spot_img
spot_img

ಕೋಚಿಂಗ್​ ಸೆಂಟರ್​ ತರಬೇತಿ ನಿರತ ವಿದ್ಯಾರ್ಥಿಗಳ ಆತ್ಮಹತ್ಯೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಕೋಟಾ(ರಾಜಸ್ಥಾನ): ವಿವಿಧ ಕೋರ್ಸ್​ಗಳ ತರಬೇತಿನಿರತ ವಿದ್ಯಾರ್ಥಿಗಳ ಆತ್ಮಹತ್ಯೆಯಿಂದಾಗಿ ರಾಜಸ್ಥಾನದ ಕೋಟಾ ನಗರಕ್ಕೆ ಕೆಟ್ಟ ಹೆಸರು ಬಂದಿದೆ. ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆಯೂ ತೀವ್ರ ಪ್ರಮಾಣದಲ್ಲಿ ಕುಸಿದಿದೆ.
‘ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ರಾಜಧಾನಿ’ ಎಂದೇ ಖ್ಯಾತವಾಗಿರುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಸರಣಿ ಸಾವು ಎಲ್ಲವನ್ನೂ ಬುಡಮೇಲು ಮಾಡಿದೆ. ವಿವಿಧ ಕೋರ್ಸ್​ಗಳಿಗೆ ತರಬೇತಿ ಪಡೆಯಲು ಬರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಇಳಿಕೆ ಕಂಡರೆ, ಇಲ್ಲಿನ ಉದ್ಯಮಕ್ಕೂ ಭಾರೀ ಹೊಡೆತ ಬಿದ್ದಿದೆ.
ಕೋಚಿಂಗ್ ಸೆಂಟರ್‌ಗಳ ಹೊಸ ಮಾರ್ಗಸೂಚಿಗಳು, ಇತರ ನಗರಗಳಲ್ಲಿ ಉತ್ತಮ ಕೋಚಿಂಗ್ ಸಂಸ್ಥೆಗಳ ಆರಂಭ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಘಟನೆಗಳು ಸೇರಿದಂತೆ ಹಲವು ಕಾರಣಗಳಿಂದಾಗಿ ಇಲ್ಲಿಗೆ ತರಬೇತಿ ಪಡೆಯಲು ವಿದ್ಯಾರ್ಥಿಗಳು ನಿರಾಸಕ್ತಿ ತೋರುತ್ತಿದ್ದಾರೆ.
ತರಬೇತಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಇಲ್ಲಿನ ಉದ್ಯಮಕ್ಕೂ ಭಾರೀ ಪೆಟ್ಟು ಬಿದ್ದಿದೆ. ಹಾಸ್ಟೆಲ್​, ಕೊಠಡಿಗಳ ಬಾಡಿಗೆ, ಹೋಟೆಲ್​​, ಕೋಚಿಂಗ್​ ಸೆಂಟರ್​ಗಳು ಬೀಗ ಹಾಕಿವೆ. ನಗರದ 4,500 ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 40ರಿಂದ 50ಕ್ಕೆ ಇಳಿದಿದೆ ಎಂದು ಯುನೈಟೆಡ್ ಕೌನ್ಸಿಲ್ ಆಫ್ ರಾಜಸ್ಥಾನ ಇಂಡಸ್ಟ್ರೀಸ್ ವಲಯದ ಅಧ್ಯಕ್ಷ ಗೋವಿಂದರಾಮ್ ಮಿತ್ತಲ್ ಹೇಳಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಕೇಂದ್ರದ (NCRB) ಪ್ರಕಾರ, ಕೋಟಾ ನಗರವು ಹೆಚ್ಚು ಆತ್ಮಹತ್ಯೆ ದಾಖಲಾಗುವ ನಗರಗಳ ಪಟ್ಟಿಯಲ್ಲಿ 50 ನಗರಗಳ ನಂತರದಲ್ಲಿದೆ. ಕೊಠಡಿಗಳ ಬಾಡಿಗೆ 15 ಸಾವಿರದಿಂದ 9 ಸಾವಿರಕ್ಕೆ ಇಳಿದಿದೆ. ಅನೇಕ ಹಾಸ್ಟೆಲ್‌ಗಳು ಖಾಲಿ ಇವೆ ಎಂದು ಹಾಸ್ಟೆಲ್​​ ಅಸೋಸಿಯೇಷನ್​ ಅಧ್ಯಕ್ಷ ನವೀನ್​ ಮಿತ್ತಲ್​ ಬೇಸರಿಸಿದ್ದಾರೆ.
ಕೋಟಾದಲ್ಲಿ ತರಬೇತಿ ಪಡೆಯಲು ಬರುವ ವಿದ್ಯಾರ್ಥಿಗಳ ಸಂಖ್ಯೆ ಸಾಮಾನ್ಯವಾಗಿ 2 ರಿಂದ 2.5 ಲಕ್ಷದಷ್ಟಿತ್ತು. ಆದರೆ, 2024 ರಲ್ಲಿ ಇದು 85 ಸಾವಿರದಿಂದ 1 ಲಕ್ಷಕ್ಕೆ ಕುಸಿದಿದೆ. ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಘಟನೆಗಳು ದಾಖಲಾತಿ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಕೋಚಿಂಗ್​ ಸೆಂಟರ್​ಗಳ ಮಾಲೀಕರ ಅಭಿಪ್ರಾಯವಾಗಿದೆ.
ಕೋಟಾ ಜಿಲ್ಲಾಡಳಿತವು 2015ರಿಂದ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಬಗ್ಗೆ ಅಧಿಕೃತ ಮಾಹಿತಿ ಸಂಗ್ರಹಿಸುತ್ತಿದೆ. ಇದರ ಪ್ರಕಾರ, 2024ರ ಅಕ್ಟೋಬರ್​ವರೆಗೆ 15, 2023ರಲ್ಲಿ 28, 2022ರಲ್ಲಿ 15 ವಿದ್ಯಾರ್ಥಿಗಳ ಆತ್ಮಹತ್ಯೆ ದಾಖಲಾಗಿವೆ. 2019ರಲ್ಲಿ 18, 2018ರಲ್ಲಿ 20, 2017ರಲ್ಲಿ ಏಳು, 2016ರಲ್ಲಿ 17 ಮತ್ತು 2015ರಲ್ಲಿ 18 ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. 2021 ಮತ್ತು 2020ರಲ್ಲಿ ಕೋವಿಡ್​ನಿಂದಾಗಿ ಸಂಸ್ಥೆಗಳನ್ನು ಮುಚ್ಚಿದ್ದರಿಂದ ಯಾವುದೇ ಆತ್ಮಹತ್ಯೆಗಳಾಗಿಲ್ಲ ಎಂದು ಮಹತ್ವವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RAVI BASRUR : ‘ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ನಿಮ್ಮ ಹೆಸರೇಳಿ ಬದುಕೊಳ್ತಾರೆ’

