spot_img
spot_img

ಮಹತ್ವಾಕಾಂಕ್ಷಿ ಚಂದ್ರಯಾನದಲ್ಲಿ ವಿಳಂಬ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ವಾಷಿಂಗ್ಟನ್, ಅಮೆರಿಕ: ನಾಸಾದ ಆರ್ಟೆಮಿಸ್ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದೆ. ಮುಂದಿನ ವರ್ಷವೇ ಚಂದ್ರನ ಅಂಗಳ ಸೇರಬೇಕಾದ ಈ ಮಿಷನ್​ ಉಡ್ಡಯನ 2026 ಹಾಗೂ 2027ಕ್ಕೆ ಮುಂದೂಡಿಕೆ ಆಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಕಾರ್ಯಾಚರಣೆಯಲ್ಲಿನ ವಿಳಂಬದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಈ ಹಿಂದೆ ಸೆಪ್ಟೆಂಬರ್ 2025 ಕ್ಕೆ ನಿಗದಿಯಾಗಿದ್ದ ಆರ್ಟೆಮಿಸ್ II ಸಿಬ್ಬಂದಿ ಪರೀಕ್ಷಾ ಹಾರಾಟವನ್ನು ಏಪ್ರಿಲ್ 2026 ಕ್ಕೆ ನಿಗದಿ ಮಾಡಲಾಗಿದೆ. ಅಷ್ಟೇ ಅಲ್ಲ ಆರ್ಟೆಮಿಸ್ III ಮಿಷನ್ ಕಾರ್ಯಕ್ರಮವನ್ನು 2027 ರ ಮಧ್ಯ ಭಾಗಕ್ಕೆ ನಿಗದಿ ಮಾಡಲಾಗಿದೆ.
NASA ಗುರುವಾರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. “ಆರ್ಟೆಮಿಸ್ I ಅನ್‌ಕ್ರೂಡ್ ಮರು – ಪ್ರವೇಶದ ಪರೀಕ್ಷಾ ಹಾರಾಟದ ಸಮಯದಲ್ಲಿ ಅನಿರೀಕ್ಷಿತ ನಷ್ಟ, ತಾಂತ್ರಿಕ ಸಮಸ್ಯೆ ಅಥವಾ ಕೆಲ ದೋಷಗಳ ಹಿನ್ನೆಲೆಯಲ್ಲಿ ನಾಸಾ ತಜ್ಞರು ಓರಿಯನ್ ಬಾಹ್ಯಾಕಾಶ ನೌಕೆಯ ಶಾಖ ಕವಚದ ಕುರಿತು ಚರ್ಚೆಯಲ್ಲಿ ತೊಡಗಿದ್ದಾರೆ. ಏನೆಲ್ಲ ದೋಷಗಳು ಈ ಮಿಷನ್​​ನಲ್ಲಿ ಕಂಡು ಬಂದವು ಎಂಬ ಬಗ್ಗೆ ಗಮನ ಹರಿಸಿದೆ.
ಆರ್ಟೆಮಿಸ್ II ಮಿಷನ್​ ಸಿಬ್ಬಂದಿಯ ಪರೀಕ್ಷಾ ಹಾರಾಟಕ್ಕಾಗಿ ಪರೀಕ್ಷೆಗಳು ಮುಂದುವರೆದಿವೆ. ಇಂಜಿನಿಯರ್‌ಗಳು ಈಗಾಗಲೇ ಕ್ಯಾಪ್ಸುಲ್‌ಗೆ ಲಗತ್ತಿಸಲಾದ ಶಾಖ ಕವಚದೊಂದಿಗೆ ಓರಿಯನ್ ಸಿದ್ಧಪಡಿಸುವುದನ್ನು ಮುಂದುವರಿಸಿದ್ದಾರೆ. ಮುಂದಿನ ವರ್ಷ ನಡೆಯಬೇಕಿದ್ದ ಪರೀಕ್ಷಾರ್ಥ ಪ್ರಯೋಗಗಳನ್ನು ಮುಂದೂಡಲಾಗಿದೆ. ಆರ್ಟೆಮಿಸ್ II ಏಪ್ರಿಲ್ 2026 ಮತ್ತು ಆರ್ಟೆಮಿಸ್ III 2027 ರ ಮಧ್ಯಭಾಗದಲ್ಲಿ ಕಾರ್ಯಾಚರಣೆ ಮಾಡಲು ಸಮಯವನ್ನು ನಿಗದಿ ಮಾಡಲಾಗಿದೆ ಎಂದು ನಾಸಾ ಘೋಷಿಸಿದೆ.
ನವೀಕರಿಸಿದ ಮಿಷನ್ ಟೈಮ್‌ಲೈನ್‌ಗಳು ಓರಿಯನ್ ಒಳಗಿನ ಪರಿಸರ ನಿಯಂತ್ರಣ ಮತ್ತು ಜೀವನ ಬೆಂಬಲ ವ್ಯವಸ್ಥೆಗಳನ್ನು ಸರಿಪಡಿಸಲು ಹಾಗೂ ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳುವ ಉದ್ದೇಶದಿಂದ ಅಧ್ಯಯನಗಳು, ಪರೀಕ್ಷೆಗಳು ಮತ್ತು ಪರಿಹಾರ ಕ್ರಮಗಳು ಮುಂದುವರೆಯಲಿವೆ ಎಂದು ನಾಸಾ ಹೇಳಿದೆ.
ಆರ್ಟೆಮಿಸ್ I ಹೀಟ್ ಶೀಲ್ಡ್ ಸಮಸ್ಯೆಯ ಹಿನ್ನೆಲೆಯಲ್ಲಿ ಆ ಬಗ್ಗೆ ವ್ಯಾಪಕ ಪರಿಶೀಲನೆ ಮಾಡಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಆರ್ಟೆಮಿಸ್ II ಹೀಟ್ ಶೀಲ್ಡ್ ಯೋಜಿತ ಕಾರ್ಯಾಚರಣೆಯ ಸಮಯದಲ್ಲಿ ಸಿಬ್ಬಂದಿಯನ್ನು ಸುರಕ್ಷಿತವಾಗಿರಿಸುತ್ತದೆ ಎಂದು ಖಚಿತ ಪಡಿಸಿಕೊಂಡ ಬಳಿಕವೇ ಏಜೆನ್ಸಿಯ ನಿರ್ಧಾರವು ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ ಮತ್ತು ಸುಮಾರು 25,000 mph ನಿಂದ 325 mph ವರೆಗೆ ನಿಧಾನಗೊಳ್ಳುತ್ತದೆ.
