spot_img
spot_img

SENIORS MAKING WAVES IN SWIMMING – ವಯಸ್ಸು ಬರೀ ಸಂಖ್ಯೆಯಷ್ಟೇ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Amaravati (Andhra Pradesh) NEWS :

ಇಲ್ಲೊಂದಿಷ್ಟು ಹಿರಿಯ ನಾಗರಿಕರು ವಯಸ್ಸು 80 ದಾಟಿದರೂ ನದಿ, ಕೊಳಗಳನ್ನು ಸಲೀಸಾಗಿ SWIMMING ದಾಟುತ್ತಿದ್ದಾರೆ. ತಮ್ಮ ಫಿಟ್​ನೆಸ್​ ಬದ್ಧತೆಯಿಂದ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ವಯಸ್ಸು 60 ದಾಟಿದರೆ ಚಲನಶೀಲತೆ ಕಡಿಮೆಯಾಗಿ, ಕೈ, ಕಾಲು, ಮಂಡಿ ನೋವು ಎನ್ನುವವರೇ ಹೆಚ್ಚು. ಆದರೆ ಕೆಲವು ಹಿರಿಯ ನಾಗರಿಕರು ವಯಸ್ಸು ಕೇವಲ ಸಂಖ್ಯೆಯಷ್ಟೇ ಎನ್ನುವುದನ್ನು ಸಾಬೀತುಪಡಿಸುತ್ತಾರೆ.

ವಿಜಯವಾಡ ಬಳಿಯ ಉಂಡವಳ್ಳಿಯಲ್ಲಿರುವ ಅಕ್ವಾ ಡೆವಿಲ್ಸ್​ ಕ್ಲಬ್​ನಲ್ಲಿ ಮಹಿಳೆಯರೂ ಸೇರಿದಂತೆ 80 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 10 ಈಜುಗಾರರು ನಿಯಮಿತವಾಗಿ ತರಬೇತಿ ಪಡೆಯುತ್ತಾರೆ. ಇಂದಿನ ಯುವಕರಿಗೆ ಇವರು ಹೇಳುವ ಮಾತು, “ನೀವು ಎಷ್ಟೇ ಸಂಪತ್ತು ಸಂಪಾದಿಸಿದರೂ, ಉತ್ತಮ ಆರೋಗ್ಯವಿಲ್ಲದಿದ್ದರೆ ಅವೆಲ್ಲ ಅರ್ಥಹೀನ”.

ಈ ಮೊದಲ ಸೈಕ್ಲಿಂಗ್​ ಮಾಡುತ್ತಿದ್ದ ಎಂಎಲ್​ಆರ್​ ಇಂಜಿನಿಯರಿಂಗ್​ ಕಾಲೇಜಿನ ಅಧ್ಯಕ್ಷ 80 ವರ್ಷದ ಮರಿ ಲಕ್ಷ್ಮ ರೆಡ್ಡಿ ಕಾಲು ನೋವು ಪ್ರಾರಂಭವಾದ ನಂತರ ಈಜುವುದನ್ನು ಪ್ರಾರಂಭಿಸಿದರು. ಸೈಕ್ಲಿಂಗ್​ ಮಾಡುತ್ತಿದ್ದಾಗ 2015ರಲ್ಲಿ ಬಿಎಸ್​ಎಫ್​ ಜೊತೆಗೆ ಹೈದರಾಬಾದ್​ನಿಂದ ಬೆಂಗಳೂರಿಗೆ ಸೈಕಲ್​ ಸವಾರಿ ಮಾಡಿದ್ದರು.

