spot_img
spot_img

ರಸ್ತೆಗೆ ಇಳಿದು ವಿದ್ಯಾರ್ಥಿಗಳ ಪ್ರತಿಭಟನೆ

spot_img
spot_img

Share post:

ವಿಜಯನಗರದಲ್ಲಿರುವ ಶ್ರೀ ಶಂಕರ್ ಆನಂದಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರಸ್ತೆಗೆ ಇಳಿದು ಪ್ರತಿಭಟನೆ ಮಾಡಿದ್ದಾರೆ.

ಪ್ರಾಜೆಕ್ಟ್ ವರ್ಕ್ ಮಾಡಿದರು ಫಲಿತಾಂಶದಲ್ಲಿ ಫೇಲ್​​​ ಹಾಗೂ ಗೈರು ಎಂದು ಬಂದಿರುವುದಕ್ಕೆ ಹೊಸಪೇಟೆಯ ಶ್ರೀ ಶಂಕರ್ ಆನಂದಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 6ನೇ ಸೆಮಿಸ್ಟರ್​ ಪದವಿ ವಿದ್ಯಾರ್ಥಿಗಳು ರಸ್ತೆಗೆ ಇಳಿದು ಪ್ರತಿಭಟನೆ ಮಾಡಿದ್ದಾರೆ.

“ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು ಕೊನೆಯ ವರ್ಷದ ಫಲಿತಾಂಶ ಮುಖ್ಯ ಅಡಿಪಾಯ. ಆದರೆ ಫಲಿತಾಂಶವೇ ಫೇಲ್​, ಗೈರು ಎಂದು ಅಂತ ಬಂದರೆ ಭವಿಷ್ಯ ಹೇಗೆ. ಮನೆಯಲ್ಲಿ ‘ನೀವು ಇಷ್ಟೆಲ್ಲಾ ಓದಿದ್ದೀರಿ, ಕಾಲೇಜನವರನ್ನು ಕೇಳಕ್ಕಾಗಲ್ವ’ ಎಂದು ಹೇಳಿಯೇ ಹೇಳುತ್ತಾರೆ.

ವಿಶ್ವವಿದ್ಯಾನಿಲಯಕ್ಕೆ ಹೋದರೆ ನಮ್ಮಿಂದ ತೊಂದರೆಯಾಗಿಲ್ಲ ಎಂದು ಅವರು ಹೇಳುತ್ತಾರೆ. ನಾವು ಯಾರನ್ನೂ ಅಂತ ಕೇಳೋಣ. ನಮ್ಮ ಪ್ರಾಜೆಕ್ಟ್​​ ವರ್ಕ್​ಗೆ ಹೆಚ್​ಒಡಿ ಒಂದು ಅಂಕ ನೀಡಬೇಕು, ಹಾಗೇ, ಪ್ರಾಂಶುಪಾಲರು ಒಂದು ಅಂಕ ನೀಡಬೇಕು. ಹೆಚ್​ಒಡಿ ಲಾಗಿನ್​ ಅಲ್ಲಿ ನಮ್ಮ ಅಂಕ ಬಂದಿದೆ.

ಆದರೆ ಪ್ರಿನ್ಸಿಪಾಲ್​​ ನಮಗೆ ಅಂಕ ನೀಡಿಲ್ಲ. ಈಗ ಅವರೇ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಅವರೇ ತೆಗೆದುಕೊಳ್ಳದಿದ್ದರೆ ನಾವು ಯಾರ ಹತ್ತಿರ ಹೋಗುವುದು ಎಂದು ಪ್ರಶ್ನಿಸಿದ್ದಾರೆ.ಈ ಬಗ್ಗೆ ನಾವು ಕೇಳಲು ಶುರು ಮಾಡಿ 20 ದಿನವಾಗಿದೆ. ಆದರೆ ಪ್ರಾಂಶುಪಾಲರು ನಮಗೆ ಪ್ರತಿಕ್ರಿಯಿಸುತ್ತಿಲ್ಲ. ಸಮಸ್ಯೆ ಆಗಿರುವುದೇ ಪ್ರಾಂಶುಪಾಲರ ಲಾಗಿನ್​ ಅಲ್ಲಿ ಅಂಕ ನೀಡದೇ ಇರುವುದರಿಂದ. ಆದರೆ ಪ್ರಾಶುಂಪಾಲರು ನನ್ನಿಂದ ಸಮಸ್ಯೆ ಆಗಿಲ್ಲ ಎಂದು ಹೇಳುತ್ತಾರೆ.

