spot_img
spot_img

VEGETABLE FARMERS PROBLEMS – ಮಾಯಕೊಂಡದಲ್ಲಿ ಕುಸಿದ ಬೆಳೆ-ಬೆಲೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Davangere News:

ಜಿಲ್ಲೆಯ ಮಾಯಕೊಂಡ ಒಂದು ಕಾಲದಲ್ಲಿ ತರಕಾರಿ ಬೆಳೆಗೆ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಗಳಿಸಿತ್ತು. ಆದರೆ ಈಗ ಬೆಳೆ-ಬೆಲೆ ಎರಡೂ ಇಲ್ಲ. ಹಾಗಾಗಿ, ರೈತರು ರೋಸಿ ಹೋಗಿದ್ದಾರೆ. ಮಳೆನೀರು ಸಂಗ್ರಹಿಸಿ, ಕೊಳವೆ ಬಾವಿಗಳನ್ನು ತೆರೆದು, ಕಷ್ಟಪಟ್ಟು ಬೆಳೆದ ತರಹೇವಾರಿ ತರಕಾರಿಗೆ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲ. ಹೀಗಾಗಿ ಮಾಯಕೊಂಡ ಹೋಬಳಿಯಲ್ಲೇ ಎಪಿಎಂಸಿ ತೆರೆದು, ಬೆಂಬಲ ಬೆಲೆ ನೀಡಬೇಕೆಂಬುದು ರೈತರ ಒತ್ತಾಯ. ಸದ್ಯ ಕೊಳವೆ ಬಾವಿಗಳನ್ನು ಕೊರೆಸಿ ತರಕಾರಿ ಬೆಳೆ ಮಾಡುತ್ತಿದ್ದಾರೆ.

ಟೊಮೆಟೋ, ಹೀರೇಕಾಯಿ, ಸೌತೆ ಕಾಯಿ, ಹಾಗಲಕಾಯಿ, ಮೆಣಸಿನಕಾಯಿ, ಕೋಸು, ಮುಳುಗಾಯಿ, ಹೂಕೋಸು, ಜವಳಿಕಾಯಿ, ಸೋರೆಕಾಯಿ.. ಹೀಗೆ ನಾನಾ ರೀತಿಯ ತರಕಾರಿ ಬೆಳೆದು ಮಾರುಕಟ್ಟೆಗೆ ಕಳುಹಿಸುತ್ತಾರೆ.ಮಾಯಕೊಂಡದ ರೈತರು ತರಹೇವಾರಿ ತರಕಾರಿ ಬೆಳೆಯುತ್ತಾರೆ.

ಇಲ್ಲಿ ಒಣ ಭೂಮಿ ಹೆಚ್ಚು. ಹಾಗಾಗಿ ಮಳೆ ಆಶ್ರಯಿಸಿ ಮೆಕ್ಕೆಜೋಳ, ರಾಗಿ, ತೊಗರಿ ಬೆಳೆಯುತ್ತಿದ್ದರು.‌ ಆದರೆ, ಕಷ್ಟಪಟ್ಟು ಬೆಳೆಯುತ್ತಿರುವ ಬೆಳೆಗಳಿಗೆ ಕೆಲ ರೋಗಗಳು ಅಂಟಿಕೊಂಡರೆ, ಇನ್ನೊಂದೆಡೆ ಬೆಲೆ ಏರಿಳಿತ, ದಲ್ಲಾಳಿಗಳ ಕಮಿಷನ್ ಹಾವಳಿಯಿಂದ ರೈತ ಕಂಗಾಲಾಗಿದ್ದಾನೆ. ಆದ್ದರಿಂದ ಮಾಯಕೊಂಡ ಹೋಬಳಿಯಲ್ಲೇ ಎಪಿಎಂಸಿ ತೆರೆಯಬೇಕು, ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

What did the farmer Manjanna who grew vegetables in one and a half acres say?:

ಮಾಯಕೊಂಡ ಹೋಬಳಿಯ ರೈತ ಮಂಜಣ್ಣ ಒಂದೂವರೆ ಎಕರೆಯಲ್ಲಿ ವಿವಿಧ ತರಕಾರಿ ಬೆಳೆದಿದ್ದಾರೆ. ಇಷ್ಟೆಲ್ಲ ಬೆಳೆದು ಎಪಿಎಂಸಿಗೆ ಹಾಕಿದಾಗ ಅವರು ಬೆರಳೆಣಿಕೆಯಷ್ಟೇ ಕಾಸು ನೋಡಿದ್ದಾರೆ.‌ಈ ಕುರಿತು ಮಂಜಣ್ಣ”ಒಂದೂವರೆ ಎಕರೆಯಲ್ಲಿ ಹೀರೇಕಾಯಿ, ಸೌತೆ ಕಾಯಿ, ಹಾಗಲಕಾಯಿ ಹಾಕಿದ್ದೇವೆ. ಮಳೆ ಹೆಚ್ಚಾದ್ದರಿಂದ ಬೆಳೆಗಳಿಗೆ ರೋಗ ತಪ್ಪಿಲ್ಲ. ಟೊಮೆಟೋ ದರ ಪಾತಾಳಕ್ಕೆ ಇಳಿದಿದೆ.

