spot_img
spot_img

VIRAT KOHLI RANJI TROPHY : ವಿರಾಟ್ ಕೊಹ್ಲಿ ಔಟ್ ಮಾಡುವುದರ ಹಿಂದೆ ಬಸ್ ಚಾಲಕನ ಮಾಸ್ಟರ್ ಪ್ಲಾನ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

VIRAT KOHLI RANJI TROPHY​ ಪಡೆಯುತ್ತಿದ್ದಂತೆ ಹಿಮಾಂಶು ಸಾಂಗ್ವಾನ್​ ಕುರಿತು ಭಾರೀ ಚರ್ಚೆಯಾಗಿದ್ದವು. ವಿಶ್ವದ ಶ್ರೇಷ್ಠ ಬ್ಯಾಟರ್​ನನ್ನೇ ಔಟ್​ ಮಾಡಿದ ಹಿಮಾಂಶು ಸಾಂಗ್ವಾನ್​ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು.VIRAT KOHLI RANJI TROPHY ಇತ್ತೀಚೆಗೆ 12 ವರ್ಷಗಳ ನಂತರ ರಣಜಿ ಪಂದ್ಯವನ್ನು ಆಡಿದ್ದ ವಿರಾಟ್​ ಕೊಹ್ಲಿಗೆ ಕಹಿ ಅನುಭವವಾಗಿತ್ತು.

ರೈಲ್ವೇಸ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದಿದ್ದ ಕೊಹ್ಲಿ, ಹಿಮಾಂಶು ಸಾಂಗ್ವಾನ್​ ಎಸೆದ ಬೌಲಿಂಗ್​ನಲ್ಲಿ ಕ್ಲೀನ್​ ಬೋಲ್ಡ್​ ಆಗಿದ್ದರು. ಇದರೊಂದಿಗೆ ಕೇವಲ 6 ರನ್​ಗಳಿಗೆ ಪೆವಿಲಿಯನ್​ ಸೇರಿಕೊಂಡಿದ್ದರು.  ಇದೀಗ ಸ್ವತಃ ಸಾಂಗ್ವಾನ್​, ವಿರಾಟ್​ ಕೊಹ್ಲಿ ವಿಕೆಟ್​ VIRAT KOHLI RANJI TROPHY  ಕುರಿತು ಕೆಲ ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನನ್ನ ಸಹ ಆಟಗಾರರು ಕೊಹ್ಲಿ ಅವರ ವಿಕೆಟ್​ ಪಡೆಯುವ ಜವಾಬ್ದಾರಿ ನಿನ್ನ ಮೇಲಿದೆ. ಹೇಗಾದರೂ ಮಾಡಿ ಅವರನ್ನು ಔಟ್​ ಮಾಡಬೇಕು ಎಂದು ಹೇಳಿದರು. ಅಲ್ಲದೆ ಅವರ ವಿಕೆಟ್​ ಪಡೆಯುವುದು ಹೇಗೆ ಎಂದು ತಂಡದ ಸದಸ್ಯರೆಲ್ಲ ಚರ್ಚಿಸಿದೆವು.

ರಣಜಿ ಪಂದ್ಯ ಆರಂಭಕ್ಕೂ ಮುನ್ನವೇ ದೆಹಲಿ ಪರ ವಿರಾಟ್​ ಕೊಹ್ಲಿ ಮತ್ತು ರಿಷಭ್​ ಪಂತ್​ ಆಡುತ್ತಿದ್ದಾರೆ ಎಂದು ನಮ್ಮ ತಂಡಕ್ಕೆ ತಿಳಿಸಲಾಗಿತ್ತು. ಆದರೆ ಈ ಪಂದ್ಯವನ್ನು ನೇರ ಪ್ರಸಾರ ಮಾಡಲಾಗುತ್ತಿದೆ ಎಂಬುದು ಮೊದಲಿಗೆ ನಮಗ್ಯಾರಿಗೂ ಗೊತ್ತಿರಲಿಲ್ಲ. ಬಳಿಕ ಈ ಬಗ್ಗೆಯೂ ನಮಗೆ ತಿಳಿಸಲಾಯಿತು.

Bus Driver Advice:

VIRAT KOHLI RANJI TROPHY ನನಗೆ ನಮ್ಮ ಸಹ ಆಟಗಾರರು ಮಾತ್ರವಲ್ಲದೆ ಬಸ್​ ಚಾಲಕ ಕೂಡ ಸಲಹೆ ನೀಡಿದ್ದರು. ನಾವು ಬಸ್ಸಿನಲ್ಲಿ ಮೈದಾನಕ್ಕೆ ಪ್ರಯಾಣಿಸುತ್ತಿದ್ದಾಗ, ಬಸ್​ ಚಾಲಕ ನನ್ನೊಂದಿಗೆ ಮಾತನಾಡುತ್ತ, ನೀವು ವಿರಾಟ್​ ಕೊಹ್ಲಿಯನ್ನು ಔಟ್​ ಮಾಡಬೇಕಾದರೆ ನಾಲ್ಕನೇ ಅಥವಾ ಐದನೇ ಸ್ಟಂಪ್​ ಲೈನ್​ನಲ್ಲಿ ಬೌಲಿಂಗ್​ ಮಾಡಿ. ಆಗ ಅವರ ವಿಕೆಟ್​ ಪಡೆಯಬಹುದು ಎಂದಿದ್ದರು.ನಂತರ ಕೊಹ್ಲಿ ಅವರೇ ಸ್ವತಃ ನನ್ನನ್ನು ತಡೆದು ಕೈಕುಲುಕಿ, ನೀವು ತುಂಬಾ ಅದ್ಭುತವಾಗಿ ಬೌಲಿಂಗ್ ಮಾಡಿದ್ದೀರಿ.

