spot_img
spot_img

ಕೇಂದ್ರದ ಗಮನ ಸೆಳೆದ ಕಾಶ್ಮೀರಿ ಪಂಡಿತ್​​ ಹೌಸಿಂಗ್​ ಯೋಜನೆ

spot_img
spot_img

Share post:

ಶ್ರೀನಗರ: ಮೂವರು ಸದಸ್ಯರನ್ನು ಒಳಗೊಂಡ ಈ ಸಮಿತಿ ದೆಹಲಿಯಲ್ಲಿ ಕೇಂದ್ರ ರಾಜ್ಯ ಗೃಹ ಸಚಿವ ನಿತ್ಯಾನಂದ ರೈ ಅವರನ್ನು ಗುರುವಾರ ಭೇಟಿಯಾಗಿ ಚರ್ಚೆ ನಡೆಸಿತು.
ಕಣಿವೆ ರಾಜ್ಯದಲ್ಲಿ ಕಾಶ್ಮೀರಿ ಪಂಡಿತರಿಗೆ ಶಾಶ್ವತ ನೆಲೆ ಕಲ್ಪಿಸಲು ಸ್ಥಾಪಿಸಲಾಗುತ್ತಿರುವ ಮೊದಲ ಹೌಸಿಂಗ್ ಸೊಸೈಟಿಯನ್ನು ಮೌಲ್ಯಮಾಪನ ಮಾಡಲು ಸಮಿತಿ ರಚಿಸಲಾಗುವುದು ಎಂದು ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಭರವಸೆ ನೀಡಿದೆ.

ಮೂವರು ಸದಸ್ಯರನ್ನು ಒಳಗೊಂಡ ಈ ಸಮಿತಿ ದೆಹಲಿಯಲ್ಲಿ ಕೇಂದ್ರ ರಾಜ್ಯ ಗೃಹ ಸಚಿವ ನಿತ್ಯಾನಂದ ರೈ ಅವರನ್ನು ಗುರುವಾರ ಭೇಟಿಯಾಗಿದೆ. ಸಮಿತಿಯಲ್ಲಿ ಹೌಸಿಂಗ್​ ಸೊಸೈಟಿ ಅಧ್ಯಕ್ಷ ಅಶೋಕ್​ ಮನ್ವಿತಾ, ಕಾರ್ಯದರ್ಶಿ ಸತೀಶ್​​ ಮಹಲ್ದಾರ್​ ಮತ್ತು ಸದಸ್ಯರಾಗಿ ಕಮಲ್​ ಚೌಧರಿ ಇದ್ದು, ವಲಸಿಗರ ಆಸ್ತಿಗಳ ಮೇಲಿನ ಅತಿಕ್ರಮಣ ಮತ್ತು ಸರ್ಕಾರದ ವಾಪಸಾತಿ ಮತ್ತು ಪುನರ್ವಸತಿ ನೀತಿ ಬಗ್ಗೆ ಚರ್ಚಿಸಿದರು.

