spot_img
spot_img

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ; ಪರೀಕ್ಷೆ ಇಲ್ಲದೆ, 3 ಸಾವಿರಕ್ಕೂ ಅಧಿಕ ಜಾಬ್ಸ್ ಲಭ್ಯ..!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಇಷ್ಟ ಪಡುವ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್​ನ್ಯೂಸ್ ಇದೆ. ಆರ್​​ಆರ್​ಸಿ ಪೂರ್ವ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತ ಅಪ್ರೆಂಟಿಸ್ ಜಾಬ್ಸ್ ಭರ್ತಿ ಮಾಡಲು ಆನ್​ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಪ್ಲೇ ಮಾಡಬಹುದಾಗಿದೆ.

ಇದನ್ನೂ ಓದಿ : ಕಿರಿಯ ವೈದ್ಯರು ಕೆಲಸಕ್ಕೆ ಹಾಜರಾಗಿ, ಇಲ್ಲದಿದ್ದರೆ ಶಿಸ್ತುಕ್ರಮ: ಎಂದು ಹೇಳಿದ, ಸುಪ್ರೀಂ ಕೋರ್ಟ್.!

ಅಭ್ಯರ್ಥಿಗಳು ಆನ್​ಲೈನ್ ಮೂಲಕವೇ ಅಪ್ಲೇ ಮಾಡಬೇಕು. ಇನ್ನು ಈ ಹುದ್ದೆಗೆ ಸಂಬಂಧಿಸಿದ ಪ್ರಮುಖವಾದ ದಿನಾಂಕ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ, ವಯೋಮಿತಿ ಸೇರಿ ಇತರೆ ಮಾಹಿತಿ ಇಲ್ಲಿ ನೀಡಲಾಗಿದೆ. ಸೆಪ್ಟೆಂಬರ್ 9 ರಂದು ನೋಟಿಫಿಕೇಶನ್ ರಿಲೀಸ್ ಮಾಡಲಾಗಿತ್ತು. ಅರ್ಜಿ ಇನ್ನು ಆರಂಭವಾಗಿಲ್ಲ. ಇದೇ ಸೆಪ್ಟೆಂಬರ್ 24ರಿಂದ ಅರ್ಜಿ ಪ್ರಾರಂಭ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗಳು ಅಪ್ಲೇ ಮಾಡಬಹುದು. ಇಲಾಖೆಯ ಅಧಿಕೃತ ವೆಬ್​ಸೈಟ್​ rrcer.org. ಗೆ ಭೇಟಿ ನೀಡಿ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬಹುದು.

ಇದನ್ನೂಓದಿ : ದರ್ಶನ್​ ವಿರುದ್ಧದ ಚಾರ್ಜ್​ಶೀಟ್​ಗೆ ಹೊಸ ಟ್ವಿಸ್ಟ್ ಕೊಡಲು ಮುಂದಾದ ದಾಸನ ಪರ ವಕೀಲರು..!

ಇನ್ನು ಈ ಹುದ್ದೆಗಳಿಗೆ ಪರೀಕ್ಷೆ ಇರುವುದಿಲ್ಲ. ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಮೆಟ್ರಿಕ್ಯುಲೇಷನ್ ಮತ್ತು ITI ಪರೀಕ್ಷೆಗಳಿಂದ ಸರಾಸರಿ ಅಂಕಗಳ ಮೇಲೆ ಆಯ್ಕೆಯನ್ನು ನಿರ್ಧರಿಸಲಾಗುತ್ತದೆ. ಮೆರಿಟ್ ಲಿಸ್ಟ್ ಆದ ಮೇಲೆ ದಾಖಲಾತಿ ಪರಿಶೀಲನೆಗೆ ಅಭ್ಯರ್ಥಿಗಳನ್ನು ಕರೆಯಲಾಗುತ್ತದೆ. ಇಬ್ಬರು ಅಭ್ಯರ್ಥಿಗಳು ಸಮ ಅಂಕಗಳನ್ನು ಹೊಂದಿದ್ದರೇ ಫಸ್ಟ್ ಪಾಸ್ ಆಗಿದ್ದವರನ್ನು ಪರಿಗಣಿಸಲಾಗುತ್ತದೆ. ಆನ್​ಲೈನ್​ನಲ್ಲಿ ಅಪ್ಲೇ ಮಾಡಿದ ಎಲ್ಲ ದಾಖಲೆಗಳನ್ನು ಅಭ್ಯರ್ಥಿಗಳು ತರಬೇಕಾಗುತ್ತದೆ.

