New Delhi News:
ಮಹಿಳೆಯು ತನ್ನ ಮೊದಲ ಮದುವೆಯನ್ನು ಕಾನೂನುಬದ್ಧವಾಗಿ ಮುರಿದುಕೊಳ್ಳದೇ ಇದ್ದರೂ ಸಹ, ಎರಡನೇ ಗಂಡನಿಂದ ಜೀವನಾಂಶ ಪಡೆಯಬಹುದು ಎಂದು ಸರ್ವೋಚ್ಚ COURT ತೀರ್ಪು ನೀಡಿದೆ. ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 125ರ ಅಡಿ ಮಹಿಳೆಗೆ ಜೀವನಾಂಶ ನೀಡುವುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್, ಮಹಿಳೆಯು ತನ್ನ ಮೊದಲ ಮದುವೆಯನ್ನು ಕಾನೂನುಬದ್ಧವಾಗಿ ಮುರಿದುಕೊಳ್ಳದೇ ಇದ್ದರೂ ಸಹ, ಎರಡನೇ ಗಂಡನಿಂದ ಜೀವನಾಂಶವನ್ನು ಪಡೆಯಬಹುದು ಎಂದು ವ್ಯಾಖ್ಯಾನಿಸಿದೆ.
Supreme Court Judgment:ತೆಲಂಗಾಣದ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ತಮಗೆ 2ನೇ ಪತಿ ಜೀವನಾಂಶ ನೀಡಬೇಕೆಂದು ಕೋರಿ ಹೈದರಾಬಾದ್ನ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿದ ಸರ್ವೋಚ್ಚ COURTದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠವು, ಈ ತೀರ್ಪು ನೀಡಿದೆ.
Background of the case:ಆದರೆ, ಕೆಲವು ತಿಂಗಳ ನಂತರ ಹೊಂದಾಣಿಕೆ ಆಗದ್ದರಿಂದ ಹಾಗೂ ಭಿನ್ನಾಭಿಪ್ರಾಯಗಳಿಂದಾಗಿ ಮಹಿಳೆಯು 2ನೇ ಪತಿ ವಿರುದ್ಧ ಸೆಕ್ಷನ್ 498A ಅಡಿ ಪ್ರಕರಣ ದಾಖಲಿಸಿದ್ದು, 2012 ರಲ್ಲಿ, ಜೀವನಾಂಶಕ್ಕಾಗಿ ಹೈದರಾಬಾದ್ನ ಕೌಟುಂಬಿಕ COURTವನ್ನು ಸಂಪರ್ಕಿಸಿದ್ದರು.ಆದರೆ, ಕೆಲವು ತಿಂಗಳ ನಂತರ ಹೊಂದಾಣಿಕೆ ಆಗದ್ದರಿಂದ ಹಾಗೂ ಭಿನ್ನಾಭಿಪ್ರಾಯಗಳಿಂದಾಗಿ ಮಹಿಳೆಯು 2ನೇ ಪತಿ ವಿರುದ್ಧ ಸೆಕ್ಷನ್ 498A ಅಡಿ ಪ್ರಕರಣ ದಾಖಲಿಸಿದ್ದು, 2012 ರಲ್ಲಿ, ಜೀವನಾಂಶಕ್ಕಾಗಿ ಹೈದರಾಬಾದ್ನ ಕೌಟುಂಬಿಕ COURTವನ್ನು ಸಂಪರ್ಕಿಸಿದ್ದರು.
Legal fight:ವಾದ ಆಲಿಸಿದ್ದ ಹೈಕೋರ್ಟ್, ಕೌಟುಂಬಿಕ COURT ನೀಡಿದ್ದ ಮಗುವಿಗೆ ಜೀವನಾಂಶ ಆದೇಶವನ್ನು ಎತ್ತಿಹಿಡಿದಿತ್ತು. ಅಲ್ಲದೇ ಆಕೆ ಮೊದಲ ಮದುವೆಯನ್ನು ಕಾನೂನು ತೀರ್ಪಿನ ಮೂಲಕ (ವಿಚ್ಛೇದನ) ಮುರಿದುಕೊಂಡಿಲ್ಲ.
ಹೀಗಾಗಿ, ಮಹಿಳೆಯನ್ನು ಅರ್ಜಿದಾರನ ಕಾನೂನುಬದ್ದ ಪತ್ನಿ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಹೇಳಿತ್ತು. ಜೀವನಾಂಶ ನೀಡುವುದನ್ನು ರದ್ದುಗೊಳಿಸಿತ್ತು.ಮಹಿಳೆ ಅರ್ಜಿ ವಿಚಾರಣೆ ನಡೆಸಿದ್ದ ಕೌಟುಂಬಿಕ COURT ಆಕೆಯ ಪರವಾಗಿ ತೀರ್ಪು ನೀಡಿ, ತಿಂಗಳಿಗೆ ₹3,500 ಮತ್ತು ಅವರ ಮಗುವಿಗೆ ₹5,000 ಪಾವತಿಸುವಂತೆ ನಿರ್ದೇಶಿಸಿತ್ತು.