ಬಿಎ 6ನೇ ಸೆಮಿಸ್ಟರ್​ನ ಫಲಿತಾಂಶ ಬಂದು 1 ತಿಂಗಳು ಆಗಿದೆ. ಅದರಲ್ಲಿ ನಮ್ಮ ಕಾಲೇಜಿನ ಸುಮಾರು 103 ವಿದ್ಯಾರ್ಥಿಗಳ ಪ್ರಾಜೆಕ್ಟ್​ ಅಂಕ ಹೆಚ್​ಒಡಿ ಲಾಗಿನ್​ ಇಂದ ಆಗಿದೆ, ಪ್ರಾಂಶುಪಾಲರ ಲಾಗಿನ್​ ಇಂದ ಆಗಲಿಲ್ಲ ಎಂಬ ದೂರಿದೆ. ಪ್ರಾಂಶುಪಾಲರ ಲಾಗಿನ್​ ಇಂದ ಆಗಬೇಕಾದರೆ ಅವರ ಲಾಗಿನ್​ ಅಲ್ಲಿ ವಿದ್ಯಾರ್ಥಿಗಳ ನಂಬರ್ ತೋರಿಸಬೇಕು. ಹಾಗಿದ್ದಾಗ ಅಂಕ ನೀಡಲು ಸಾಧ್ಯ. ಕೆಲವೊಂದು ಆಗಿಲ್ಲ.

ಒಬ್ಬ ವಿದ್ಯಾರ್ಥಿಗೆ 4 ವರ್ಷದಿಂದ ಮಾರ್ಕ್​ಕಾರ್ಡ್​ ಬಂದಿಲ್ಲವೆಂದರೆ, ಆಗ ಬಂದು ಕೇಳಬೇಕು ತಾನೇ ಅವರು. ಒಬ್ಬರೂ ಬಂದು ಕೇಳಿಲ್ಲ. ಈಗ ಬಂದು ಕೇಳಿದ್ದನ್ನು ತಪ್ಪು ಎಂದು ಹೇಳುತ್ತಿಲ್ಲ. ಇನ್ನು ನಾವು ಆ ತಪ್ಪನ್ನು ಸರಿಪಡಿಸಬೇಕಾಗಿದೆ ಎಂದು ಕಾಲೇಜಿನ ಪ್ರಾಶುಂಪಾಲ ಡಾ. ನಾರಾಯಣ ಹೆಬ್ಬೂರ್​ ಹೇಳಿದ್ದಾರೆ.

ಅವುಗಳೆನ್ನಲ್ಲ ಪರಿಷ್ಕರಣೆ ಮಾಡಿ ನಮ್ಮ ಹಂತ ಅಥವಾ ವಿಶ್ವವಿದ್ಯಾಲಯ ಹಂತದಲ್ಲಿ ಮಾಡಲು ಬರುವಂತದ್ದಲ್ಲ. ವಿಶ್ವವಿದ್ಯಾಲಯದಿಂದ ನಾವು ಮಾಹಿತಿ ಪಡೆದಾಗ ಅವರು ನೀವು ಇದನ್ನು ಟಿಕೆಟ್​ ರೈಸ್​ ಮಾಡಿ ಎಂದು ಹೇಳಿದ್ದಾರೆ. ಅದಾಗಿ 20 ದಿನವಾಗಿದೆ.

ಅಲ್ಲದೇ ಅದು ವಿಶ್ವವಿದ್ಯಾಲಯದ ಲಾಗಿನ್​ಗೆ ಬಂದು, ಮುಂದೆ ಅದು ರಿಜಿಸ್ಟರ್​ ಲಾಗಿನ್​ಗೆ ಬರುತ್ತದೆ. ಅಲ್ಲಿಂದ ಮುಂದೆ ಅದು ಬೆಂಗಳೂರಿಗೆ ಹೋಗಬೇಕಾಗುತ್ತದೆ. ಈಗ ರಿಜಿಸ್ಟರ್​ ಲಾಗಿನ್ ಅಲ್ಲಿ ಇದೆ. ಪ್ರತಿ ದಿನ ನಾವು ಯೂನಿವರ್ಸಿಟಿಯನ್ನು ಸಂಪರ್ಕ ಮಾಡುತ್ತಿದ್ದೇವೆ. ಅಲ್ಲಿಂದ ಆಗುತ್ತೆ, ಆಗುತ್ತೆ ಎಂಬ ಉತ್ತರ ಬರುತ್ತಿದೆ.

ಆದರೆ ಮುಂದೆ ಹೋಗುತ್ತಿದೆ. ಇದು ನಮ್ಮ ಕೈಯಲ್ಲಿ ಇರುತ್ತಿದ್ದರೆ ನಾವು ಮಾಡುತ್ತಿದ್ದೆವು. ಈ ಮುಂದೆಯೇ ನಮ್ಮ ವಿದ್ಯಾರ್ಥಿಗಳಿಗೆ ಹೇಳಿದ್ದೆವು, ಆದರೆ ಅವರು ಅದನ್ನು ನೆಗ್​ಲೆಟ್​ ಮಾಡಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...