New Delhi News:
ದೆಹಲಿ ಚುನಾವಣೆಯಲ್ಲಿ ಮಿತ್ರಪಕ್ಷಗಳಾದ BJP ಮತ್ತು ಶಿಂಧೆ ಬಣದ ಶಿವಸೇನೆ ಒಂದಾಗಿ ಕಣಕ್ಕಿಳಿಯಲು ನಿರ್ಧರಿಸಿವೆ.ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಔಪಚಾರಿಕವಾಗಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ, ಮಿತ್ರ ಪಕ್ಷ BJPಗೆ ಬೆಂಬಲ ನೀಡುವುದಾಗಿ ಶಿವಸೇನೆ (ಶಿಂಧೆ ಬಣ) ಘೋಷಿಸಿದೆ.ಚುನಾವಣೆಯಲ್ಲಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳನ್ನು ಸಕ್ರಿಯವಾಗಿ ಬೆಂಬಲಿಸಲು ದೆಹಲಿ ಶಿವಸೇನೆ ಘಟಕಕ್ಕೆ ಸೂಚಿಸಲಾಗಿದೆ. BJP ಜೊತೆಗೆ ಹೊಂದಾಣಿಕೆ ಮತ್ತು ಪ್ರಚಾರದಲ್ಲಿ ಭಾಗವಹಿಸಲು ನಮ್ಮ ನಾಯಕರಿಗೆ ನಿರ್ದೇಶನ ನೀಡಿದ್ದಾಗಿ ಏಕನಾಥ್ ಶಿಂಧೆ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪಕ್ಷದ ನಾಯಕ, ಮಹಾರಾಷ್ಟ್ರ ಉಮ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬರೆದ ಬೆಂಬಲ ಪತ್ರವನ್ನು ದೆಹಲಿ BJP ಮುಖ್ಯಸ್ಥ ವೀರೇಂದ್ರ ಸಚ್ದೇವ್ ಅವರಿಗೆ ಮಂಗಳವಾರ ಹಸ್ತಾಂತರಿಸಿತು.ತಮ್ಮ ನಾಯಕತ್ವ ಅಡಿ ಶಿವಸೇನೆ ಪಕ್ಷವು ಬಾಳಾ ಠಾಕ್ರೆ ಅವರು ಪ್ರತಿಪಾದಿಸಿದ ‘ಹಿಂದುತ್ವ ಸಿದ್ಧಾಂತದ ದೀವಟಿಗೆ’. ಈ ಪರಂಪರೆಯನ್ನು ಮುಂದುವರಿಸಿಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಸಕ್ರಿಯ ಮತ್ತು ಹೆಮ್ಮೆಯ ಸದಸ್ಯನಾಗಿರಲಿದೆ ಎಂದು ಅವರು ಹೇಳಿದ್ದಾರೆ.
ಅವಿಭಜಿತ ಶಿವಸೇನೆ ಪಕ್ಷವು, ಈ ಹಿಂದಿನ ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ, ಚುನಾವಣಾ ಪ್ರಚಾರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರಲಿಲ್ಲ.2022 ರಲ್ಲಿ ಶಿವಸೇನೆ ವಿಭಜನೆಯಾಗಿ, ಶಿಂಧೆ ಬಣದ ಪರ ಬಹುಪಾಲು ಸಂಸದರು ಮತ್ತು ಶಾಸಕರು ಗುರುತಿಸಿಕೊಂಡರು. ನಂತರ, ಚುನಾವಣಾ ಆಯೋಗವು ಇದೇ ಬಣವನ್ನು ನಿಜವಾದ ಶಿವಸೇನೆ ಪಕ್ಷ ಎಂದು ಗುರುತಿಸಿತು.
ದೆಹಲಿ ವಿಧಾನಸಭಾ ಚುನಾವಣೆಯು ಫೆಬ್ರವರಿ 5 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ.
ಇದನ್ನು ಓದಿರಿ : ROMANTIC CITY MUMBAI : ಇಲ್ಲಿ ನೋಡಲೇಬೇಕಾದ ಟಾಪ್ 5 ತಾಣಗಳಿವೆ!