spot_img
spot_img

RICE HARVEST : ಕೊಡಗಿನ ಬೆಳೆಗಾರರಿಗೆ ಸವಾಲಾದ ಭತ್ತದ ಕೊಯ್ಲು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Madikeri News:

ಕೊಡಗಿನ ಭತ್ತದ ಬೆಳೆಗಾರರು ಕಾರ್ಮಿಕರ ಸಮಸ್ಯೆ ಎದುರಿಸುತ್ತಿದ್ದು, ಇದರಿಂದಾಗಿ ಭತ್ತದ ಕೊಯ್ಲು ಪ್ರಕ್ರಿಯೆಯು ಕಗ್ಗಂಟಾಗಿದೆ. ಕಾಫಿ ಕೊಯ್ಲುಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಮತ್ತು ಅದಕ್ಕಾಗಿ ಹೆಚ್ಚಿನ ದರ ನಿಗದಿಯಾಗಿರುವುದರಿಂದ, ಕಾರ್ಮಿಕರು ಭತ್ತದ ಕೊಯ್ಲುವಿಗೆ ಗಮನ ನೀಡದೇ ಕಾಫಿ ತೋಟಗಳತ್ತ ಮುಖ ಮಾಡಿರುವುದೇ ಸಮಸ್ಯೆಗೆ ಕಾರಣ ಎಂದು ಭತ್ತದ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ. ಕಾರ್ಮಿಕರ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದು ಇಂದಿನ ತುರ್ತು ಅವಶ್ಯ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗಿನ ವರ್ಷಗಳಲ್ಲಿ ಭತ್ತ ಮತ್ತು ಕಾಫಿ ಕೊಯ್ಲು ಒಂದೇ ಸಮಯಕ್ಕೆ ಬರುತ್ತಿರುವುದರಿಂದ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಅದರಲ್ಲೂ ಕಾಫಿ ಕೊಯ್ಲುಗೆ ಹೋದರೆ ಅಲ್ಲಿ ಹೆಚ್ಚಿನ ಆದಾಯ ಬರುವುದರಿಂದ, ಕಾರ್ಮಿಕರು ಭತ್ತದ ಗದ್ದೆಯತ್ತ ಮುಖ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಭತ್ತ ಬೆಳೆದ ಬೆಳೆಗಾರರಿಗೆ ಕೊಯ್ಲು ಮಾಡಿ ಮನೆ ತುಂಬಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ. ಸದ್ಯ ಭತ್ತ ಬೆಳೆದವರು ಕಾರ್ಮಿಕರಿಗಾಗಿ ದುಂಬಾಲು ಬೀಳುವ ಪರಿಸ್ಥಿತಿ ಎದುರಾಗಿದೆ.

ಒಂದು ಕಾಲದಲ್ಲಿ ಭತ್ತ ಕೊಡಗಿನ ಪ್ರಧಾನ ಬೆಳೆಯಾಗಿತ್ತು. ನೀರಿನಾಶ್ರಯವಿರುವ ಬಯಲುಗಳಲ್ಲಿ ಭತ್ತ ಬೆಳೆಯುತ್ತಿದ್ದರು. ಆಗ ವಾಣಿಜ್ಯ ಬೆಳೆಗಳ ಭರಾಟೆ ಇಲ್ಲದ ಕಾರಣದಿಂದಾಗಿ ಭತ್ತದ ಕೊಯ್ಲು ಕೆಲಸಕ್ಕೆ ಕಾರ್ಮಿಕರ ಕೊರತೆಯಿರಲಿಲ್ಲ. ಜೊತೆಗೆ ಬಹುತೇಕ ಕಡೆಗಳಲ್ಲಿ ಕುಟುಂಬದ ಸದಸ್ಯರೇ ತಮ್ಮ ಗದ್ದೆಯಲ್ಲಿ ಕೊಯ್ಲು ಕಾರ್ಯವನ್ನು ಮಾಡಿ ಮುಗಿಸುತ್ತಿದ್ದರು. ಉಳಿದಂತೆ ಕೂಡು ಆಳುಗಳಾಗಿ ಕೆಲಸ ಮಾಡುತ್ತಿದ್ದರಿಂದ ಭತ್ತದ ಕೊಯ್ಲು ಇವತ್ತಿನಷ್ಟು ಕಷ್ಟವಾಗುತ್ತಿರಲಿಲ್ಲ. ಇನ್ನು ಕಳೆದ ಮೂರು ದಶಕಗಳ ಹಿಂದೆ ಕಾಫಿಯ ಭರಾಟೆ ಇವತ್ತಿನಷ್ಟಿರಲಿಲ್ಲ. ಅವತ್ತು ಕಾಫಿ ಬೆಳೆಯು ಕಾಫಿ ಮಂಡಳಿ ಹಿಡಿತದಲ್ಲಿತ್ತು. ಹೀಗಾಗಿ ಎಲ್ಲೆಂದರಲ್ಲಿ ಕಾಫಿಯನ್ನು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಆಗಿನ ಕಾಲದಲ್ಲಿ ಕಾಫಿ ಬೆಳೆಯುವುದು ಮತ್ತು ಅದನ್ನು ಮಾರಾಟ ಮಾಡುವುದು ಈಗಿನಷ್ಟು ಸುಲಭವಾಗಿರಲಿಲ್ಲ. ಹಾಗಾಗಿ ಕಾಫಿ ಬೆಳೆಯತ್ತ ಹೆಚ್ಚಿನವರು ತಲೆಕೆಡಿಸಿಕೊಂಡಿರಲಿಲ್ಲ.

