ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ರೈತ ವೀರಪ್ಪ ತಲ್ಲೂರು ವಿಳ್ಯದೆಲೆ ಬೆಳೆದು ತಮ್ಮ ಬದುಕನ್ನು ಬದಲಾಯಿಸಿಕೊಂಡಿದ್ದಾರೆ.
1 ಎಕರೆಯಲ್ಲಿ ಸುಮಾರು 1100 ವೀಳ್ಯದೆಲೆ ಬಳ್ಳಿ ನೆಟ್ಟಿದ್ದಾರೆ. ನುಗ್ಗೆ, ಬೋರಲ, ಚೊಗಸಿ, ಗಿಡಗಳಿಗೆ ಬಳ್ಳಿ ಹಬ್ಬಿಸಿ ಸಮಗ್ರ ಕೃಷಿ ಮಾಡುವ ಮೂಲಕ ವರ್ಷಕ್ಕೆ ಅಂದಾಜು ಲಕ್ಷಾಂತರ ರೂಪಾಯಿ ಆದಾಯ ಗಳಿಸ್ತಿದ್ದಾರೆ.
ವೃದ್ಧ ರೈತ ತಮಗೆ ಇರುವ ಎರಡು ಎಕರೆ ಜಮೀನಿನಲ್ಲಿ 1 ಎಕರೆಯಲ್ಲಿ ವಿಳ್ಯದೆಲೆ ಬೆಳೆದಿದ್ದಾರೆ. ನರೇಗಾ ಯೋಜನೆಯಡಿ ವೀಳ್ಯದೆಲೆ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢ ಆಗುವ ಜೊತೆಗೆ ಇತರರಿಗೆ ಮಾದರಿಯಾಗಿದ್ದಾರೆ.
ಸಾಮಾನ್ಯವಾಗಿ ವೀಳ್ಯದೆಲೆ ಬೆಳೆಯನ್ನ ಕೆಂಪು ಮಣ್ಣಿನಲ್ಲಿ ಬೆಳೆಯುತ್ತಾರೆ. ಅದರಲ್ಲೂ ರೋಣ ಭಾಗದಲ್ಲಿ ಈ ಬೆಳೆ ಕಾಣಸಿಗೋದಿಲ್ಲ. ಬಹುತೇಕ ಗದಗ ಜಿಲ್ಲೆಯಲ್ಲಿ ಒಣಬೇಸಾಯ ಪದ್ದತಿಯಲ್ಲಿ ಬೆಳೆ ಬಳೆಯಲಾಗುತ್ತೆ. ಈ ರೈತ ಬೋರ್ವೆಲ್ ಕೊರಸಿ ಕೇವಲ 2 ಇಂಚು ನೀರಿನಲ್ಲಿ ನೀರಾವರಿ ಮಾಡ್ತಿದ್ದಾರೆ. ಪವಾಡವೆಂಬಂತೆ ವೀಳ್ಯದೆಲೆ ಸಹ ಉತ್ತಮ ಇಳುವರಿ ಬಂದಿದ್ದು ತಿಂಗಳಿಗೆ 15 ರಿಂದ 20 ಸಾವಿರ ರೂ ಆದಾಯದ ನಿರೀಕ್ಷೆ ಮಾಡ್ತಿದ್ದಾರೆ.