spot_img
spot_img

BIGG BOSS KANNADA 11 : ಯಾರಾಗಲಿದ್ದಾರೆ ಬಿಗ್ ಬಾಸ್ ವಿನ್ನರ್?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bigg Boss News :

ಆರು ಮಂದಿ ಫಿನಾಲೆ ವಾರ ತಲುಪಿದ್ದು, ಟ್ರೋಫಿಯನ್ನು ಯಾರು ಎತ್ತಿ ಹಿಡಿಯಲಿದ್ದಾರೆ ಅನ್ನೋ ಕುತೂಹಲ ಕನ್ನಡಿಗರಲ್ಲಿ ಮನೆ ಮಾಡಿದೆ.​​ಅನ್ನೋದೇ ಒಂದು ಎಮೋಷನ್​​. ಬಹು ಭಾಷೆಗಳಲ್ಲಿ ಪ್ರಸಾರ ಕಾಣುವ ಅತ್ಯಂತ ಜನಪ್ರಿಯ ಕಾರ್ಯಕ್ರಮವಿದು. ಹಿಂದಿ ಭಾಷೆಯ BIGG BOSS ಕಳೆದ ವಾರಾಂತ್ಯ ಪೂರ್ಣಗೊಂಡಿದೆ.​ ಈ ವಾರಾಂತ್ಯ ಕನ್ನಡ BIGG BOSS​ನ ಗ್ರ್ಯಾಂಡ್​ ಫಿನಾಲೆ ಜರುಗಲಿದೆ.

ಈ ವಾರಾಂತ್ಯ BIGG BOSS​ ಕನ್ನಡ ಸೀಸನ್​ 11ರ ಗ್ರ್ಯಾಂಡ್​ ಫಿನಾಲೆ ನಡೆಯಲಿದ್ದು, ವಿಜೇತರು ಯಾರೆಂಬ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ.BIGG BOSS​​​ ತನ್ನದೇ ಆದ ದೊಡ್ಡ ಫ್ಯಾನ್​ ಬೇಸ್​ ಹೊಂದಿದೆ. ಕನ್ನಡದ BIGG BOSS​ ಅನ್ನು ಅಭಿನಯ ಚಕ್ರವರ್ತಿ ಸುದೀಪ್​​ ನಡೆಸಿಕೊಟ್ಟರೆ, ಹಿಂದಿ BIGG BOSS​ ಅನ್ನು ಬಾಲಿವುಡ್​ ಸ್ಟಾರ್​​ ಸಲ್ಮಾನ್​ ಖಾನ್​​ ನಡೆಸಿಕೊಡುತ್ತಾರೆ. ಹಿಂದಿ ಆವೃತ್ತಿಯ 18ನೇ ಸೀಸನ್​​ನ ಗ್ರ್ಯಾಂಡ್ ಫಿನಾಲೆ ಜನವರಿ 19, ಭಾನುವಾರ ನಡೆಯಿತು.

Bigg Boss Hindi Winners: ನಂತರದ ಸ್ಥಾನಗಳನ್ನು ಕ್ರಮವಾಗಿ ರಜತ್ ದಲಾಲ್, ಅವಿನಾಶ್ ಮಿಶ್ರಾ, ಚುಮ್ ದರಂಗ್ ಮತ್ತು ಈಶಾ ಸಿಂಗ್ ಪಡೆದುಕೊಂಡರು.ಕರಣ್ ವೀರ್ ಮೆಹ್ರಾ BIGG BOSS​ ಹಿಂದಿ 18ರ ವಿಜೇತರಾಗಿ ಹೊರಹೊಮ್ಮಿದ್ರೆ, ವಿವಿಯನ್ ಡಿಸೆನಾ ರನ್ನರ್​ ಅಪ್​ ಆದ್ರು.

Kannada Bigg Boss Finalists : 

ಮೋಕ್ಷಿತಾ.

ಮಂಜು.

