spot_img

R CHANDRU : ಅಯೋಧ್ಯೆಗೆ ಭೇಟಿ, ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

spot_img
spot_img

Share post:

R Chandru News:

R CHANDRUರವರು ಉತ್ತರಪ್ರದೇಶದ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡುತ್ತಿದ್ದಾರೆ. ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿ ಧನ್ಯರಾಗಿದ್ದಾರೆ. ಕನ್ನಡದಖ್ಯಾತ ನಟರಾದ  ಇವರು ಇಂದು ಹಿಂದೂ ಧರ್ಮದ ಅತ್ಯಂತ ನಂಬಿಕೆಯ ಕ್ಷೇತ್ರವಾಗಿರೋ ಕಾಶಿಗೆ ಭೇಟಿ ಕೊಟ್ಟಿದ್ದಾರೆ. ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿರುವ ಫೋಟೋ ಹಂಚಿಕೊಂಡಿರುವ ನಿರ್ದೇಶಕರು, ”ಮುಂಜಾನೆ ವಾರಣಾಸಿಯ ಕಾಶಿ ವಿಶ್ವನಾಥನ ಸನ್ನಿಧಾನದಲ್ಲಿ. ಹರ ಹರ ಮಹಾದೇವ್” ಎಂದು R CHANDRU ರವರು  ಬರೆದುಕೊಂಡಿದ್ದಾರೆ. ಬ್ಲ್ಯಾಕ್​ ಶರ್ಟ್​, ಕೇಸರಿ ಬಣ್ಣದ ಲುಂಗಿ, ಶಾಲ್​ ಧರಿಸಿದ ನಿರ್ದೇಶಕರ ಹಣೆಯಲ್ಲಿ ಹರಿಶಿಣ, ಕುಂಕುಮ ಕಾಣಬಹುದು. ಕಳೆದ ದಿನ ತಮ್ಮ ಸಿಂಗಲ್​ ಫೋಟೋಗಳನ್ನು ಹಂಚಿಕೊಂಡು, ”ವಾರಣಾಸಿಯ ಪವಿತ್ರ ಗಂಗಾ ನದಿ ತೀರದಲ್ಲಿ” ಎಂದು ಆರ್ ಚಂದ್ರುರವರು  ಬರೆದುಕೊಂಡಿದ್ದಾರೆ. ಅಭಿಮಾನಿಗಳು ಫೋಟೋಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.

A moment of celebration at the Maha Kumbh Mela:

ಕಳೆದ ದಿನ ಹಂಚಿಕೊಂಡಿರುವ ಪೋಸ್ಟ್​ ಮಹಾ ಕುಂಭಮೇಳಕ್ಕೆ ಸಂಬಂಧಿಸಿದ್ದು. ಪುಣ್ಯ ಸ್ನಾನ ಮಾಡಿರುವ ನಿರ್ದೇಶಕರು, ಫೋಟೋಗಳನ್ನು ಶೇರ್ ಮಾಡಿ ಸುದೀರ್ಘ ಬರಹ R CHANDRU ಹಂಚಿಕೊಂಡಿದ್ದಾರೆ. R CHANDRU ”ಪ್ರತಿಯೊಬ್ಬರ ನಂಬಿಕೆ ಅಂದರೆ ಅದು ಅಪಾರವಾದ ದೈವ ಭಕ್ತಿ. ಯಾಕೆಂದರೆ ಆ ದೈವ ಶಕ್ತಿಯೇ ಅಂಥದ್ದು. ನಮ್ಮದು ಭಕ್ತಿ ಪ್ರಧಾನ ದೇಶ. ಈಗ ಇಡೀ ವಿಶ್ವವೇ ಒಂದೊಮ್ಮೆ ತಿರುಗಿ ನೋಡುವಂತಹ ಮಹಾ ಕುಂಭಮೇಳ ದೇಶದಲ್ಲಿ ನಡೆಯುತ್ತಿದೆ”.”ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ತ್ರಿವೇಣಿ ಸಂಗಮದ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಮಹಾಕ್ಷಣ. ಬದುಕು ಸಾರ್ಥಕ ಭಾವ”.

”ಇಂತಹ ಅಪರೂಪದ ಧಾರ್ಮಿಕ ಮೇಳವನ್ನು ಹತ್ತಿರದಿಂದ ನೋಡಿ ಶಾಂತವಾಗಿ ಹರಿಯುವ ನದಿಯಲ್ಲಿ ಪುಣ್ಯಸ್ನಾನ ಮಾಡಿ ಮಹಾ ಮಂಗಳಾರತಿ ಪಡೆದು ಕೈ ಮುಗಿದ ಕ್ಷಣ ನಿಜಕ್ಕೂ ಧನ್ಯತಾ ಭಾವ. ನಿತ್ಯವೂ ಧ್ಯಾನಿಸುವ ಮನಸ್ಸು, ಇಷ್ಟೊಂದು ದೈವ ಮನಸ್ಸುಗಳ ಜೊತೆಯಲ್ಲಿ ಅಪರೂಪದ ಮೇಳದಲ್ಲಿ ಭಕ್ತಿಪೂರ್ವಕವಾಗಿ ಭಾಗಿ ಆಗೋದು ಕೂಡ ಖುಷಿಯ ಕ್ಷಣ”.

