spot_img
spot_img

RCB GIRLS : ಮುಂಬೈ ಟೀಮ್ಗೆ RCB ಗರ್ಲ್ಸ್ ರಾಯಲ್ ಚಾಲೆಂಜ್..

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

RCB GIRLS :

ಗಾರ್ಡನ್​ ಸಿಟಿ ಬೆಂಗಳೂರಲ್ಲಿ ಕ್ರಿಕೆಟ್​ ಕಲರವ ಜೋರಾಗಿದೆ. ಚಿನ್ನಸ್ವಾಮಿ ಮೈದಾನದ ಸುತ್ತ ಕ್ರಿಕೆಟ್​ ಫೀವರ್​​ ಕಾವೇರಿದೆ. ಹೋಮ್​ಗ್ರೌಂಡ್​ನಲ್ಲಿ 3ನೇ ಆವೃತ್ತಿಯ ಮೊದಲ ಪಂದ್ಯವನ್ನಾಡಲು RCB GIRLS ಮಣಿಗಳು ಸಜ್ಜಾಗಿದ್ದಾರೆ. ಚಾಂಪಿಯನ್ಸ್​ ಟ್ರೋಫಿ ಫೀವರ್​ನ ನಡುವೆ ಮಹಿಳಾ ಪ್ರೀಮಿಯರ್​ ಲೀಗ್​ನ ಕಾವು ಕೂಡ ಕ್ರಿಕೆಟ್​ ಲೋಕವನ್ನ ಆವರಿಸಿದೆ.

ಇಂದಿನಿಂದ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದ ಬ್ಯಾಟಲ್​ ಫೀಲ್ಡ್​ನಲ್ಲಿ ಪಂದ್ಯಗಳು ನಡೆಯಲಿವೆ. RCB GIRLS  ಹೋಮ್​ ಟೀಮ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು -ಮುಂಬೈ ಇಂಡಿಯನ್ಸ್​ ಮುಖಾಮುಖಿ ಆಗಲಿವೆ. ಹೈ ಪ್ರೊಫೈಲ್​ ತಂಡಗಳ ಹೈವೋಲ್ಟೆಜ್​ ಕದನ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.

High voltage clash at Chinnaswamy Maidan.

RCB GIRLS ಪ್ರೀಮಿಯರ್​ ಲೀಗ್​ನ ಹೈಪ್ರೋಫೈಲ್​ ತಂಡಗಳ ನಡುವಿನ ಹೈವೋಲ್ಟೆಜ್​​ ಕದನಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳು ಮುಖಾಮುಖಿ ಆಗಲಿವೆ. ಬಿಗ್​ ಟೀಮ್​ಗಳ ಹಣಾಹಣಿ ಅಭಿಮಾನಿಗಳ ವಲಯದಲ್ಲಿ ತೀವ್ರ ಕುತೂಹಲ ಹುಟ್ಟಿ ಹಾಕಿದೆ.

Mandana sets eyes on hat-trick win!

ಸ್ಮೃತಿ ಮಂದಾನ ನಾಯಕತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರೆಸಿದೆ. ಟೂರ್ನಿ ಅರಂಭಕ್ಕೂ ಮುನ್ನ ಪ್ರಮುಖ ಆಟಗಾರ್ತಿಯರ ಅಲಭ್ಯತೆ ಆರ್​​ಸಿಬಿಗೆ ಹಿನ್ನಡೆಯಾಗುತ್ತೆ ಅನ್ನೋ ಪ್ರಿಡಿಕ್ಷನ್​ ನಡೆದಿತ್ತು. ಆದ್ರೆ, ಆ ಪ್ರಿಡಿಕ್ಷನ್​ ಸುಳ್ಳಾಗಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರೋ ಮಂದಾನ ಪಡೆ ಇದೀಗ ಹ್ಯಾಟ್ರಿಕ್​ ಗೆಲುವಿನ ಮೇಲೆ ಕಣ್ಣಿಟ್ಟಿದೆ.

Fans expect on Mandana, Ellis Perry.!

ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಅಭಿಮಾನಿಗಳಿಂದ ಕಿಕ್ಕಿರಿದು ತುಂಬೋದು ಪಕ್ಕಾ. ಮನೆ ಹುಡುಗಿಯರಿಗೆ ಸಪೋರ್ಟ್​​ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಫ್ಯಾನ್ಸ್​ ಬಂದೆ ಬರ್ತಾರೆ. ಕನ್ನಡತಿ ಶ್ರೇಯಾಂಕ ಪಾಟೀಲ್​ ಇಂಜುರಿಗೊಂಡು ಸೀಸನ್​ನಿಂದ ಔಟ್​ ಆಗಿದ್ದಾರೆ. ಇದೀಗ ಸಾಲಿಡ್​ ಫಾರ್ಮ್​ನಲ್ಲಿರೋ ನಾಯಕಿ ಸ್ಮೃತಿ ಮಂದಾನ, ಎಲ್ಲಿಸ್​ ಪೆರ್ರಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಅಭಿಮಾನಿಗಳ ವಲಯದಲ್ಲಿದೆ.

Will Richa Ghosh do magic in Chinnaswamy?

ಆರ್​​ಸಿಬಿಯ ವಿಕೆಟ್​ ಕೀಪರ್​​ ಬ್ಯಾಟರ್​ ರಿಚಾ ಘೋಷ್​ ಕೂಡ ಅದ್ಭುತ ಬ್ಯಾಟಿಂಗ್​ ನಡೆಸ್ತಿದ್ದಾರೆ. ಮೊದಲ ಪಂದ್ಯದಲ್ಲಿ ಆರ್ಭಟಿಸಿ ಗುಜರಾತ್​​ಗೆ ಶಾಕ್​ ಕೊಟ್ಟ ರಿಚಾ ಘೋಷ್​, ಡೆಲ್ಲಿ ಎದುರಿನ ಪಂದ್ಯದಲ್ಲೂ ಮಿಂಚಿದ್ರು. ಎರಡೂ ಪಂದ್ಯಗಳಲ್ಲಿ ಸಿಕ್ಸರ್​ ಸಿಡಿಸಿ ಗೆಲುವಿನ ದಡ ಸೇರಿಸಿರೋ ರಿಚಾ ಕೂಡ ಪಂದ್ಯದ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿದ್ದಾರೆ. ಇನ್ನುಳಿದಂತೆ ಡೇನಿಯಲ್​ ವ್ಯಾಟ್​, ಕನ್ನಿಕಾ ಅಹುಜಾ, ರೇಣುಕಾ ಸಿಂಗ್, ಜಾರ್ಜಿಯಾ ವೆರ್ಹಾಮ್​​ ​​ಉತ್ತಮ ಪರ್ಫಾಮೆನ್ಸ್​ ನೀಡ್ತಿದ್ದಾರೆ.

ಹೋಮ್​ಗ್ರೌಂಡ್​​ನಲ್ಲೂ ಇದೇ ಪರ್ಫಾಮೆನ್ಸ್​ ಮುಂದುವರೆಸಿದ್ರೆ, ಆರ್​​​ಸಿಬಿಯ ಪ್ಲೇ ಆಫ್​ ಟಿಕೆಟ್​ ಬಹುತೇಕ ಕನ್​ಫರ್ಮ್​ ಆದಂತೆ. ಬೆಂಗಳೂರಿನಲ್ಲಿ ನಡೆಯುವ ಇವತ್ತಿನ ವುಮೆನ್ಸ್​ ಪ್ರೀಮಿಯರ್​ ಲೀಗ್​ನ ಹೈವೋಲ್ಟೆಜ್ ಕದನಕ್ಕೆ ಕ್ರಿಕೆಟ್​​ ಲೋಕದ ಕುತೂಹಲದಿಂದ ಕಾಯ್ತಿದೆ. ಮುಂಬೈ VS ಬೆಂಗಳೂರು ನಡುವಿನ ಹೈಪ್ರೊಫೈಲ್​ ತಂಡಗಳ ನಡುವಿನ ಕಾದಾಟದಲ್ಲಿ ಯಾರು ಗೆಲ್ತಾರೆ, ಯಾರು ಸೋಲ್ತಾರೆ ಕಾದು ನೋಡಬೇಕಿದೆ.

