spot_img
spot_img

ಪ್ರಾಣದ ಹಂಗು ತೊರೆದು ಅಜ್ಜಿ ಜೀವ ಉಳಿಸಲು ನದಿಗೆ ಜಿಗಿದ KSRTC ಡ್ರೈವರ್; ಕೊನೆಗೆ ಏನಾಯ್ತು?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಹಾವೇರಿ: ಏಲಕ್ಕಿ ಕಂಪಿನ ನಾಡು ಹಾವೇರಿಯಲ್ಲೊಂದು ಮನಕಲಕುವ ಘಟನೆಯೊಂದು ನಡೆದಿದೆ. ಒಂದು ಕಡೆ ಕರ್ತವ್ಯ ಮತ್ತೊಂದು ಕಡೆ ಮಾನವೀಯತೆ, ಎರಡು ಒಂದೇ ಸಂದರ್ಭದಲ್ಲಿ ಎದುರಾದಾಗ ಹಾವೇರಿಯ ಬಸ್​ ಚಾಲಕನೊಬ್ಬ ಮೊದಲು ಆಯ್ಕೆ ಮಾಡಿಕೊಂಡಿದ್ದು ಮಾನವೀಯತೆಯನ್ನ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಬಳಿ ಅಜ್ಜಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ತುಂಬಿ ಹರಿಯುತ್ತಿರುವ ಕುಮದ್ವತಿ ನದಿಗೆ ಹಾರಿದ್ದಾರೆ. ಅದೇ ವೇಳೆ ಮಜೀದಸಾಬ್ ಎಂಬ ಕೆಎಸ್​ಆರ್​​ಟಿಸಿ ಡ್ರೈವರ್​ ರಟ್ಟಿಹಳ್ಳಿಯಿಂದ ಹಿರೇಕೆರೂರಿಗೆ ಬಸ್ ಓಡಿಸಿಕೊಂಡು ಹೋಗುತ್ತಿದ್ದರು, ಅಜ್ಜಿ ನದಿಗೆ ಜಿಗಿದಿದ್ದನ್ನು ಗಮನಿಸಿದ ಮಜೀದ್​ ಸಾಬ್​ ಹಿಂದೆ ಮುಂದೆ ನೋಡದೆ ಅಲ್ಲಿಯೇ ಬಸ್​ ನಿಲ್ಲಿಸಿ. ಉಕ್ಕಿ ಹರಿಯುತ್ತಿದ್ದ ನದಿಗೆ ಜೀವದ ಹಂಗು ತೊರೆದು ಜಿಗಿದಿದ್ದಾರೆ. ಈಜಿಕೊಂಡು ಹೋಗಿ ಅಜ್ಜಿಯ ದೇಹವನ್ನು ನದಿಯ ದಂಡೆಗೆ ಎಳೆದುಕೊಂಡು ಬಂದಿದ್ದಾರೆ. ಆದ್ರೆ ವಿಪರ್ಯಾಸ ನೋಡಿ ಕಾಲನ ಮುಂದೆ ಯಾವ ಮಜೀದ್​​ಸಾಬ್​ ಅವರ ಮಾನವೀಯತೆಯ ಪ್ರತಿನಿಧಿಸುವ ಆ ಪ್ರಯತ್ನ ವಿಫಲವಾಗಿದೆ. ಅಜ್ಜಿಯನ್ನು ಕಾಪಾಡಲು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ ಆಕೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಇನ್ನೂ ಜೀವದ ಹಂಗು ತೊರೆದು ಅಜ್ಜಿಯನ್ನು ಕಾಪಾಡಲು ನದಿಗೆ ಹಾರಿದ ಡ್ರೈವರ್ ಮಜೀದಸಾಬ್ ಗುಬ್ಬಿಯವರ ಪ್ರಯತ್ನಕ್ಕೆ ಜನರು ಹಾಗೂ ಪ್ರಯಾಣಿಕರು ಭೇಷ್ ಎಂದಿದ್ದಾರೆ. ಹಾಡಿ ಹೊಗಳಿದ್ದಾರೆ. ಮಜೀದಸಾಬ್​ ನದಿಗೆ ಜಿಗಿದಾಗ ಅವರ ಅಜ್ಜಿಯನ್ನುಳಿಸುವ ಪ್ರಯತ್ನಕ್ಕೆ ಪ್ರಯಾಣಿಕರು ಸಹ ಸಾಥ್ ನೀಡಿದ್ದಾರೆ. ಆದ್ರೆ ಯಮನಿಗೆ ಗಡುವು ಕರುಣೆ ಅನ್ನೋದೆಲ್ಲಿದೆ. ಇವರೆಲ್ಲರ ಆ ಪ್ರಯತ್ನವೂ ಕೈಗೂಡದೇ ಹೋಗಿದೆ. ಅಜ್ಜಿ ಕೊನೆಗೂ ಸಾವನ್ನಪ್ಪಿದ್ದಾರೆ. ಆದ್ರೆ ಮಜೀದಸಾಬ್ ಅವರ ಮೆರೆದ ಮಾನವೀಯತೆಗೆ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಸದ್ಯ ಆತ್ಮಹತ್ಯೆಗೆ ಮುಂದಾದ ವೃದ್ಧೆ ಯಾರು ಏನು ಎಂಬುದು ಸ್ಪಷ್ಟವಾಗಿಲ್ಲ ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲೆಗೊಂಡಿದ್ದು, ಅಜ್ಜಿಯ ಗುರುತು ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img