ಹೀರೇಕಾಯಿ ಇಳುವರಿ ಚೆನ್ನಾಗಿದೆ, ಆದರೆ ಬೆಲೆ ಇಲ್ಲ. ಇತ್ತ ಎಪಿಎಂಸಿಯಲ್ಲಿ ದಲ್ಲಾಳಿಗಳ ಕಮಿಷನ್​ ಹಾವಳಿ ಬೇರೆ. ಇದೆಲ್ಲವನ್ನೂ ನೋಡಿದರೆ ಬೇಸರವಾಗುತ್ತದೆ. ಎಲ್ಲಾ ರೈತರು ಬೆಲೆ ಏರಿದೆ ಎಂಬ ಕಾರಣಕ್ಕೆ ಒಂದೇ ರೀತಿಯ ತರಕಾರಿ ಬೆಳೆದಿದ್ದರು. ನಮಗೆ ಬೆಂಬಲ ಬೆಲ ಕೊಟ್ಟರೆ ಗ್ರಾಹಕರಿಗೆ ತೊಂದರೆ ಆಗಲ್ಲ, ರೈತರಿಗೂ ಸಮಸ್ಯೆ ಆಗಲ್ಲ.ದಾವಣಗೆರೆ ಎಪಿಎಂಸಿಗೆ ತರಕಾರಿ ತಡವಾಗಿ ತಂದರೆ ದರ ಕಡಿಮೆ ಆಗುತ್ತದೆ” ಎಂದರು. ಬೆಲೆ ಏರುಪೇರಾಗಿ ರೈತರು ಹಾಳಾಗುತ್ತಿದ್ದಾರೆ. ಗೊಬ್ಬರ, ಔಷಧಿ, ಸಹಾಯಧನವನ್ನು ನೀಡಬೇಕು. ಮಾಯಕೊಂಡದಲ್ಲಿ ಎಪಿಎಂಸಿ ಆಗಬೇಕು.

Mayakonda Vegetable Wasp:

ಒಳ್ಳೆಯ ಬೆಲೆ ಸಿಗುತ್ತಿಲ್ಲ. ಸರ್ಕಾರದ ಸಹಕಾರವಿಲ್ಲ. ಬೆಲೆ ಏರಿಕೆ-ಇಳಿಕೆಯಿಂದ ಬೇಸತ್ತಿದ್ದೇವೆ. 40 ವರ್ಷದಿಂದ ಕೃಷಿಯಲ್ಲಿ ಅನುಭವವಿದೆ.‌ ಈ ಭಾಗದಲ್ಲಿ ಶೇ.40-75 ರಷ್ಟು ತರಕಾರಿ ಬೆಳೆಯಲಾಗುತ್ತದೆ. ಸಾಕಷ್ಟು ರೈತರು ಪೆಟ್ಟು ತಿಂದಿದ್ದಾರೆ. ಇದರಿಂದ ನಾವು ತರಕಾರಿ ಬೆಳೆಯುವುದನ್ನು ನಿಲ್ಲಿಸಿ ಮೆಕ್ಕೆಜೋಳ ಹಾಕಿದ್ದೇವೆ” ಎಂದರು.ಮತ್ತೋರ್ವ ರೈತ ಜೈರಾಜ್ ಮಾತನಾಡಿ, “ಸರ್ಕಾರ ರೈತರಿಗೆ ಆಸರೆ ಆಗಬೇಕಾಗಿದೆ. ಟೊಮೆಟೋ, ಮೆಣಸಿನಕಾಯಿ, ಕೋಸು, ಮುಳುಗಾಯಿ, ಹೂಕೋಸು, ಹೀರೇಕಾಯಿ, ಹಾಗಲಕಾಯಿ, ಜವಳಿಕಾಯಿ ಹೀಗೆ ಶೇ.75ರಷ್ಟು ಕೃಷಿ ಭೂಮಿಯಲ್ಲಿ ‌ತರಕಾರಿ ಬೆಳೆಯುತ್ತಾರೆ. ರೈತರ ಬವಣೆ ಹೇಳತೀರದಾಗಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RAVI BASRUR : ‘ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ನಿಮ್ಮ ಹೆಸರೇಳಿ ಬದುಕೊಳ್ತಾರೆ’

Bagalkote News: ಸಿದ್ದನಕೊಳ್ಳ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭ ಜರುಗಿತು. ಜ್ಯೋತಿ ಬೆಳಗಿಸುವ ಮೂಲಕ ಶಾಸಕ...

BUS FIRE INCIDENT : ಹೊತ್ತಿ ಉರಿದ ಬಸ್, ತೆಲಂಗಾಣದ ಓರ್ವ ಸಾವು

Mathura (Uttar Pradesh) News: ಉತ್ತರಪ್ರದೇಶದ ಮಥುರಾದಲ್ಲಿ ತೆಲಂಗಾಣದ 50ಕ್ಕೂ ಹೆಚ್ಚು ಜನರಿದ್ದ BUS​ವೊಂದು ಬೆಂಕಿಗಾಹುತಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.ತೆಲಂಗಾಣದ ಜನರಿಂದ ತುಂಬಿದ್ದ ಬಸ್​ವೊಂದು ಮಥುರಾದಲ್ಲಿ...

NEW PRESIDENT FOR KPCC : ಕೆಪಿಸಿಸಿಗೆ ಪೂರ್ಣ ಪ್ರಮಾಣದ ಹೊಸ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡಲಿ

Bangalore News: ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನನ್ನನ್ನು ನಾನು NEW PRESIDENT FOR KPCC ಎಂದು ಮಾಡಿ ಎಂದು ಹೇಳಿಲ್ಲ. ನಾವುಗಳೆಲ್ಲ ಸಚಿವರಾದ...

HOMEOWNERS NOTE TO THIEVES : ಸಂಕ್ರಾಂತಿಗೆ ಊರಿಗೆ ಹೋಗುವಾಗ ಜಾಣತನ ಮೆರೆದ ಮನೆ ಮಾಲೀಕ

Hyderabad News: ಈ ರೀತಿಯ ವಿಚಿತ್ರ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಜೊತೆಗೆ ಮನೆ ಮಾಲೀಕನ ಹಾಸ್ಯ ಮತ್ತು ಬುದ್ದಿವಂತಿಕೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.ಇಂತಹುದೇ...