spot_img
spot_img

ಜಸ್ಟ್‌ 20 ನಿಮಿಷ.. ತನಿಷ್ಕಾ ಶೋ ರೂಮ್​ಗೆ ನುಗ್ಗಿದ ದರೋಡೆ ಗ್ಯಾಂಗ್‌; ಕೊಳ್ಳೆ ಹೊಡೆದಿದ್ದು ಎಷ್ಟು ಕೋಟಿ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬಿಹಾರ ಈ ಹಿಂದೆ ಗೂಂಡಾ ರಾಜ್ಯವೆಂದೇ ಕುಖ್ಯಾತಿ ಪಡೆದಿತ್ತು. ಕೊಲೆಗಳು, ದರೋಡೆಗಳು ಕಳ್ಳತನಗಳು ಸಾಮಾನ್ಯವೆಂದರೆ ಸಾಮಾನ್ಯ ಅನ್ನುವಂತೆ ಅಲ್ಲಿ ಈ ಮೊದಲು ನಡೆಯುತ್ತಿದ್ದವು. ಆದ್ರೆ ಇತಿಹಾಸ ಮರುಕಳಿಸುತ್ತಿದೆಯೋ ಏನೋ ಅನ್ನೋ ರೀತಿಯ ಒಂದು ಘಟನೆ ಬಿಹಾರದ ಪೂರ್ನಿಯಾದಲ್ಲಿ ನಡೆದು ಹೋಗಿದೆ. ತನಿಷ್ಕಾ ಶೋ ರೂಮ್​ಗೆ ನುಗ್ಗಿದ ದರೋಡೆಕೋರೆರು ಅಕ್ಷರಶಃ ಶೋರೂಮ್​ನ್ನು ದೋಚಿಕೊಂಡು ಹೋಗಿದ್ದಾರೆ.

ಜಸ್ಟ್ 20 ನಿಮಿಷ ಅಷ್ಟೇ, ಆ 20 ನಿಮಿಷದಲ್ಲಿಯೇ 2 ಕೋಟಿ ಮೌಲ್ಯದ ಚಿನ್ನಾಭರಣವನ್ನು ಲೂಟಿ ಮಾಡಿ ಎಸ್ಕೇಪ್ ಆಗಿದೆ ದರೊಡೆಕೋರರ ತಂಡ. ಬಿಹಾರದ ಪೂರ್ನಿಯಾದಲ್ಲಿರುವ ತನಿಷ್ಕಾ ಶೋರೂಮ್​ಗೆ ಶುಕ್ರವಾರ ಗಿರಾಕಿಗಳ ವೇಷದಲ್ಲಿ ಬಂದ ಆರೇಳು ಮಂದಿ ದರೋಡೆಕೋರರ ತಂಡದಲ್ಲಿ ಇಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೈಯದಲ್ಲಿ ದೊಡ್ಡ ಬ್ಯಾಗ್ ಹಿಡಿದುಕೊಂಡು ಬಂದಿದ್ದರು. ಅವರು ದರೋಡೆ ಮಾಡುವ ಉದ್ದೇಶದಿಂದಲೇ ಬಂದಿರುವುದರಿಂದ ಕೇವಲ 20 ನಿಮಿಷದಲ್ಲಿ ಅದನ್ನು ಮಾಡಿ ಮುಗಿಸಿದರು ಅಂತ ತನಿಷ್ಕಾ ಶೋರೂಮ್​ನ ಸಿಬ್ಬಂದಿ ಹೇಳಿದೆ. ಗನ್ ಹಿಡಿದುಕೊಂಡೆ ಶೋರೂಮ್​ಗೆ ನುಗ್ಗಿದ ತಂಡ ಕೊಟ್ಯಾಂತರ ರೂಪಾಯಿ ಮೌಲ್ಯದ ಚಿನ್ನ, ವಜ್ರದ ಆಭರಣಗಳನ್ನು ತಮ್ಮ ಬ್ಯಾಗ್​​ನಲ್ಲಿ ತುಂಬಿಕೊಂಡು ಹೋಗಿದ್ದಾರೆ ಎಂದು ಸಿಬ್ಬಂದಿ ಹೇಳಿದೆ.

