spot_img
spot_img

POSTAGE STAMPS EXHIBITION : ಬೆಳಗಾವಿಯಲ್ಲಿ ಗಮನ ಸೆಳೆದ ಅಂಚೆ ಚೀಟಿಗಳ ಪ್ರದರ್ಶನ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Belgaum News:

ಮಹಾವೀರ ಭವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ POSTAGE STAMPS EXHIBITION ವನ್ನು ವಿದ್ಯಾರ್ಥಿಗಳು, ಅಂಚೆ ಚೀಟಿ ಪ್ರಿಯರು ಕಣ್ತುಂಬಿಕೊಂಡರು.  ಅಂಚೆ ಇಲಾಖೆ, ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಗಳ ಗ್ರೂಪ್(ಬಿಪಿಎಎನ್‌ಜಿ) ಸಹಯೋಗದೊಂದಿಗೆ ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ‘ಇಕ್ಷುಪೆಕ್ಸ್‌–2025’ ಜಿಲ್ಲಾಮಟ್ಟದ POSTAGE STAMPS EXHIBITION ಎಲ್ಲರ ಗಮನ ಸೆಳೆಯಿತು.

ವಿವಿಧ ರಾಜ್ಯಗಳ ಅಂಚೆ ಚೀಟಿ ಸಂಗ್ರಹಕಾರರು ಸಂಗ್ರಹಿಸಿರುವ ದೇಶ – ವಿದೇಶದ ಅಪರೂಪದ ಅಂಚೆ ಚೀಟಿಗಳನ್ನು 180 ಫ್ರೇಮ್‌ಗಳಲ್ಲಿ ಪ್ರದರ್ಶಿಸಲಾಯಿತು. ಇತಿಹಾಸ, ಭೂಗೋಳಶಾಸ್ತ್ರ, ವಿಜ್ಞಾನ, ಅಂತತರಿಕ್ಷ ಯಾನಕ್ಕೆ ಸಂಬಂಧಿಸಿದ ಮಾಹಿತಿ ಒಳಗೊಂಡ ಅಂಚೆ ಚೀಟಿಗಳೂ ಇವೆ. ರಾಣಿ ಚನ್ನಮ್ಮ, ಮಹಾತ್ಮ ಗಾಂಧೀಜಿ, ಬಿ.ಆರ್.ಅಂಬೇಡ್ಕರ್‌ ಸೇರಿ ಹಲವು ಮಹಾನ್‌ ನಾಯಕರ ಅಂಚೆ ಚೀಟಿಗಳು ವಿಶೇಷವಾಗಿದ್ದವು.

ಮಾತನಾಡಿದ ವಿದ್ಯಾರ್ಥಿನಿ ಜೀಯಾ ಥರಪಟ್ಟಿ, “ಅಂಚೆಚೀಟಿಗಳನ್ನು ಸಂಗ್ರಹಿಸುವಂತೆ ನಮ್ಮ ಶಿಕ್ಷಕರೊಬ್ಬರು ಹೇಳಿದರು. ಇದರಲ್ಲಿ ನನಗೂ ಆಸಕ್ತಿ ಬಂತು. ಇದೇ ಮೊದಲ ಬಾರಿ ಪ್ರದರ್ಶನದಲ್ಲಿ ಭಾಗವಹಿಸಿದ್ದು, ತುಂಬಾ ಖುಷಿಯಾಗುತ್ತದೆ. ಸದ್ಯ ಯುನೆಸ್ಕೋ ಹೆರಿಟೇಜ್ ಆಫ್ ಸೈನ್ಸ್ ಇಂಡಿಯಾ ಚೀಟಿಗಳನ್ನು ಸಂಗ್ರಹಿಸಿದ್ದು, ಮುಂದೆ ಇನ್ನು ಹೆಚ್ಚು ಚೀಟಿಗಳನ್ನು ಸಂಗ್ರಹಿಸುವ ಗುರಿ ಹೊಂದಿದ್ದೇನೆ” ಎಂದರು.

“ನಮ್ಮ ಮಗಳು ಜೀಯಾ ಗೂಗಲ್​ನಲ್ಲಿ ಮಾಹಿತಿ ಪಡೆದು ಬರೆದಿದ್ದಾಳೆ. ಮಗಳ ಈ ಪ್ರಯತ್ನ ಮತ್ತು ಹವ್ಯಾಸ ನಮಗೆ ತುಂಬಾ ಖುಷಿ ತಂದಿದೆ. ಇಲ್ಲಿ ನಾನಾ ರೀತಿಯ ಅಂಚೆ ಚೀಟಿಗಳನ್ನು ನೋಡಿದೆವು” ಎನ್ನುತ್ತಾರೆ ನಿರ್ಮಲಾ ಥರಪಟ್ಟಿ.

