spot_img
spot_img

ORGANIC JAGGERY : ದಾವಣಗೆರೆಯಲ್ಲಿ ಸಾವಯವ ಬೆಲ್ಲದ ಪರಿಷೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Davangere News :

ದಾವಣಗೆರೆಯಲ್ಲಿ ಸಾವಯವ ಬೆಲ್ಲದ ಪರಿಷೆ ಹಮ್ಮಿಕೊಳ್ಳಲಾಗಿದೆ. ಇಲ್ಲಿ ತರಹೇವಾರಿ ಬೆಲ್ಲವನ್ನ ಕಂಡು ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.  ಇಲ್ಲಿ 30ಕ್ಕೂ ಹೆಚ್ಚು ತರಹೇವಾರಿ ಬೆಲ್ಲವನ್ನು ಅಲಂಕಾರ ಮಾಡಿ ಪ್ರದರ್ಶನಕ್ಕಿಡಲಾಗಿದೆ. ಫಲಪುಷ್ಪ ಪ್ರದರ್ಶನಕ್ಕಾಗಮಿಸುವ ಜನರನ್ನು ಸಾವಯವ ಬೆಲ್ಲ ಆಕರ್ಷಿಸುತ್ತಿದ್ದು, ಅಷ್ಟೇ ಮಾರಾಟ ಕೂಡ ಆಗ್ತಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

“ಬಲ್ಲವನೇ ಬಲ್ಲ ಬೆಲ್ಲದ ರುಚಿಯ” ಎಂಬ ಗಾದೆ ಮಾತಿದೆ. ರುಚಿಗೆ ಹೆಸರಾದ ‘ಬೆಲ್ಲ’ ಆಯುರ್ವೇದ ಔಷಧದ ಗುಣ ಹೊಂದಿರುವುದು ಬಹುತೇಕರಿಗೆ ತಿಳಿದಿಲ್ಲ. ಮಂಡ್ಯ ರೈತರು ಬೆಳೆದ ಕಬ್ಬಿನಲ್ಲಿ ಅವರದ್ದೇ ಆಲೆಮನೆಯಲ್ಲಿ ಸಿದ್ಧವಾಗಿರುವ ಸಾವಯವ ಬೆಲ್ಲವನ್ನು ಮುಂದಿಟ್ಟುಕೊಂಡು ದಾವಣಗೆರೆಯಲ್ಲಿ ಪರಿಷೆ ಮಾಡಲಾಗುತ್ತಿದೆ. ಗ್ಲಾಸ್ ಹೌಸ್ ಅಲ್ಲಿ “ಬೆಲ್ಲದ ಪರಿಷೆ” ಯನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ರೀತಿಯ ಬೆಲ್ಲವನ್ನು ಕಂಡು ಜನರು ಮುಗಿಬಿದ್ದು ಖರೀದಿ ಮಾಡ್ತಿದ್ದಾರೆ. ಬೆಲ್ಲದ ಅಲಂಕಾರಕ್ಕೆ ಜನರು ಮನಸೋತಿದ್ದಾರೆ.

30ಕ್ಕೂ ಹೆಚ್ಚು ವಿಧದ ಬೆಲ್ಲವನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಪಿರಮಿಡ್​, ಬಸವಣ್ಣ, ಸ್ವಸ್ತಿಕ್, ಯಜ್ಞ ಕುಂಡ, ನಂದಿ ಹೀಗೆ ಸಾಕಷ್ಟು ಆಕಾರಗಳನ್ನು ಬೆಲ್ಲದಲ್ಲೇ ಅರಳಿಸಲಾಗಿದೆ. ಇದು ಜನರ ಮನಸ್ಸಿಗೆ ಮುದ ನೀಡುವಂತಿದೆ. ಐದು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಬೆಲ್ಲದ ಪರಿಷೆ ಜನರನ್ನ ಆಕರ್ಷಿಸುತ್ತಿದೆ. ಇದರಿಂದ ಫಲಪುಷ್ಪ ಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಫಲ ಪುಷ್ಪ ಪ್ರದರ್ಶನದಲ್ಲಿ ಆಯೋಜನೆಗೊಂಡಿರುವ ‘ಬೆಲ್ಲದ ಪರಿಷೆ’ ಗೆ ಕೃಷಿ ಇಲಾಖೆ ಕೂಡ ಸಾಥ್ ನೀಡ್ತಿದೆ.

Is the secret of health in jaggery? :

ಸತು, ಕಬ್ಬಿಣ, ಕ್ಯಾಲ್ಸಿಯಂ ಅಂಶವು ಹೇರಳವಾಗಿರುತ್ತದೆ. NCBI (National Center for Biotechnology Information) ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಬಿಸಿ ನೀರಿನೊಂದಿಗೆ ಬೆಲ್ಲ ಸೇವಿಸುವುದರಿಂದ ರಕ್ತದಲ್ಲಿನ ‘ಹಿಮೋಗ್ಲೋಬಿನ್’ ಪ್ರಮಾಣ ಹೆಚ್ಚಾಗುತ್ತದೆ.ಬೆಲ್ಲದಲ್ಲಿ ಆರೋಗ್ಯದ ಗುಟ್ಟಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ‘ಬೆಲ್ಲ’ದಲ್ಲಿ ವಿಟಮಿನ್ ‘ಸಿ’ ವಿಟಮಿನ್ ‘ಬಿ’ ಮತ್ತು ಜೀವಸತ್ವ ಬಿ6 ಆಗರವಾಗಿದೆ.