ಕಾಫಿಗೆ ಉತ್ತಮ ದರ ದೊರೆಯುತ್ತಿದ್ದ ಕಾರಣ ಭತ್ತದ ಗದ್ದೆ, ಏಲಕ್ಕಿ ತೋಟಗಳೆಲ್ಲವೂ ಕಾಫಿ ತೋಟಗಳಾಗಿ ಮಾರ್ಪಾಡಾಯಿತು. ಕಾರ್ಮಿಕರಿಗೆ ಕಾಫಿ ತೋಟದಲ್ಲಿ ಹೆಚ್ಚಿನ ಕೆಲಸಗಳು ದೊರೆಯಲಾರಂಭಿಸಿತು. ಕಾಫಿ ತೋಟದ ವಿಸ್ತೀರ್ಣ ಹೆಚ್ಚಾದಂತೆ ಭತ್ತದ ಬೆಳೆಯ ಬಗ್ಗೆ ನಿರಾಸಕ್ತಿ ಬರತೊಡಗಿತು. ಆ ವೇಳೆಗೆ ನೀರಿನ ಕೊರತೆ, ದುಬಾರಿ ಕೂಲಿ, ಇಳುವರಿಯಲ್ಲಿ ಕುಂಠಿತ, ಕಾರ್ಮಿಕರ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳನ್ನು ಎದುರಿಸಿ ಸುಸ್ತಾಗಿದ್ದ ಬೆಳೆಗಾರರು ಭತ್ತದ ಕೃಷಿಯ ಸಹವಾಸವೇ ಬೇಡವೆಂದು ದೂರ ಸರಿದು ಬಿಟ್ಟರು. ಅಂದಿನ ವಾತಾವರಣದಲ್ಲಿ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು.

