spot_img
spot_img

AMRAVATI MUSIC CONCERT : ಸತತ 401 ಗಂಟೆ, ಹವ್ಯಾಸಿ ಗಾಯಕರಿಂದ 5000 ಹಾಡಿನ ಗಾಯನ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Amravati, Maharashtra News:

ಸಂಗೀತ ಪ್ರಿಯರು ಮತ್ತು ಹವ್ಯಾಸಿ ಸಂಗೀತಗಾರರಿಗಾಗಿ ಮಹಾರಾಷ್ಟ್ರದ AMRAVATI MUSIC CONCERT ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದು ಇದೀಗ ದಾಖಲೆ ಬರೆದಿದೆ. ಈ ಸಂಗೀತ ರಸಸಂಜೆಯಲ್ಲಿ ಐದೂವರೆ ಸಾವಿರಕ್ಕೂ ಹೆಚ್ಚು ಹಾಡು ಮತ್ತು ಎರಡು ಮತ್ತು ಮೂರು ನಿಮಿಷದ ನೃತ್ಯ ಕಾರ್ಯಕ್ರಮಗಳು ಪ್ರದರ್ಶನವಾದವು.

ಸತತ 18 ದಿನಗಳ ಕಾಲ ನಡೆದ ಈ ಕಾರ್ಯಕ್ರಮ ಸಂಗೀತ ಪ್ರಿಯರಿಗೆ ಮುದ ಅನುಭವ ನೀಡಿತು. ಈ ಸಂಗೀತ ರಸಸಂಜೆಯಲ್ಲಿ ಐದೂವರೆ ಸಾವಿರಕ್ಕೂ ಹೆಚ್ಚು ಹಾಡು, ಎರಡು ಮತ್ತು ಮೂರು ನಿಮಿಷದ ನೃತ್ಯಗಳು ಪ್ರದರ್ಶನಗೊಂಡವು. ಈ ಕುರಿತು ಮಾತನಾಡಿರುವ ದೆಹಲಿ ವರ್ಲ್ಡ್​​ ರೆಕಾರ್ಡ್​ನ ಸಿಇಒ ಪವನ್​ ಸೊಳಂಕಿ, ಇಂಜಿನಿರ್​ ಭವನದಲ್ಲಿ 401 ಗಂಟೆಗಳ ಕಾಲ ನಡೆದ ಈ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರು ತಮ್ಮ ಹಾಡುಗಳ ಮೂಲಕ ಮನರಂಜನೆ ನೀಡಿದರು. ಕಾರ್ಯಕ್ರಮಕ್ಕೆ ಅಮರಾವತಿ ಶಾಸಕ ಸುಲಭ ಖೊಡ್ಕೆ ಕೂಡ ಪ್ರೋತ್ಸಾಹ ನೀಡಿದರು ಎಂದು ಹೇಳಿದರು.

Colorful Music Festival:

ಆಸಕ್ತಿಕರ ಅಂಶ ಎಂದರೆ, ಇವರೆಲ್ಲಾ ಬೇರೆ ಬೇರೆ ಕ್ಷೇತ್ರದಲ್ಲಿ ವೃತ್ತಿ ಕಂಡುಕೊಂಡವರಾಗಿದ್ದಾರೆ. ಪೊಲೀಸರು, ವಿವಿಧ ಸಂಸ್ಥೆ ಉದ್ಯೋಗಿಗಳು ಮುನ್ಸಿಪಲ್​ ಉಪ ಆಯುಕ್ತರು, ಶಿಕ್ಷಕರು, ಜಿಲ್ಲಾ ಪರಿಷದ್​ ಅಧಿಕಾರಿಗಳು, ಡಿಸಿ AMRAVATI MUSIC CONCERT ಉದ್ಯೋಗಿಗಳು ಹೀಗೆ ನಾನಾ ಕ್ಷೇತ್ರದವರು ಕೂಡ ಈ ಸಂಗೀತ ಕಾರ್ಯಕ್ರಮದಲ್ಲಿ ಕಂಠಸಿರಿಯನ್ನು ಪ್ರದರ್ಶಿಸಿದರು.

ಈ ದಾಖಲೆ ನಿರ್ಮಿತ ವಿಶೇಷ ಕಾರ್ಯಕ್ರಮವನ್ನು ಅಮರಾವತಿ ನಗರದ ಹವ್ಯಾಸಿ ಸಂಗೀತ ಸಂಸ್ಥೆ ಸ್ವರಾಜ್ಯ ಎಂಟರ್​​ಟೈನ್​ಮೆಂಟ್​ ಜನವರಿ 4 ರಂದು ಆರಂಭಿಸಿತ್ತು. ನಿರಂತರ ಕಾರ್ಯಕ್ರಮದಲ್ಲಿ ಭಾಗಿಯಾದ ನಗರದ ಹವ್ಯಾಸಿ ಸಂಗೀತಗಾರರು ಮತ್ತು ಕಲಾವಿದರು ಸತತ ಸಂಗೀತದ ಮೂಲಕ ದಾಖಲೆ ನಿರ್ಮಿಸಿದರು. ಕಾರ್ಯಕ್ರಮದಲ್ಲಿ ಎರಡೂವರೆ ಯಿಂದ ಮೂರು ಸಾವಿರ ಹವ್ಯಾಸಿ ಸಂಗೀತಗಾರರು ಭಾಗಿಯಾಗಿ ಗಮನ ಸೆಳೆದರು.