ಈ ಕುರಿತು ಈಟಿವಿ ಭಾರತ್​ ಜೊತೆಗೆ ಮಾತಾನಾಡಿದ ಮಹಲ್ದಾರ್​, ತಮ್ಮ ನೆಲದಲ್ಲಿ ಕಾಶ್ಮೀರ ಪಂಡಿತರ ನೆಲಸಲು ಕಾಶ್ಮೀರದಲ್ಲಿ ಮೊದಲ ಹೌಸಿಂಗ್​ ಸೊಸೈಟಿ ಸ್ಥಾಪಿಸಿದ್ದಕ್ಕೆ ಪ್ರಶಂಸಿದರು. ಅವರು ಭೂಮಿಗಾಗಿ ಆರ್ಥಿಕ ಬೆಂಬಲ ಮತ್ತು ಸಬ್ಸಿಡಿ ನೀಡುವ ಭರವಸೆ ನೀಡಿದ್ದಾರೆ. ಸರ್ಕಾರದಿಂದ ಯಾವುದೇ ಸಾಧ್ಯವಾದ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಖಾಸಗಿ ಸೊಸೈಟಿಯ ಮೂಲಕ ಸ್ಥಾಪಿಸಲಾಗುತ್ತಿರುವ ಕಾಶ್ಮೀರಕ್ಕೆ ಹೌಸಿಂಗ್​ ಸೊಸೈಟಿ ಪ್ರಸ್ತಾಪಕ್ಕೆ ಸರ್ಕಾರದಿಂದ ಆರ್ಥಿಕ ಮತ್ತು ಆಡಳಿತಾತ್ಮಕ ಬೆಂಬಲವನ್ನು ಮೌಲ್ಯಮಾಪನ ಮಾಡಲು ಸಮಿತಿಯನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಯಾವುದು ಕೂಡ ಉಚಿತವಾಗಿ ಲಭ್ಯವಾಗುವುದಿಲ್ಲ. ಕಾಶ್ಮೀರಿ ಪಂಡಿತರು ತಮ್ಮ ಸ್ವಂತಃ ಭೂಮಿಗೆ ಕೆಲವು ಸಾಮಾನ್ಯ ದರಗಳನ್ನು ನೀಡಬೇಕಿದೆ. ತಾತ್ಕಲಿಕವಾಗಿ ಸರ್ಕಾರವೂ ಶೇ 70ರಷ್ಟುನ್ನು ನೀಡಲಿದ್ದು, ಉಳಿದವುಗಳನ್ನು ಕಾಶ್ಮೀರಿ ಪಂಡಿತರ ಕುಟುಂಬ ತಮ್ಮ ಕೈಯಿಂದ ನೀಡಬೇಕು ಎಂಬುದನ್ನು ಸಚಿವರು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮಹಲ್ದಾರ್​ ತಿಳಿಸಿದರು.

2019ರಿಂದ ಜಮ್ಮು ಮತ್ತು ಕಾಶ್ಮೀರ ಶಾಂತಿ ವೇದಿಕೆ ಅಧ್ಯಕ್ಷರಾಗಿರುವ ಮಹಲ್ದಾರ್​​, ಕಣಿವೆ ರಾಜ್ಯದಿಂದ ವಲಸೆ ಹೋಗಿರುವ 419 ಕಾಶ್ಮೀರಿ ಪಂಡಿತರ ಕುಟುಂಬಗಳು ಕಣಿವೆಗೆ ಮರಳುವ ಇಚ್ಛೆ ವ್ಯಕ್ತಪಡಿಸಿವೆ. ಈ ಪಟ್ಟಿಯನ್ನು ಕೇಂದ್ರ ಸಚಿವರಿಗೆ ನಿಯೋಗ ನೀಡಿದೆ.

ಸುರಕ್ಷತಾ ದೃಷ್ಟಿಯಿಂದ ಕಣಿವೆ ರಾಜ್ಯದಿಂದ ನವದೆಹಲಿ ಸೇರಿದಂತೆ ದೇಶದ ಇತರ ಪ್ರದೇಶಗಳಿಗೆ ಸುಮಾರು 62,000 ಕುಟುಂಬಗಳು ವಲಸೆ ಹೋಗಿವೆ. ಹೀಗೆ ಹೋದವರ ಮನೆಗಳನ್ನು ಲೂಟಿ ಮತ್ತು ಅತಿಕ್ರಮಣ ಮಾಡಲಾಗಿದೆ ಎಂದು ಅನೇಕರು ಹೇಳಿದ್ದಾರೆ. ಮತ್ತೆ ಕೆಲವರು ತಮ್ಮ ಆಸ್ತಿಗಳನ್ನು ಮಾರಾಟ ಮಾಡುವ ಒತ್ತಡಕ್ಕೆ ಗುರಿಯಾದೆವು ಎಂದಿದ್ದಾರೆ. ಈ ಕುರಿತು ವರದಿ ಮಾಡಲು ಸರ್ಕಾರ 2021ರ ಆಗಸ್ಟ್​ನಲ್ಲಿ ಆನ್‌ಲೈನ್ ಪೋರ್ಟಲ್ ಆರಂಭಿಸಿತ್ತು. ಕಾಶ್ಮೀರದಲ್ಲಿರುವ ಕಾಶ್ಮೀರಿ ಪಂಡಿತರ ಆಸ್ತಿಗಳ ಮೇಲಿನ ಅತಿಕ್ರಮಣ ಪಟ್ಟಿಯನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು.

