spot_img

MICRO FINANCE TORTURE:ಬೀದಿ ಪಾಲಾದ ಕುಟುಂಬ; ಡಿಸಿ ಹೇಳಿದ್ದಿಷ್ಟು .

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Belgaum News:

ಒಂದು ತಿಂಗಳ ಹಸುಗೂಸು, ಬಾಣಂತಿ ಸೇರಿ ಮನೆಯವರನ್ನೆಲ್ಲಾ ಹೊರಗೆ ಹಾಕಿರುವ ಮೈಕ್ರೋ FINANCE ಸಿಬ್ಬಂದಿ, ಕುಟುಂಬವೊಂದರ ಮನೆ ಜಪ್ತಿ ಮಾಡಿದೆ.ಕಳೆದ 5 ವರ್ಷಗಳ ಹಿಂದೆ FINANCE​ನಲ್ಲಿ 5 ಲಕ್ಷ ರೂ. ಸಾಲ ಪಡೆದಿದ್ದೆ. ಬಳಿಕ ಮೂರು ವರ್ಷಗಳ ಕಾಲ ನಿರಂತರ ಕಂತು ತುಂಬಿದ್ದೆ.

ಆದರೆ, ಅನಾರೋಗ್ಯ ಮತ್ತು ಮಗಳ ಹೆರಿಗೆ ಹಿನ್ನೆಲೆಯಲ್ಲಿ ಕಳೆದ 6 ತಿಂಗಳಿಂದ ಕಂತು ತುಂಬಿಲ್ಲ. ಹಾಗಾಗಿ, ನಿನ್ನೆ ಏಕಾಏಕಿ ಪೊಲೀಸರು ಹಾಗೂ ವಕೀಲರ ಸಮ್ಮುಖದಲ್ಲೆ ಮನೆಯನ್ನು FINANCEಸಿಬ್ಬಂದಿ ಜಪ್ತಿ ಪಡಿಸಿಕೊಂಡಿದ್ದಾರೆ. ಮನೆಯಲ್ಲಿದ್ದ ಒಂದು ತಿಂಗಳ ಬಾಣಂತಿ ಸದ್ಯ ಬೀದಿಪಾಲಾಗಿದ್ದಾರೆ.

ಮನೆಯ ಅಕ್ಕದ ಪುಟ್ಟ ಶೆಡ್​ನಲ್ಲಿಯೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅನಾರೋಗ್ಯ, ಮನೆಯ ಪರಿಸ್ಥಿತಿ ನೆನದು ಲೋಹಾರ್ ಕುಟುಂಬ ಕಣ್ಣಿರು ಹಾಕುತ್ತಿದೆ.ಒಂದು ತಿಂಗಳ ಹಸುಗೂಸು, ಬಾಣಂತಿ ಸೇರಿ ಮನೆಯವರನ್ನೆಲ್ಲಾ ಹೊರಗೆ ಹಾಕಿದ್ದಲ್ಲದೇ, ವಾಸಿಸುವ ಮನೆ ಗೋಡೆ ಮೇಲೆ ಹರಾಜಿದೆ ಎಂದು ಬರೆದಿರುವುದಾಗಿ ಮೈಕ್ರೋFINANCE ಸಂಸ್ಥೆಯಿಂದ ಕಿರುಕುಳಕ್ಕೊಳಗಾದ ಕುಟುಂಬ ಅಳಲು ತೋಡಿಕೊಂಡಿದೆ.

ಬಾಣಂತಿ, ಹಸುಗೂಸು ಅಂತಾನೂ ನೋಡದೇ ಪಾತ್ರೆ, ಬಟ್ಟೆಗಳನ್ನು ಹೊರಗೆ ಹಾಕಿ ಮನೆಗೆ ಬೀಗ ಜಡಿದಿದ್ದಾರೆ.ರಾಜ್ಯದಲ್ಲಿ ಮೈಕ್ರೋ FINANCE ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳು ಮುಂದುವರೆದಿದ್ದು, ಬೆಳಗಾವಿಗೂ ತಟ್ಟಿದೆ.

ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಗಣಪತಿ ರಾಮಚಂದ್ರ ಲೋಹಾರ್ ಎಂಬುವರ ಮನೆ ಜಪ್ತಿ ಪಡಿಸಿಕೊಳ್ಳಲಾಗಿದೆ.ಮೊದಲೇ ಸಿಜರಿಯನ್ ಮೂಲಕ ಹೆರಿಗೆ ಆಗಿರುವ ಬಾಣಂತಿ ಮತ್ತು ಹಸುಗೂಸಿಗೆ ಆರೈಕೆ ಬೇಕಿತ್ತು.

ಆದರೆ, ಮಾನವೀಯತೆಯನ್ನೂ ಲೆಕ್ಕಿಸದೇ FINANCE ಸಿಬ್ಬಂದಿ ಈ ರೀತಿ ಉದ್ಧಟತನ ಮೆರೆದಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಇಂತಹದ್ದೊಂದು ಘಟನೆ ಆಗಬಾರದಿತ್ತು, ಆಗಿದೆ. ಮಧ್ಯವರ್ತಿಗಳ ಹಾವಳಿಯಿಂದ ಈ ರೀತಿ ಆಗುತ್ತಿದೆ. ಮಧ್ಯವರ್ತಿ ಹಾಗೂ ಮೂರನೇ ವ್ಯಕ್ತಿಗಳಿಂದ ಕಾಟ ಕೊಡುತ್ತಿರುವುದು ನಮ್ಮ ಇಂಟಲಿಜೆನ್ಸ್ ಮೂಲಕ ಮಾಹಿತಿ ಇದೆ.

ನಾನು ಈಗಾಗಲೇ ಅಧಿಕಾರಿಗಳಿಗೆ ಹಾಗೂ ಎಸ್ಪಿ ಅವರಿಗೆ ಕ್ರಮಕ್ಕಾಗಿ ಸೂಚನೆ ನೀಡಿದ್ದೇನೆ ಎಂದರು.ಮೂರು ವರ್ಷ ಕಟ್ಟಿರುವ ಕಂತಿನ ಹಣದ ಸ್ಟೇಟಮೆಂಟ್ ಕೊಡಲು FINANCE ಸಿಬ್ಬಂದಿ ನಿರಾಕರಿಸುತ್ತಿದ್ದಾರೆ. ಸದ್ಯ 7.5 ಲಕ್ಷ ರೂಪಾಯಿ ಒಂದೇ ಹಂತದಲ್ಲಿ ಕಟ್ಟುವಂತೆ FINANCE ಸಿಬ್ಬಂದಿ ಪೀಡಿಸುತ್ತಿದ್ದಾರೆ.

ಈಗಾಗಲೇ ಮೂರು ವರ್ಷ ಕಂತು ತುಂಬಿದರೂ, ಈಗ ಮತ್ತೆ 7.5 ಲಕ್ಷ ರೂ. ನಾವು ಎಲ್ಲಿಂದ ತುಂಬುವುದು ಅಂತಾ ಲೋಹಾರ್ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.ಮೊದಲೇ ಸಿಜರಿಯನ್ ಮೂಲಕ ಹೆರಿಗೆ ಆಗಿರುವ ಬಾಣಂತಿ ಮತ್ತು ಹಸುಗೂಸಿಗೆ ಆರೈಕೆ ಬೇಕಿತ್ತು. ಆದರೆ, ಮಾನವೀಯತೆಯನ್ನೂ ಲೆಕ್ಕಿಸದೇ FINANCE ಸಿಬ್ಬಂದಿ ಈ ರೀತಿ ಉದ್ಧಟತನ ಮೆರೆದಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಅಲ್ಲದೇ, ಇನ್ಮುಂದೆ ಈ ರೀತಿಯ ಘಟನೆ ಆಗಬಾರದು‌.

