spot_img
spot_img

ಜಸ್ಟ್‌ 20 ನಿಮಿಷ.. ತನಿಷ್ಕಾ ಶೋ ರೂಮ್​ಗೆ ನುಗ್ಗಿದ ದರೋಡೆ ಗ್ಯಾಂಗ್‌; ಕೊಳ್ಳೆ ಹೊಡೆದಿದ್ದು ಎಷ್ಟು ಕೋಟಿ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬಿಹಾರ ಈ ಹಿಂದೆ ಗೂಂಡಾ ರಾಜ್ಯವೆಂದೇ ಕುಖ್ಯಾತಿ ಪಡೆದಿತ್ತು. ಕೊಲೆಗಳು, ದರೋಡೆಗಳು ಕಳ್ಳತನಗಳು ಸಾಮಾನ್ಯವೆಂದರೆ ಸಾಮಾನ್ಯ ಅನ್ನುವಂತೆ ಅಲ್ಲಿ ಈ ಮೊದಲು ನಡೆಯುತ್ತಿದ್ದವು. ಆದ್ರೆ ಇತಿಹಾಸ ಮರುಕಳಿಸುತ್ತಿದೆಯೋ ಏನೋ ಅನ್ನೋ ರೀತಿಯ ಒಂದು ಘಟನೆ ಬಿಹಾರದ ಪೂರ್ನಿಯಾದಲ್ಲಿ ನಡೆದು ಹೋಗಿದೆ. ತನಿಷ್ಕಾ ಶೋ ರೂಮ್​ಗೆ ನುಗ್ಗಿದ ದರೋಡೆಕೋರೆರು ಅಕ್ಷರಶಃ ಶೋರೂಮ್​ನ್ನು ದೋಚಿಕೊಂಡು ಹೋಗಿದ್ದಾರೆ.

ಜಸ್ಟ್ 20 ನಿಮಿಷ ಅಷ್ಟೇ, ಆ 20 ನಿಮಿಷದಲ್ಲಿಯೇ 2 ಕೋಟಿ ಮೌಲ್ಯದ ಚಿನ್ನಾಭರಣವನ್ನು ಲೂಟಿ ಮಾಡಿ ಎಸ್ಕೇಪ್ ಆಗಿದೆ ದರೊಡೆಕೋರರ ತಂಡ. ಬಿಹಾರದ ಪೂರ್ನಿಯಾದಲ್ಲಿರುವ ತನಿಷ್ಕಾ ಶೋರೂಮ್​ಗೆ ಶುಕ್ರವಾರ ಗಿರಾಕಿಗಳ ವೇಷದಲ್ಲಿ ಬಂದ ಆರೇಳು ಮಂದಿ ದರೋಡೆಕೋರರ ತಂಡದಲ್ಲಿ ಇಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೈಯದಲ್ಲಿ ದೊಡ್ಡ ಬ್ಯಾಗ್ ಹಿಡಿದುಕೊಂಡು ಬಂದಿದ್ದರು. ಅವರು ದರೋಡೆ ಮಾಡುವ ಉದ್ದೇಶದಿಂದಲೇ ಬಂದಿರುವುದರಿಂದ ಕೇವಲ 20 ನಿಮಿಷದಲ್ಲಿ ಅದನ್ನು ಮಾಡಿ ಮುಗಿಸಿದರು ಅಂತ ತನಿಷ್ಕಾ ಶೋರೂಮ್​ನ ಸಿಬ್ಬಂದಿ ಹೇಳಿದೆ. ಗನ್ ಹಿಡಿದುಕೊಂಡೆ ಶೋರೂಮ್​ಗೆ ನುಗ್ಗಿದ ತಂಡ ಕೊಟ್ಯಾಂತರ ರೂಪಾಯಿ ಮೌಲ್ಯದ ಚಿನ್ನ, ವಜ್ರದ ಆಭರಣಗಳನ್ನು ತಮ್ಮ ಬ್ಯಾಗ್​​ನಲ್ಲಿ ತುಂಬಿಕೊಂಡು ಹೋಗಿದ್ದಾರೆ ಎಂದು ಸಿಬ್ಬಂದಿ ಹೇಳಿದೆ.

ಸ್ಥಳಕ್ಕೆ ಭೇಟಿ ನೀಡಿದ ಪಪ್ಪು ಯಾದವ್!