ರಜತ್ ಕಿಶನ್​​​.

ಹನುಮಂತು.

ತ್ರಿವಿಕ್ರಮ್​.

ಭವ್ಯಾ.

Hanuman : ಹಲವು ಬಾರಿ ನಿರೂಪಕ ಸುದೀಪ್​​ ಅವರ ಪ್ರಶಂಸೆಗೂ ಪಾತ್ರರಾಗಿ ಸದ್ದು ಮಾಡಿದ್ದಾರೆ. ಎಲ್ಲೂ ಮೋಸ ಮಾಡದೇ ಆಡುತ್ತಾ ಬಂದ ಇವರ ಆಟಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಧನರಾಜ್​​ ಆಚಾರ್​ ಜೊತೆಗಿನ ನಿಷ್ಕಲ್ಮಶ ಸ್ನೇಹ ಈ BIGG BOSS​ ಪಯಣದಲ್ಲಿ ಸಖತ್​ ಹೈಲೆಟ್ ಆಗಿದೆ​ ಅನ್ನಬಹುದು.

ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಸ್ಪರ್ಧಿ. ತಮ್ಮ ಮುಗ್ಧತೆಯಿಂದಲೇ ಜನಪ್ರಿಯರಾಗಿದ್ದಾರೆ. ಟಿಕೆಟ್​ ಟು ಫಿನಾಲೆ ಟಾಸ್ಕ್​ನಲ್ಲಿ ಗೆದ್ದು, ಫಿನಾಲೆ ವಾರಕ್ಕೆ ಹೆಜ್ಜೆಯಿಟ್ಟ ಮೊದಲ ಸ್ಪರ್ಧಿ. ಮಾತು ಕಡಿಮೆ ಆದ್ರೂ, ಮಾತಿನಲ್ಲೊಂದು ತೂಕ ಇರುತ್ತೆ ಅನ್ನೋದು ನೋಡುಗರ ಅಭಿಪ್ರಾಯ.

Mokshita : ಗೌತಮಿ ಮತ್ತು ಮಂಜು ಅವರ ಜೊತೆಗಿನ ಸ್ನೇಹ ಕನ್ನಡಿಗರ ಗಮನ ಸೆಳೆದಿದೆ. ಕೆಲವೇ ವಾರಗಳಲ್ಲಿ ಎಲಿಮಿನೇಷನ್​​ ಬಾಗಿಲಿನವರೆಗೂ ಹೋಗಿಬಂದ ಇವರು, ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟ ಮೊದಲ ಮೂರು ಸ್ಪರ್ಧಿಗಳಲೊಬ್ಬರಾದರು. ಎಲಿಮಿನೇಷನ್​​ ಕದ ತಟ್ಟಿದ ಬೆನ್ನಲ್ಲೇ ತಮ್ಮ ಆಟದಲ್ಲಿ ತೀವ್ರ ಬದಲಾವಣೆ ಮಾಡಿಕೊಂಡರು. ಫ್ರೆಂಡ್​ಶಿಪ್​, ಕಂಫರ್ಟ್​ ಝೋನ್​ನಿಂದ ಹೊರಬಂದು ಏಕಾಂಗಿಯಾಗಿ ಹೋರಾಡಿದ ಇವರ ಆಟಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಸೀಸನ್​ 11ರ ಟಫೆಸ್ಟ್ ಕಂಟಸ್ಟೆಂಟ್​​. ಇಡೀ BIGG BOSS​​ ಪಯಣದಲ್ಲಿ ಟಫ್​ ಫೈಟರ್​ ಆಗಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಬಹಳ ಶಾಂತಸ್ವರೂಪಿಯಾಗಿ, ಹೆಚ್ಚಾಗಿ ಮಂಜು ಮತ್ತು ಗೌತಮಿ ಜೊತೆಯೇ ಕಾಣಿಸಿಕೊಂಡ ಇವರು ಕೆಲವೇ ವಾರಗಳಲ್ಲಿ ಏಕಾಂಗಿಯಾಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಶುರು ಮಾಡಿದ್ರು. ಟಾಸ್ಕ್, ಮನರಂಜನೆ ಹೀಗೆ ಎಲ್ಲಾ ವಿಚಾರಗಳಲ್ಲೂ ಎತ್ತಿದ ಕೈ ಇವರದ್ದು.