“ಆರ್ಟೆಮಿಸ್ ಅಭಿಯಾನವು ಮಾನವ ಇದುವರೆಗೆ ಮಾಡಲು ಹೊರಟಿರುವ ಅತ್ಯಂತ ಧೈರ್ಯಶಾಲಿ ಕಾರ್ಯಕ್ರಮವಾಗಿದೆ. ತಾಂತ್ರಿಕವಾಗಿ ಸವಾಲಿನ ಮತ್ತು ಸಹಯೋಗದ ಅಂತಾರಾಷ್ಟ್ರೀಯ ಪ್ರಯತ್ನವಾಗಿದೆ ಎಂದು NASA ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ನಾವು ಆರ್ಟೆಮಿಸ್ ಅಭಿಯಾನದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ. ಓರಿಯನ್‌ನ ಲೈಫ್ ಸಪೋರ್ಟ್ ಸಿಸ್ಟಮ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಈ ಸಂದರ್ಭದ ಅನ್ವೇಷಣೆಯಲ್ಲಿ ಮುಂದಿನ ಹೆಜ್ಜೆಗೆ ನಮ್ಮನ್ನು ಸಿದ್ಧಪಡಿಸಲು ನಮ್ಮ ತಂಡಗಳು ಮಾಡಿದ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ. ಆರ್ಟೆಮಿಸ್ II ರ ಸಮಯದಲ್ಲಿ ಯಾವುದೇ ಅವಘಡ ಆಗದಂತೆ ಹಾಗೂ ಸಿಬ್ಬಂದಿ ಕಾರ್ಯಾಚರಣೆಯನ್ನು ನಾವು ಸರಿಯಾಗಿ ಮಾಡಬೇಕಾಗಿದೆ, ಹೀಗಾಗಿ ಆರ್ಟೆಮಿಸ್ ಅಭಿಯಾನದ ಯಶಸ್ವಿಯಾಗುವ ನಿಟ್ಟಿನಲ್ಲಿ ಸಮರ್ಥವಾಗಿ ಕೆಲಸ ಮುಂದುವರೆಸಿದ್ದೇವೆ ಎಂದು ಅವರು ವಿಶ್ವಾಸ ಹಾಗೂ ಭರವಸೆ ವ್ಯಕ್ತಪಡಿಸಿದ್ದಾರೆ.
ಹೀಟ್ ಶೀಲ್ಡ್ ವಿದ್ಯಮಾನದ ತನಿಖೆ ಮಾಡಲು ಮತ್ತು ಕಾರ್ಯಾಚರಣೆ ಮುಂದಿನ ಕಾರ್ಯತಂತ್ರವನ್ನು ನಿರ್ಧರಿಸಲು ನಾವು ಎಲ್ಲ ಸಮರ್ಥ ಪ್ರಯತ್ನ ಮಾಡುತ್ತಿದ್ದೇವೆ. ಇದು ನಾಸಾದ ಬದ್ಧತೆಯೂ ಆಗಿದೆ. ಸುರಕ್ಷತೆ ಮತ್ತು ಡೇಟಾ-ಚಾಲಿತ ವಿಶ್ಲೇಷಣೆ ಮಾಡುತ್ತಿದ್ದೇವೆ ಎಂದು ಎಕ್ಸ್‌ಪ್ಲೋರೇಶನ್ ಸಿಸ್ಟಮ್ಸ್ ಡೆವಲಪ್‌ಮೆಂಟ್ ಮಿಷನ್ ಡೈರೆಕ್ಟರೇಟ್‌ನ ಸಹಾಯಕ ನಿರ್ವಾಹಕರಾದ ಕ್ಯಾಥರೀನ್ ಕೋರ್ನರ್ ಹೇಳಿದ್ದಾರೆ.
ನಮ್ಮ ಮಿಷನ್ ಯೋಜನೆ ಹಾರಾಟ ಹಾಗೂ ಚಂದ್ರನಲ್ಲಿ ನಮ್ಮ ಉದ್ದೇಶಿತ ಗುರಿಯನ್ನು ಸಾಧಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅಷ್ಟೇ ಅಲ್ಲ ನಾಸಾ ಮಂಗಳ ಕಾರ್ಯಾಚರಣೆಗಳಿಗೆ ಅಗತ್ಯವಾದ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಖಚಿತಪಡಿಸಿಕೊಳ್ಳಲು ಇದೊಂದು ಧನಾತ್ಮಕ ಹೆಜ್ಜೆಯಾಗಿದೆ ಎಂದು ಕೋರ್ನರ್ ಇದೇ ವೇಳೆ ಹೇಳಿದರು.
NASA ನವೆಂಬರ್‌ನಲ್ಲಿ ಪ್ರಾರಂಭವಾದ SLS (ಸ್ಪೇಸ್ ಲಾಂಚ್ ಸಿಸ್ಟಮ್) ರಾಕೆಟ್ ಪರೀಕ್ಷೆಗಳನ್ನು ಮುಂದುವರಿಸುತ್ತದೆ ಮತ್ತು ಆರ್ಟೆಮಿಸ್ II ಗಾಗಿ ಓರಿಯನ್‌ನೊಂದಿಗೆ ಏಕೀಕರಣಕ್ಕಾಗಿ ಶ್ರಮಿಸಲಾಗುತ್ತಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SHIVASENA SUPPORT TO BJP : ಬಿಜೆಪಿ ಅಭ್ಯರ್ಥಿಗಳಿಗೆ ಶಿಂಧೆ ಬಣದ ಶಿವಸೇನೆ ಬೆಂಬಲ ಘೋಷಣೆ