Related articles

MAHAKUMBH : ಆ ಅಘೋರಿ ಭವಿಷ್ಯವೇ ನಿಜವಾಯ್ತಾ?

MAHAKUMBH : ಉತ್ತರ ಪ್ರದೇಶದ ದೇವ ಪ್ರಯಾಗದಲ್ಲಿ MAHAKUMBH ನಡೆಯುತ್ತಿದೆ. ಕಳೆದ 30 ದಿನಗಳ ಅಂತರದಲ್ಲಿ 7 ಅಗ್ನಿ ದುರಂತ ಎದುರಾಗಿವೆ. ಈ ಹಿಂದೆ ಹೀಗೆ...

DARSHAN : ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ದರ್ಶನ್ ಭಾವುಕ

Darshan News: ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ DARSHAN ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 48ನೇ ವರ್ಷಕ್ಕೆ ಕಾಲಿಟ್ಟ ದಾಸನಿಗೆ ಸ್ಯಾಂಡಲ್​ವುಡ್​ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು...

TULASI GABBARD : ಅಮೆರಿಕ ಗುಪ್ತಚರ ಇಲಾಖೆಯ ನೂತನ ಮುಖ್ಯಸ್ಥೆ

TULASI GABBARD : TULASI GABBARD​, ಈಗ ಅಮೆರಿಕಾದ ರಾಷ್ಟ್ರೀಯ ಗುಪ್ತಚರ ದಳ ನಿರ್ದೇಶನದ ನೂತನ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ. ಭಾರತದೊಂದಿಗೆ ಅವರಿಗಿರುವ ನಂಟಿನ ಬಗ್ಗೆಯೂ ಕೂಡ...

MATSYA 6000 : ಸಮುದ್ರ ಜಲಾಂತರ್ಗಾಮಿ ನೌಕೆಯ ಪರೀಕ್ಷೆ ಯಶಸ್ವಿ

Matsya 6000: ದೇಶದ ನಾಲ್ಕನೇ ತಲೆಮಾರಿನ ಆಳ ಸಮುದ್ರ ಜಲಾಂತರ್ಗಾಮಿ ನೌಕೆಯ ಪರೀಕ್ಷೆ ಪೂರ್ಣಗೊಂಡಿದ್ದು, 2025ರ ಅಂತ್ಯದ ವೇಳೆಗೆ 500 ಮೀಟರ್ ಪ್ರಯೋಗ ನಡೆಯಲಿದೆ. ಇದು...