Collection of postage stamps of more than 50 countries:

ಅಂಚೆ ಇಲಾಖೆ ಸಹಾಯಕ ಸೂಪರಿಂಟೆಂಡೆಂಟ್ ಈರಣ್ಣ ಮುತ್ನಾಳೆ ಮಾತನಾಡಿ, POSTAGE STAMPS EXHIBITION ದ ಸ್ಪರ್ಧೆ ಕೂಡ ನಡೆಸುತ್ತಿದ್ದೇವೆ. ಯಾರು ಚನ್ನಾಗಿ ಸಂಗ್ರಹಿಸಿರುತ್ತಾರೆಯೋ ಅವರಿಗೆ ಬಹುಮಾನ‌ ನೀಡಲಿದ್ದೇವೆ. ದೇಶ, ವಿದೇಶಗಳ ಮತ್ತು ಬಂಗಾರ, ಬೆಳ್ಳಿ ಅಂಚೆ ಚೀಟಿಗಳು ಇಲ್ಲಿವೆ. ವಿದ್ಯಾರ್ಥಿಗಳು ಪ್ರತಿಯೊಂದು ಚೀಟಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ‌.

ಅಲ್ಲದೇ ನಾವೂ ಈ ರೀತಿ ಸಂಗ್ರಹಿಸಬೇಕು ಅಂದುಕೊಂಡು ತೆರಳುತ್ತಿದ್ದಾರೆ. ಅಂಚೆ ಸಂಗ್ರಹಕಾರರನ್ನು ಉತ್ತೇಜಿಸಬೇಕು ಎಂಬ ನಮ್ಮ ಉದ್ದೇಶ ಈಡೇರಿದೆ” ಎಂದು ಹರ್ಷ ವ್ಯಕ್ತಪಡಿಸಿದರು.  ನ್ಯಾಯವಾದಿಯೂ ಆಗಿರುವ ಸಂಗ್ರಹಕಾರ ವಿನಾಯಕ ಲೇಂಡಿ ಮಾತನಾಡಿ, “ಅಲ್ಫಾಬೆಟ್ ಎ ಟು ವೈವರೆಗೆ ಸುಮಾರು 50ಕ್ಕೂ ಅಧಿಕ ದೇಶಗಳ ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದೇನೆ. ಇವುಗಳನ್ನು ನೋಡಿದ ವಿದ್ಯಾರ್ಥಿಗಳು ತುಂಬಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂಚೆ ಇಲಾಖೆ ನನಗೆ ಗುರುತಿಸಿಕೊಳ್ಳಲು ಒಂದು ಒಳ್ಳೆಯ ವೇದಿಕೆ ಕೊಟ್ಟಿದೆ” ಎಂದರು.

ಇದನ್ನು ಓದಿರಿ : GAURI LANKESH MURDER CASE : ಬಂಧಿತ ಎಲ್ಲ ಆರೋಪಿಗಳಿಗೂ ಜಾಮೀನು ಮಂಜೂರು

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GOLD PRICE PREDICTION:2027ಕ್ಕೆ ಇಷ್ಟು ದರ ತಲುಪಲಿದೆಯಂತೆ ಬಂಗಾರ!

New Delhi News: ಮುಂದಿನ 2 ವರ್ಷಗಳಲ್ಲಿ GOLDದ ಬೆಲೆ ಮತ್ತೆ ಏರಿಕೆಯಾಗಲಿದೆ. ಬೇಡಿಕೆ ಹೆಚ್ಚಿದ ಹಿನ್ನೆಲೆ ಮುಂಗಡ ಬುಕ್ಕಿಂಗ್​ ಕೂಡ ಹೆಚ್ಚಾಗುವ ಸಾಧ್ಯತೆ ಇದೆ....

TALKS WITH FARMERS:ಸೌಹಾರ್ದಯುತವಾಗಿ ಕೊನೆಗೊಂಡ ಕೇಂದ್ರ ಸರ್ಕಾರ, ರೈತ ಸಂಘಟನೆಗಳ ಮಾತುಕತೆ

Chandigarh News: ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚೌಹಾಣ್, "ಮುಂದಿನ ಸಭೆ ಮಾರ್ಚ್ 19ರಂದು ನಡೆಯಲಿದೆ" ಎಂದು ಹೇಳಿದರು. ಚೌಹಾಣ್ ಸೇರಿದಂತೆ ಕೇಂದ್ರ ವಾಣಿಜ್ಯ ಮತ್ತು...

MANN KI BAAT:ಅಂದು ಮಹಿಳೆಯರೇ ನಿರ್ವಹಿಸಲಿದ್ದಾರೆ ಪ್ರಧಾನಿಯ ಸೋಶಿಯಲ್ ಮೀಡಿಯಾ

New Delhi News: "ಮಹಿಳೆಯರ ಅದಮ್ಯ ಮನೋಭಾವವನ್ನು ನಾವು ಸಂಭ್ರಮಿಸೋಣ ಮತ್ತು ಗೌರವಿಸೋಣ" ಎಂದ ಅವರು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.ಮಾರ್ಚ್ 8...

INDIAN NATIONAL ANTHEM IN PAKISTAN:ಭಾರತ ತಂಡ ದುಬೈನಲ್ಲಿದ್ದರೂ ಪಾಕ್ ಮೈದಾನದಲ್ಲಿ ಮೊಳಗಿದ ರಾಷ್ಟ್ರಗೀತೆ!

Indian National Anthem in Pakistan News : ಈ ಪಂದ್ಯದಲ್ಲಿ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಿದ್ದು, PAKISTANದ ಗಡಾಫಿ ಮೈದಾನ ಆತಿಥ್ಯ...