spot_img
spot_img

ವಾರಕ್ಕೆ 70 ಗಂಟೆ ದುಡಿಮೆ : ನಾರಾಯಣ ಮೂರ್ತಿ

spot_img
spot_img

Share post:

ಹೊಸದಿಲ್ಲಿ: ಭಾರತ ಅಭಿವೃದ್ಧಿ ಹೊಂದಬೇಕು ಎಂದರೆ ಇಂದಿನ ಯುವ ಜನತೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಲ್ಲಲು ಸಾಧ್ಯ ಎಂಬ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಸಮರ್ಥಿಸಿಕೊಂಡಿದ್ದಾರೆ. ತಾವು ಸತ್ತರೂ ಅಭಿಪ್ರಾಯ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.

ಭಾರತದ ಆರ್ಥಿಕ ಪ್ರಗತಿಗೆ ಕಠಿಣ ಶ್ರಮ ಹಾಗೂ ಸಮರ್ಪಣೆಯ ಸಂಸ್ಕೃತಿಯ ಅಗತ್ಯವಿದೆ ಎಂಬ ತಮ್ಮ ನಂಬಿಕೆಗೆ ಬದ್ಧರಾಗಿರುವುದಾಗಿ ಅವರು ಪ್ರತಿಪಾದಿಸಿದ್ದಾರೆ.

ಸಿಎನ್‌ಬಿಸಿ ಗ್ಲೋಬಲ್ ಲೀಡರ್‌ಶಿಪ್ ಶೃಂಗದಲ್ಲಿ ಮಾತನಾಡಿದ ನಾರಾಯಣ ಮೂರ್ತಿ, ಉದ್ಯೋಗದ ಅವಧಿ ವಿಸ್ತರಣೆ ಕುರಿತಾದ ತಮ್ಮ ಅಭಿಪ್ರಾಯವನ್ನು ಸಮರ್ಥಿಸಿಕೊಂಡರು.

“ಕ್ಷಮೆ ಇರಲಿ, ನಾನು ನನ್ನ ಅಭಿಪ್ರಾಯವನ್ನು ಬದಲಿಸಿಲ್ಲ. ಇದನ್ನು ನನ್ನ ಸಮಾಧಿಯವರೆಗೂ ನಾನು ಕೊಂಡೊಯ್ಯುತ್ತೇನೆ” ಎಂದು ಶೃಂಗಸಭೆಯಲ್ಲಿ ಅವರು ಶೆರೀನ್ ಭಾನ್ ಜತೆ ಸಂವಾದದ ವೇಳೆ, ವಾರದಲ್ಲಿ ಆರು ದಿನ ಕೆಲಸದ ಕುರಿತಾದ ಅಭಿಪ್ರಾಯವನ್ನು ಸಮರ್ಥಿಸಿಕೊಂಡರು.

ಭಾರತದ ಅಭಿವೃದ್ಧಿಯು ತ್ಯಾಗ ಹಾಗೂ ಪ್ರಯತ್ನದ ಮೇಲೆ ಅವಲಂಬಿತವಾಗಿದೆಯೇ ವಿನಾ, ಸುಖದಾಯಕ ಮತ್ತು ಆರಾಮದಾಯಕ ಜೀವನದ ಮೇಲೆ ಅಲ್ಲ. ಪ್ರಬಲ ದುಡಿಮೆ ಬದ್ಧತೆ ಇಲ್ಲದೆ ಜಾಗತಿಕ ಸ್ಪರ್ಧೆಗಳ ಜತೆ ಹೋರಾಡಲು ದೇಶ ಪರದಾಡಬೇಕಾಗುತ್ತದೆ ಎಂದರು.

“ಪ್ರಧಾನಿ ಮೋದಿ ಅಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿರುವಾಗ, ನಮ್ಮ ಸುತ್ತಲೂ ನಡೆಯುತ್ತಿರುವುದಕ್ಕೆ ನಮ್ಮ ಮೆಚ್ಚುಗೆ ತೋರಿಸಲು ಇರುವ ಏಕೈಕ ಮಾರ್ಗವೆಂದರೆ ಅಷ್ಟೇ ಶ್ರಮವಹಿಸಿ ದುಡಿಯುವುದು” ಎಂದು ತಿಳಿಸಿದರು.

ಕಠಿಣ ಪರಿಶ್ರಮಪಡುವುದು ವೈಯಕ್ತಿಕ ಆಯ್ಕೆ ಮಾತ್ರವಲ್ಲ; ಅದು ಭಾರತದಲ್ಲಿ ಬಹುತೇಕ ಸಹಾಯಧನವೂ ಸಿಗುವ ಸಾಕಷ್ಟು ಶಿಕ್ಷಣ ಪಡೆಯುವ ಅದೃಷ್ಟ ಪಡೆದವರ ಜವಾಬ್ದಾರಿ ಕೂಡ ಎಂದರು. ಕಾರ್ಯ ಬದ್ಧತೆಯು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ ಮತ್ತು ಅವಕಾಶಗಳನ್ನು ಪಡೆದವರ ಕರ್ತವ್ಯ ಕೂಡ ಎಂದು ಉಲ್ಲೇಖಿಸಿದರು.

ವಾರಕ್ಕೆ 70 ಗಂಟೆ ಕೆಲಸ ಮಾಡಲು ಯುವಕರು ಸಿದ್ಧರಾಗಿರಬೇಕು ಎಂಬ ನಾರಾಯಣ ಮೂರ್ತಿ ಅವರ ಹೇಳಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅನೇಕ ಕೈಗಾರಿಕೋದ್ಯಮಿಗಳು ಇದನ್ನು ಬೆಂಬಲಿಸಿದ್ದರು. ಆದರೆ, ಲಕ್ಷಾಂತರ ಮಂದಿ ಉದ್ಯೋಗಿಗಳು, ರಾಜಕಾರಣಿಗಳು ಮುಂತಾದವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಕಷ್ಟಪಟ್ಟು ಕೆಲಸ ಮಾಡುವುದು ರಾಷ್ಟ್ರೀಯ ಪ್ರಗತಿ ಸಾಧಿಸಲು ಬಹಳ ಅವಶ್ಯಕ ಎಂದ ಅವರು, ದಣಿವರಿಯದ ಪರಿಶ್ರಮದ ಬದ್ಧತೆಗಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉದಾಹರಣೆಯನ್ನು ನೀಡಿದರು.

ಕೆಲಸದ ನೀತಿಗಳು ಮತ್ತು ಉತ್ಪಾದಕತೆ ಕುರಿತಾಗಿ ಹಿಂದಿನಿಂದಲೂ ಮಾತನಾಡುತ್ತಿರುವ ಅವರು, 1986ರಲ್ಲಿ, ವಾರದ ಆರು ದಿನದ ಕೆಲಸದ ಅವಧಿಯಿಂದ ಐದು ದಿನಕ್ಕೆ ಇಳಿಸಿದ ಭಾರತ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದು ತಾವು ಎಂದಿಗೂ ಒಪ್ಪದ ಬದಲಾವಣೆ ಎಂದು ಹೇಳಿದರು.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...