”ಪ್ರಯಾಗ್ ರಾಜ್​​​​ನಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಈ ಮಹಾಕುಂಭ ಮೇಳವನ್ನು ಕಣ್ತುಂಬಿಕೊಳ್ಳುತ್ತಿರುವ ಭಕ್ತರಿಗೆ ಪಾರವೇ ಇಲ್ಲ. ನಿತ್ಯವೂ ಇಲ್ಲಿ ಧರ್ಮ ಜಾತ್ರೆಯ ಸಡಗರ. ಇಲ್ಲಿ ಮಿಂದೇಳುವ ಭಕ್ತರಿಗಂತೂ ಪಾರವೇ ಇಲ್ಲ”.

”ಸಿನಿಮಾ ಚಿತ್ರೀಕರಣಕ್ಕಾಗಿಯೇ ಲೊಕೇಷನ್ ಹುಡುಕಾಟಕ್ಕೆ ಬಂದ ನಾನು ಈ ಅಪರೂಪದ ಘಳಿಗೆಗೆ ಸಾಕ್ಷಿ ಆಗಿದ್ದೇನೆ ಎಂಬ ಸಂತಸ. ಮಹಾ ನಾಗಾ ಸಾಧುಗಳು, ಮಹಾ ತಪಸ್ವಿಗಳು, ಋಷಿಮುನಿಗಳು, ಅಘೋರಿಗಳು, ಸಾಧು-ಸಂತರನ್ನು ಹತ್ತಿರದಿಂದ ನೋಡಿ ಆಶೀರ್ವಾದ ಪಡೆದ ತೃಪ್ತಿ. ಜೊತೆಗೆ, ಈ ಮಹಾ ಧಾರ್ಮಿಕ ಸಮ್ಮೇಳನ ಹಿನ್ನೆಲೆಯಲ್ಲಿ ಈ ಮಣ್ಣನ್ನು ಸ್ಪರ್ಶಿಸಿದ ಶಿವನ ಆರಾಧಕರ ಆಚಾರ ವಿಚಾರವಂತೂ ಅನನ್ಯ. ಅವರೆಲ್ಲರನ್ನೂ ನೋಡಿ ಮನಸ್ಸು ಭಾವುಕವೆನಿಸಿದ್ದು ಸುಳ್ಳಲ್ಲ”.

Darshan of Bala Ramlalla:

ಇದಕ್ಕೂ ಮುನ್ನ ಶೇರ್ ಆದ ಪೋಸ್ಟ್​​ನಲ್ಲಿ, ‘ರಾಮ ಜನ್ಮಭೂಮಿಯಲ್ಲಿ ಬಾಲ ರಾಮಲಲ್ಲಾನ ದರ್ಶನ ಪಡೆದ ಸಾರ್ಥಕ ಕ್ಷಣಗಳು’ ಎಂದು ಪೋಸ್ಟ್​ ಹಾಕಿದ್ದಾರೆ.

Aarti on Sarayu shore:

ಇನ್ನೂ ಆರತಿ ಫೋ ವಿಡಿಯೋ ಹಂಚಿಕೊಂಡು, ‘ಅಯೋಧ್ಯೆಯ ಪವಿತ್ರ ನದಿ ಸರಯು ತೀರದಲ್ಲಿ ಆರತಿ ಮಾಡಿದ ಕ್ಷಣಗಳು’ ಎಂದು ಬರೆದುಕೊಂಡಿದ್ದಾರೆ.

For ideal man’s birthplace:

ಎರಡು ದಿನದ ಹಿಂದಿನ ಪೋಸ್ಟ್​ನಲ್ಲಿ, ‘ಆದರ್ಶ ಪುರುಷ ಶ್ರೀ ರಾಮ ಜನ್ಮಭೂಮಿಗೆ ನನ್ನ ಮೊದಲ ಭೇಟಿ. ಜೈ ಶ್ರೀರಾಮ್’ ಎಂದು ಬರೆದಿದ್ದಾರೆ.

ಇದನ್ನು ಓದಿರಿ : ISRO NVS 02 SATELLITE SETBACK : ಥ್ರಸ್ಟರ್ ಸಮಸ್ಯೆಯಿಂದ ನಿಗದಿತ ಕಕ್ಷೆಗೆ ಸೇರಿಸಲು ವಿಫಲ

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...