ವಿಭಾಗಗಳು ಹಾಗೂ ಒಟ್ಟು ಹುದ್ದೆಗಳು

ಒಟ್ಟು 3115 ಹುದ್ದೆಗಳು ಭರ್ತಿ ಮಾಡಲಾಗುತ್ತಿದೆ

ಹೌರಾ ವಿಭಾಗ- 659

ಲಿಲುವಾ ಕಾರ್ಯಾಗಾರ- 612

ಸೀಲ್ದಾ ವಿಭಾಗ- 440

ಕಂಚುರಪಾರ ಕಾರ್ಯಾಗಾರ- 187

ಮಾಲ್ಡಾ ವಿಭಾಗ- 138

ಅಸನ್ಸೋಲ್ ವಿಭಾಗ- 412

ಜಮಾಲ್ಪುರ್ ಕಾರ್ಯಾಗಾರ- 667

ಅರ್ಜಿ ಶುಲ್ಕ ;

ಜನರಲ್ ಅಭ್ಯರ್ಥಿಗಳಿಗೆ- 100 ರೂಪಾಯಿಗಳು
ಎಸ್​​ಸಿ, ಎಸ್​ಟಿ- ಮೀಸಲಾಯಿತಿ ವಿನಾಯಿತಿ ಇರುತ್ತದೆ

ಸ್ಯಾಲರಿ- ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಆಗಿದ್ದರಿಂದ ಉತ್ತಮ ಮಟ್ಟದ ಸಂಬಳ ಇರುತ್ತದೆ.

ವಿದ್ಯಾರ್ಹತೆ- SSLC ಜೊತೆ ITI ಪಾಸ್ ಆಗಿರಬೇಕು
ವಯೋಮಿತಿ- 15 ವರ್ಷದಿಂದ 24 ವರ್ಷದ ಒಳಗಿನವರು

ಈ ಹುದ್ದೆಗೆ ಸಂಬಂಧಿಸಿದ ದಿನಾಂಕಗಳು..?
ನೋಟಿಫಿಕೇಶನ್ ಪ್ರಕಟ- ಸೆಪ್ಟೆಂಬರ್ 09
ಅರ್ಜಿ ಹಾಕಲು ಪ್ರಾರಂಭ- ಸೆಪ್ಟೆಂಬರ್ 24
ಅರ್ಜಿ ಕೊನೆ ದಿನಾಂಕ- ಅಕ್ಟೋಬರ್ 23

WhatsApp Group Join Now
Telegram Group Join Now
Instagram Account Follow Now
spot_img

Related articles

KIREN RIJIJU WAQF BILL:ವಕ್ಫ್ ತಿದ್ದುಪಡಿ ಮಸೂದೆಗೆ ಚಂದ್ರಬಾಬು, ನಿತೀಶ್, ಮುಸ್ಲಿಮ್ ಸಂಸದರಿಂದ ಬೆಂಬಲ

Srinagar (Jammu-Kashmir) News : ಬಿಜೆಪಿ ಹೊರತಾಗಿ ಎನ್​ಡಿಎ ಕೂಟದಲ್ಲಿ WAQF ಮಸೂದೆ ತಿದ್ದುಪಡಿಗೆ ಸಮ್ಮತಿ ಇಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ...

AMARTYA SEN DESCRIBE MANMOHAN:ಮನಮೋಹನ್ ಸಿಂಗ್ ಒಬ್ಬ ಮಹಾನ್ ವ್ಯಕ್ತಿ, ಅದ್ಭುತ ಅರ್ಥಶಾಸ್ತ್ರಜ್ಞ

Kolkata (West Bengal) News: ಪಶ್ಚಿಮ ಬಂಗಾಳದ ಬಿರ್ಭೂಮ್​​ನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, MANMOHAN​ ಸಿಂಗ್​ ಮತ್ತು ನಾನು ಕೇಂಬ್ರಿಡ್ಜ್‌ನಲ್ಲಿ ಓದುತ್ತಿರುವ ವೇಳೆ ಉತ್ತಮ...

H D DEVE GOWDA:ರಾಜ್ಯದಲ್ಲಿ ಕೃಷ್ಣ, ಕಾವೇರಿ, ಗೋದಾವರಿ ನದಿ ಜೋಡಣೆಗೆ ಎಲ್ಲರೂ ಧ್ವನಿ ಎತ್ತಬೇಕಿದೆ

Bangalore News: ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ರಾಜ್ಯಸಭೆಯಲ್ಲಿ ಗೋದಾವರಿ, ಕೃಷ್ಣ, ಕಾವೇರಿ ನದಿ ಜೋಡಣೆ ಬಗ್ಗೆ ತಮಿಳುನಾಡಿನ ರಾಜ್ಯಸಭಾ...

MAHINDRA ELECTRIC SUV BOOKING OPEN:ಅಬ್ಬಬ್ಬಾಂದ್ರೆ ಎಷ್ಟಿರಬಹುದು?

Mahindra Electric SUV Booking Open News: ಇವುಗಳನ್ನು ನವೆಂಬರ್ 2024ರಲ್ಲಿ 'XEV 9E' ಮತ್ತು 'BE 6' ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿತ್ತು. ಎಲೆಕ್ಟ್ರಿಕ್...