New Delhi News: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಔಪಚಾರಿಕವಾಗಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ, ಮಿತ್ರ ಪಕ್ಷ ಬಿಜೆಪಿಗೆ ಬೆಂಬಲ ನೀಡುವುದಾಗಿ SHIVASENA SUPPORT TO BJP...

SIGANDUR BRIDGE : ಅಂತಿಮ ಹಂತದಲ್ಲಿ ಸಿಗಂದೂರು ಸೇತುವೆ ಕಾಮಗಾರಿ, ಕೆಲವೇ ತಿಂಗಳಲ್ಲಿ ಲೋಕಾರ್ಪಣೆShimoga News: ಸಾಗರ ತಾಲೂಕಿನ ಸಿಗಂದೂರು ಸೇತುವೆ ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಇದೇ ವರ್ಷದ ಏಪ್ರಿಲ್ ಅಥವಾ...

Shivamogga News: ಸಾಗರ ತಾಲೂಕಿನ SIGANDUR BRIDGE ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಇದೇ ವರ್ಷದ ಏಪ್ರಿಲ್ ಅಥವಾ ಮೇ ನಲ್ಲಿ ಲೋಕಾರ್ಪಣೆಯಾಗಲಿದೆ. ಹೌದು ನಾಡಿಗೆ...

HOW TO AWARE OF CYBER FRAUD : ಹಾಗಿದ್ರೆ ಮಾತ್ರ ಸೈಬರ್ ವಂಚನೆಯಿಂದ ಬಚಾವ್ ಆಗಲು ಸಾಧ್ಯ

Hyderabad News: ನಿಜವೆಂದು ತೋರುವ ಈ ನಕಲಿ ವೆಬ್​​ಸೈಟ್​ ಪತ್ತೆ ಮಾಡುವುದು ಹೇಗೆ, ಎಚ್ಚರಿಕೆ ಹೇಗೆ ವಹಿಸಬೇಕು, ವಂಚನೆಗೆ ಗುರಿಯಾಗದಂತೆ ಇರುವುದು ಹೇಗೆ ಎಂಬ ಇಲ್ಲಿದೆ...

COFFEE EXPORTS : 1.29 ಶತಕೋಟಿ ಡಾಲರ್ಗೆ ತಲುಪಿದ ಭಾರತದ ಕಾಫಿ ರಫ್ತು

New Delhi News: ಭಾರತದ COFFEE ರಫ್ತು ದ್ವಿಗುಣಗೊಂಡಿದೆ. ಈ ಮೂಲಕ ದೇಶದ ರಫ್ತಿನ ಪ್ರಮಾಣ ಹೆಚ್ಚಿಸಲು ತನ್ನದೇ ಕೊಡುಗೆ ನೀಡಿದೆ.ಉತ್ತಮ ಗುಣಮಟ್ಟ ಮತ್ತು ಅನನ್ಯ...