spot_img
spot_img

ಬೀದಿ ಬದಿ ಆಹಾರ : ಜೀವದ ಜೊತೆ ಚೆಲ್ಲಾಟವಾಡುವ ವ್ಯಾಪಾರ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಯಾದಗಿರಿ: ಬೀದಿಬದಿ ವ್ಯಾಪಾರಿಗಳು, ತಳ್ಳು ಬಂಡಿ ವ್ಯಾಪಾರಿಗಳು ,ಬೇಕರಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಸೇರಿ ಇತರೆ ಕಡೆಗಳಲ್ಲೂ ಅಸುರಕ್ಷಿತ ಹಾಗೂ ಗುಣಮಟ್ಟವಲ್ಲದ ಆಹಾರ ಪದಾರ್ಥ ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿಬರುತ್ತಿವೆ. ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ, ಬಸ್‌ ನಿಲ್ದಾಣ, ಗಾಂಧಿ ಚೌಕ್‌,ಸುಭಾಶ್ಚಂದ್ರ ಬೋಸ್‌ ವೃತ್ತ ಸೇರಿ ಪ್ರಮುಖ ಸ್ಥಳಗಳಲ್ಲಿ ಹಾಗೂ ಜನನಿಬಿಡ ಪ್ರದೇಶದಲ್ಲಿ ಸಿಗುವ ಉಪಹಾರ ಹಾಗೂ ಊಟ ಗ್ರಾಮೀಣ ಮತ್ತು ನಗರ ಪ್ರದೇಶದ ಜನರು ವಿವಿಧ ಕಾರಣಗಳಿಗಾಗಿ ಅನಿವಾರ್ಯವಾಗಿ ಸೇವನೆ ಮಾಡುತ್ತಿದ್ದಾರೆ.

ಕೆಲವೊಂದು ಕಡೆಗಳಲ್ಲಿ ಸಿಗುವ ಆಹಾರವಂತೂ ನೋಡಿದರೆ ಸಾಕು ಇಂತಹ ಆಹಾರ ಸೇವಿಸುವುದಾದರೂ ಹೇಗೆ ಎಂದು ಆಲೋಚನೆ ಬಂದುಬಿಡುತ್ತದೆ. ಹೀಗಾಗಿ ಹೊರಗಡೆ ಆಹಾರ ಸೇವಿಸುವ ಮುನ್ನ ಸಾರ್ವಜನಿಕರು ಒಮ್ಮೆ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕರಿದ ಎಣ್ಣೆ ಮತ್ತೆ ಬಳಸಬಾರದು ಎಂಬ ಫರ್ಮಾನು ಹೊರಡಿಸಲಾಗಿದ್ದರೂ, ಇಂತಹ ಎಣ್ಣೆಯನ್ನೇ ಬಳಕೆ ಮಾಡಲಾಗುತ್ತಿದೆ ಎಂದು ಪದೇ ಪದೇ ಆರೋಪಿಸಲಾಗುತ್ತಿದೆ. ಅಲ್ಲದೇ ತಯಾರಿಸಿದ ಆಹಾರವನ್ನು ತೆರೆದಿಡುವುದರಿಂದ ನೊಣಗಳು ಹಾಗೂ ಸೊಳ್ಳೆಯಂತಹ ಕೀಟಗಳು ಆಶ್ರಯ ಪಡೆಯುವುದರಿಂದ ಆಹಾರವೇ ಕಲುಷಿತಗೊಂಡಿರುತ್ತದೆ. ಆಹಾರ ತಯಾರಿಸುವ ಸ್ಥಳಗಳಲ್ಲಿ ನೈರ್ಮಲ್ಯ ಹಾಗೂ ಶುಚಿತ್ವ ಕಾಪಾಡಬೇಕು. ಆಹಾರ ಸುರಕ್ಷತೆ, ಸ್ವಚ್ಛತೆ, ಆಹಾರ ಕಲಬೆರಕೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಎಫ್‌ಎಸ್‌ಎಸ್‌ಎಐ ಮಾರ್ಗಸೂಚಿಗಳನ್ನು ಪಾಲಿಸಿ ಆಹಾರ ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡಬೇಕು ಎಂಬ ನಿಯಮಗಳಿವೆ.

ಹೋಟೆಲ್‌, ಬೇಕರಿ ಸೇರಿ ಅಗತ್ಯ ಕಡೆಗಳಲ್ಲಿಆಹಾರದ ಗುಣಮಟ್ಟದ ಪರಿಶೀಲನೆ ಕಾರ್ಯ ಕಾಲಕಾಲಕ್ಕೆ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ.ಹೀಗಾಗಿ ಎಲ್ಲೆಂದರೆಲ್ಲಿ ತಲೆ ಎತ್ತಿರುವ ಹೋಟೆಲ್‌, ಬೀದಿಬದಿ ಆಹಾರ ಕೇಂದ್ರಗಳಲ್ಲಿ ಆಹಾರ ಸೇವನೆ ಸುರಕ್ಷಿತವೇ ಹಾಗೂ ತಿನ್ನಲು ಯೋಗ್ಯವೇ ಎಂಬುದು ಪ್ರಶ್ನೆ ಜನರಿಗೆ ಕಾಡುತ್ತಿದೆ.

ಕಡಿಮೆ ಗುಣಮಟ್ಟ ಹೊಂದಿರುವ ವರದಿ ಬಂದರೆ ಅವುಗಳನ್ನು ವರದಿ ಮಾಡಿ ಪ್ರಾಧಿಕಾರದ ನಿಯಮಾನುಸಾರ ಕ್ರಮ ಜರುಗಿಸಲಾಗುತ್ತಿದೆ ಆಂಜನೇಯ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಯಾದಗಿರಿ ತಾಲೂಕು ಅಧಿಕಾರಿ ಹೇಳಿದ್ದಾರೆ.

ಟೇಸ್ಟಿಂಗ್‌ ಪೌಡರ್‌ ಹಾಕಲಾಗುತ್ತಿದೆ. ಇದರಿಂದಾಗಿ ಆಸಿಡಿಟಿ ಸಲುವಾಗಿ ಅತೀ ಹೆಚ್ಚು ಮಾತ್ರೆ ತೆಗೆದುಕೊಳ್ಳುವಂತಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಇಂತಹ ಆಹಾರ ಪರೀಕ್ಷೆಗೆ ಒಳಡಿಸುವ ಕೆಲಸ ಆಗುತ್ತಿಲ್ಲ. ಆರೋಗ್ಯ ಕೆಡುತ್ತಿದೆ ಎಂಬುದು ಜನರಿಗೆ ಗೊತ್ತಿಲ್ಲ, ವ್ಯಾಪಾರಿಗಳು ಹಣ ನೋಡಿದರೆ, ಜನರು ಹೊಟ್ಟೆ ತುಂಬಿಸಿಕೊಳ್ಳುವುದು ನೋಡುತ್ತಿದ್ದಾರೆ.

ಬೀದಿ ವ್ಯಾಪಾರದಲ್ಲಿಇತ್ತೀಚಿಗೆ ದಿನಗಳಲ್ಲಿಫಾಸ್ಟ್‌ ಫುಡ್‌ಗಳಲ್ಲಿಆರೋಗ್ಯಕ್ಕೆ ಮಾರಕವಾದ ಬಣ್ಣ ಮಿಶ್ರಣ ಹೆಚ್ಚಾಗಿದೆ. ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಉಮೇಶ ಮುದ್ನಾಳ, ಸಾಮಾಜಿಕ ಹೋರಾಟಗಾರ ಹೇಳಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...