spot_img
spot_img

SHANTABAI VERNEKAR : ಅಂದು ಗಾಂಧೀಜಿಗೆ ಅನ್ನ – ಸಾರು ಊಟೋಪಚಾರ ಮಾಡಿದ್ದೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Belgaum News:

ಬೆಳಗಾವಿ ಸುವರ್ಣ ವಿಧಾನಸೌಧದ ಉತ್ತರ ಪ್ರವೇಶ ದ್ವಾರದಲ್ಲಿ ಪ್ರತಿಷ್ಠಾಪಿಸಿರುವ ಮಹಾತ್ಮ ಗಾಂಧಿ ಕಂಚಿನ ಪುತ್ಥಳಿ ಉದ್ಘಾಟನೆ ಸಮಾರಂಭಕ್ಕೆ ವ್ಹೀಲ್ ಚೇರ್ ಮೇಲೆ ಆಗಮಿಸಿದ್ದ ಶಾಂತಾಬಾಯಿ ಸುಬ್ಬರಾವ್ ವೆರ್ಣೇಕರ್ ಅವರ ಉತ್ಸಾಹಕ್ಕೆ ಪಾರವೇ ಇರಲಿಲ್ಲ. SHANTABAI VERNEKAR ಅವರ ತಂದೆಯವರದ್ದು ಅಂಕೋಲಾ ತಾಲೂಕಿನ ಅಗರಗೋಣ ಗ್ರಾಮ. ಸದ್ಯ ಅವರೀಗ ಗದಗ ನಗರದಲ್ಲಿ ಮಗನ ಜೊತೆಗೆ ವಾಸವಾಗಿದ್ದಾರೆ.

ಮಾತನಾಡಿದ ಅಜ್ಜಿ, ”ನನಗೆ ಆಗ 12-13 ವರ್ಷ ವಯಸ್ಸು. ಆಗ ಸ್ವಾತಂತ್ರ್ಯ ಹೋರಾಟದ ಕಿಚ್ಚು ದೇಶಾದ್ಯಂತ ಹಬ್ಬಿತ್ತು. ಅದರ ಬಿಸಿ ನಮ್ಮೂರಿಗೂ ತಟ್ಟಿತ್ತು.‌ ಉಪ್ಪಿನ‌ ಸತ್ಯಾಗ್ರಹಕ್ಕೆ ಖುದ್ದು ಗಾಂಧೀಜಿ ಆಗಮಿಸಿದ್ದರು. ನಮ್ಮೂರಿಗೆ ಬಂದವರು ನಮ್ಮ ಮನೆಗೂ ಬಂದಿದ್ದರು. SHANTABAI VERNEKAR ಅವರ ಆಗಮನದಿಂದ ನಮ್ಮ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. SHANTABAI VERNEKAR ಆಗ ಗಾಂಧೀಜಿ ಅವರಿಗೆ ಅನ್ನ, ಸಾರು, ನಾನಾ ಬಗೆಯ ಪಲ್ಯ ಸೇರಿ ವಿವಿಧ ತಿನಿಸುಗಳನ್ನು ನನ್ನ ಕೈಯಾರೆ ಮಾಡಿಕೊಟ್ಟಿದ್ದೆ. ಅವರು ಪ್ರೀತಿಯಿಂದ ನಮ್ಮ ಆತಿಥ್ಯ ಸ್ವೀಕರಿಸಿದ್ದರು” ಎಂದು ಸ್ಮರಿಸಿದರು.

ಆ ಅಜ್ಜಿ ಉಪ್ಪಿನ ಸತ್ಯಾಗ್ರಹಕ್ಕೆ ಬಂದಿದ್ದ ಮಹಾತ್ಮ ಗಾಂಧೀಜಿಗೆ ಅಡುಗೆ ಮಾಡಿಕೊಟ್ಟಿದ್ದರು. ಈಗ ಅವರಿಗೆ 105 ವರ್ಷ ವಯಸ್ಸು.  ಉದಯ ವೆರ್ಣೇಕರ್ ಮಾತನಾಡಿ, ”ನಮ್ಮ ತಾಯಿಗೆ ನಾನು ಹತ್ತನೇ ಮತ್ತು ಕೊನೆಯ ಮಗ. ನಮ್ಮ ತಾಯಿ ಗಾಂಧೀಜಿ ಅವರಿಗೆ ಅಡುಗೆ ಮಾಡಿ ಕೊಟ್ಟಿದ್ದರು. ಇದು ನಮ್ಮ ಕುಟುಂಬಕ್ಕೆ ದೊಡ್ಡ ಹೆಮ್ಮೆ. ನಮ್ಮ ತಾಯಿಯವರ ಚಿಕ್ಕಮ್ಮನ ಇಬ್ಬರು ಮಕ್ಕಳು ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನಗೈದಿದ್ದರು. ಈ ವಿಚಾರವನ್ನು ನಮ್ಮ ತಾಯಿಯವರು ಈಗಲೂ ನೆನೆದು ಕಣ್ಣೀರು ಹಾಕುತ್ತಾರೆ.‌ ಅಲ್ಲದೇ ಯಾವುದೇ ಫಲಾಪೇಕ್ಷೆ ಬಯಸದೆ ನಮ್ಮ ತಾಯಿ ಸೇವೆ ಸಲ್ಲಿಸಿದ್ದರು. ಸರ್ಕಾರದಿಂದ ಯಾವುದೇ ಸೌಲಭ್ಯವನ್ನು ನಾವು ಪಡೆದಿಲ್ಲ” ಎಂದರು.

