spot_img
spot_img

ಸುಪ್ರೀಂನಲ್ಲಿ ಪಿಐಎಲ್‌ ಸಲ್ಲಿಕೆ : ಹೋರಾಟಗಾರರು ಮುಂದು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಳಗಾವಿ : ರಾಷ್ಟ್ರ ಲಾಂಛನದ ಅಡಿಯಲ್ಲಿ ‘ಸತ್ಯಮೇವ ಜಯತೆ’ ಎಂಬ ಧ್ಯೇಯ ವಾಕ್ಯ ರಾಜ್ಯದ ಶಕ್ತಿ ಕೇಂದ್ರಗಳಾದ ವಿಧಾನಸೌಧ ಮತ್ತು ಸುವರ್ಣ ವಿಧಾನಸೌಧದ ಮೇಲೆ ಧ್ಯೇಯ ವಾಕ್ಯ ಬಳಸದೇ ಪ್ರದರ್ಶನ ಮಾಡುವುದು ಭಾರತದ ರಾಷ್ಟ್ರ ಲಾಂಛನ (ಅನುಚಿತ ಬಳಕೆಯ ನಿಷೇಧ) ಅಧಿನಿಯಮ 2005 ಹಾಗೂ ಬಳಕೆ ನಿಯಂತ್ರಣ ನಿಯಮ 2007 ರ ಉಲ್ಲಂಘನೆಯಾಗುತ್ತದೆ.

ರಾಜ್ಯದ ಎರಡೂ ಸೌಧಗಳ ಮೇಲೆ ‘ಸತ್ಯಮೇವ ಜಯತೆ’ ಧ್ಯೇಯ ವಾಕ್ಯ ಅಳವಡಿಸಲಾಗಿಲ್ಲ.
ಇದು ಲಾಂಛನದ ಘನತೆ ವಿಚಾರದಲ್ಲಿ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆಯೇ ಎಂಬ ಚರ್ಚೆ ಹುಟ್ಟುಹಾಕಿದೆ.

‘ಲಾಂಛನದ ಕೆಳಗೆ ಧ್ಯೇಯವಾಕ್ಯ ಅಳವಡಿಸಲು ಜಾಗವೇ ಇಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಲು ಹೋರಾಟಗಾರರು ಮುಂದಾಗಿದ್ದಾರೆ.

ಸರಕಾರದ ಅಧೀನ ಕಾರ್ಯದರ್ಶಿ ರಾಜಶೇಖರ ಎಂ.ಜಿ. ಅವರು, ‘‘ 1951-1956 ರ ಅವಧಿಯಲ್ಲಿ ವಿಧಾನ ಸೌಧ ನಿರ್ಮಿಸಲಾಗಿದ್ದು, ಅದೇ ಸಂದರ್ಭದಲ್ಲಿ ಕಟ್ಟಡದ ಮುಖ್ಯ ಗೋಪುರದ ಮೇಲೆ ರಾಷ್ಟ್ರ ಲಾಂಛನ ಪ್ರತಿಷ್ಠಾಪಿಸಲಾಗಿದೆ.

ಲಾಂಛನದ ಕೆಳಗೆ ಸತ್ಯಮೇವ ಜಯತೆ ಎಂಬ ಧ್ಯೇಯವಾಕ್ಯ ನಮೂದಾಗಿರುವುದಿಲ್ಲ ಹಾಗೂ ಇನ್ನು ಮುಂದೆ ನಮೂದಿಸಲೂ ಅಲ್ಲಿ ಸ್ಥಳಾವಕಾಶ ಇಲ್ಲ’’, ಎಂದು ತಿಳಿಸಿದ್ದಾರೆ.

ವಿಧಾನಸೌಧದಲ್ಲಿನ ಲಾಂಛನವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗುವುದು.

ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿನ ಲಾಂಛನದ ಕೆಳಗೆ ಧ್ಯೇಯವಾಕ್ಯ ಅಳವಡಿಸಲು ಕ್ರಮ ಕೈಗೊಳ್ಳುವ ಬಗ್ಗೆ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಅವರ ಮೂಲಕ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದ್ದಾರೆ.
ಭಾರತ ಸರಕಾರ 1950 ರ ಜನವರಿ 26 ರಂದು ಅಧಿಕೃತವಾಗಿ ತನ್ನ ರಾಷ್ಟ್ರ ಲಾಂಛನವನ್ನಾಗಿ ಆಯ್ದುಕೊಂಡಿದೆ.

ದೇವನಾಗರಿ ಲಿಪಿಯಲ್ಲಿರುವ ಸತ್ಯಮೇವ ಜಯತೆ ಎಂಬ ಧ್ಯೇಯ ವಾಕ್ಯವನ್ನು ಅದರಡಿ ಕಡ್ಡಾಯವಾಗಿ ಪ್ರದರ್ಶಿಸಲೇಬೇಕು ಎನ್ನುತ್ತವೆ ರಾಷ್ಟ್ರಲಾಂಛನ ಕುರಿತಾದ 2005 ಮತ್ತು 2007ರ ಕಾಯ್ದೆಗಳು ಇವೆ.
ಈ ಬಗ್ಗೆ ಕೇಂದ್ರ ಸರಕಾರಕ್ಕೆ ದೂರು ನೀಡಿ, ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಸಲಾಗುವುದು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

KIREN RIJIJU WAQF BILL:ವಕ್ಫ್ ತಿದ್ದುಪಡಿ ಮಸೂದೆಗೆ ಚಂದ್ರಬಾಬು, ನಿತೀಶ್, ಮುಸ್ಲಿಮ್ ಸಂಸದರಿಂದ ಬೆಂಬಲ

Srinagar (Jammu-Kashmir) News : ಬಿಜೆಪಿ ಹೊರತಾಗಿ ಎನ್​ಡಿಎ ಕೂಟದಲ್ಲಿ WAQF ಮಸೂದೆ ತಿದ್ದುಪಡಿಗೆ ಸಮ್ಮತಿ ಇಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ...

AMARTYA SEN DESCRIBE MANMOHAN:ಮನಮೋಹನ್ ಸಿಂಗ್ ಒಬ್ಬ ಮಹಾನ್ ವ್ಯಕ್ತಿ, ಅದ್ಭುತ ಅರ್ಥಶಾಸ್ತ್ರಜ್ಞ

Kolkata (West Bengal) News: ಪಶ್ಚಿಮ ಬಂಗಾಳದ ಬಿರ್ಭೂಮ್​​ನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, MANMOHAN​ ಸಿಂಗ್​ ಮತ್ತು ನಾನು ಕೇಂಬ್ರಿಡ್ಜ್‌ನಲ್ಲಿ ಓದುತ್ತಿರುವ ವೇಳೆ ಉತ್ತಮ...

H D DEVE GOWDA:ರಾಜ್ಯದಲ್ಲಿ ಕೃಷ್ಣ, ಕಾವೇರಿ, ಗೋದಾವರಿ ನದಿ ಜೋಡಣೆಗೆ ಎಲ್ಲರೂ ಧ್ವನಿ ಎತ್ತಬೇಕಿದೆ

Bangalore News: ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ರಾಜ್ಯಸಭೆಯಲ್ಲಿ ಗೋದಾವರಿ, ಕೃಷ್ಣ, ಕಾವೇರಿ ನದಿ ಜೋಡಣೆ ಬಗ್ಗೆ ತಮಿಳುನಾಡಿನ ರಾಜ್ಯಸಭಾ...

MAHINDRA ELECTRIC SUV BOOKING OPEN:ಅಬ್ಬಬ್ಬಾಂದ್ರೆ ಎಷ್ಟಿರಬಹುದು?

Mahindra Electric SUV Booking Open News: ಇವುಗಳನ್ನು ನವೆಂಬರ್ 2024ರಲ್ಲಿ 'XEV 9E' ಮತ್ತು 'BE 6' ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿತ್ತು. ಎಲೆಕ್ಟ್ರಿಕ್...