spot_img
spot_img

PM MODI SPEAKS TO ADITYANATH ಸಿಎಂ ಯೋಗಿ ಆದಿತ್ಯನಾಥ್ಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

ತ್ರಿವೇಣಿ ಸಂಗಮದಲ್ಲಿ ಉಂಟಾಗಿರುವ ಭೀಕರ ಕಾಲ್ತುಳಿತದ ಕುರಿತು ಮಾಹಿತಿ ಪಡೆದಿರುವ ಪ್ರಧಾನಿ ಮೋದಿ, ಭದ್ರತಾ ಕ್ರಮಗಳ ಕುರಿತು ಯುಪಿ ಸಿಎಂ ಯೋಗಿ ADITYANATH ಅವರೊಂದಿಗೆ​ ಮಾತನಾಡಿದ್ದಾರೆ.ಸಿಎಂ ಯೋಗಿ ADITYANATH​ ಕಚೇರಿಯ ಮಾಹಿತಿ ಪ್ರಕಾರ, ಪ್ರಧಾನಿ ನಿರಂತರವಾಗಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಎರಡು ಬಾರಿ ADITYANATH ಕರೆ ಮಾಡಿದ್ದಾರೆ. ಅಲ್ಲಿನ ಬೆಳವಣಿಗೆ ಮತ್ತು ಪರಿಹಾರ ಕ್ರಮದ ಕುರಿತು ವಿವರ ಪಡೆದಿದ್ದಾರೆ.ಇಂದಿನ ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಅಮೃತ್​ ಸ್ನಾನ ಮಾಡಲು ಕೋಟ್ಯಂತರ ಭಕ್ತರು ಪ್ರಯಾಗ್‌ರಾಜ್​ಗೆ ಆಗಮಿಸಿದ್ದಾರೆ.ತಡರಾತ್ರಿ ತ್ರಿವೇಣಿ ಸಂಗಮದಲ್ಲಿ ಅಪಾರ ಪ್ರಮಾಣದ ಭಕ್ತರು ಪವಿತ್ರ ಸ್ನಾನ ಮಾಡಲು ಮುಂದಾದಾಗ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾವಿರಾರು ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.

ಪರಿಣಾಮ, ಕೆಲವರು ನಾಪತ್ತೆಯಾಗಿದ್ದು, ಮತ್ತೆ ಕೆಲವರಿಗೆ ಗಾಯಗಳಾಗಿವೆ.ಪ್ರಯಾಗ್​ರಾಜ್​ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಭಾರಿ ಕಾಲ್ತುಳಿತದ ಕುರಿತು ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶ ಸಿಎಂ ಯೋಗಿ ADITYANATH​ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಗಾಯಾಳುಗಳ ನೆರವಿಗೆ ತಕ್ಷಣ ಧಾವಿಸುವಂತೆ ಹಾಗೂ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆಯೂ ಅವರು ಸೂಚಿಸಿದ್ದಾರೆ.

Yogi who held a high-level meeting: ಇಂದು ಮುಂಜಾನೆ 4 ಗಂಟೆಯಿಂದಲೇ ಸಿಎಂ, ಪ್ರಮುಖ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ತತ್‌ಕ್ಷಣದ ಕ್ರಮಕ್ಕೆ ಮುಂದಾಗುವಂತೆ ಸೂಚಿಸಿದ್ದಾರೆ.ಕಾಲ್ತುಳಿತ ಪರಿಸ್ಥಿತಿ ಕುರಿತು ವರದಿಯಾಗುತ್ತಿದ್ದಂತೆ ಸಿಎಂ ಯೋಗಿ ADITYANATH ಅವರು ಈ ಕುರಿತು ನಿರಂತರ ಮಾಹಿತಿ ಪಡೆಯುತ್ತಿದ್ದಾರೆ.

ಪರಿಸ್ಥಿತಿ ನಿರ್ವಹಣೆಗೆ ವಾರ್​ ರೂಂ ಸ್ಥಾಪಿಸಿದ್ದು ಮುಖ್ಯ ಕಾರ್ಯದರ್ಶಿ, ಡಿಜಿಪಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಿಎಂ ಕಚೇರಿ ಅಧಿಕಾರಿಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಇದರಲ್ಲಿದ್ದಾರೆ.

CM Yogi Adityanath appeal: ಭಕ್ತರಿಗೂ ಮನವಿ ಮಾಡಿರುವ ಸಿಎಂ ಯೋಗಿ, ಸಂಗಮ ಘಾಟ್​ನಲ್ಲಿ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಆಡಳಿತಾಧಿಕಾರಿಗಳೊಂದಿಗೆ ಸಹಕರಿಸಿ. ಯಾವುದೇ ಗಾಳಿ ಮಾತಿಗೆ ಕಿವಿಗೊಡಬೇಡಿ. ಸ್ನಾನ ಮಾಡಲು ಅನೇಕ ಘಾಟ್​​ಗಳಿವೆ. ಒಂದೇ ಘಾಟ್​ನಲ್ಲಿ ಜನರು ಹೆಚ್ಚು ಸೇರಬಾರದು. ಅಲ್ಲಿನ ನಿಯಮಗಳನ್ನು ಪಾಲಿಸಬೇಕು. ಆದೇಶ ಪಾಲನೆ ಮತ್ತು ಸುರಕ್ಷತೆ ನಿರ್ವಹಣೆಗೆ ನಿಮ್ಮ ಸಹಕಾರ ಅತ್ಯಗತ್ಯ ಎಂದು ತಿಳಿಸಿದ್ದಾರೆ.