ಜಮ್ಮು ಮತ್ತು ಕಾಶ್ಮೀರ ವಲಸಿಗರ ಸ್ಥಿರಾಸ್ಥಿ ಕಾಯ್ದೆ 1997 ಅವರನ್ನು ವಲಸಿಗರು ಎಂದು ವ್ಯಾಖ್ಯಾನಿಸಿದೆ. ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೇಜ್ 2015 ಮತ್ತು ಪ್ರಧಾನ ಮಂತ್ರಿಗಳ ಪುನರ್ನಿರ್ಮಾಣ ಯೋಜನೆ 2008 ರ ಅಡಿ ಅವರ ಮರಳುವಿಕೆಯನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರವು ಕಣಿವೆ ರಾಜ್ಯದಲ್ಲಿ ಪಂಡಿತರಿಗೆ 6,000 ಉದ್ಯೋಗಗಳನ್ನು ಸೃಷ್ಟಿಸಿದೆ. ಇದರಲ್ಲಿ 5724 ಕಾಶ್ಮೀರಿ ವಲಸಿಗರು ನೇಮಕಗೊಂಡಿದ್ದಾರೆ ಎಂದು 2024ರ ಆಗಸ್ಟ್​​ ಅಧಿಕೃತ ದತ್ತಾಂಶ ತಿಳಿಸಿದೆ.

ಕಾಶ್ಮೀರಿ ಪಂಡಿತ್ ಸಮುದಾಯವು ಕಣಿವೆ ರಾಜ್ಯದಿಂದ ನಿರ್ಗಮಿಸಿದಾಗಿನಿಂದಲೂ ಮರಳು ಮತ್ತು ಪುನರ್ವಸತಿಗಾಗಿ ಸಂಪೂರ್ಣವಾಗಿ ಸರ್ಕಾರದ ಮೇಲೆ ಅವಲಂಬಿತರಾಗಿತ್ತು. ಈ ಹಿಂದೆ, ಸಮುದಾಯಕ್ಕಾಗಿ ವಿಶೇಷ ನೆಲೆ ಕಲ್ಪಿಸುವ ಸರ್ಕಾರದ ಪ್ರಸ್ತಾಪಕ್ಕೆ ಪ್ರಮುಖ ಪಕ್ಷಗಳು ಟೀಕಿಸಿದ್ದವು. ಸರ್ಕಾರವೂ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಜೊತೆಗೆ ಭೂ ವಿಚಾರ ಕುರಿತು ಮಾತನಾಡಲಿದ್ದು, ಶೀಘ್ರ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಶಾಶ್ವತ ನೆಲೆಗಾಗಿ ಇದೀಗ ಕಾಶ್ಮೀರಿ ಪಂಡಿತರು ಔಪಚಾರಿಕವಾಗಿ ಜಮ್ಮು ಮತ್ತು ಕಾಶ್ಮೀರದ ರಿಜಿಸ್ಟ್ರಾರ್ ಸಹಕಾರ ಸಂಘಗಳೊಂದಿಗೆ ಸ್ಥಳಾಂತರಗೊಂಡ ಕಾಶ್ಮೀರಿ ನಿವಾಸಿಗಳ ವಸತಿ ಸಹಕಾರ, ಶ್ರೀನಗರದಲ್ಲಿ ನೋಂದಾಯಿಸಿದ್ದಾರೆ. ಹೌಸಿಂಗ್ ಸೊಸೈಟಿಯು 11 ಕಾಶ್ಮೀರಿ ಪಂಡಿತರು ಮತ್ತು ಇಬ್ಬರು ಸಿಖ್ಖರನ್ನು ಒಳಗೊಂಡಿದೆ. ಇವರೆಲ್ಲರೂ 1989ರಲ್ಲಿ ಉಂಟಾದ ಉಗ್ರವಾದ ಬಳಿಕ ತಮ್ಮ ನೆಲೆ ತೊರೆದವರಾಗಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...