”ಮೂರು ದಿನ ನಮ್ಮ ಮನೆಯಲ್ಲೇ ವಾಸ್ತವ್ಯ ಹೂಡಿದ್ದ ಗಾಂಧೀಜಿ ಅವರಿಗೆ ಊಟೋಪಚಾರದ ಜೊತೆಗೆ ಸ್ನಾನಕ್ಕೆ ಬಿಸಿನೀರು ಕಾಯಿಸಿ ಕೊಟ್ಟಿದ್ದೆ. ನಮ್ಮ ಅಣ್ಣನ ಮಕ್ಕಳು ನನಗೆ ಸಹಾಯ ಮಾಡಿದ್ದರು. ಈಗ ಬೆಳಗಾವಿಯಲ್ಲಿ ಗಾಂಧೀಜಿ ಪುತ್ಥಳಿ ಅನಾವರಣಕ್ಕೆ ನನಗೆ ಆಹ್ವಾನಿಸಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ” ಎಂದು ಅಜ್ಜಿ ಹರ್ಷ ವ್ಯಕ್ತಪಡಿಸಿದರು.

More than hundred freedom fighters participated:

ಮಹಾತ್ಮ ಗಾಂಧಿ ಪುತ್ಥಳಿ ಉದ್ಘಾಟನೆಗೆ ನಾಡಿನ ಮೂಲೆ ಮೂಲೆಗಳಿಂದ ನೂರಕ್ಕೂ ಅಧಿಕ ಸ್ವಾತಂತ್ರ್ಯ ಹೋರಾಟಗಾರರು ಇಳಿ ವಯಸ್ಸನ್ನೂ ಲೆಕ್ಕಿಸದೇ ಆಗಮಿಸಿದ್ದು ವಿಶೇಷವಾಗಿತ್ತು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GBS SYMPTOMS PREVENTIVE MEASURES: ಶಿಶುಗಳಲ್ಲಿ ಕಂಡುಬರುವ ಈ ವೈರಸ್ ಲಕ್ಷಣಗಳೇನು?

Guntur, Andhra Pradesh News: ಪ್ರಸ್ತುತ ರಾಜ್ಯಾದ್ಯಂತ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಾಂಕ್ರಾಮಿಕವಲ್ಲದಿದ್ದರೂ, ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇತರ ಸೋಂಕುಗಳಿರುವ ಜನರಲ್ಲಿ...

INDIA AND QATAR SIGNED AN AGREEMENT:ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಮುಂದೆ ಬಂದ ಕತಾರ್

New Delhi News: ಕತಾರ್ INDIAದಲ್ಲಿ 10 ಬಿಲಿಯನ್ ಡಾಲರ್​​ ಹೂಡಿಕೆ ಮಾಡಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, 2 ರಾಷ್ಟ್ರಗಳು...

REMOTE AUSTRALIAN BEACH:ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ 157 ಡಾಲ್ಫಿನ್ಗಳು ಸಾವು

Arthur River (Australia) News: 157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ...

MAHA KUMBHMELA:75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ

Lucknow (Uttar Pradesh) News: ಪವಿತ್ರ KUMBHMELA ಸ್ನಾನಕ್ಕಾಗಿ ಜೈಲು ಸಚಿವರ ಮೇಲ್ವಿಚಾರಣೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿ.ವಿ.ರಾಮಶಾಸ್ತ್ರಿ ತಿಳಿಸಿದ್ದಾರೆ. ಸಂಗಮದಿಂದ...