ಉಳಿದಂತೆ ಮಳೆ ಬೀಳುವ ಪ್ರದೇಶದಲ್ಲಿ ಏಲಕ್ಕಿಯನ್ನು ಬೆಳೆಯುತ್ತಿದ್ದರು. ಏಲಕ್ಕಿ ಕೊಯ್ಲು ನವೆಂಬರ್ ಹೊತ್ತಿಗೆ ಮುಗಿದು ಹೋಗುತ್ತಿತ್ತು. ಹೀಗಾಗಿ ಡಿಸೆಂಬರ್ ಜನವರಿ ತಿಂಗಳಲ್ಲಿ ಭತ್ತದ ಕೊಯ್ಲು ಯಾವುದೇ ಅಡ್ಡಿ ಆತಂಕವಿಲ್ಲದೆ ಸಾಗುತ್ತಿತ್ತು. ಕೊಯ್ಲು ಮಾಡಲು ಕಾರ್ಮಿಕರ ಕೊರತೆಯೂ ಇರಲಿಲ್ಲ. ಆದರೆ ಯಾವಾಗ ಕಾಫಿ ಬೆಳೆ ಮುಕ್ತ ಮಾರುಕಟ್ಟೆಯನ್ನು ಪ್ರವೇಶಿಸಿತೋ ಕೊಡಗಿನ ಚಿತ್ರಣವೇ ಬದಲಾಗಿ ಹೋಯಿತು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಭತ್ತ ಬೆಳೆಯುವ ಪ್ರಮಾಣ ಕಡಿಮೆಯಿದೆ. ಜೊತೆಗೆ ಕೆಲವು ಕಡೆಗಳಲ್ಲಿ ಭತ್ತದ ಗದ್ದೆಗೆ ಯಂತ್ರಗಳು ಇಳಿಯುವುದು ಕಷ್ಟವಾಗುತ್ತಿದೆ. ಅಷ್ಟೇ ಅಲ್ಲದೆ ಭತ್ತದ ಹುಲ್ಲು ಅಗತ್ಯವಾಗಿರುವುದರಿಂದ ಯಂತ್ರದ ಮೂಲಕ ಕಟಾವು ಮಾಡಿದರೆ ಹುಲ್ಲನ್ನು ಸಂಗ್ರಹಿಸಿಡುವುದು ಸಮಸ್ಯೆಯಾಗುತ್ತಿದೆ. ಇದರ ಜೊತೆಗೆ ಕಟಾವು ಯಂತ್ರ ತಂದವರಿಗೂ ಅದರಿಂದ ಲಾಭವಾಗುತ್ತಿಲ್ಲ.

ಈ ಎಲ್ಲ ಕಾರಣಕ್ಕೆ ಕಟಾವು ಯಂತ್ರಗಳು ಬರುತ್ತಿಲ್ಲ. ಇವತ್ತು ಬಹುತೇಕ ಬೆಳೆಗಾರರು ಗದ್ದೆ ಬಯಲನ್ನು ಕಾಫಿ ತೋಟ, ನಿವೇಶನ ಹೀಗೆ ಬೇರೆ, ಬೇರೆ ರೀತಿಯಲ್ಲಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಇನ್ನು ಕೆಲವೆಡೆ ನದಿ ತಟ, ತಗ್ಗುಪ್ರದೇಶದಲ್ಲಿ ಭತ್ತವನ್ನು ಬಿಟ್ಟು ಬೇರೇನು ಬೆಳೆಯಲಾಗದ ಪ್ರದೇಶದಲ್ಲಿ ಭತ್ತ ಬೆಳೆದರೂ ಅದರಲ್ಲಿ ಲಾಭಕ್ಕಿಂತ ನಷ್ಟವೇ ಜಾಸ್ತಿಯೆಂದು ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ಕೆಲವೇ ಕೆಲವು ಬೆಳೆಗಾರರು ಮಾತ್ರ ಗದ್ದೆಯನ್ನು ಉಳಿಸಿಕೊಂಡು ಭತ್ತವನ್ನು ಬೆಳೆಯುತ್ತಿದ್ದಾರೆ. ಹೀಗೆ ಭತ್ತ ಬೆಳೆದ ರೈತರು ಇದೀಗ ಕಾರ್ಮಿಕರು ಸಿಗದೆ ಪರದಾಡುತ್ತಿದ್ದಾರೆ. ಮೊದಲೆಲ್ಲ ಕಾಫಿ ಕೊಯ್ಲು ತಡವಾಗಿ ಆರಂಭವಾಗುತ್ತಿತ್ತು. ಹಾಗಾಗಿ ಕಾರ್ಮಿಕರು ಲಭ್ಯವಾಗುತ್ತಿದ್ದರು.