ಆದರೆ, ಇದನ್ನು ಪ್ರಶ್ನಿಸಿ ಪ್ರತಿವಾದಿಯಾದ ಮಹಿಳೆಯ 2ನೇ ಪತಿಯು ಹೈಕೋರ್ಟ್ ಮೆಟ್ಟಿಲೇರಿದ್ದರು. ಮಹಿಳೆಯು ಮೊದಲ ಮದುವೆ ಈವರೆಗೂ ಕಾನೂನುಬದ್ಧವಾಗಿ ವಿಸರ್ಜಿಸಲ್ಪಟ್ಟಿಲ್ಲವಾದ್ದರಿಂದ, ಅವರು ಜೀವನಾಂಶಕ್ಕೆ ಅರ್ಹರಲ್ಲ ಎಂದು ವಾದಿಸಿದ್ದರು.
Supreme Court Judgment:ಸಿಆರ್ಪಿಸಿ 125ರ ಅಡಿಯಲ್ಲಿ ಜೀವನಾಂಶ ಎಂಬುದು ಸಾಮಾಜಿಕ ನ್ಯಾಯದ ಉದ್ದೇಶವನ್ನು ಹೊಂದಿದೆ. ನಾವು ಆತ್ಮಸಾಕ್ಷಿಯಿಂದ ಗಮನಿಸಿದಾಗ ಮೇಲ್ಮನವಿದಾರರಿಗೆ (ಮಹಿಳೆ) ಜೀವನಾಂಶವನ್ನು ನಿರಾಕರಿಸಲು ಸಾಧ್ಯವಿಲ್ಲ. ಸಾಮಾಜಿಕ ಕಲ್ಯಾಣ ನಿಬಂಧನೆಗಳನ್ನು ವಿಸ್ತಾರವಾದ ಮತ್ತು ಫಲಕಾರಿ ಉದ್ದೇಶಕ್ಕಾಗಿ ಒಳಪಡಿಸಬೇಕು ಎಂಬುದು ಕಾನೂನಿನ ಆಶಯವಾಗಿದೆ.
ಹೈಕೋರ್ಟ್ನ ತೀರ್ಪಿನಿಂದ ಅತೃಪ್ತರಾದ ಮಹಿಳೆಯು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅವರ ಮೇಲ್ಮನವಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್, ಮಹಿಳೆ ಕಾನೂನುಬದ್ಧವಾಗಿ ಮೊದಲ ಪತಿಯಿಂದ ದೂರವಾಗದೇ ಇದ್ದರೂ, ಆಕೆ 2ನೇ ಪತಿಯಿಂದ ಜೀವನಾಂಶ ಪಡೆಯಬಹುದು.ಪ್ರತಿವಾದಿಯು ಮಹಿಳೆಯ ಪರಿಸ್ಥಿತಿಯನ್ನು ತಿಳಿದುಕೊಂಡು ಆಕೆಯನ್ನು ಮದುವೆಯಾಗಿದ್ದಲ್ಲದೇ, ಆಕೆಯ ಒಡನಾಟವನ್ನು ಆನಂದಿಸಿದ್ದಾನೆ. ತನ್ನ ಜವಾಬ್ದಾರಿಗಳನ್ನು ಪೂರೈಸುವ ಸರದಿ ಬಂದಾಗ, ಈ ರೀತಿ ತಪ್ಪಿಸಿಕೊಳ್ಳುವ ಪ್ರಯತ್ನ ಸರಿ ಅಲ್ಲ.
ಮಹಿಳೆ ಎರಡೂ ಮದುವೆಗಳಿಂದ ಜೀವನಾಂಶವನ್ನು ಕೋರಿದ್ದರೆ, ತಪ್ಪು ಎನ್ನಬಹುದು. ಮಹಿಳೆಯು ಮೊದಲನೇ ಪತಿಯಿಂದ ಜೀವನಾಂಶ ಪಡೆಯುತ್ತಿಲ್ಲ ಎಂಬುದನ್ನು ಗಮನಿಸಬೇಕು. ಮಹಿಳೆಯ ಮೊದಲ ವಿವಾಹ ಸಂಬಂಧವನ್ನು ಕಾನೂನುಬದ್ಧವಾಗಿ ಮುರಿದುಕೊಂಡಿಲ್ಲ ಎಂಬ ಕಾರಣಕ್ಕೆ ಪ್ರತಿವಾದಿಯು ಜೀವನಾಂಶ ನೀಡುವುದರಿಂದ ತಪ್ಪಿಸಿಕೊಳ್ಳಲಾಗದು ಎಂದು ಪೀಠ ಅಭಿಪ್ರಾಯ ಪಟ್ಟಿದೆ.
ಇದನ್ನು ಓದಿರಿ :Kashmiri Engineer Jailed In Saudi Arabia: Srinagar MP Ruhullah Mehdi Urges EAM Jaishankar to Intervene