spot_img
spot_img

20 ವರ್ಷಗಳಿಂದ ಭಕ್ತರಿಗೆ ಅನ್ನಪ್ರಸಾದ ಬಡಿಸುತ್ತಾ ಖುಷಿ ಕಾಣುವ ಶ್ರೀಕೃಷ್ಣ ಭಕ್ತ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಉಡುಪಿ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತಿದೆ. ಅದರಂತೆ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಲ್ಲೊಬ್ಬ ವ್ಯಕ್ತಿಯ ಸೇವೆಗೆ ಎಲ್ಲರೂ ಅಚ್ಚರಿಪಡಬೇಕು. ಅಂದಹಾಗೆ ಇವರ ಹೆಸರು ಪ್ರಭಾಕರ ಉಳ್ಳೂರು. ವಯಸ್ಸು 55 ವರ್ಷ. ಕಳೆದ 20 ವರ್ಷಗಳಿಂದಲೂ ಶ್ರೀಕೃಷ್ಣನ ಸೇವೆಯಲ್ಲಿಯೇ ನಿರತರಾಗಿದ್ದಾರೆ.

ಸದಾ ಶ್ರೀಕೃಷ್ಣ, ಶ್ರೀಕೃಷ್ಣ ಎನ್ನುತ್ತಿರುವ ಇವರು ಅಷ್ಟಮಠಗಳ ಸ್ವಾಮೀಜಿಗಳಿಗೂ ಪ್ರಿಯರಾದ ವ್ಯಕ್ತಿ. ದೇವರ ದರ್ಶನದ ಬಳಿಕ ಭಕ್ತರು, ಪ್ರವಾಸಿಗರು ಅನ್ನಬ್ರಹ್ಮನಲ್ಲಿಗೆ ತೆರಳಿದರೆ ಇವರನ್ನು ನೋಡಲು ಸಾಧ್ಯ.

ಶ್ರೀಕೃಷ್ಣನಿಗೆ ಹಾಲು ಅಭಿಷೇಕ ಬಹಳ ಪ್ರಮುಖವಾದದ್ದು. ಇದಕ್ಕಾಗಿ ಪ್ರಭಾಕರ ಉಳ್ಳೂರು ಅವರು ಅಂದಿನ ದಿನ ಹಾಗೂ ಉಳಿದ ದಿನಗಳಲ್ಲಿ ಮುಂಜಾನೆ 3 ಗಂಟೆಗೆ ಎದ್ದು ಮಠದ ಪ್ರತಿಯೊಂದು ಗೋವುಗಳ ಹಾಲು ಕರೆಯುತ್ತಾರೆ. ಅಲ್ಲದೇ, ಅಭಿಷೇಕಕ್ಕೆ ಸಿದ್ಧತೆ ಮಾಡಿಕೊಟ್ಟು ಪೂಜೆಯಲ್ಲಿಯೂ ಪಾಲ್ಗೊಳ್ಳುತ್ತಾರೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಕಳೆದ 20 ವರ್ಷಗಳಿಂದ ಭಕ್ತರಿಗೆ ಊಟ ಬಡಿಸುತ್ತಾ ಭಗವಂತನ ಸೇವೆಯಲ್ಲಿ ತೊಡಗಿರುವ ಪ್ರಭಾಕರ ಉಳ್ಳೂರು

ಇವರ ಸ್ನೇಹಿತ ಜಿ.ರಾಘವೇಂದ್ರ ಆಚಾರ್ಯ ಪ್ರತಿಕ್ರಿಯಿಸಿ, ”ಪ್ರಭಾಕರ ಉಳ್ಳೂರು ಅವರು ನನಗೆ ಪರಿಚಯವಾಗಿ 8-10 ವರ್ಷಗಳಾಗಿದೆ. ಸುಮಾರು 22 ವರ್ಷದಿಂದ ಇಲ್ಲಿಯೇ ಇದ್ದಾರೆ. ಭಕ್ತರಿಗೆ ಬೆಳಗ್ಗಿನ ಉಪಹಾರ, ಸಂಜೆ ಹಾಗೂ ರಾತ್ರಿ ಊಟ ಬಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

