯನ್ನು ದಂಥೇವಾಡದ ಅರ್ನಪುರ ಪ್ರದೇಶದಲ್ಲಿ ಹತ್ಯೆ ಮಾಡಲಾಗಿತ್ತು. ಪೊಲೀಸರ ಪ್ರಕಾರ, ಬಸ್ತಾರ್​ ಪ್ರದೇಶದಲ್ಲಿ NAXALITES ಹಿಂಸಾಚಾರದ ಪ್ರತ್ಯೇಕ ಘಟನೆಯಲ್ಲಿ 68 ನಾಗರಿಕರ ಹತ್ಯೆ ಮಾಡಲಾಗಿದೆ.ಅಕ್ಟೋಬರ್ 2024ರ ಎನ್‌ಕೌಂಟರ್‌ಗೂ ಮುನ್ನ ಮಾವೋವಾದಿಗಳ ಚಲನವಲನದ ಬಗ್ಗೆ ಕಶ್ಯಪ್ ದಾಂತೇವಾಡ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಕರಪತ್ರದಲ್ಲಿ ಬರೆಯಲಾಗಿದೆ. ಅಂದು ನಡುವೆ ನಡೆದ ಭೀಕರ ಎನ್​ಕೌಂಟರ್​ನಲ್ಲಿ 38 ಜನ ಮಾವೋಗಳನ್ನು ಹತ್ಯೆ ಮಾಡಲಾಗಿತ್ತು. ಬುಧವಾರ ಕೂಡ ಪ್ರತ್ಯೇಕ ಘಟನೆಯಲ್ಲಿ ಬಸ್ತಾರ್​ ವಿಭಾಗದಲ್ಲಿ 7 ಮಾವೋಗಳ ಹತ್ಯೆ ಮಾಡಲಾಗಿದೆ.

 

ಇದನ್ನು ಓದಿರಿ :Odisha Approves Key Industrial Projects, Move Likely To Create Over 12,000 Job Opportunities

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

KL RAHUL SACRIFICE:ಕನ್ನಡಿಗ ಕೆ.ಎಲ್.ರಾಹುಲ್ ತ್ಯಾಗಕ್ಕೆ ಫ್ಯಾನ್ಸ್ ಮೆಚ್ಚುಗೆ

KL Rahul: ಹೌದು, ಬಾಂಗ್ಲಾ ನೀಡಿದ್ದ 228 ರನ್​ಗಳ ಗುರಿ ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆದಿದ್ದರೂ ಬಳಿಕ ರೋಹಿತ್​ ಶರ್ಮಾ (41), ವಿರಾಟ್​ ಕೊಹ್ಲಿ...

HUAWEI MATE XT TRI FOLD PHONE:ಇದರ ಬೆಲೆ 2 ಬುಲೆಟ್ ಬೈಕ್ಗಳಿಗೆ ಸಮ!

Huaveli Re-Launched Ultimate Design News: ಇತ್ತೀಚೆಗೆ ಪ್ರಪಂಚದಾದ್ಯಂತ ಆಯ್ದ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿದೆ. ಆದ್ರೆ ಇದರ ಬೆಲೆ ಎರಡು ರಾಯಲ್​ ಎನ್​ಫೀಲ್ಡ್​ಗೆ ಸಮ. ರಾಯಲ್​ ಎನ್‌ಫೀಲ್ಡ್...

PAYTM SOLAR SOUND BOX:ಸೂರ್ಯನ ಬೆಳಕಿನಿಂದಲೇ ಚಾರ್ಜ್ ಆಗುತ್ತೆ ‘ಪೇಟಿಎಂ ಸೌಂಡ್ಬಾಕ್ಸ್’

Paytm Solar SoundBoss News: ಇತ್ತೀಚೆಗೆ PAYTMನ ಪೋಷಕ ಕಂಪನಿ 'ಒನ್97 ಕಮ್ಯುನಿಕೇಷನ್ಸ್' ಮತ್ತೊಂದು ವಿಷಯದೊಂದಿಗೆ ಸುದ್ದಿಯಲ್ಲಿದೆ. ವ್ಯಾಪಾರಿಗಳಿಗಾಗಿ ದೇಶದ ಮೊದಲ ಸೌರಶಕ್ತಿ ಚಾಲಿತ 'ಸೋಲಾರ್​...

UNSAFE MEDICINES:9 ಔಷಧಗಳ ನಿರ್ಬಂಧಿಸುವಂತೆ ಕೇಂದ್ರಕ್ಕೆ ಸಚಿವ ಗುಂಡೂರಾವ್ ಪತ್ರ

Bangalore News: ಈ ಕುರಿತು ನಡ್ಡಾರಿಗೆ 9 MEDICINES ಕಂಪನಿಗಳ ಅಸುರಕ್ಷಿತ MEDICINES ವಿವರಗಳನ್ನು ಉಲ್ಲೇಖಿಸಿ ದಿನೇಶ್ ಗುಂಡೂರಾವ್ ಫೆ.20ರಂದು ಪತ್ರ ಬರೆದಿದ್ದಾರೆ.ವಿವಿಧ 9 MEDICINES...