spot_img
spot_img

ಪುನರ್‌ ಸಮೀಕರಣ : 2ಎ ಕಥೆ ಮುಗಿದು ಹೋಗಿದೆ

spot_img
spot_img

Share post:

ಮೈಸೂರು: ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್‌ ಸದಸ್ಯ ಹೆಚ್.‌ವಿಶ್ವನಾಥ್‌, 2ಎ ಕಥೆ ಈಗಾಗಲೇ ಮುಗಿದು ಹೋಗಿದೆ. ಅವುಗಳನ್ನು ಪುನರ್‌ ಸಮೀಕರಣ ಮಾಡಬೇಕಷ್ಟೇ ಎಂದರು.
“ಯಾರ್ಯಾರೋ 2A ಸರ್ಟಿಫಿಕೆಟ್​ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಯಾವ ಮಾನದಂಡವೂ ಇಲ್ಲದಂತಾಗಿದೆ. 1989ರಲ್ಲಿ ಕೇವಲ 15 ಜಾತಿಗಳಿದ್ದ 2A ವರ್ಗದಲ್ಲಿ ಇದೀಗ 40-45 ಜಾತಿಗಳು ಬಂದು ಸೇರಿವೆ. ಬೊಮ್ಮಾಯಿ ಕಾಲದಲ್ಲೇ ಸಾದರ ಲಿಂಗಾಯತರು 2ಎ ವರ್ಗಕ್ಕೆ ಬಂದಿದ್ದಾರೆ. ಸರ್ಕಾರ ಇದನ್ನು ಪುನರ್‌ ಸಮೀಕರಣ ಮಾಡಬೇಕು. ಡಾ.ಬಿ.ಆರ್.ಅಂಬೇಡ್ಕರ್​ ನೀಡಿದಂತಹ ಮೀಸಲಾತಿ ಧೂಳೀಪಟವಾಗಿದೆ. ಈಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್​.ಸಿ.ಮಹದೇವಪ್ಪ ಈ ಕುರಿತು ಗಮನ ನೀಡಬೇಕು. ಕೇವಲ ಭಾಷಣ ಮಾಡಿದರೆ ಸಾಲದು. ತಾಕತ್ತಿದ್ದರೆ ಈಗಾಗಲೇ ಇದರಲ್ಲಿ ಯಾರಾರು ಮೀಸಲಾತಿ ಪಡೆದಿದ್ದಾರೋ ಅವರನ್ನು ತೆಗೆದುಹಾಕಿ” ಎಂದು ವಿಶ್ವನಾಥ್‌ ಸವಾಲು ಹಾಕಿದರು.
“ಪಂಚಮಸಾಲಿ ಮೀಸಲಾತಿ ಹೋರಾಟ ಸಮಾಜ-ಸಮಾಜಗಳ ನಡುವೆ ಅಪನಂಬಿಕೆ ಬಿತ್ತುವಂತಹ ವಾತಾವರಣ ಸೃಷ್ಟಿಸುತ್ತಿದೆ. ಇದೆಲ್ಲಾ ಸ್ವಾಮೀಜಿಗೆ ಬೇಕಿತ್ತಾ” ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್.‌ವಿಶ್ವನಾಥ್‌ ಪ್ರಶ್ನಿಸಿದರು.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಮೀಸಲಾತಿಯಲ್ಲಿ 2ಎ ಪಟ್ಟಿ ಈಗ ತುಂಬಿ ಹೋಗಿದೆ. ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಸಮುದಾಯದವರಿಗೂ ಈ ಬಗ್ಗೆ ಗೊತ್ತಿಲ್ಲ, ಅತ್ತಕಡೆ ಕುರುಬರಿಗೂ ಗೊತ್ತಿಲ್ಲ. 2A ವರ್ಗವನ್ನು ಈಗಾಗಲೇ ಅಕ್ರಮಿಸಿಕೊಂಡಾಗಿದೆ. 45ಕ್ಕೂ ಹೆಚ್ಚು ಜಾತಿಗಳು ಈಗಾಗಲೇ 2ಎ ಮೀಸಲಾತಿಯಲ್ಲಿ ಸೇರ್ಪಡೆಯಾಗಿವೆ. ಆದರೆ, ಅವುಗಳನ್ನು ಪುನರ್‌ ಸಮೀಕರಣ ಮಾಡಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನ ಕೊಡಬೇಕು. ಬರೀ ಭಾಷಣ ಮಾಡಿದರೆ ಸಾಲದು. ಪುನರ್‌ಸಮೀಕರಣದ ಬಳಿಕ 2ಎ ಪಟ್ಟಿಗೆ ಹೊಸದಾಗಿ ಸೇರಿಸಬಹುದು. ಅಲ್ಲಿಯವರೆಗೆ ಸೇರಿಸಲು ಸಾಧ್ಯವಿಲ್ಲ” ಎಂದರು.
ನೀವು ತೆಗೆದುಹಾಕಿ ಎಂದರೆ, ಪಂಚಮಸಾಲಿಗಳು ತಮ್ಮನ್ನು 2ಎ ಪಟ್ಟಿಗೆ ಸೇರಿಸುವಂತೆ ಹೇಳುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, “ಈಗ ವೀರಶೈವ ಲಿಂಗಾಯಿತರು ಮಾತ್ರ ಬಸವಣ್ಣನವರ ಅನುಯಾಯಿಗಳು ಅಲ್ಲ. ನಾವೆಲ್ಲರೂ ಬಸವಣ್ಣನವರ ಅನುಯಾಯಿಗಳು. ಈಗ ದಿನನಿತ್ಯ ಬಸವಣ್ಣನವರನ್ನು ಕೊಲ್ಲುತ್ತಿದ್ದೇವೆ” ಎಂದು ಟೀಕಿಸಿದರು.
ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಬಿಜೆಪಿ ಬೆಂಬಲದ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್‌, “ಯಾವುದಾದರೂ ತತ್ವ ಮತ್ತು ಸಿದ್ಧಾಂತ ಇಲ್ಲದೇ ಇರುವ ಪಕ್ಷವೆಂದರೆ ಅದು ಬಿಜೆಪಿ. ಎಲ್ಲದಕ್ಕೂ ಟೀಕೆ ಮಾಡುವುದು, ಎಲ್ಲದಕ್ಕೂ ಬೆಂಬಲ ಕೊಡುವುದು ಸರಿಯಲ್ಲ ಎಂದರು.
ಇದೇ ವೇಳೆ, ಎಲ್ಲರಿಗೂ ತೊಂದರೆ ಕೊಡಬೇಡಿ. ಸಮಾಜ-ಸಮಾಜಗಳ ನಡುವೆ ಅಪನಂಬಿಕೆ ಹುಟ್ಟುಹಾಕಬೇಡಿ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳಲ್ಲಿ ಮನವಿ ಮಾಡುವೆ ಎಂದರು.

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...