ಸೋಲಿನೊಂದಿಗೆ ಈ ಸೀಸನ್​ ಆರಂಭಿಸಿದ ಮುಂಬೈ ಇಂಡಿಯನ್ಸ್​ 2ನೇ ಪಂದ್ಯದಲ್ಲಿ ಗೆದ್ದು ಬೀಗಿದೆ. ಡೆಲ್ಲಿ ವಿರುದ್ಧ ಸೋತು, ಗುಜರಾತ್​ ವಿರುದ್ಧ ಗೆದ್ದ ಮುಂಬೈ ಆತ್ಮವಿಶ್ವಾಸದ ಅಲೆಯಲ್ಲಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸಿರುವ ಹರ್ಮನ್​​ಪ್ರೀತ್​ ಕೌರ್​ ಪಡೆ ಆರ್​​ಸಿಬಿ ಟಕ್ಕರ್​ ಕೊಡೋ ಲೆಕ್ಕಾಚಾರದಲ್ಲಿದೆ.

ಇದನ್ನು ಓದಿರಿ : ICC Champions Trophy: 11 Tosses Lost In A Row; India Owns Unwanted Record In Fixture Against Bangladesh

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

KL RAHUL SACRIFICE:ಕನ್ನಡಿಗ ಕೆ.ಎಲ್.ರಾಹುಲ್ ತ್ಯಾಗಕ್ಕೆ ಫ್ಯಾನ್ಸ್ ಮೆಚ್ಚುಗೆ

KL Rahul: ಹೌದು, ಬಾಂಗ್ಲಾ ನೀಡಿದ್ದ 228 ರನ್​ಗಳ ಗುರಿ ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆದಿದ್ದರೂ ಬಳಿಕ ರೋಹಿತ್​ ಶರ್ಮಾ (41), ವಿರಾಟ್​ ಕೊಹ್ಲಿ...

HUAWEI MATE XT TRI FOLD PHONE:ಇದರ ಬೆಲೆ 2 ಬುಲೆಟ್ ಬೈಕ್ಗಳಿಗೆ ಸಮ!

Huaveli Re-Launched Ultimate Design News: ಇತ್ತೀಚೆಗೆ ಪ್ರಪಂಚದಾದ್ಯಂತ ಆಯ್ದ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿದೆ. ಆದ್ರೆ ಇದರ ಬೆಲೆ ಎರಡು ರಾಯಲ್​ ಎನ್​ಫೀಲ್ಡ್​ಗೆ ಸಮ. ರಾಯಲ್​ ಎನ್‌ಫೀಲ್ಡ್...

PAYTM SOLAR SOUND BOX:ಸೂರ್ಯನ ಬೆಳಕಿನಿಂದಲೇ ಚಾರ್ಜ್ ಆಗುತ್ತೆ ‘ಪೇಟಿಎಂ ಸೌಂಡ್ಬಾಕ್ಸ್’

Paytm Solar SoundBoss News: ಇತ್ತೀಚೆಗೆ PAYTMನ ಪೋಷಕ ಕಂಪನಿ 'ಒನ್97 ಕಮ್ಯುನಿಕೇಷನ್ಸ್' ಮತ್ತೊಂದು ವಿಷಯದೊಂದಿಗೆ ಸುದ್ದಿಯಲ್ಲಿದೆ. ವ್ಯಾಪಾರಿಗಳಿಗಾಗಿ ದೇಶದ ಮೊದಲ ಸೌರಶಕ್ತಿ ಚಾಲಿತ 'ಸೋಲಾರ್​...

UNSAFE MEDICINES:9 ಔಷಧಗಳ ನಿರ್ಬಂಧಿಸುವಂತೆ ಕೇಂದ್ರಕ್ಕೆ ಸಚಿವ ಗುಂಡೂರಾವ್ ಪತ್ರ

Bangalore News: ಈ ಕುರಿತು ನಡ್ಡಾರಿಗೆ 9 MEDICINES ಕಂಪನಿಗಳ ಅಸುರಕ್ಷಿತ MEDICINES ವಿವರಗಳನ್ನು ಉಲ್ಲೇಖಿಸಿ ದಿನೇಶ್ ಗುಂಡೂರಾವ್ ಫೆ.20ರಂದು ಪತ್ರ ಬರೆದಿದ್ದಾರೆ.ವಿವಿಧ 9 MEDICINES...