spot_img
spot_img

55 ಲಕ್ಷ ಸದಸ್ಯರ ಮೊಬೈಲ್‌ಗಳಿಗೆ 5-10 ಸಾವಿರ ರೂ ಜಮೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಪುತ್ತೂರು: ಧರ್ಮಸ್ಥಳದ ಸ್ವಸಹಾಯ ಗುಂಪು ಮಹಿಳೆಯರ ಪಾಲಿಗೆ ಮತ್ತೊಂದು ಗೃಹಲಕ್ಷ್ಮಿಯಾಗಿದೆ ಎಂದು ಡಾ ಡಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ದೇಶದ ಸ್ವಸಹಾಯ ಗುಂಪುಗಳ ಚರಿತ್ರೆಯಲ್ಲೇ ಅತಿ ದೊಡ್ಡ ಲಾಭಾಂಶ ಎಂಬ ಕೀರ್ತಿ ತನ್ನದಾಗಿಸುವುದರ ಜತೆಗೆ ಬರೋಬ್ಬರಿ 650 ಕೋಟಿ ರೂ.ಗಳನ್ನು 55 ಲಕ್ಷ ಸದಸ್ಯರ ಖಾತೆಗಳಿಗೆ ಏಕಕಾಲದಲ್ಲಿ ಜಮೆ ಮಾಡುವ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಹೊಸ ದಾಖಲೆ ನಿರ್ಮಿಸಿದೆ.

1882 ರಲ್ಲಿ ಆರಂಭಗೊಂಡು 42 ವರ್ಷಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಹಳ್ಳಿಗಳನ್ನೂ ಮುಟ್ಟಿರುವ ಯೋಜನೆಯು 6 ಲಕ್ಷ ಬಲಿಷ್ಠ ಸ್ವಸಹಾಯ ಗುಂಪುಗಳನ್ನು ಕಟ್ಟಿ ಬೆಳೆಸಿದ್ದಲ್ಲದೆ, 24,500 ಕೋಟಿ ರೂ. ಸಾಲವನ್ನು ಬ್ಯಾಂಕ್‌ಗಳಿಂದ ಪಡೆದು ಸದಸ್ಯರಿಗೆ ನೀಡುವಲ್ಲಿ ಪ್ರತಿ ಖಾತ್ರಿದಾರನಾಗಿ ನಿಂತಿದೆ.

ಧರ್ಮಸ್ಥಳದಲ್ಲಿ ಗುರುವಾರ ನಡೆದ ಲಾಭಾಂಶ ವಿತರಣೆ ಸಮಾರಂಭದಲ್ಲಿಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆಯ್ದ ಗುಂಪುಗಳಿಗೆ ಸಾಂಕೇತಿಕ ಚೆಕ್‌ ವಿತರಿಸಿದರು.

ಸ್ವೀಕರಿಸಲು ಬಂದ ಸದಸ್ಯೆಯರು ಸ್ಥಳದಲ್ಲೇ ತಮ್ಮ ಮೊಬೈಲ್‌ಗೆ ಬಂದ ಹಣ ಜಮೆಯ ಸಂದೇಶವನ್ನು ಸಚಿವೆಗೆ ತೋರಿಸಿ ಖುಷಿ ಪಟ್ಟರು.

ಮೊಬೈಲ್‌ನ ಸಂದೇಶವನ್ನು ಸ್ವತಃ ಯೋಜನೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅನಿಲ್‌ ಕುಮಾರ್‌ ಎಸ್‌.ಎಸ್‌. ವೇದಿಕೆಯಿಂದಲೇ ಘೋಷಿಸಿದರಲ್ಲದೆ, ಡಿಜಿಟಲ್‌ ಇಂಡಿಯಾದ ಕ್ರಾಂತಿಕಾರಿ ಬೆಳವಣಿಗೆ ಹೊಂದಿದೆ.
ಧನ್ಯಶ್ರೀ ಸಂಘ ಬೆಳ್ತಂಗಡಿ, ಶ್ರೀನಿಧಿ ಸಂಘ ಕುಂದಾಪುರ, ಶ್ರೀ ಶಂಕರ ಸಂಘ ಹೊಸಪೇಟೆ, ಅಪೂರ್ವ ಸಂಘ ಆನೇಕಲ್‌, ಅಹದ್‌ ಸಂಘ ಖಾನಾಪುರ ಮತ್ತು ರೋಶನ್‌ ಸಂಘ ಹಾಸನ ಇವುಗಳ ಸದಸ್ಯರು ಸಮವಸ್ತ್ರದಲ್ಲಿಬಂದು ಸಚಿವೆಯಿಂದ ಸಾಂಕೇತಿಕ ಚೆಕ್‌ ಸ್ವೀಕರಿಸಿದರು.