55 ವರ್ಷಗಳಾದರೂ ತುಂಬಾ ಆ್ಯಕ್ಟೀವ್ ಆಗಿ ಕೆಲಸ ಮಾಡುತ್ತಿರುತ್ತಾರೆ. ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿಯಲ್ಲಿ ವೇಷ ಧರಿಸಿ, ಜನರು ನೀಡಿದ ಹಣವನ್ನು ಅನಾಥ ಮಕ್ಕಳಿಗೆ, ಗೋ ಸೇವೆಗೆ ನೀಡುತ್ತಾರೆ” ಎಂದು ತಿಳಿಸಿದರು.

”ಮುಂಜಾನೆ 3 ಗಂಟೆಗೆ ಎದ್ದು ಮಠದ ಗೋವುಗಳ ಹಾಲು ಕರೆದು ಶ್ರೀಕೃಷ್ಣನ ಅಭಿಷೇಕಕ್ಕೆ ಸಿದ್ಧತೆ ಮಾಡಿಕೊಡುತ್ತೇನೆ. ದಿನನಿತ್ಯ ಬಂದಂತಹ ಭಕ್ತಾಧಿಗಳಿಗೆ ಬೆಳಿಗ್ಗೆ 8 ಗಂಟೆಗೆ ತಿಂಡಿ ನೀಡುವುದು ಹಾಗೂ ಮಧ್ಯಾಹ್ನ, ಸಂಜೆ, ರಾತ್ರಿ ವೇಳೆಯಲ್ಲಿ ಅನ್ನಪ್ರಸಾದ ಬಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇನೆ.

ಏಕಾದಶಿಯಾಗಲಿ, ಮಠದವರು ಯಾರೇ ಕೆಲಸಕ್ಕೆ ಕರೆದರೂ ನಾನು ಹೋಗುತ್ತೇನೆ. ಅಷ್ಟಮಠಗಳ ಸ್ವಾಮೀಜಿಯವರಿಗೆ ನನ್ನ ಮೇಲೆ ಪ್ರೀತಿ, ವಿಶ್ವಾಸವಿದೆ” ಎಂದು ಪ್ರಭಾಕರ ಉಳ್ಳೂರು ಹೇಳಿದರು.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SPECIAL VILLAGE SAGA : 20 ಕುಟುಂಬ, 60 ಜನರಿರುವ ಒಂದು ಹಳ್ಳಿಯ ಕಥೆ: ಸ್ವಾವಲಂಬನೆಯ ಯಶೋಗಾಥೆ

Nalgonda, Telangana News: ಮೂಡು ಗುಡಿಸೆಲಾ ತಾಂಡಾ ಅಂದರೆ ಮೂರು ಗುಡಿಸಲುಗಳ ತಾಂಡಾ ಎಂಬ ಈ ವಿಶಿಷ್ಟ ತಾಂಡಾವನ್ನು 70 ವರ್ಷಗಳ ಹಿಂದೆ ನೇನಾವತ್ ಚಂದ್ರು...

ULLAL BANK ROBBERY : ಎಲ್ಲ ಟೋಲ್ಗಳಲ್ಲಿ ತಪಾಸಣೆ ಮಾಡುವಂತೆ ಸಿಎಂ ಸೂಚನೆ

Mangalore News: ಕೋಟೆಕಾರು ULLAL BANK ROBBERY ಪ್ರಕರಣ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಿಎಂ, ಎಲ್ಲ ಟೋಲ್​ಗಳಲ್ಲಿ ತಪಾಸಣೆ ಹಾಗೂ ಕೇರಳ ಗಡಿಯಲ್ಲಿನ ಸಿಸಿ...

HIGH COURT : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ

Bangalore News: HIGH COURT ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ...

SAIF ALI KHAN : ಸೈಫ್ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್ ತಂಡಗಳ ರಚನೆ

Mumbai (Maharashtra) News: ಬಾಲಿವುಡ್​​ ನಟ SAIF ಅಲಿ ಖಾನ್ ಅವರ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.ಈ ಘಟನೆ ಬಾಲಿವುಡ್ ಮಾತ್ರವಲ್ಲದೇ...