ಸ್ಥಳಕ್ಕೆ ಭೇಟಿ ನೀಡಿದ ಪಪ್ಪು ಯಾದವ್!

ತನಿಷ್ಕಾ ಶೋರೂಮ್​ಗೆ ಭೇಟಿ ನೀಡಿದ ಲೋಕಸಭಾ ಸದಸ್ಯ ಪಪ್ಪು ಯಾದವ್, ಯಾವುದೋ ಅಂತಾರಾಷ್ಟ್ರೀಯ ಗ್ಯಾಂಗ್ ಚಿನ್ನದ ಶೋರೂಮ್​ ಲೂಟಿ ಮಾಡಿದೆ ಎಂದು ಹೇಳಿದ್ದಾರೆ. ಹತ್ತಿರದಲ್ಲಿಯೇ ಎಸ್​ಪಿ ಮನೆ ಇದೆ ಆದರೂ ಕೂಡ ಇಂತಹ ಘಟನೆಯೊಂದು ನಡೆದು ಹೋಗಿದೆ. ಆಡಳಿತ ನಡೆಸುವವರೇ ಕ್ರಿಮಿನಲ್​ಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಗುಡುಗಿದ್ದಾರೆ. ಡಿಐಜಿ ವಿಕಾಸ್​ ಕುಮಾರ್ ಅವರು ತನಿಷ್ಕಾ ಶೋ ರೂಮ್‌ ಪರಿಶೀಲನೆ ನಡೆಸಿದ್ದಾರೆ. ಶೋರೂಮ್​ನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ದರೋಡೆ ಗ್ಯಾಂಗ್ ಹೆಡೆಮುರಿ ಕಟ್ಟೋದಕ್ಕೆ ಸಜ್ಜಾಗಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img

Related articles

MAHAKUMBH : ಆ ಅಘೋರಿ ಭವಿಷ್ಯವೇ ನಿಜವಾಯ್ತಾ?

MAHAKUMBH : ಉತ್ತರ ಪ್ರದೇಶದ ದೇವ ಪ್ರಯಾಗದಲ್ಲಿ MAHAKUMBH ನಡೆಯುತ್ತಿದೆ. ಕಳೆದ 30 ದಿನಗಳ ಅಂತರದಲ್ಲಿ 7 ಅಗ್ನಿ ದುರಂತ ಎದುರಾಗಿವೆ. ಈ ಹಿಂದೆ ಹೀಗೆ...

DARSHAN : ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ದರ್ಶನ್ ಭಾವುಕ

Darshan News: ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ DARSHAN ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 48ನೇ ವರ್ಷಕ್ಕೆ ಕಾಲಿಟ್ಟ ದಾಸನಿಗೆ ಸ್ಯಾಂಡಲ್​ವುಡ್​ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು...

TULASI GABBARD : ಅಮೆರಿಕ ಗುಪ್ತಚರ ಇಲಾಖೆಯ ನೂತನ ಮುಖ್ಯಸ್ಥೆ

TULASI GABBARD : TULASI GABBARD​, ಈಗ ಅಮೆರಿಕಾದ ರಾಷ್ಟ್ರೀಯ ಗುಪ್ತಚರ ದಳ ನಿರ್ದೇಶನದ ನೂತನ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ. ಭಾರತದೊಂದಿಗೆ ಅವರಿಗಿರುವ ನಂಟಿನ ಬಗ್ಗೆಯೂ ಕೂಡ...

MATSYA 6000 : ಸಮುದ್ರ ಜಲಾಂತರ್ಗಾಮಿ ನೌಕೆಯ ಪರೀಕ್ಷೆ ಯಶಸ್ವಿ

Matsya 6000: ದೇಶದ ನಾಲ್ಕನೇ ತಲೆಮಾರಿನ ಆಳ ಸಮುದ್ರ ಜಲಾಂತರ್ಗಾಮಿ ನೌಕೆಯ ಪರೀಕ್ಷೆ ಪೂರ್ಣಗೊಂಡಿದ್ದು, 2025ರ ಅಂತ್ಯದ ವೇಳೆಗೆ 500 ಮೀಟರ್ ಪ್ರಯೋಗ ನಡೆಯಲಿದೆ. ಇದು...