ಹೆಣ್ಮಕ್ಕಳ ನಾಯಕತ್ವ ಹೇಗಿದೆ ಎಂಬುದನ್ನು ತಿಳಿಯಬೇಕಾದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೋಡಬೇಕು ಎಂಬ ಮಾತು ರೂಢಿಗೆ ಬಂದಿದೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಹೇಳಿದ್ದಾರೆ.

ಗ್ರಾಮೀಣ ಆರ್ಥಿಕತೆಯ ಸಬಲೀಕರಣ ಹಾದಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಮ್ಮರವಾಗಿ ಬೆಳೆದಿದೆ. ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಯೋಜನೆಗೆ ಪ್ರತಿ ವರ್ಷ ದಾನ ನೀಡುತ್ತಾರೆ. 6 ಬ್ಯಾಂಕ್‌ಗಳು ಯೋಜನೆಯೊಂದಿಗೆ ಸಹಭಾಗಿತ್ವ ಹೊಂದಿದ್ದು, ಅವೆಲ್ಲಕ್ಕೂ ಯೋಜನೆಯು ಬ್ಯಾಂಕಿಂಗ್‌ ಪ್ರತಿನಿಧಿ (ಬ್ಯಾಂಕಿಂಗ್‌ ಕರೆಸ್ಪಾಂಡೆಂಟ್‌-ಬಿ.ಸಿ.) ಯಾಗಿ ಕೆಲಸ ಮಾಡುತ್ತಿದೆ. ಸದಸ್ಯರಿಗೆ ಬ್ಯಾಂಕ್‌ಗಳು ಸುಲಭವಾಗಿ ಸಾಲ ನೀಡುತ್ತಿದ್ದರೆ, ಅದಕ್ಕೆ ಯೋಜನೆಯೇ ಗ್ಯಾರಂಟಿಯಾಗಿ ನಿಂತಿರುವುದು ಕಾರಣ ಅನಿಲ್‌ ಕುಮಾರ್‌ ಎಸ್‌.ಎಸ್‌., ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೇಳಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಸ್ವಾವಲಂಬನೆ, ಸುಸ್ಥಿರ ಅಭಿವೃದ್ಧಿ, ಸಾಮಾಜಿಕ- ಸಾಮುದಾಯಿಕ ಸಶಕ್ತೀಕರಣ ಮತ್ತು ಆರೋಗ್ಯ- ಶಿಕ್ಷಣ ಅಭಿವೃದ್ಧಿಯಲ್ಲಿ ದೊಡ್ಡ ಕೊಡುಗೆ ನೀಡಿದೆ.

ನಬಾರ್ಡ್‌ ಮತ್ತು ಧರ್ಮಸ್ಥಳ ಯೋಜನೆಗಳೆರಡೂ 1982ರಲ್ಲಿ ಹುಟ್ಟಿದ್ದು, ಅವಳಿ ಸಂಸ್ಥೆಗಳಂತಿವೆ. ಎಲ್ಲವನ್ನೂ ಸರಕಾರವೊಂದೇ ಮಾಡಲು ಅಸಾಧ್ಯ. ಅದಕ್ಕೊಂಡು ವಿಶ್ವಾಸಾರ್ಹ ಭಾಗೀದಾರ ಬೇಕು. ಇದನ್ನು ಧರ್ಮಸ್ಥಳ ಯೋಜನೆ ಈಡೇರಿಸಿದೆ ಶಾಜಿ ಕೆ.ವಿ., ಅಧ್ಯಕ್ಷ, ನಬಾರ್ಡ್‌, ಮುಂಬಯಿ ಹೇಳಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...