ಬಾಗಲಕೋಟೆ: ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗಾವಿ ಹೊರತುಪಡಿಸಿದರೆ ಬಾಗಲಕೋಟೆ ಜಿಲ್ಲೆಕಬ್ಬು ಉತ್ಪಾದನೆ ಹಾಗೂ ನುರಿಸುವಿಕೆಯಲ್ಲಿ ಪ್ರಮುಖವಾಗಿದ್ದು, ಪ್ರಸಕ್ತ ವರ್ಷದ ಕಬ್ಬು ಹಂಗಾಮಿಗೆ ಸಿದ್ಧತೆಗಳು ಶುರುವಾಗಿ ಈಗ ಸಕ್ಕರೆ ಕಾರ್ಖಾನೆಗಳ ದರ ನಿಗದಿಯತ್ತ ಜನರ ಗಮನ ಈ ಬಾರಿ ಉತ್ತಮ ಮಳೆಯಿಂದ ಕಬ್ಬಿನ ಇಳುವರಿ ಹೆಚ್ಚಾಗುವ ನಿರೀಕ್ಷೆಯಲ್ಲಿರುವ ರೈತರು ಕಳೆದ ವರ್ಷ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು 1, 72, 97, 022 ಮೆ.ಟನ್ ಕಬ್ಬು ನುರಿಸಿವೆ.
ಈ ವರ್ಷವೂ ಇಷ್ಟೇ ಪ್ರಮಾಣದಲ್ಲಿ ಕಬ್ಬು ನುರಿಸುವ ಗುರಿಯಿದೆ. ಸರಕಾರ ನ.15 ರಿಂದ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಲು ಆದೇಶಿಸಿದೆ. ನ.15 ರೊಳಗೆ ಪ್ರತಿ ಟನ್ ಕಬ್ಬಿಗೆ ದರ ನಿಗದಿಯಾದರೆ ಹಂಗಾಮು ಸುಲಲಿತವಾಗಿ ನಡೆಯಲಿದೆ.
ಕೇಂದ್ರ ಸರಕಾರ ಎಫ್ಆರ್ಪಿ ದರವನ್ನು 3, 400 ರೂ.ಗಳಿಗೆ ನಿಗದಿಗೊಳಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿಇಳುವರಿ ಪ್ರಮಾಣ ಶೇ.10.25ಕ್ಕೆ ನಿಗದಿಗೊಳಿಸಿದ್ದು ಅವೈಜ್ಞಾನಿಕ ಎಂದು ರೈತರು ವಾದ ಮಾಡುತ್ತಾರೆ.
ಕಳೆದ ಮೂರು ವರ್ಷಗಳಿಂದ ಇಳುವರಿಯ ಮಾನದಂಡ ಹೆಚ್ಚಿಸಿದ ಕಾರಣ ಇಳುವರಿ ಪ್ರಮಾಣ ಕಡಿಮೆಯಾದಾಗ ರೈತರು ಹಾನಿ ಅನುಭವಿಸಿದ್ದಾರೆ.
ಸಕ್ಕರೆ ಕಾರ್ಖಾನೆಗಳು ಯಾವ ನಿರ್ಧಾರ ತಳೆಯುತ್ತವೆ ಎಂಬ ವಿಚಾರದ ಮೇಲೆ ದರ ಘೋಷಣೆಯಾಗಲಿದೆ.
ಜಿಲ್ಲೆಯಲ್ಲಿ ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ.
ಸರಕಾರ ಇಳುವರಿ ಹೆಚ್ಚಿಸಿ ದರ ಹೆಚ್ಚಿಸಿದ್ದೇವೆ ಎಂದು ಹೇಳಿಕೊಳ್ಳುವುದು ಅವೈಜ್ಞಾನಿಕ. ರೈತರ ಹಾನಿ ಸರಿದೂಗಿಸಿ ಸಮರ್ಪಕ ದರ ಘೋಷಣೆಯಾಗಬೇಕು ಎಂದು ಸುಭಾಷ ಸಿರಬೂರ, ಕಬ್ಬು ಬೆಳೆಗಾರರ ಮುಖಂಡ ಹೇಳಿದ್ದಾರೆ.