spot_img
spot_img

VILLAGE SHEDS DARKNESS : ಸ್ವಾತಂತ್ರ್ಯ ಬಂದ 77 ವರ್ಷಗಳ ಬಳಿಕ ಮೊದಲ ಬಾರಿಗೆ ವಿದ್ಯುತ್ ಬೆಳಕು ಕಂಡ ಈ ಗ್ರಾಮ!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Raipur (Chhattisgarh) News:

ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಛತ್ತೀಸ್​ಗಢದ  VILLAGE SHEDS DARKNESS ಕಂಡಿದೆ. ಇದು ಗ್ರಾಮಸ್ಥರ ಮೊಗದಲ್ಲಿ ಸಂತಸ ತಂದಿದೆ. ಹೌದು. ಇದು ಕಟು ಸತ್ಯ. ಛತ್ತೀಸ್‌ಗಢದ ಬಿಜಾಪುರ ಜಿಲ್ಲಾ ಕೇಂದ್ರದಿಂದ 50 ಕಿ.ಮೀ ದೂರದಲ್ಲಿರುವ ಹಳ್ಳಿ ಚಿಲ್ಕಪಲ್ಲಿಯು ಸ್ವಾತಂತ್ರ್ಯಾ ನಂತರ ಇದೇ ಮೊದಲು ವಿದ್ಯುತ್​ ಬೆಳಕು ಕಂಡಿದೆ.

ನಮ್ಮ ದೇಶಕ್ಕೆ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕರೂ, ಈ ಗ್ರಾಮಕ್ಕೆ ವಿದ್ಯುತ್​ ಸಂಪರ್ಕ ಸಿಕ್ಕಿದ್ದು, 2025 ರಲ್ಲಿ. ಅಂದರೆ, 77 ವರ್ಷಗಳಿಂದ ಈ ಹಳ್ಳಿಗರು ವಿದ್ಯುತ್​​ ಬೆಳಕನ್ನೇ ಕಂಡಿರಲಿಲ್ಲ!?ರಾಜ್ಯ ಸರ್ಕಾರ ಜಾರಿ ಮಾಡಿರುವ ‘ನಿಯದ್​ ನೆಲ್ಲನಾರ್’ ಯೋಜನೆ ಅಡಿ ಗ್ರಾಮಕ್ಕೆ ವಿದ್ಯುತ್​ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿನ ಜನರ ಮನೆಗಳಲ್ಲಿ ಈಗ ವಿದ್ಯುತ್ ಬೆಳಕು ಮೂಡಿದೆ.

Village in Naxal Affected Area:

ಬಿಜೆಪಿ ಸರ್ಕಾರವು ಕೂಡ ಮಾವೋವಾದಿ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದೆ. ಈ ಹಿನ್ನೆಲೆಯಲ್ಲಿ, ಚಿಲ್ಕಪಲ್ಲಿ ಸೇರಿದಂತೆ ಸುತ್ತಲಿನ ಆರು ಹಳ್ಳಿಗಳಿಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಚಿಲ್ಕಪಲ್ಲಿ ಗ್ರಾಮವು ನಕ್ಸಲ್​​ ಪೀಡಿತವಾಗಿತ್ತು.VILLAGE SHEDS DARKNESS ಕೆಲವು ವರ್ಷಗಳ ಹಿಂದಿನವರೆಗೂ ಗ್ರಾಮವು ಮಾವೋವಾದಿಗಳ ನಿಯಂತ್ರಣದಲ್ಲಿತ್ತು.

ಈ ಬಗ್ಗೆ ಮಾಹಿತಿ ನೀಡಿರುವ ಬಿಜಾಪುರ ಜಿಲ್ಲಾಧಿಕಾರಿ ಸಂಬಿತ್ ಮಿಶ್ರಾ, ನಿಯದ್​ ನೆಲ್ಲನಾರ್​ ಯೋಜನೆಯಡಿ ಚಿಲ್ಕಪಲ್ಲಿ ಸೇರಿ 6 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇವೆಲ್ಲವೂ ನಕ್ಸಲ್​​ ನಿಯಂತ್ರಣದಲ್ಲಿದ್ದ ಗ್ರಾಮಗಳು. ಮನೆಗಳಲ್ಲಿ ವಿದ್ಯುತ್​ ಬೆಳಕು ಕಂಡ ಜನರು ಸಂತಸಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಳ್ಳಿಗಳಿಗೆ ವಿದ್ಯುತ್​ ಸಂಪರ್ಕ ನೀಡಲಾಗುವುದು ಎಂದರು.