Bagalkote News: ಸಿದ್ದನಕೊಳ್ಳ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭ ಜರುಗಿತು. ಜ್ಯೋತಿ ಬೆಳಗಿಸುವ ಮೂಲಕ ಶಾಸಕ...

BUS FIRE INCIDENT : ಹೊತ್ತಿ ಉರಿದ ಬಸ್, ತೆಲಂಗಾಣದ ಓರ್ವ ಸಾವು

Mathura (Uttar Pradesh) News: ಉತ್ತರಪ್ರದೇಶದ ಮಥುರಾದಲ್ಲಿ ತೆಲಂಗಾಣದ 50ಕ್ಕೂ ಹೆಚ್ಚು ಜನರಿದ್ದ BUS​ವೊಂದು ಬೆಂಕಿಗಾಹುತಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.ತೆಲಂಗಾಣದ ಜನರಿಂದ ತುಂಬಿದ್ದ ಬಸ್​ವೊಂದು ಮಥುರಾದಲ್ಲಿ...

NEW PRESIDENT FOR KPCC : ಕೆಪಿಸಿಸಿಗೆ ಪೂರ್ಣ ಪ್ರಮಾಣದ ಹೊಸ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡಲಿ

Bangalore News: ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನನ್ನನ್ನು ನಾನು NEW PRESIDENT FOR KPCC ಎಂದು ಮಾಡಿ ಎಂದು ಹೇಳಿಲ್ಲ. ನಾವುಗಳೆಲ್ಲ ಸಚಿವರಾದ...

HOMEOWNERS NOTE TO THIEVES : ಸಂಕ್ರಾಂತಿಗೆ ಊರಿಗೆ ಹೋಗುವಾಗ ಜಾಣತನ ಮೆರೆದ ಮನೆ ಮಾಲೀಕ

Hyderabad News: ಈ ರೀತಿಯ ವಿಚಿತ್ರ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಜೊತೆಗೆ ಮನೆ ಮಾಲೀಕನ ಹಾಸ್ಯ ಮತ್ತು ಬುದ್ದಿವಂತಿಕೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.ಇಂತಹುದೇ...