ಪೊಟ್ಯಾಷಿಯಂ ಮತ್ತು ಸೋಡಿಯಂನಿಂದ ಸಮೃದ್ಧವಾಗಿರುವ ಬೆಲ್ಲವು ಕೀಲು ನೋವು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಆ್ಯಂಟಿ ಟ್ಯಾಕ್ಸಿಕ್ ಸೂಕ್ಷ್ಮ ಪೋಷಕಾಂಶಗಳಿಂದ ಕೂಡಿರುವ ಬೆಲ್ಲವು ಯಕೃತ್ತಿನಲ್ಲಿರುವ ವಿಷಕಾರಕ ವಸ್ತುವನ್ನು ಪರಿಣಾಮಕಾರಿಯಾಗಿ ಹೊರಹಾಕುತ್ತದೆ.

As the deputy director of horticulture department said? :

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್ ಅವರು ಈಟಿವಿ ಭಾರತದ ಜೊತೆ ಮಾತನಾಡಿ, “ಕೃಷಿ ಇಲಾಖೆ ವತಿಯಿಂದ ಬೆಲ್ಲದ ಪರಿಷೆ ಹಮ್ಮಿಕೊಳ್ಳಲಾಗಿದೆ. ಈ ಬೆಲ್ಲದ ಹಬ್ಬದಲ್ಲಿ ಮಂಡ್ಯದ ರೈತರು ಭಾಗಿಯಾಗಿದ್ದಾರೆ‌. ಇದರಲ್ಲಿ 30 ಬಗೆಯ ಬೆಲ್ಲದ ವಿಧಗಳಿವೆ.

ಯಾವುದೇ ರಾಸಾಯನಿಕ ಬಳಸದೆ ಈ ಬೆಲ್ಲ ಸಿದ್ಧಪಡಿಸಲಾಗುತ್ತದೆ. ಪರಿಷೆ ಮಾಡಿ ಬೆಲ್ಲವನ್ನು ಅಲಂಕರಿಸಲಾಗಿದ್ದು, ಮಾರಾಟ ಸಹ ಮಾಡುತ್ತಿದ್ದಾರೆ. ಒಂದನೇ ತಾರೀಖಿನವರೆಗೂ ಈ ಬೆಲ್ಲ ಮಾರಾಟ ಮಾಡಲಾಗುತ್ತದೆ. ಮೂವತ್ತು ಬಗೆಯ ಆರ್ಗ್ಯಾನಿಕ್ ಬೆಲ್ಲ, ಔಷಧೀಯ ಗುಣಗಳನ್ನು ಹೊಂದಿರುವ ಬೆಲ್ಲ ಇರಿಸಲಾಗಿದೆ. ಸ್ಟ್ರಚರ್​ಗಳಂತೆ ಜೋಡಿಸಿ ಪ್ರದರ್ಶನಕ್ಕಿಡಲಾಗಿದೆ” ಎಂದು ತಿಳಿಸಿದರು.‌

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GALWAN VALLEY IN LEH LADAKH:ಭರದ ಕಾರ್ಯಾಚರಣೆ.

Leh (Ladakh) News: ಭಾರತೀಯ ಸೇನೆ ಮತ್ತು ಸ್ಥಳೀಯ ಮಧ್ಯಸ್ಥಗಾರರ ಸಹಯೋಗದಲ್ಲಿ ಅಧಿಕಾರಿಗಳು ಕಣಿವೆಯಲ್ಲಿ ಈ ಯೋಜನೆಗೆ ಮುಂದಾಗಿದ್ದು, ಸ್ಥಳೀಯ ಪ್ರವಾಸಿಗ ಆಕರ್ಷಿಣೀಯ ತಾಣವಾಗಿ ರೂಪಿಸುವ...

PINK SALT BENEFITS FOR HEALTH : ಪಿಂಕ್ ಉಪ್ಪಿನಿಂದ ಆರೋಗ್ಯಕ್ಕೆ ಹಲವು ಪ್ರಯೋಜನ

Pink Salt Benefits for Health News: ಹಿಮಾಲಯನ್ ಪಿಂಕ್ ರಾಕ್ SALT ಅಥವಾ ಪಿಂಕ್ ಉಪ್ಪು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ದೊರೆಯುತ್ತವೆ...

MACHINERY CAPITAL : ಕರ್ನಾಟಕವು ದೇಶದ ಯಂತ್ರೋಪಕರಣಗಳ ರಾಜಧಾನಿ

Bangalore News: ಭಾರತದ MACHINERY ಉದ್ಯಮದಲ್ಲಿ ಕರ್ನಾಟಕ ಶೇ.50ರಷ್ಟು ಉತ್ಪಾದನೆ ಪಾಲು ಹೊಂದಿದೆ ಎಂದು ಕೇಂದ್ರ ಸಚಿವ ಹೆಚ್​​.ಡಿ.ಕುಮಾರಸ್ವಾಮಿ ತಿಳಿಸಿದರು.MACHINERY ಕ್ಷೇತ್ರವು ಉತ್ಪಾದನಾ ವಲಯಕ್ಕೆ ಬಹುದೊಡ್ಡ...

SHAH JAHAN URUS: ಪ್ರವಾಸಿಗರಿಗೆ ಉಚಿತ ಪ್ರವೇಶ, ಬಿಗಿ ಭದ್ರತೆ.

Agra (Uttar Pradesh) News : ಉಚಿತ ಅಷ್ಟೇ ಅಲ್ಲ, ಪ್ರವಾಸಿಗರು ಚಕ್ರವರ್ತಿ ಷಹಜಹಾನ್ ಮತ್ತು ಬೇಗಂ ಮುಮ್ತಾಜ್ ಅವರ ನಿಜವಾದ ಸಮಾಧಿಗಳನ್ನು ವೀಕ್ಷಿಸಬಹುದಾಗಿದೆ.ಜನವರಿ 26,...