ಇದರ ಬಗ್ಗೆ ಗಮನ ಹರಿಸುತ್ತೇವೆ. ಜಿಲ್ಲೆಯಲ್ಲಿ ಬಹಳಷ್ಟು FINANCE​ಗಳಿಂದ ಕಿರುಕುಳ ಆಗುತ್ತಿದೆ. ಬೇರೆ ಬೇರೆ ರಾಜ್ಯದಲ್ಲಿ ಮೈಕ್ರೋ FINANCE​ಗಳು ಕೆಲಸ ಮಾಡುತ್ತಿವೆ. ಯಾವುದೇ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಬಾಣಂತಿಯನ್ನು ಮನೆಯಿಂದ ಹೊರಹಾಕಿ ಮನೆ ಹರಾಜಿಗಿಟ್ಟ ಪ್ರಕರಣ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಸತೀಶ್​ ಜಾರಕಿಹೊಳಿ, ಕುಟುಂಬಸ್ಥರು ದೂರು ಕೊಟ್ಟರೆ, FINANCE​ನವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

 

ಇದ್ದನು ಓದಿರಿ :WANKHEDE STADIUM 50TH ANNIVERSARY:14,505 ಲೆದರ್ ಬಾಲ್ಗಳಿಂದ ‘ವಾಕ್ಯ’ ರಚಿಸಿ ಗಿನ್ನೆಸ್ ದಾಖಲೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

TALKS WITH FARMERS:ಸೌಹಾರ್ದಯುತವಾಗಿ ಕೊನೆಗೊಂಡ ಕೇಂದ್ರ ಸರ್ಕಾರ, ರೈತ ಸಂಘಟನೆಗಳ ಮಾತುಕತೆ

Chandigarh News: ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚೌಹಾಣ್, "ಮುಂದಿನ ಸಭೆ ಮಾರ್ಚ್ 19ರಂದು ನಡೆಯಲಿದೆ" ಎಂದು ಹೇಳಿದರು. ಚೌಹಾಣ್ ಸೇರಿದಂತೆ ಕೇಂದ್ರ ವಾಣಿಜ್ಯ ಮತ್ತು...

MANN KI BAAT:ಅಂದು ಮಹಿಳೆಯರೇ ನಿರ್ವಹಿಸಲಿದ್ದಾರೆ ಪ್ರಧಾನಿಯ ಸೋಶಿಯಲ್ ಮೀಡಿಯಾ

New Delhi News: "ಮಹಿಳೆಯರ ಅದಮ್ಯ ಮನೋಭಾವವನ್ನು ನಾವು ಸಂಭ್ರಮಿಸೋಣ ಮತ್ತು ಗೌರವಿಸೋಣ" ಎಂದ ಅವರು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.ಮಾರ್ಚ್ 8...

INDIAN NATIONAL ANTHEM IN PAKISTAN:ಭಾರತ ತಂಡ ದುಬೈನಲ್ಲಿದ್ದರೂ ಪಾಕ್ ಮೈದಾನದಲ್ಲಿ ಮೊಳಗಿದ ರಾಷ್ಟ್ರಗೀತೆ!

Indian National Anthem in Pakistan News : ಈ ಪಂದ್ಯದಲ್ಲಿ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಿದ್ದು, PAKISTANದ ಗಡಾಫಿ ಮೈದಾನ ಆತಿಥ್ಯ...

MOHAMMED SHAMI DIET:90 ಕೆ.ಜಿ ಇದ್ರಂತೆ ಬೌಲರ್ ಮೊಹಮ್ಮದ್ ಶಮಿ, ತೂಕ ಇಳಿಸಿದ್ದು ಹೇಗೆ?

Dubai News: ತಾವು 34ರ ಪ್ರಾಯದಲ್ಲೂ ಫಿಟ್‌ ಆಗಿರುವುದು ಹೇಗೆ ಎಂಬುದನ್ನು ಅವರು ವಿವರಿಸಿದರು. ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ನವಜೋತ್ ಸಿಂಗ್ ಸಿಧು ಅವರೊಂದಿಗೆ...