ತಮ್ಮ 75ನೇ ವಯಸ್ಸಿನಲ್ಲಿ ಈಜಲು ಪ್ರಾರಂಭಿಸಿದ ಇವರು ಅಂದಿನಿಂದ ಇಲ್ಲಿಯವರೆಗೆ ನಾಲ್ಕು ಬಾರಿ ಕೃಷ್ಣಾ ನದಿಯನ್ನು SWIMMING ದಾಟಿದ್ದಾರೆ. “ನನ್ನ ವಿದ್ಯಾರ್ಥಿಗಳಿಗೆ ನಾನು ಸ್ಫೂರ್ತಿಯಾಗಲು ಬಯಸುತ್ತೇನೆ” ಎನ್ನುತ್ತಾರೆ ಮರಿ ಲಕ್ಷ್ಮ ರೆಡ್ಡಿ. ಕಳೆದ ಜನವರಿಯಲ್ಲಿ ನಡೆದ ಕೃಷ್ಣಾ ನದಿ ದಾಟುವ ಸ್ಪರ್ಧೆಯಲ್ಲಿ ಭಾಗವಹಿಸುವ ಬಗ್ಗೆ ನನಗೆ ಖಚಿತತೆ ಇರಲಿಲ್ಲ, ಆದರೆ ನನ್ನ ಸ್ನೇಹಿತರು ನನ್ನನ್ನು ಪ್ರೋತ್ಸಾಹಿಸಿದರು. ಆ ಸ್ಪರ್ಧೆಯನ್ನು ನಾನು 40 ನಿಮಿಷಗಳಲ್ಲಿ ಪೂರ್ಣಗೊಳಿಸಿದೆ.

ಇಲ್ಲಿಯವರೆಗೆ ನಾನು ಈಜುವುದರಲ್ಲಿ ಸುಮಾರು 30 ಪದಕಗಳನ್ನು ಗೆದ್ದಿದ್ದೇನೆ. ಪ್ರತಿದಿನ ಬೆಳಗ್ಗೆ 5 ಗಂಟೆಗೆ ನಾನು 40 ನಿಮಿಷಗಳ ಕಾಲ ಈಜುತ್ತೇನೆ. ಯೋಗ ಮಾಡುತ್ತೇನೆ, ನಡೆಯುತ್ತೇನೆ. ನಾನು ಯಾವಾಗಲೂ ನನ್ನ ಕಾಲೇಜು ವಿದ್ಯಾರ್ಥಿಗಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತೇನೆ” ಎಂದು ಹೇಳಿದರು.

From back pain to swimming 2 km in the sea:

ವಿಜಯವಾಡದ ಮುತ್ಯಾಲಂಪಡುವಿನ ವೆಂಕಟೇಶ್ವರ ರಾಜು ಅವರು ತಮ್ಮ 88ನೇ ವಯಸ್ಸಿನಲ್ಲಿ ಈಜುವುದನ್ನು ಜೀವನವಿಧಾನವನ್ನಾಗಿ ಮಾಡಿಕೊಂಡಿದ್ದಾರೆ.

“1984 ರಲ್ಲಿ, ನಾನು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದೆ, ಆಗ ವೈದ್ಯರು ಈಜು ಅಳವಡಿಸಿಕೊಳ್ಳುವಂತೆ ಸೂಚಿಸಿದರು. ನಾನು ಕೃಷ್ಣಾ ನದಿಯಲ್ಲಿ ಈಜಲು ಪ್ರಾರಂಭಿಸಿದೆ, ಮತ್ತು ಕೆಲವೇ ದಿನಗಳಲ್ಲಿ ನೋವು ಕಡಿಮೆಯಾಯಿತು. ಅಂದಿನಿಂದ, ನಾನು ಕೃಷ್ಣಾ ನದಿಯನ್ನು ಮೂರು ಬಾರಿ ದಾಟಿದ್ದೇನೆ.

ಒಮ್ಮೆ ಗೋದಾವರಿ, ಮತ್ತು ವಾರಾಣಸಿಯ ಗಂಗಾ ನದಿಯಲ್ಲಿ ಒಂದು ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಈಜಿದ್ದೇನೆ. ನನ್ನ ಮುಂದಿನ ದೊಡ್ಡ ಸವಾಲು ಬಾಪಟ್ಲಾ ಬಳಿ ಸಮುದ್ರದಲ್ಲಿ 2 ಕಿ.ಮೀ ಈಜುವುದು. ಇಂದಿಗೂ, ನಾನು ಪ್ರತಿದಿನ ಬೆಳಗ್ಗೆ ಕೃಷ್ಣಾ ನದಿಯಲ್ಲಿ ಒಂದು ಗಂಟೆ ಈಜುತ್ತೇನೆ” ಎಂದು ಅವರು ಹೇಳುತ್ತಾರೆ.