ಇತ್ತೀಚೆಗಿನ ದಿನಗಳಲ್ಲಿ ಅಕಾಲಿಕ ಮಳೆಯ ಕಾರಣ ಕಾಫಿ ಡಿಸೆಂಬರ್ ತಿಂಗಳಲ್ಲೇ ಕೊಯ್ಲುಗೆ ಬರುತ್ತಿದೆ. ಕಾಫಿಯ ಬೆಲೆಯೂ ಗಗನಕ್ಕೇರಿರುವುದರಿಂದ ಹಾಗೂ ಕಾರ್ಮಿಕರ ಸಮಸ್ಯೆಯೂ ಇರುವುದರಿಂದ ಬೆಳೆಗಾರರು ಕಾರ್ಮಿಕರಿಗೆ ಹೆಚ್ಚಿನ ಕೂಲಿ ಅಥವಾ ಕೊಯ್ಲು ಮಾಡಿದ ಹಣ್ಣು ಕಾಫಿಗೆ ಕೆಜಿಗೆ ಇಂತಿಷ್ಟು ಎಂಬಂತೆ ದರ ನಿಗದಿ ಮಾಡುವುದರಿಂದ ಅಲ್ಲಿ ಹೆಚ್ಚು ಹಣ ಸಂಪಾದಿಸಲು ಅವಕಾಶವಿರುವುದರಿಂದ ಬಿಸಿಲಿಗೆ ಗದ್ದೆಯಲ್ಲಿ ಕೆಲಸ ಮಾಡಲು ಕಾರ್ಮಿಕರು ಮುಂದೆ ಬರುತ್ತಿಲ್ಲ. ಇದು ಭತ್ತ ಬೆಳೆದ ಬೆಳೆಗಾರರನ್ನು ಸಂಕಷ್ಟಕ್ಕೆ ನೂಕಿದೆ.

ಅತಿಯಾದ ಮಳೆ, ಫೆಂಗಲ್ ಚಂಡಮಾರುತ ಹೊಡೆತ, ಅಕಾಲಿಕ ಮಳೆಯ ಭಯ, ಕೂಲಿ ಕಾರ್ಮಿಕರ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳನ್ನು ಭತ್ತ ಬೆಳೆದ ಬೆಳೆಗಾರರು ಈ ಬಾರಿ ಅನುಭವಿಸಿದ್ದು, ಸಾಕಪ್ಪಾ ಭತ್ತದ ಕೃಷಿ ಎನ್ನುವಂತಾಗಿದೆ. ನಿಜಹೇಳಬೇಕೆಂದರೆ ಇದು ಈ ವರ್ಷದ ಕಥೆ, ವ್ಯಥೆಯಲ್ಲ. ಪ್ರತಿವರ್ಷವೂ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದರಿಂದ ಬೆಳೆಗಾರರು ಭತ್ತ ಬೆಳೆಯುವಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಇದರ ಪರಿಣಾಮ ಭತ್ತದ ಕೃಷಿ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಾ ಹೋಗುತ್ತಿದೆ.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SPECIAL VILLAGE SAGA : 20 ಕುಟುಂಬ, 60 ಜನರಿರುವ ಒಂದು ಹಳ್ಳಿಯ ಕಥೆ: ಸ್ವಾವಲಂಬನೆಯ ಯಶೋಗಾಥೆ

Nalgonda, Telangana News: ಮೂಡು ಗುಡಿಸೆಲಾ ತಾಂಡಾ ಅಂದರೆ ಮೂರು ಗುಡಿಸಲುಗಳ ತಾಂಡಾ ಎಂಬ ಈ ವಿಶಿಷ್ಟ ತಾಂಡಾವನ್ನು 70 ವರ್ಷಗಳ ಹಿಂದೆ ನೇನಾವತ್ ಚಂದ್ರು...

ULLAL BANK ROBBERY : ಎಲ್ಲ ಟೋಲ್ಗಳಲ್ಲಿ ತಪಾಸಣೆ ಮಾಡುವಂತೆ ಸಿಎಂ ಸೂಚನೆ

Mangalore News: ಕೋಟೆಕಾರು ULLAL BANK ROBBERY ಪ್ರಕರಣ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಿಎಂ, ಎಲ್ಲ ಟೋಲ್​ಗಳಲ್ಲಿ ತಪಾಸಣೆ ಹಾಗೂ ಕೇರಳ ಗಡಿಯಲ್ಲಿನ ಸಿಸಿ...

HIGH COURT : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ

Bangalore News: HIGH COURT ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ...

SAIF ALI KHAN : ಸೈಫ್ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್ ತಂಡಗಳ ರಚನೆ

Mumbai (Maharashtra) News: ಬಾಲಿವುಡ್​​ ನಟ SAIF ಅಲಿ ಖಾನ್ ಅವರ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.ಈ ಘಟನೆ ಬಾಲಿವುಡ್ ಮಾತ್ರವಲ್ಲದೇ...