ದಾಖಲೆ ನಿರ್ಮಾಣದ ಗುರಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನಾನ್​ ಸ್ಟಾಪ್​ ಆಗಿ ಸಂಗೀತ ಗಾಯನ ನಡೆದಿದೆ. ಹಳೆ ಹೊಸ , ಸಿನಿಮಾ, ಗಜಲ್​, ದೇವರ ಗೀತೆ, ಪ್ರೀತಿ ಹೀಗೆ ಎಲ್ಲ ವಿಧದ ಹಾಡುಗಳನ್ನು ಹಾಡಲಾಯಿತು. ದಾಖಲೆ ನಿರ್ಮಾಣದ ಗುರಿ ಹೊಂದಿದ ಹಿನ್ನೆಲೆ ಸಂಘಟಕರು ವೇದಿಕೆಯನ್ನು ಖಾಲಿ ಬಿಡಬಾರದು ಎಂದು ನಿರ್ಧರಿಸಿದ್ದರು. ಈ ಕಾರಣದಿಂದಾಗಿ 24 ಗಂಟೆಗಳಲ್ಲಿ ಕೇವಲ 21 ನಿಮಿಷದ ವಿರಾಮವನ್ನು ಮಾತ್ರ ನೀಡಲಾಗಿತ್ತು.

ಕಲಾವಿದರೊಬ್ಬರ ಪ್ರದರ್ಶನ ಮುಗಿಯುತ್ತಿದ್ದಂತೆ ಮತ್ತೊಬ್ಬ ಕಲಾವಿದರು ವೇದಿಕೆಗೆ ಬರಲು ಅಣಿಯಾಗುತ್ತಿದ್ದರು. ಈ ವೇಳೆ, ಕೇವಲ ಅರ್ಧ ನಿಮಿಷದ ವಿರಾಮ ನೀಡಲಾಗುತ್ತಿತ್ತು. ಹೀಗೆ 24 ಗಂಟೆಯಲ್ಲಿ ಕೇವಲ 21 ನಿಮಿಷದ ಬ್ರೇಕ್​ ನೀಡಲಾಗಿದೆ ಎಂದು ಸ್ವರಾಜ್ಯ ಎಂಟರ್​ಟೈನಮೆಂಟ್​ ಮುಖ್ಯಸ್ಥ ದಿನಕರ್​ ತ್ಯಾಡೆ ತಿಳಿಸಿದ್ದಾರೆ.

ಇದನ್ನು ಓದಿರಿ : BIGG BOSS KANNADA 11 : ಯಾರಾಗಲಿದ್ದಾರೆ ಬಿಗ್ ಬಾಸ್ ವಿನ್ನರ್?

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GBS SYMPTOMS PREVENTIVE MEASURES: ಶಿಶುಗಳಲ್ಲಿ ಕಂಡುಬರುವ ಈ ವೈರಸ್ ಲಕ್ಷಣಗಳೇನು?

Guntur, Andhra Pradesh News: ಪ್ರಸ್ತುತ ರಾಜ್ಯಾದ್ಯಂತ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಾಂಕ್ರಾಮಿಕವಲ್ಲದಿದ್ದರೂ, ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇತರ ಸೋಂಕುಗಳಿರುವ ಜನರಲ್ಲಿ...

INDIA AND QATAR SIGNED AN AGREEMENT:ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಮುಂದೆ ಬಂದ ಕತಾರ್

New Delhi News: ಕತಾರ್ INDIAದಲ್ಲಿ 10 ಬಿಲಿಯನ್ ಡಾಲರ್​​ ಹೂಡಿಕೆ ಮಾಡಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, 2 ರಾಷ್ಟ್ರಗಳು...

REMOTE AUSTRALIAN BEACH:ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ 157 ಡಾಲ್ಫಿನ್ಗಳು ಸಾವು

Arthur River (Australia) News: 157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ...

MAHA KUMBHMELA:75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ

Lucknow (Uttar Pradesh) News: ಪವಿತ್ರ KUMBHMELA ಸ್ನಾನಕ್ಕಾಗಿ ಜೈಲು ಸಚಿವರ ಮೇಲ್ವಿಚಾರಣೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿ.ವಿ.ರಾಮಶಾಸ್ತ್ರಿ ತಿಳಿಸಿದ್ದಾರೆ. ಸಂಗಮದಿಂದ...