spot_img
spot_img

ನವೆಂಬರ್ ೧೧ ಮೌಲಾನಾ ಅಬ್ದುಲ್ ಕಲಾಂ ಜನ್ಮದಿನ ರಾಷ್ಟ್ರೀಯ ಶಿಕ್ಷಣ ದಿನ ಆಚರಣೆ

spot_img
spot_img

Share post:

ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ ಓರ್ವ ಮುಸ್ಲಿಮ್ ಸಮುದಾಯದ ಮೇಧಾವಿ ಎನ್ನುವುದು ಅಚ್ಚರಿ ಮತ್ತು ಕುತೂಹಲಕರ ಸಂಗತಿ.

ಮುಸ್ಲಿಮ್ ಸಮುದಾಯ ಬಹುಪಾಲು ಆಧುನಿಕ ಶಿಕ್ಷಣಕ್ಕೆ ತಮ್ಮನ್ನು ತಾವು ತೆರೆದುಕೊಂಡದ್ದು ಇತ್ತೀಚಿನ ವರ್ಷಗಳಲ್ಲಿ

ಈ ಸಮುದಾಯದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ಜಾಗೃತಿ ಇಂದಿಗೂ ನಡೆಯುತ್ತಲೇ ಇದೆ.

ಉನ್ನತ ವಿದ್ಯಾಭ್ಯಾಸ ಪಡೆಯುವಂತೆ, ವಿಜ್ಞಾನ ತಂತ್ರಜ್ಞಾನಗಳ ಕಡೆಗೆ ಆಸಕ್ತಿ ವಹಿಸುವಂತೆ, ನಾಗರಿಕ ಸೇವಾ ಪರೀಕ್ಷೆಗಳ ಕಡೆಗೆ ಮುಖ ಮಾಡುವಂತೆ, ಐಐಟಿ, ಐಐಎಸ್ಸಿಗಳ ಬಗ್ಗೆ ಕುತೂಹಲ ಬೆಳೆಸುವಂತೆ ಸಮುದಾಯದ ವಿದ್ಯಾರ್ಥಿಗಳಿಗೆ ಬಲ್ಲವರು ಉತ್ತೇಜನ ನೀಡುತ್ತಲೇ ಇದ್ದಾರೆ

ದಕ್ಷಿಣ ಭಾರತದಲ್ಲಿ ಹೈದರಾಬಾದ್ ಮತ್ತು ತಿರುವಾಂಕೂರು ಪ್ರಾಂತಗಳನ್ನು ಹೊರತುಪಡಿಸಿದರೆ ಇತರ ಭಾಗಗಳಲ್ಲಿ ಮುಸ್ಲಿಮ್ ಸಮುದಾಯ ಆಧುನಿಕ ಶಿಕ್ಷಣದ ಕಡೆಗೆ ಒಲವು ತೋರಿದ್ದು ಬಹಳ ತಡವಾಗಿ ಎನ್ನಬಹುದು. ಆದರೂ ಉತ್ತರ ಭಾರತದಲ್ಲಿ ಮುಸ್ಲಿಮ್ ಸಮುದಾಯದ ಮುಂದಾಳುಗಳು ಸ್ವಾತಂತ್ರ್ಯಪೂರ್ವದಲ್ಲಿಯೇ ಶಾಲಾ-ಕಾಲೇಜಿನ ಶಿಕ್ಷಣ ಪಡೆಯುವಂತೆ ಜನರಲ್ಲಿ ನಿರಂತರ ಜಾಗೃತಿ ಮೂಡಿಸಿದ ಫಲವಾಗಿ ಬಹಳಷ್ಟು ವಿದ್ವಾಂಸರು, ಮೇಧಾವಿಗಳು ಆ ಭಾಗದಲ್ಲಿ ದೇಶದ ಸ್ವಾತಂತ್ರ್ಯ ಚಳವಳಿ ಮತ್ತು ಸಮುದಾಯದ ಸಬಲೀಕರಣ ಈ ಎರಡೂ ಕೈಂಕರ್ಯದಲ್ಲಿ ಏಕಕಾಲದಲ್ಲಿ ತೊಡಗಿದರು ಎನ್ನುವುದು ಗಮನಾರ್ಹ ಸಂಗತಿ.

ಉತ್ತರ ಭಾರತದಲ್ಲಿ ಅಂದಿನ ವಿದ್ವಾಂಸರು ಉರ್ದು, ಅರಬಿಕ್, ಹಿಂದಿ, ಇಂಗ್ಲಿಷ್, ಪರ್ಷಿಯನ್‌ನಂತಹ ಬಹುಭಾಷೆಗಳ ಕಲಿಕೆಗೆ ಒತ್ತು ನೀಡಿದರು. ಇದರಿಂದ ಜನಸಾಮಾನ್ಯರನ್ನು ಹೊರತುಪಡಿಸಿ ಅಂದು ಆರ್ಥಿಕವಾಗಿ ಸಬಲರು, ಶೈಕ್ಷಣಿಕ ಕಳಕಳಿಯುಳ್ಳ ಪೋಷಕರು, ದೇಶದ ಸ್ವಾತಂತ್ರ್ಯದ ಚಳವಳಿಯನ್ನು ಬದುಕಿನ ಭಾಗವಾಗಿ ಕಂಡ ಮೌಲಾನಾಗಳು, ಸಮುದಾಯದ ಸಬಲೀಕರಣಕ್ಕೆ ಶಿಕ್ಷಣವೇ ಅಸ್ತ್ರ ಎಂದು ಮನಗಂಡ ವಿದ್ವಾಂಸರು ತಾವು ಮಾತ್ರವಲ್ಲದೆ ತಮ್ಮ ಮಕ್ಕಳು ಹಾಗೂ ಸಮುದಾಯದ ಇತರರಲ್ಲಿಯೂ ಆಧುನಿಕ ಶಿಕ್ಷಣದ ಒಲವನ್ನು ಬಿತ್ತಿದರು. ಈ ಕಾರಣದಿಂದಲೇ ಅಂದಿನ ಬಹುತೇಕ ಮೌಲಾನಾಗಳು ಧಾರ್ಮಿಕ ಶಿಕ್ಷಣ ಮಾತ್ರವಲ್ಲದೆ ಆಧುನಿಕ ಶಿಕ್ಷಣದಲ್ಲಿಯೂ ಪಾರಂಗತರಾಗಿದ್ದರು.

ತಮ್ಮ ಮಾತೃಭಾಷೆ ಉರ್ದು ಅಥವಾ ಪರ್ಶಿಯನ್ ಜೊತೆಗೆ ಅರಬಿಕ್ ಮತ್ತು ಇಂಗ್ಲಿಷ್ ಭಾಷೆಗಳ ಕಲಿಕೆಗೆ ಒತ್ತು ನೀಡಿದರು. ಅವರು ಸಂಸ್ಕೃತವನ್ನು ಕೂಡಾ ಪರಕೀಯ ಎನ್ನದೆ ಜ್ಞಾನ ಮತ್ತು ಅಧ್ಯಯನ ದೃಷ್ಟಿಯಿಂದ ಕಲಿತರು. ಇದರ ಫಲವೇ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಉತ್ತರ ಭಾರತದ ಮುಸ್ಲಿಮ್ ನಾಯಕರು ಅದರಲ್ಲೂ ಮೌಲಾನಾಗಳನ್ನು ಕಾಣಲು ಸಾಧ್ಯವಾಯಿತು.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...