Akhara Parishad cancels amrit bath:ಕಾಲ್ತುಳಿತ ಸಂಭವಿಸಿದ ಬೆನ್ನಲ್ಲೇ ಅಖಿಲ ಭಾರತೀಯ ಅಖಾರ ಪರಿಷದ್​ ಅಧ್ಯಕ್ಷರಾದ ಮಹಂತ್​ ರವಿಂದ್ರ ಪುರಿ ಮೌನಿ ಅಮಾವಾಸ್ಯೆಯ ಮಹಾಸ್ನಾನ ರದ್ದು ಮಾಡಿದ್ದಾರೆ.ಮಂಗಳವಾರ ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ 5 ಕೋಟಿ ಜನರು ಮೇಳಕ್ಕೆ ಆಗಮಿಸಿದ್ದು, ಇಂದು 10 ಕೋಟಿ ಜನರು ಸ್ನಾನ ಕೈಗೊಳ್ಳಬಹುದು ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿತ್ತು.

ಇದಕ್ಕಾಗಿ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.ಈ ಕುರಿತು ಮಾತನಾಡಿರುವ ಅವರು, ಏನಾಯಿತು ಎಂಬುದನ್ನು ನೋಡಿದ್ದೀರಿ. ನಾವು ಎಲ್ಲಾ ಸಂತರು ಸ್ನಾನ ಮಾಡಲು ಸಿದ್ದವಾದಾಗ ಈ ಘಟನೆ ವರದಿಯಾಯಿತು. ನಾವು ಸ್ನಾನವನ್ನು ರದ್ದು ಮಾಡಿದ್ದೇವೆ.

ಇದೀಗ ಮೌನಿ ಅಮಾವಾಸ್ಯೆ ಸ್ನಾನವನ್ನೂ ರದ್ದು ಮಾಡುತ್ತಿದ್ದೇವೆ. ಕುಂಭ ಮೇಳ ಸಂಪ್ರದಾಯದ ಪ್ರಕಾರ ಸನ್ಯಾಸಿಗಳು, ಬೈರಾಗಿಗಳು ಸಂಗಮ್​ ಘಾಟ್​ನಲ್ಲಿ ನಿಯಮಾನುಸಾರ ಮೆರವಣಿಗೆ ನಡೆಸಿ ಸ್ನಾನ ಮಾಡುತ್ತಾರೆ. ಮೌನಿ ಅಮಾವಾಸ್ಯೆಯನ್ನು ತ್ರಿವೇಣಿ ಸಂಗಮದ ಸ್ನಾನಕ್ಕೆ ಅತ್ಯಂತ ಪವಿತ್ರ ದಿನ ಎಂದು ಹಿಂದೂ ಧರ್ಮದಲ್ಲಿ ಪರಿಗಣಿಸಲಾಗುತ್ತದೆ. ಆದರೆ, ಇದೀಗ ಇದನ್ನು ನಾವು ರದ್ದು ಮಾಡಿದ್ದೇವೆ ಎಂದರು.

Exam center shift from Prayagraj to Lucknow: ಈ ಕುರಿತು ಸೂಚನೆ ಹೊರಡಿಸಿರುವ ಗೇಟ್​​ ಪರೀಕ್ಷೆ ನಡೆಸುವ ಐಐಟಿ ರೋರ್ಕಿ ಮತ್ತು ಜೆಎಎಂ ಪರೀಕ್ಷೆ ನಡೆಸುವ ಐಐಟಿ ದೆಹಲಿ, ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಿಂದಾಗಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ತಲುಪುವ ಸವಾಲು ಎದುರಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ಪರೀಕ್ಷೆಗಳನ್ನು ಇದೇ ದಿನ ಲಕ್ನೋಗೆ ಸ್ಥಳಾಂತರಿಸಲಾಗುವುದು. ಪ್ರಯಾಗ್‌ರಾಜ್​ ಅಭ್ಯರ್ಥಿಗಳು ಲಕ್ನೋದಲ್ಲಿ ಪರೀಕ್ಷೆ ಬರೆಯುವಂತೆಯೂ ಸೂಚಿಸಿದೆ.ಫೆ.1 ಮತ್ತು 2ರಂದು ನಿಗದಿಯಾಗಿದ್ದ ಐಐಟಿಯ ಗೇಟ್​ ಮತ್ತು ಜೆಎಂ ಪರೀಕ್ಷಾ ಕೇಂದ್ರಗಳನ್ನು ಪ್ರಯಾಗ್​ರಾಜ್​ ಬದಲಾಗಿ ಲಕ್ನೋದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಇದನ್ನು ಓದಿರಿ :LINEMAN ADVENTURE : ಕೆರೆಯಲ್ಲಿ ಈಜಿ ಹೋಗಿ ವಿದ್ಯುತ್ ಕಂಬ ದುರಸ್ತಿ ಪಡಿಸಿದ ಲೈನ್ಮ್ಯಾನ್ಗಳು

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...