Trivikram : ಭವ್ಯಾ ಜೊತೆಗಿನ ಸ್ನೇಹ ಕೂಡಾ ವ್ಯಾಪಕವಾಗಿ ಗಮನ ಸೆಳೆದಿದೆ. ವಿಜೇತರು ಯಾರಾಗಬಹುದು ಎಂಬ ಊಹೆಯಲ್ಲಿ ತ್ರಿವಿಕ್ರಮ್​ ಮತ್ತು ಹನುಮಂತು ಅವರ ಹೆಸರು ಹೆಚ್ಚಾಗಿ ಕೇಳಿ ಬಂದಿದೆ. ಆರಂಭದಿಂದಲೂ ಟಫೆಸ್ಟ್ ಕಂಟಸ್ಟೆಂಟ್ ಎಂಬ ಕೀರ್ತಿಗೆ ಪಾತ್ರರಾದವರು. ಹೆಚ್ಚು ಮಾತನಾಡದೇ ಜನಪ್ರಿಯತೆ ಸಂಪಾದಿಸಿದವರು. ಆಟಕ್ಕೆ ನಿಂತ್ರೆ ಎದುರಾಳಿಗಳ ಎದೆಯಲ್ಲಿ ಭಯ ಹುಟ್ಟುತ್ತಿತ್ತು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿವೆ.

ugram manju: ಆದರೆ ಬರುಬರುತ್ತಾ ಮಂಜು ಮಂಕಾಗಿದ್ದು ಮಾತ್ರ ಅಭಿಮಾನಿಗಳಲ್ಲಿ ಕೊಂಚ ಬೇಸರ ತರಿಸಿತ್ತು. ಸುದೀಪ್​ ಕೂಡಾ ಈ ಬಗ್ಗೆ ಬುದ್ಧಿವಾದ ಹೇಳಿದ್ದರು. ಟಾಸ್ಕ್​, ಎಂಟರ್​ಟೈನ್ಮೆಂಟ್​ನಲ್ಲಿ ತಮ್ಮ ಕೈಲಾದಷ್ಟು ಕೊಟ್ಟ ಮಂಜು ಟಾಪ್​​ ಸ್ಪರ್ಧಿ ಆಗ್ತಾರಾ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.

ಆರಂಭದಲ್ಲೇ ಅಬ್ಬರಿಸಿದ ಸ್ಪರ್ಧಿ. BIGG BOSSಗೆ ಬೇಕಾದ ಎಲ್ಲಾ ಗುಣಗಳು ಇವರಲ್ಲಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಗ್ರೇ ಏರಿಯಾ ಮಾಸ್ಟರ್, ಸ್ಟ್ರ್ಯಾಟಜಿ ಕಿಂಗ್​ ಎಂದೇ ಪಾಪ್ಯುಲರ್​ ಆದ್ರು. ಗೌತಮಿ ಮತ್ತು ಮೋಕ್ಷಿತಾ ಜೊತೆಗಿನ ಸ್ನೇಹ ವ್ಯಾಪಕವಾಗಿ ಗಮನ ಸೆಳೆದಿದೆ.

Bhavya : ತಮ್ಮ ಆಟ, ಆ್ಯಟಿಟ್ಯೂಡ್​ನಿಂದ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಟಾಸ್ಕ್​​ಗಳಲ್ಲಿ ಹಂಡ್ರೆಡ್ ಪರ್ಸೆಂಟ್​ ಎಫರ್ಟ್​ ಹಾಕೋ ಮೂಲಕ ಟಫೆಸ್ಟ್ ಕಂಟಸ್ಟೆಂಟ್ ಅಂತಾ ಗುರುತಿಸಿಕೊಂಡರು.ಕಳೆದ ಎರಡ್ಮೂರು ವಾರಗಳಲ್ಲಿ ಎಲಿಮಿನೇಟ್​ ಆಗ್ತಾರಾ ಅನ್ನೋ ಪ್ರಶ್ನೆ ಎದ್ದಿತ್ತು. ಆದರೆ ಅಂತಿಮವಾಗಿ ಫಿನಾಲೆ ವಾರ ತಲುಪೋ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ತರಿಸಿದ್ದಾರೆ.

Rajat Kishan : BIGG BOSSತನ್ನ 50ನೇ ದಿನದಲ್ಲಿದ್ದ ಸಂದರ್ಭ ಶೋಭಾ ಶೆಟ್ಟಿ ಜೊತೆ ಮನೆ ಪ್ರವೇಶಿಸಿದ ರಜತ್​ ಕಿಶನ್​ ಟಾಸ್ಕ್​​ ಮತ್ತು ತಮ್ಮ ನೇರನುಡಿ ಮೂಲಕ ಕನ್ನಡಿಗರ ಗಮನ ಸೆಳೆದಿದ್ದಾರೆ. ವೈಲ್ಡ್​​ ಕಾರ್ಡ್ ಮೂಲಕ ದೊಡ್ಮನೆ ಪ್ರವೇಶಿಸಿ ದೊಡ್ಡ ಮಟ್ಟಿಗೆ ಸದ್ದು ಮಾಡಿದವರು. ಇವರ ಆರ್ಭಟ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತಾದರೂ, ಟಫೆಸ್ಟ್ ಕಂಟಸ್ಟೆಂಟ್ ಎಂಬ ಜನಪ್ರಿಯತೆ ಗಳಿಸಿದ್ದಾರೆ.

ಇದನ್ನು ಓದಿರಿ : HOW TO CONTROL BLOOD SUGAR LEVELS : ಟೈಪ್-2 ಡಯಾಬಿಟಿಸ್ಗೆ ಭಯಪಡಬೇಡಿ,

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GBS SYMPTOMS PREVENTIVE MEASURES: ಶಿಶುಗಳಲ್ಲಿ ಕಂಡುಬರುವ ಈ ವೈರಸ್ ಲಕ್ಷಣಗಳೇನು?

Guntur, Andhra Pradesh News: ಪ್ರಸ್ತುತ ರಾಜ್ಯಾದ್ಯಂತ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಾಂಕ್ರಾಮಿಕವಲ್ಲದಿದ್ದರೂ, ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇತರ ಸೋಂಕುಗಳಿರುವ ಜನರಲ್ಲಿ...

INDIA AND QATAR SIGNED AN AGREEMENT:ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಮುಂದೆ ಬಂದ ಕತಾರ್

New Delhi News: ಕತಾರ್ INDIAದಲ್ಲಿ 10 ಬಿಲಿಯನ್ ಡಾಲರ್​​ ಹೂಡಿಕೆ ಮಾಡಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, 2 ರಾಷ್ಟ್ರಗಳು...

REMOTE AUSTRALIAN BEACH:ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ 157 ಡಾಲ್ಫಿನ್ಗಳು ಸಾವು

Arthur River (Australia) News: 157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ...

MAHA KUMBHMELA:75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ

Lucknow (Uttar Pradesh) News: ಪವಿತ್ರ KUMBHMELA ಸ್ನಾನಕ್ಕಾಗಿ ಜೈಲು ಸಚಿವರ ಮೇಲ್ವಿಚಾರಣೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿ.ವಿ.ರಾಮಶಾಸ್ತ್ರಿ ತಿಳಿಸಿದ್ದಾರೆ. ಸಂಗಮದಿಂದ...