ತನಿಷ್ಕಾ ಶೋರೂಮ್​ಗೆ ಭೇಟಿ ನೀಡಿದ ಲೋಕಸಭಾ ಸದಸ್ಯ ಪಪ್ಪು ಯಾದವ್, ಯಾವುದೋ ಅಂತಾರಾಷ್ಟ್ರೀಯ ಗ್ಯಾಂಗ್ ಚಿನ್ನದ ಶೋರೂಮ್​ ಲೂಟಿ ಮಾಡಿದೆ ಎಂದು ಹೇಳಿದ್ದಾರೆ. ಹತ್ತಿರದಲ್ಲಿಯೇ ಎಸ್​ಪಿ ಮನೆ ಇದೆ ಆದರೂ ಕೂಡ ಇಂತಹ ಘಟನೆಯೊಂದು ನಡೆದು ಹೋಗಿದೆ. ಆಡಳಿತ ನಡೆಸುವವರೇ ಕ್ರಿಮಿನಲ್​ಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಗುಡುಗಿದ್ದಾರೆ. ಡಿಐಜಿ ವಿಕಾಸ್​ ಕುಮಾರ್ ಅವರು ತನಿಷ್ಕಾ ಶೋ ರೂಮ್‌ ಪರಿಶೀಲನೆ ನಡೆಸಿದ್ದಾರೆ. ಶೋರೂಮ್​ನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ದರೋಡೆ ಗ್ಯಾಂಗ್ ಹೆಡೆಮುರಿ ಕಟ್ಟೋದಕ್ಕೆ ಸಜ್ಜಾಗಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img

Related articles

VIRAT KOHLI RANJI TROPHY:ವಿರಾಟ್ ಕೊಹ್ಲಿ ಔಟ್ ಮಾಡುವುದರ ಹಿಂದೆ ಬಸ್ ಚಾಲಕನ ಮಾಸ್ಟರ್ ಪ್ಲಾನ್.

New Delhi News: ಇದರೊಂದಿಗೆ ಕೇವಲ 6 ರನ್​ಗಳಿಗೆ ಪೆವಿಲಿಯನ್​ ಸೇರಿಕೊಂಡಿದ್ದರು. ಕೊಹ್ಲಿ ವಿಕೆಟ್​ ಪಡೆಯುತ್ತಿದ್ದಂತೆ ಹಿಮಾಂಶು ಸಾಂಗ್ವಾನ್​ ಕುರಿತು ಭಾರೀ ಚರ್ಚೆಯಾಗಿದ್ದವು. ವಿಶ್ವದ ಶ್ರೇಷ್ಠ...

IPL 2025 RCB CAPTAIN:RCB ಮುಂದಿನ ನಾಯಕ ಯಾರು ಗೊತ್ತಾ?

IPL 2025 RQB Captain News: ಮಾರ್ಚ್​,21 ರಿಂದ ಚುಟುಕು ಕ್ರಿಕೆಟ್​ ಹಬ್ಬ ಪ್ರಾರಂಭವಾಗಲಿದ್ದು ಎರಡು ತಿಂಗಳು ಕಾಲ ನಡೆಯಲಿದೆ.ಐಸಿಸಿ ಚಾಂಪಿಯನ್ಸ್​ ಟ್ರೋಫಿ ಮುಗಿದ ಬೆನ್ನಲ್ಲೆ...

MAHA KUMBH MELA TOUR PACKAGE : ಎಚ್ಚರ.. ಎಚ್ಚರ… ಮಹಾ ಕುಂಭಮೇಳದ ಪ್ರವಾಸದ ಪ್ಯಾಕೇಜ್ ಹೆಸರಿನಲ್ಲಿ ವಂಚನೆ

Bangalore News: MAHA KUMBH MELA TOUR PACKAGE ಯಾತ್ರಿಗಳ ಈ ಆಸೆಯನ್ನೇ ಬಂಡವಾಳ ಮಾಡಿಕೊಂಡಿರುವವರು ಇದೀಗ ವಂಚನೆಗೆ ಇಳಿದಿದ್ದಾರೆ. ಈ ಹಿನ್ನೆಲೆ ಪ್ರಯಾಗ್​ರಾಜ್​ ಪ್ರವಾಸಕ್ಕೆ...

BSNL RS 99 PLAN : ಕೇವಲ 99 ರೂ.ಗೆ ಅನ್ಲಿಮಿಟೆಡ್ ಕಾಲಿಂಗ್ ಪ್ಲಾನ್ ತಂದ ಬಿಎಸ್ಎನ್ಎಲ್!

BSNL 99 Plan: ಬಿಎಸ್​ಎನ್​ಎಲ್​ ತಮ್ಮ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಈ ಆಫರ್​ ಎರಡು ಸಿಮ್‌ಗಳನ್ನು ಬಳಸುವ ಗ್ರಾಹಕರಿಗೆ ಉಪಯುಕ್ತ. ಭಾರತ್ ಸಂಚಾರ್ ನಿಗಮ್...