spot_img
spot_img

VIKRAM MISRI TO VISIT CHINA : ಜ.26, 27ರಂದು ವಿದೇಶಾಂಗ ಕಾರ್ಯದರ್ಶಿ ಮಿಸ್ರಿ ಬೀಜಿಂಗ್ ಭೇಟಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

ವಿದೇಶಾಂಗ ಕಾರ್ಯದರ್ಶಿ VIKRAM MISRI ಜನವರಿ 26-27 ರಂದು ಬೀಜಿಂಗ್ ಗೆ ಭೇಟಿ ನೀಡಲಿದ್ದಾರೆ.”ರಾಜಕೀಯ, ಆರ್ಥಿಕ ಮತ್ತು ಜನರ ನಡುವಿನ ವಿಷಯಗಳು ಸೇರಿದಂತೆ ಭಾರತ – ಚೀನಾ ಸಂಬಂಧಗಳ ಮುಂದಿನ ಹಂತಗಳನ್ನು ಚರ್ಚಿಸಲು ನಾಯಕತ್ವ ಮಟ್ಟದಲ್ಲಾದ ಒಪ್ಪಂದದ ಅನ್ವಯ ಈ ದ್ವಿಪಕ್ಷೀಯ ಕಾರ್ಯವಿಧಾನವು ಪುನರಾರಂಭಗೊಳ್ಳುತ್ತಿದೆ” ಎಂದು ಎಂಇಎ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಾರತ ಮತ್ತು ಚೀನಾ ನಡುವಿನ ವಿದೇಶಾಂಗ ಕಾರ್ಯದರ್ಶಿ – ಉಪ ಸಚಿವರ ಕಾರ್ಯವಿಧಾನದ ಸಭೆಯಲ್ಲಿ ಭಾಗವಹಿಸಲು ವಿದೇಶಾಂಗ ಕಾರ್ಯದರ್ಶಿ VIKRAM MISRI ಜನವರಿ 26-27 ರಂದು ಬೀಜಿಂಗ್ ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಗುರುವಾರ ಪ್ರಕಟಿಸಿದೆ.ಕಳೆದ ತಿಂಗಳು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಚೀನಾದ ಉಪಾಧ್ಯಕ್ಷ ಹಾನ್ ಜೆಂಗ್ ಅವರನ್ನು ಭೇಟಿ ಮಾಡಲು ಬೀಜಿಂಗ್​ಗೆ ಪ್ರಯಾಣಿಸಿದ್ದರು.

ಅಂದಿನ ಸಭೆಯಲ್ಲಿ ಎನ್ಎಸ್ಎ ದೋವಲ್ ಅವರು ಐದು ವರ್ಷಗಳ ಅಂತರದ ನಂತರ ಗಡಿ ಪ್ರಶ್ನೆಗಾಗಿ ಉಭಯ ದೇಶಗಳ ವಿಶೇಷ ಪ್ರತಿನಿಧಿಗಳ ನಡುವಿನ ಸಭೆಯನ್ನು ಪುನರಾರಂಭಿಸುವುದು ಉಭಯ ದೇಶಗಳ ನಾಯಕರು ತಲುಪಿದ ಒಮ್ಮತವನ್ನು ಕಾರ್ಯಗತಗೊಳಿಸುವ ಪ್ರಮುಖ ಕ್ರಮವಾಗಿದೆ ಮತ್ತು ಇದು ದ್ವಿಪಕ್ಷೀಯ ಸಂಬಂಧಗಳನ್ನು ಉತ್ತಮಗೊಳಿಸುವಲ್ಲಿ ಬಹಳ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದರು.

Platform for Resumption of Kailasa Manasarovar Yatra: ಭಾರತ-ಚೀನಾ ಸಂಬಂಧಗಳು ಸಕಾರಾತ್ಮಕ ಪಥಕ್ಕೆ ಮರಳಬೇಕಾದರೆ ಮತ್ತು ಸುಸ್ಥಿರವಾಗಿ ಉಳಿಯಬೇಕಾದರೆ ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆ ಎಂಬ ಮೂರು ಪರಸ್ಪರ ಅಂಶಗಳನ್ನು ಆಧರಿಸಿರಬೇಕು ಎಂದು ಪಿಎಂ ಮೋದಿ ಚೀನಾದ ಅಧ್ಯಕ್ಷರಿಗೆ ತಿಳಿಸಿದ್ದರು.

ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸುವುದು, ಗಡಿಯಾಚೆಗಿನ ನದಿಗಳು ಮತ್ತು ಗಡಿ ವ್ಯಾಪಾರದ ದತ್ತಾಂಶ ಹಂಚಿಕೆ ಸೇರಿದಂತೆ ಗಡಿಯಾಚೆಗಿನ ಸಹಕಾರ ಮತ್ತು ವಿನಿಮಯಕ್ಕೆ ಸಕಾರಾತ್ಮಕ ನಿರ್ದೇಶನಗಳನ್ನು ನೀಡಲು ಎನ್ಎಸ್ಎ ದೋವಲ್ ಮತ್ತು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್ ಯಿ ಭಾಗವಹಿಸಿದ್ದ ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳ (ಎಸ್ಆರ್) 23 ನೇ ಸಭೆಯಲ್ಲಿ ಎರಡೂ ದೇಶಗಳು ನಿರ್ಧರಿಸಿದ್ದವು.

“ಕಳೆದ ನಾಲ್ಕು ವರ್ಷಗಳಲ್ಲಿ ಭಾರತ – ಚೀನಾ ಗಡಿಯಲ್ಲಿ ಉದ್ಭವಿಸಿರುವ ಪರಿಸ್ಥಿತಿಗಳ ಬಗ್ಗೆ ಒಮ್ಮತ ಮೂಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು. ಪರಸ್ಪರ ನಂಬಿಕೆ, ಪರಸ್ಪರ ಗೌರವ ಮತ್ತು ಪರಸ್ಪರ ಸೂಕ್ಷ್ಮತೆ ನಮ್ಮ ಸಂಬಂಧಗಳ ಆಧಾರವಾಗಿದೆ ” ಎಂದು ಕ್ಸಿ ಜಿನ್ ಪಿಂಗ್ ಅವರೊಂದಿಗಿನ ಮಹತ್ವದ ದ್ವಿಪಕ್ಷೀಯ ಸಭೆಯ ನಂತರ ಪ್ರಧಾನಿ ಮೋದಿ ಹೇಳಿದ್ದರು.

ಇದನ್ನು ಓದಿರಿ : NAURANG YADAV PASSES AWAY : ಕೊಲೆ ಬೆದರಿಕೆ ಬೆನ್ನಲ್ಲೇ ಮತ್ತೊಂದು ಆಘಾತ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GBS SYMPTOMS PREVENTIVE MEASURES: ಶಿಶುಗಳಲ್ಲಿ ಕಂಡುಬರುವ ಈ ವೈರಸ್ ಲಕ್ಷಣಗಳೇನು?

Guntur, Andhra Pradesh News: ಪ್ರಸ್ತುತ ರಾಜ್ಯಾದ್ಯಂತ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಾಂಕ್ರಾಮಿಕವಲ್ಲದಿದ್ದರೂ, ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇತರ ಸೋಂಕುಗಳಿರುವ ಜನರಲ್ಲಿ...

INDIA AND QATAR SIGNED AN AGREEMENT:ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಮುಂದೆ ಬಂದ ಕತಾರ್

New Delhi News: ಕತಾರ್ INDIAದಲ್ಲಿ 10 ಬಿಲಿಯನ್ ಡಾಲರ್​​ ಹೂಡಿಕೆ ಮಾಡಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, 2 ರಾಷ್ಟ್ರಗಳು...

REMOTE AUSTRALIAN BEACH:ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ 157 ಡಾಲ್ಫಿನ್ಗಳು ಸಾವು

Arthur River (Australia) News: 157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ...

MAHA KUMBHMELA:75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ

Lucknow (Uttar Pradesh) News: ಪವಿತ್ರ KUMBHMELA ಸ್ನಾನಕ್ಕಾಗಿ ಜೈಲು ಸಚಿವರ ಮೇಲ್ವಿಚಾರಣೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿ.ವಿ.ರಾಮಶಾಸ್ತ್ರಿ ತಿಳಿಸಿದ್ದಾರೆ. ಸಂಗಮದಿಂದ...