spot_img
spot_img

ಪ್ರಯಾಗ್‌ರಾಜ್ ಮಹಾಕುಂಭ ಮೇಳ : ರುದ್ರಾಕ್ಷಿ ಜಪಮಾಲೆ ಕಿರೀಟ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಪ್ರಯಾಗರಾಜ್(ಉತ್ತರ ಪ್ರದೇಶ): ಪ್ರಯಾಗ್‌ರಾಜ್ ಮಹಾಕುಂಭ ಮೇಳಕ್ಕೆ ಆಗಮಿಸಿರುವ ಸಾಧುವೊಬ್ಬರು 45 ಕೆ.ಜಿ ತೂಕದ ರುದ್ರಾಕ್ಷಿ ಜಪಮಾಲೆಯನ್ನು ಕಿರೀಟವಾಗಿ ತೊಟ್ಟುಕೊಂಡು ಗಮನ ಸೆಳೆಯುತ್ತಿದ್ದಾರೆ.

ಮಹಾಕುಂಭ ಮೇಳದ ಹಿನ್ನೆಲೆಯಲ್ಲಿ ಪ್ರಯಾಗ್‌ರಾಜ್‌ಗೆ ಆಗಮಿಸಿರುವ ಸಾಧು ಆವಾಹನ್ ಅಖಾರದ ಸಂತ ಗೀತಾನಂದ ಜಿ.ಮಹಾರಾಜ್ ಅವರು 45 ಕೆ.ಜಿ ತೂಕದ ರುದ್ರಾಕ್ಷಿ ಜಪಮಾಲೆಯನ್ನೇ ತಮ್ಮ ತಲೆ ಮೇಲೆ ಕಿರೀಟದಂತೆ ತೊಟ್ಟುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಸುಮಾರು 2,200 ರುದ್ರಾಕ್ಷಿ ಜಪಮಾಲೆಗಳಿಂದ ಕಿರೀಟವನ್ನು ಮಾಡಿಕೊಂಡಿದ್ದಲ್ಲದೇ, ತಮ್ಮ ದೇಹದ ಮೇಲೆ ರುದ್ರಾಕ್ಷಿ ರಕ್ಷಾಕವಚವನ್ನೂ ಧರಿಸಿದ್ದಾರೆ. ಪ್ರಯಾಗ್‌ರಾಜ್​ನಲ್ಲಿ ವಿಶಿಷ್ಟ ವೇಷಭೂಷಣಗಳಿಂದ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಈ ಸಂತನನ್ನು ಕಂಡ ಜನರು, ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಿದ್ದಾರೆ.

ಹರಿಯಾಣದಿಂದ ಬಂದಿರುವ ಗೀತಾನಂದ ಅವರು ತಲೆಯಿಂದ ಹಿಡಿದು ಹೊಟ್ಟೆಯವರೆಗೆ ಎರಡು ಲಕ್ಷಕ್ಕೂ ಹೆಚ್ಚು ರುದ್ರಾಕ್ಷಿ ಧರಿಸುವುದರಿಂದ ಜನರು ಇವರನ್ನು ರುದ್ರಾಕ್ಷ್ ಬಾಬಾ ಎಂಬ ಹೆಸರಿನಿಂದಲೂ ಕರೆಯುತ್ತಾರಂತೆ.

2019ರಲ್ಲಿ ನಡೆದ ಅರ್ಧ ಕುಂಭ ಮೇಳದಲ್ಲಿ ಗೀತಾನಂದ ಜಿ.ಮಹಾರಾಜ್ ಅವರು ಲೋಕಕಲ್ಯಾಣ ಮತ್ತು ಸನಾತನ ಧರ್ಮವನ್ನು ಬಲಪಡಿಸುವ ಆಶಯದೊಂದಿಗೆ ಇಂತಹದ್ದೊಂದು ಪ್ರತಿಜ್ಞೆ ಮಾಡಿದ್ದರು. ಇದೀಗ ರುದ್ರಾಕ್ಷಿಯ ಕಿರೀಟ ಧರಿಸಿ ಪ್ರಯಾಗ್‌ರಾಜ್ ಮಹಾಕುಂಭ ಮೇಳಕ್ಕೆ ಆಗಮಿಸಿದ್ದಾರೆ. ಕಳೆದ ಐದು ವರ್ಷಗಳಿಂದಲೂ ರುದ್ರಾಕ್ಷಿ ಕಿರೀಟ ಧರಿಸಿಕೊಂಡೇ ಇರುವ ಇವರು 2031ರ ಕುಂಭದಲ್ಲಿ ಕೊನೆಗೊಳಿಸುತ್ತಾರಂತೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್ (ಅಲಹಾಬಾದ್)ನಲ್ಲಿ ಮುಂದಿನ ವರ್ಷದ ಜನವರಿ 13ರಂದು ಆರಂಭವಾಗಲಿರುವ ಮಹಾಕುಂಭ ಮೇಳಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. 2025ರ ಜನವರಿ 13ರಿಂದ ಆರಂಭಗೊಳ್ಳಲಿರುವ ಮಹಾಕುಂಭ ಸುಮಾರು 50 ದಿನಗಳವರೆಗೆ ನಡೆಯಲಿದೆ.