ನಿಮ್ಮ ಬೌಲಿಂಗ್​ ಶೈಲಿಯೂ ಉತ್ತಮವಾಗಿದೆ ಎಂದು ಹುರಿದುಂಬಿಸಿದರು. ನಂತರ ಊಟದ ವಿರಾಮದ ವೇಳೆ ನಿಮ್ಮೊಂದಿಗೆ ಒಂದು ಫೋಟೋ ಬೇಕು ಎಂದು ಕೊಹ್ಲಿಗೆ ಕೇಳಿದೆ. ಅದಕ್ಕೆ ಅವರು ಅವಕಾಶ ಮಾಡಿಕೊಟ್ಟರು ಎಂದು ಹಿಮಾಂಶು ಸಾಂಗ್ವಾನ್​ ತಿಳಿಸಿದರು.

ಕೊನೆಯಲ್ಲಿ ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್​​ ಮಾಡಿ VIRAT KOHLI RANJI TROPHY ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದೆ ಎಂದು ಹಿಮಾಂಶು ಸಾಂಗ್ವಾನ್​ ತಿಳಿಸಿದರು. ವಿಕೆಟ್​ ಬಳಿಕ ಕೊಹ್ಲಿ ಪ್ರತಿಕ್ರಿಯೆ ಕುರಿತು ಮಾತನಾಡಿದ ಅವರು, ನಮ್ಮ ಇನ್ನಿಂಗ್ಸ್ ಮುಗಿದ ಬಳಿಕ ನಾನು ಡ್ರೆಸ್ಸಿಂಗ್ ರೂಂನತ್ತ ಹೋಗುತ್ತಿದ್ದೆ. ಈ ವೇಳೆ ಆಯುಷ್​ ಬಡೋನಿ ಮತ್ತು ವಿರಾಟ್​ ಜೊತೆಯಾಗಿ ಮೈದಾನಕ್ಕೆ ಬರುತ್ತಿದ್ದರು.

ಇದನ್ನು ಓದಿರಿ : Defence Budget 2025: Is There Scope For Improvement?

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

WOMAN DONATES 35 YEARS OF SAVINGS:35 ವರ್ಷದ ಉಳಿತಾಯದ ಹಣವನ್ನು ಶಿಕ್ಷಣ ಸಂಸ್ಥೆಗೆ ದಾನ ಮಾಡಿದ ಮಹಿಳೆ.

Tirupati (Andhra Pradesh) News: ರೇಣಿಗುಂಟದ ಸಿ.ಮೋಹನ ದಾನ ಮಾಡಿದ WOMAN. ಇವರು ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ನಿರ್ವಹಣೆ ವಲಯದಲ್ಲಿ ಕೊಸೊವೊ, ಅಲ್ಬೇನಿಯಾ, ಯೆಮೆನ್, ಸೌದಿ...

BOMB THREAT CALLS TO AIRLINES : 2024ರಲ್ಲಿ ವಿಮಾನಗಳಿಗೆ ಬಂದಿದ್ದು ಬರೋಬ್ಬರಿ 728 ಹುಸಿ ಬಾಂಬ್ ಕರೆ, ಇಂಡಿಗೋಗೆ ಅತಿ ಹೆಚ್ಚು

New Delhi News: 2024ರಲ್ಲಿ ಒಟ್ಟು 728 ಹುಸಿ ಬಾಂಬ್​ ಕರೆಗಳು ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಬಂದಿವೆ. ಅದರಲ್ಲಿ 714 ದೇಶಿಯ ವಿಮಾನ ಸಂಸ್ಥೆಗಳಿಗೆ ಬಂದಿವೆ....

HOUSE BURGLAR ARREST : ಪ್ರೊಪೆಷನಲ್ ಬಾಕ್ಸರ್ನಿಂದ 150ಕ್ಕೂ ಹೆಚ್ಚು ಮನೆಗಳ್ಳತನ

Bangalore News: HOUSE BURGLAR ARREST  ಬಾಕ್ಸಿಂಗ್ ಬಿಟ್ಟು ಕಳ್ಳತನಕ್ಕಿಳಿದು, 150ಕ್ಕೂ ಹೆಚ್ಚು ಮನೆಗೆ ಕನ್ನ ಹಾಕಿದ್ದ ಕುಖ್ಯಾತ ಅಂತಾರಾಜ್ಯ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.ಸೋಲ್ಹಾಪುರದ ಮಂಗಳವಾರ್...

IRAN SATELLITES : ದೇಶೀಯವಾಗಿ ತಯಾರಿಸಿದ 3 ಉಪಗ್ರಹಗಳನ್ನು ಅನಾವರಣಗೊಳಿಸಿದ ಇರಾನ್

Tehran News: IRAN SATELLITES ತಾನು ದೇಶೀಯವಾಗಿ ತಯಾರಿಸಿದ ಮೂರು ಉಪಗ್ರಹಗಳನ್ನು ಅನಾವರಣಗೊಳಿಸಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವ...