spot_img
spot_img

ವಿಕಲಚೇತನರ ಡೇಟಾಬೇಸ್​ ರಚನೆ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಅನುಪ್ರಿಯಾ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ನವದೆಹಲಿ: ಕೇಂದ್ರ ಸರ್ಕಾರ ವಿಕಲಚೇತನರ ಡೇಟಾಬೇಸ್​ ರಚಿಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಅನುಪ್ರಿಯಾ ಹೇಳಿದ್ದಾರೆ.

ಭಾರತದಲ್ಲಿ ಅಂದಾಜು 2.68 ಕೋಟಿ ವಿಕಲಚೇತನರಿದ್ದು, ಇದು ಒಟ್ಟು ಜನಸಂಖ್ಯೆಯ ಶೇ 2.21ರಷ್ಟಿದೆ ಮತ್ತು ವಿಕಲಚೇತನರ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಸರಕಾರವು ವಿಕಲಚೇತನರ ರಾಷ್ಟ್ರೀಯ ಡೇಟಾಬೇಸ್ (ಪಿಡಬ್ಲ್ಯೂಡಿ) ರಚಿಸುತ್ತಿದೆ ಎಂದು ಸಂಸತ್ತಿಗೆ ಶುಕ್ರವಾರ ಮಾಹಿತಿ ನೀಡಲಾಯಿತು.

ಚಲನೆ, ಶ್ರವಣ ಮತ್ತು ದೃಷ್ಟಿಯಲ್ಲಿ ಕ್ರಮವಾಗಿ 54.36 ಲಕ್ಷ, 50.72 ಲಕ್ಷ ಮತ್ತು 50.33 ಲಕ್ಷ ವಿಕಲಚೇತನರಿದ್ದು, ಇವು ವಿಕಲಚೇತನ ಜನರನ್ನು ಹೊಂದಿರುವ ಮೂರು ದೊಡ್ಡ ವಿಭಾಗಗಳಾಗಿವೆ ಎಂದು ಅವರು ಹೇಳಿದರು.

ದೇಶದಲ್ಲಿನ ವಿಕಲಚೇತನರ ಜನಸಂಖ್ಯೆಯ ಅಂದಾಜು ಪ್ರಮಾಣವನ್ನು ಕಂಡುಹಿಡಿಯಲು ಈ ಡೇಟಾಬೇಸ್ ವಿಶ್ವಾಸಾರ್ಹ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಲೋಕಸಭೆಗೆ ತಿಳಿಸಿದರು.

ಡಿಎಂಕೆಯ ರಾಣಿ ಶ್ರೀಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಸಚಿವೆ ಪಟೇಲ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ (ಎಂಒಎಸ್​ಜೆಇ) ವಿಕಲಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆ (ಡಿಇಪಿಡಬ್ಲ್ಯೂಡಿ)ಯು ದೇಶದಲ್ಲಿನ ವಿಕಲಚೇತನರ ಜನಸಂಖ್ಯೆಯ ದತ್ತಾಂಶಕ್ಕಾಗಿ 2011 ರ ಜನಗಣತಿಯನ್ನು ಅವಲಂಬಿಸಿದೆ ಎಂದು ಹೇಳಿದರು.

ಸರ್ಕಾರದ ಅಂಕಿಅಂಶಗಳ ಪ್ರಕಾರ 19.98 ಲಕ್ಷ ಜನರು ವಾಕ್ ವೈಕಲ್ಯ, 15.05 ಲಕ್ಷ ಜನರು ಬುದ್ಧಿಮಾಂದ್ಯತೆ ಮತ್ತು 7.22 ಲಕ್ಷ ಜನರು ಮಾನಸಿಕ ಅಸ್ವಸ್ಥತೆ ಹೊಂದಿದ್ದಾರೆ. 21.16 ಲಕ್ಷ ಬಹು ಅಂಗವೈಕಲ್ಯ ಹೊಂದಿರುವವರಿದ್ದು, 49.27 ಲಕ್ಷ ಜನರನ್ನು ಸರ್ಕಾರವು ಅಂಗವೈಕಲ್ಯದ “ಇತರ” ವಿಭಾಗದಲ್ಲಿ ಪಟ್ಟಿ ಮಾಡಿದೆ ಎಂದು ಸಚಿವಾಲಯ ತಿಳಿಸಿದೆ.

ವಿಕಲಚೇತನರ ಹಕ್ಕುಗಳ ಕಾಯ್ದೆ 2016ರ ಪ್ರಕಾರ 21 ನಿರ್ದಿಷ್ಟ ಅಂಗವೈಕಲ್ಯಗಳಿವೆ. ದೇಶಾದ್ಯಂತ ವಿಕಲಚೇತನರಿಗಾಗಿ ರಾಷ್ಟ್ರೀಯ ಡೇಟಾಬೇಸ್ ರಚಿಸಲು ಡಿಇಪಿಡಬ್ಲ್ಯೂಡಿ ವಿಶಿಷ್ಟ ಅಂಗವೈಕಲ್ಯ ಐಡಿ (ಯುಡಿಐಡಿ) ಉಪ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು.

ವಿಕಲಚೇತನರಿಗಾಗಿ ಡೇಟಾಬೇಸ್ ರಚಿಸುವ ಯೋಜನೆಯನ್ನು ವಿವರಿಸಿದ ರಾಜ್ಯ ಸಚಿವೆ ಪಟೇಲ್, “ವಿಕಲಚೇತನರ ಹಕ್ಕುಗಳ (ಆರ್ ಪಿಡಬ್ಲ್ಯುಡಿ) ಕಾಯ್ದೆ 2016 ರ ಪ್ರಕಾರ, 21 ನಿರ್ದಿಷ್ಟ ಅಂಗವೈಕಲ್ಯಗಳಿವೆ. ದೇಶಾದ್ಯಂತ ವಿಕಲಚೇತನರಿಗಾಗಿ ರಾಷ್ಟ್ರೀಯ ಡೇಟಾಬೇಸ್ ರಚಿಸುವ ಉದ್ದೇಶದಿಂದ ಡಿಇಪಿಡಬ್ಲ್ಯೂಡಿ ವಿಶಿಷ್ಟ ಅಂಗವೈಕಲ್ಯ ಐಡಿ (ಯುಡಿಐಡಿ) ಉಪ ಯೋಜನೆಯನ್ನು ಪ್ರಾರಂಭಿಸಿದೆ.

ಯುಡಿಐಡಿ ಯೋಜನೆಯಡಿ ಅಂಗವೈಕಲ್ಯ ಪ್ರಮಾಣಪತ್ರಗಳು ಮತ್ತು ವಿಶಿಷ್ಟ ಅಂಗವೈಕಲ್ಯ ಗುರುತಿನ ಚೀಟಿಗಳನ್ನು ಆಯಾ ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳು ಸೂಚಿಸಿದ ಸಮರ್ಥ ವೈದ್ಯಕೀಯ ಪ್ರಾಧಿಕಾರಗಳ ಮೂಲಕ ಅಂಗವಿಕಲ ವ್ಯಕ್ತಿಗಳಿಗೆ ನೀಡಲಾಗುತ್ತದೆ” ಎಂದು ಹೇಳಿದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SPECIAL VILLAGE SAGA : 20 ಕುಟುಂಬ, 60 ಜನರಿರುವ ಒಂದು ಹಳ್ಳಿಯ ಕಥೆ: ಸ್ವಾವಲಂಬನೆಯ ಯಶೋಗಾಥೆ

Nalgonda, Telangana News: ಮೂಡು ಗುಡಿಸೆಲಾ ತಾಂಡಾ ಅಂದರೆ ಮೂರು ಗುಡಿಸಲುಗಳ ತಾಂಡಾ ಎಂಬ ಈ ವಿಶಿಷ್ಟ ತಾಂಡಾವನ್ನು 70 ವರ್ಷಗಳ ಹಿಂದೆ ನೇನಾವತ್ ಚಂದ್ರು...

ULLAL BANK ROBBERY : ಎಲ್ಲ ಟೋಲ್ಗಳಲ್ಲಿ ತಪಾಸಣೆ ಮಾಡುವಂತೆ ಸಿಎಂ ಸೂಚನೆ

Mangalore News: ಕೋಟೆಕಾರು ULLAL BANK ROBBERY ಪ್ರಕರಣ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಿಎಂ, ಎಲ್ಲ ಟೋಲ್​ಗಳಲ್ಲಿ ತಪಾಸಣೆ ಹಾಗೂ ಕೇರಳ ಗಡಿಯಲ್ಲಿನ ಸಿಸಿ...

HIGH COURT : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ

Bangalore News: HIGH COURT ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ...

SAIF ALI KHAN : ಸೈಫ್ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್ ತಂಡಗಳ ರಚನೆ

Mumbai (Maharashtra) News: ಬಾಲಿವುಡ್​​ ನಟ SAIF ಅಲಿ ಖಾನ್ ಅವರ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.ಈ ಘಟನೆ ಬಾಲಿವುಡ್ ಮಾತ್ರವಲ್ಲದೇ...