ಹಾಗಾಗಿ ಸಾರ್ವಜನಿಕರು, ಭಕ್ತರು, ಸಾಧು-ಸಂತರು, ಋಷಿ ಮುನಿಗಳು, ಯೋಗಿಗಳು ಪ್ರಯಾಗ್‌ರಾಜ್‌ಗೆ ಆಗಮಿಸುತ್ತಿದ್ದಾರೆ.

”ಆರಂಭದ ದಿನಗಳಲ್ಲಿ ಭಾರವಾದ ರುದ್ರಾಕ್ಷಿ ಕಿರೀಟವನ್ನು ನಿಭಾಯಿಸಲು ಕೆಲವು ತೊಂದರೆಗಳು ಎದುರಾದವು. ಆದರೆ, ದಿನ ಕಳೆದಂತೆ ರುದ್ರಾಕ್ಷಿ ಕಿರೀಟ ನನ್ನ ಜೀವನದ ಭಾಗವಾಯಿತು. ಕಠಿಣ ಸಾಧನೆಯ ಮೂಲಕವೇ ದೇವರನ್ನು ಮೆಚ್ಚಿಸುವ ಪ್ರತಿಜ್ಞೆ ಇದು. 2031ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭಮೇಳದವರೆಗೂ ಈ ಪ್ರತಿಜ್ಞೆ ಮುಂದುವರಿಯುತ್ತದೆ” ಎಂದು ಗೀತಾನಂದ ಮಹಾರಾಜ್ ಹೇಳಿದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SAFETY OF WOMEN:ಮಹಿಳೆಯರ ಸುರಕ್ಷತೆಗೆ ಶೂ ಡಿವೈಸ್ ಆವಿಷ್ಕರಿಸಿದ ವಿದ್ಯಾರ್ಥಿ

Alwar (Rajasthan) News​: ದುಷ್ಕರ್ಮಿಗಳ ವಿರುದ್ಧ ರಕ್ಷಣೆ ಪಡೆಯಲು ಶಾಕ್​ ನೀಡುವ ಶೂವನ್ನು ವಿದ್ಯಾರ್ಥಿ ವಿನ್ಯಾಸ ಮಾಡಿದ್ದಾರೆ. ಇದರಿಂದ ಧರಿಸಿದವರಿಗೆ ಯಾವುದೇ ಗಂಭೀರ ಸಮಸ್ಯೆ ಅಥವಾ...

UPCOMING SMARTPHONES IN FEBRUARY:ಈ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸ್ಮಾರ್ಟ್ಫೋನ್ಗಳಿವು

  Upcoming Smartphone Launches in February News: ಈ ಫೆಬ್ರವರಿ ತಿಂಗಳಲ್ಲಿ ಸೂಪರ್​ ಫೀಚರ್​ಗಳೊಂದಿಗೆ ಹೊಸ SMARTPHONES​ಗಳನ್ನು ಪರಿಚಯಿಸಲು ಅನೇಕ ಕಂಪೆನಿಗಳು ಕಾತುರವಾಗಿವೆ. ಪ್ರಪಂಚಾದ್ಯದಂತ ಅನೇಕ...

WORLD CANCER DAY: ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು.

  Shivarajkumar News : CANCER ವಿರುದ್ಧ ಧೈರ್ಯದಿಂದ ಹೋರಾಡಿ, ಎಷ್ಟೋ ರೋಗಿಗಳಿಗೆ ಬದುಕಿನ ಭರವಸೆ ಮೂಡಿಸಿದ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ. ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಇತ್ತೀಚೆಗಷ್ಟೇ CANCER...

ARYAN KHAN:ಶಾರುಖ್ ಖಾನ್ ತಾಳ್ಮೆ ಪರೀಕ್ಷಿಸಿದ ಮಗ ಆರ್ಯನ್ ಖಾನ್.

Aryan Khan News: ಶಾರುಖ್ ಇಂಟ್ರೊಡಕ್ಷನ್​​​ ಸೀನ್​​ನೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ನಿರ್ದೇಶಕರ ಕುರ್ಚಿಯಲ್ಲಿ ಕುಳಿತ ARYAN KHAN​​, ಸೂಪರ್‌ ಸ್ಟಾರ್‌ನ ಶಾಟ್ ಅನ್ನು ಮತ್ತೆ ಮತ್ತೆ...