ಫಿಟ್‌ನೆಸ್ ಮತ್ತು ಉತ್ಸಾಹದ ವಿಷಯಕ್ಕೆ ಬಂದಾಗ ವಯಸ್ಸು ಅಡ್ಡಿ ಬರುವುದಿಲ್ಲ ಎನ್ನುವುದಕ್ಕೆ ಈ ಅಸಾಧಾರಣ ಹಿರಿಯರೇ ಸಾಕ್ಷಿ. ಉತ್ತಮ ಆರೋಗ್ಯವೇ ನಿಜವಾದ ಸಂಪತ್ತು ಎನ್ನುವ ಹಿರಿಯ ನಾಗರಿಕರ ಈಜು, ಸೈಕ್ಲಿಂಗ್ ಮತ್ತು ವ್ಯಾಯಾಮಕ್ಕಿರುವ ಸಮರ್ಪಣೆ ಯುವ ಪೀಳಿಗೆಗೆ ಸ್ಫೂರ್ತಿಯೇ ಸರಿ.

9 ಬಾರಿ ಕೃಷ್ಣಾ ನದಿ ದಾಟಿದ ಈಜುಗಾರ :

1988ರಿಂದ ಇಲ್ಲಿಯವೆರೆಗೆ ತಮ್ಮ 87ನೇ ವಯಸ್ಸಿನಲ್ಲಿ ವಿಜಯವಾಡದ ಪೊಟ್ಲೂರಿ ಜನಾರ್ದನ ಮೂರ್ತಿ ಅವರು ಒಂಬತ್ತು ಬಾರಿ ಕೃಷ್ಣಾ ನದಿಯನ್ನು ಈಜಿ ದಾಟಿದ್ದಾರೆ. ಆರಂಭದಲ್ಲಿ ಆರೋಗ್ಯದ ದೃಷ್ಟಿಯಿಂದ ಈಜುವುದನ್ನು ಪ್ರಾರಂಭಿಸಿದರು. ಆದರೆ ಈಗ ಅದನ್ನು ಕ್ರೀಡೆಯಾಗಿ ಸ್ವೀಕರಿಸಿ, ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.

“ನನಗೆ ವೈದ್ಯರು ಅಥವಾ ಔಷಧಗಳಿಗೆ ಅವಲಂಬಿತವಾಗದೆ ಜೀವನ ನಡೆಸಬೇಕು ಎನ್ನುವ ಆಸೆಯಿತ್ತು. ಅದಕ್ಕಾಗಿ ನಾನು ಪ್ರತಿದಿನ ಬೆಳಗ್ಗೆ ಅಕ್ವಾ ಕ್ಲಬ್​ನಲ್ಲಿ ಸ್ವಲ್ಪ ಹೊತ್ತು ಜಿಮ್​ ಸೆಷನ್​ ಮಾಡುತ್ತೇನೆ. ನಂತರ ಒಂದು ಗಂಟೆ ಈಜುತ್ತೇನೆ. ಮೊದಲಿಗೆ ನನಗೆ ಇದೆಲ್ಲದರ ಬಗ್ಗೆ ಭಯವಿತ್ತು. ಆದರೆ ನನ್ನ ಪತ್ನಿ ಹಾಗೂ ಇತರರು ನನ್ನನ್ನು ಪ್ರೋತ್ಸಾಹಿಸಿದರು. ನಾಲ್ಕು ತಿಂಗಳೊಳಗೆ ನಾನು ಈಜು ಕಲಿತು ಸ್ಪರ್ಧೆಯಲ್ಲೂ ಭಾಗವಹಿಸಿದೆ. ಸ್ಪರ್ಧೆಗಳಿಗೆ ಅಲ್ಲದಿದ್ದರೂ, ನನ್ನ ಆರೋಗ್ಯಕ್ಕಾಗಿ ನಾನು ಈಜುವುದನ್ನು ಮುಂದುವರಿಸುತ್ತೇನೆ. ರಾಷ್ಟ್ರೀಯ ಮಟ್ಟದ ಈವೆಂಟ್​ಗಳಲ್ಲೂ ನಾನು ಭಾಗವಹಿಸಿದ್ದು, ಪದಕಗಳನ್ನೂ ಮುಡಿಗೇರಿಸಿಕೊಂಡಿದ್ದೇನೆ.” ಎಂದು ಹೇಳಿತ್ತಾರೆ ಪೊಟ್ಲೂರಿ ಜನಾರ್ದನ ಮೂರ್ತಿ.

ಇದನ್ನೂ ಓದಿ Economic Fraud: Akhilesh Slams Centre Over Decline In Stock Markets

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...