ಭದ್ರತಾ ಪಡೆಗಳು ನಕ್ಸಲ್​​ ನಿಗ್ರಹ ಕಾರ್ಯಾಚರಣೆ ಮತ್ತು ಸಿಆರ್‌ಪಿಎಫ್ ಪಡೆಗಳ ನಿಯೋಜನೆಯ ನಂತರ ಇದೀಗ ಪರಿಸ್ಥಿತಿ ಬದಲಾಗಿದೆ.ಚಿಲ್ಕಪಲ್ಲಿ ಗ್ರಾಮವು ನಕ್ಸಲ್​​ ಪೀಡಿತವಾಗಿತ್ತು. ಕೆಲವು ವರ್ಷಗಳ ಹಿಂದಿನವರೆಗೂ ಗ್ರಾಮವು ಮಾವೋವಾದಿಗಳ ನಿಯಂತ್ರಣದಲ್ಲಿತ್ತು. ಭದ್ರತಾ ಪಡೆಗಳು ನಕ್ಸಲ್​​ ನಿಗ್ರಹ ಕಾರ್ಯಾಚರಣೆ ಮತ್ತು ಸಿಆರ್‌ಪಿಎಫ್ ಪಡೆಗಳ ನಿಯೋಜನೆಯ ನಂತರ ಇದೀಗ ಪರಿಸ್ಥಿತಿ ಬದಲಾಗಿದೆ.

Our children can study even at night:

ಕಾಡಿನ ಅಂಚಿನಲ್ಲಿರುವ ಕಾರಣ, ಗ್ರಾಮಕ್ಕೆ ರಸ್ತೆ ಸಂಪರ್ಕ ಇರಲಿಲ್ಲ. ಹರಸಾಹಸ ಮಾಡಿ ವಿದ್ಯುತ್​ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕಾಗಿ ನಾಲ್ಕು ತಿಂಗಳು ಎಡೆಬಿಡದೆ ಕೆಲಸ ಮಾಡಿದ್ದೇವೆ. ಸರ್ಕಾರದ ಯೋಜನೆಯಡಿ ಈಗ ಊರಿಗೆ ಬೆಳಕು ಹರಿದಿದೆ ಎಂದು ಉದ್ಯೋಗಿಯೊಬ್ಬರು ತಿಳಿಸಿದರು.

“ಇಲ್ಲಿಯವರೆಗೆ ನಮ್ಮ ಹಳ್ಳಿ ವಿದ್ಯುತ್ ಕಂಡಿರಲಿಲ್ಲ. ಈಗ ಪ್ರತಿ ಮನೆಯಲ್ಲೂ ವಿದ್ಯುತ್ ದೀಪಗಳು ಬೆಳಗುತ್ತಿವೆ. ನಮ್ಮ ಮಕ್ಕಳು ಈಗ ರಾತ್ರಿಯಲ್ಲೂ ಓದಬಹುದು. ವಿದ್ಯುತ್​ ಬಳಸಿ ಅಡುಗೆ ಕೂಡ ಮಾಡಬಹುದು. ಟಿವಿ ನೋಡಬಹುದು. ರಾತ್ರಿಯಲ್ಲಿ ಭಯವಿಲ್ಲದೇ ಓಡಾಡಬಹುದು. ನಮ್ಮ ಬದುಕು ಬದಲಾಗಲಿದೆ ಎಂದು ಗ್ರಾಮದ ಬುಡಕಟ್ಟು ಮಹಿಳೆಯೊಬ್ಬರು ತಮ್ಮ ಸಂತಸವನ್ನು ಹಂಚಿಕೊಂಡರು.

ಇದನ್ನು ಓದಿರಿ : STATUES IN VIDHANA SOUDHA PREMISES : ರಾಜ್ಯದ ಶಕ್ತಿಸೌಧ, ಭವ್ಯ ವಿಧಾನಸೌಧದ ಆವರಣದಲ್ಲಿ ಮಹನೀಯರ ಪ್ರತಿಮೆಗಳು

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...