spot_img
spot_img

ಅಯೋಗ್ಯ-2 ಸಿನಿಮಾ ಅನೌನ್ಸ್ ಮತ್ತೆ ನೀನಾಸಂ ಸತೀಶ್-‌ ರಚಿತಾ ಮತ್ತೆ ಜೋಡಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ನಾಯಕ ನಟ ನೀನಾಸಂ ಸತೀಶ್ (Sathish Ninasam) ಹಾಗೂ ರಚಿತಾ ರಾಮ್ (Rachita Ram) ʼಅಯೋಗ್ಯʼ ಸಿನಿಮಾದ (Ayogya movie) ಸೀಕ್ವೆಲ್‌ಗಾಗಿ ಮತ್ತೆ ಒಂದಾಗುತ್ತಿದ್ದಾರೆ. ಡೈರೆಕ್ಟರ್ ಮಹೇಶ್ ʼಅಯೋಗ್ಯ- 2ʼ (Ayogya- 2) ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅದರಲ್ಲಿ ಈ ಜೋಡಿ ಮತ್ತೆ ಮೋಡಿ ಮಾಡಲಿದೆ.
ಸೂಪರ್‌ಹಿಟ್‌ ಮೂವಿ ʼಅಯೋಗ್ಯʼ ಸೀಕ್ವೆಲ್‌ಗೆ ʼಅಯೋಗ್ಯ- 2ʼ ಎಂಬ ಹೆಸರಿಡಲಾಗಿದೆ. ಯುವ ಡೈರೆಕ್ಟರ್ ಎಸ್. ಮಹೇಶ್, ಅಯೋಗ್ಯ ಚಿತ್ರದ ಮೂಲಕ ತಾವು ಒಳ್ಳೆ ಡೈರೆಕ್ಟರ್ ಎಂಬುದನ್ನು ಸಾಬೀತು ಮಾಡಿದ್ದಲ್ಲದೆ, ಸಿನಿಮಾ ಕೂಡ ಹಿಟ್‌ ಆಗಿತ್ತು. ನಂತರ ಅವರು ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಗೆ ʼಮದಗಜʼ ಫಿಲಂನಲ್ಲಿ ನಿರ್ದೇಶನ ಮಾಡಿದ್ದರು. ಇದೀಗ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅವರನ್ನು ಒಂದುಗೂಡಿಸಿ ಅಯೋಗ್ಯ 2 ಡೈರೆಕ್ಟ್ ಮಾಡುತ್ತಿದ್ದಾರೆ.
ಡಿಸೆಂಬರ್ 11ರಿಂದ ಅಯೋಗ್ಯ ಶೂಟಿಂಗ್ ಶುರುವಾಗಲಿದೆ. ಅಯೋಗ್ಯ ಸಿನಿಮಾ ಬಂದು 6 ವರ್ಷಗಳೇ ಕಳೆದಿವೆ. ಈ ಆರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಕೂಡ ಆಗಿದೆ. ಅದನ್ನು ಗಮನದಲ್ಲಿಟ್ಟುಕೊಂಡೇ ಅಯೋಗ್ಯ-2 ಸಿನಿಮಾ ಶುರು ಆಗಿದೆ. ಇವರ ಕನಸಿಗೆ ಎಂ. ಮುನೇಗೌಡ ಸಾಥ್ ಕೊಟ್ಟಿದ್ದು, ಚಿತ್ರ ನಿರ್ಮಾಣ ಮಾಡಲು ರೆಡಿ ಆಗಿದ್ದಾರೆ.
ಅಯೋಗ್ಯ- 2 ಸಿನಿಮಾದಲ್ಲಿ ಹಳ್ಳಿ ಸೊಗಡಗಿನ ಕಥೆ ಇತ್ತು. ಅಯೋಗ್ಯನಾಗಿದ್ದ ಹೀರೋ ಸಿದ್ದೇಗೌಡ ಹೇಗೆ ಯೋಗ್ಯ ಆಗುತ್ತಾನೆ ಎಂಬ ಕಥೆ ಇತ್ತು. ರಚಿತಾ ರಾಮ್ ಅದರಲ್ಲಿ ಸತೀಶ್‌ಗೆ ಸಾಥ್‌ ನೀಡಿದ್ದರು. ಅಯೋಗ್ಯ ಸೂಪರ್ ಹಿಟ್ ಆಗಿತ್ತು. ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೋಡಿಯ ಜನಕ್ಕೆ ಮೆಚ್ಚುಗೆ ಆಗಿತ್ತು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Big shock for Samantha fans:ಗುರುತು ಸಿಗದ ಹಾಗೆ ದಿಢೀರ್ ಬದಲಾಗಿ ಬಿಟ್ಟ ಸ್ಯಾಮ್!

Samantha News: ಟಾಲಿವುಡ್​ ಸ್ಟಾರ್​ ನಟಿ Samantha ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಹಲವು ವರ್ಷಗಳಿಂದ ಸಾರ್ವಜನಿಕ ಸಂಪರ್ಕದಿಂದಲೇ ದೂರ ಉಳಿದುಕೊಂಡಿದ್ದ Samantha ಇತ್ತೀಚೆಗೆ...

A bold decision in Tirupati after the Laddu dispute: ಹಿಂದೂಯೇತರರಿಗೆ TTD ಅಧ್ಯಕ್ಷ ಖಡಕ್ ಸೂಚನೆ

Transfer or Retirement Fix! News ತಿರುಪತಿ ಲಡ್ಡು ಪ್ರಸಾದದ ಅಪವಿತ್ರ ವಿವಾದ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. Laddu ವಿವಾದದ ಬಳಿಕ ತಿರುಮಲ ತಿರುಪತಿ...

SPIDER MAN SUITS:ರಿಸರ್ಚ್ ಟೀಂನಿಂದ ರೆಡಿಯಾಗ್ತಿದೆ ಸೂಪರ್ ಮ್ಯಾನ್ ಶೈಲಿಯ ಸೂಟ್!

Spider-Man Suits News: ಇವರು ಧರಿಸಿಕೊಂಡಿರುವ SUITS ಫುಲ್​ ಸ್ಟ್ರಾಂಗ್​ ಆಗಿರುತ್ತದೆ. ಬುಲೆಟ್​ ಸೇರಿದಂತೆ ಅನೇಕ ಆಯುಧಗಳಿಂದ ದಾಳಿ ಮಾಡಿದ್ರೂ ಸಹ ಆ SUITS​ನಿಂದ ಅವರು...

HUSBAND KILLS WIFE:ಅಮ್ಮನ ಮೃತದೇಹದ ಬಳಿ ಕಂದಮ್ಮನ ಆಕ್ರಂದನ

Belgaum News: ಮೀರಾಬಾಯಿ (25) ಎಂಬವರೇ KILLSಯಾದ ಮಹಿಳೆ. ಬಾಲಾಜಿ ಕಬಲಿ (35) ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮಹಾರಾಷ್ಟ್ರ ಮೂಲದ ದಂಪತಿ ಕಬ್ಬು...