spot_img
spot_img

20 ಬೋಗಿಗಳ ಹೊಸ ವಂದೇ ಭಾರತ್‌ ರೈಲು; ಕರ್ನಾಟಕದ ಈ ಮಾರ್ಗದಲ್ಲಿ ಸಂಚಾರ

spot_img
spot_img

Share post:

ಬೆಂಗಳೂರು: ಬೇಡಿಕೆ ಹಿನ್ನೆಲೆ ತಿರುವನಂತಪುರ – ಮಂಗಳೂರು – ತಿರುವನಂತಪುರ ಮಾರ್ಗದಲ್ಲಿ 20 ಬೋಗಿಯ ವಂದೇ ಭಾರತ್‌ ರೈಲು ಓಡಿಸಲು ನಿರ್ಧರಿಸಲಾಗಿದೆ.

ಮಂಗಳೂರು-ತಿರುವನಂತಪುರ ವಂದೇ ಭಾರತ್‌ ರೈಲು ಸದಾ ತುಂಬಿದ್ದು, ಹೊಸ ರೈಲಿನಲ್ಲಿ ಹೆಚ್ಚಿನ ಸ್ಥಳಾವಕಾಶ ಇದೆ.

1200 ಕ್ಕೂ ಹೆಚ್ಚು ಸೀಟ್‌ಗಳಿವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರ ಬೇಡಿಕೆ ಹಿನ್ನೆಲೆ ಎಂಟು ಬೋಗಿಗಳಿರುವ ವಂದೇ ಭಾರತ್‌ ರೈಲಿನ ಬದಲಿಗೆ 20 ಬೋಗಿಗಳಿರುವ ವಂದೇ ಭಾರತ್‌ ರೈಲು ಬರಲಿದೆ. ತಿರುವನಂತಪುರ – ಮಂಗಳೂರು – ತಿರುವನಂತಪುರ (20631/20632) ಮಾರ್ಗದಲ್ಲಿ ಈ ನೂತನ 20 ಬೋಗಿಗಳ ರೈಲು ಓಡಲಿದೆ.ಪ್ರಸ್ತುತ ರೈಲ್ವೆಯ ಅಂಕಿ ಅಂಶ ಪ್ರಕಾರ, ಭಾರತದಲ್ಲಿ ಪ್ರಯಾಣಿಕರ ಆಕ್ಯುಪೆನ್ಸಿ ಶೇಕಡಾ 200 ರ ಹತ್ತಿರವಿರುವ ರೈಲು ಇದಾಗಿದೆ.

100 ಸೀಟ್‌ಗಳಿರುವ ರೈಲಿಗೆ ಹತ್ತಿ ಇಳಿದು 200 ಪ್ರಯಾಣಿಕರು ಸೀಟು ಉಪಯೋಗಿಸುತ್ತಾರೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.

ಮಂಗಳೂರು-ತಿರುವನಂತಪುರ ರೈಲಿನ (20631) 474 ಸೀಟು ಯಾವಾಗಲೂ ಪ್ರಯಾಣಿಕರಿಂದ ತುಂಬಿರುತ್ತದೆ. ಹೀಗಾಗಿಯೇ ಹೆಚ್ಚು ಸಾಮರ್ಥ್ಯದ ರೈಲನ್ನು ಈ ಮಾರ್ಗಕ್ಕೆ ನಿಯೋಜಿಸಲಾಗುತ್ತಿದೆ.

20 ರೇಕ್‌ ಆದರೆ, 1,246 ಸೀಟಿಗೂ ಹೆಚ್ಚು ಇರಲಿದೆ. ಈ ವಂದೇ ಭಾರತ್‌ ರೈಲುಗಳನ್ನೂ ಇತ್ತೀಚೆಗಷ್ಟೇ ರೈಲ್ವೆ ಇಲಾಖೆ ಹೊರ ತಂದಿದೆ. ಹೊಸದಾಗಿ ಚೆನ್ನೈ ಇಂಟಗ್ರಲ್‌ ಕೋಚ್‌ ಫ್ಯಾಕ್ಟರಿಯಿಂದ ಬಂದ ಎರಡು ವಂದೇ ಭಾರತ್‌ಗಳನ್ನು ದಕ್ಷಿಣ ರೈಲ್ವೆಗೆ ಹಸ್ತಾಂತರಿಸಲಾಗಿದೆ.

ಈಗಾಗಲೇ 16 ಬೋಗಿಗಳಿರುವ ತಿರುವನಂತಪುರ-ಕಾಸರಗೋಡು ವಂದೇ ಭಾರತ್‌ (20634) ರೈಲಿನಲ್ಲಿಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಈ ಹೊಸ ವಂದೇ ಭಾರತ್‌ ರೈಲಿನಲ್ಲಿ ನೀಲಿ ಹಾಗೂ ಬಿಳಿ ಬಣ್ಣವನ್ನು ಹೊರತುಪಡಿಸಲಾಗಿದೆ.

ಪ್ರಸ್ತುತ ಕೇಸರಿ, ಕಪ್ಪು ಎಂಬವುಗಳ ಸಂಕೀರ್ಣವಾದ ಬಣ್ಣ ಇದರದ್ದಾಗಿದೆ. ಬಿಳಿ ಬಣ್ಣದಲ್ಲಿರುವ ಹಲವು ರೈಲುಗಳಲ್ಲಿ ಹಳದಿ ಬಣ್ಣವನ್ನೂ ಬಳಸಲಾಗಿತ್ತು. ಈ ಸಂಬಂಧ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಐಸಿಎಫ್‌ ರೈಲ್ವೆಯ ಅನುಮತಿಯೊಂದಿಗೆ ಬಣ್ಣ ಬದಲಿಸಿದೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಕಲ್ಲು ತೂರಾಟ ಮತ್ತು ರೈಲು ಹಳಿಗಳ ಮೇಲೆ ಕಲ್ಲುಎಸೆದು ವಿಧ್ವಂಸಕ ಕೃತ್ಯಕ್ಕೆ ಪ್ರಯತ್ನಿಸಿದ ಪ್ರಕರಣಗಳ ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಆರ್‌ಪಿಎಫ್‌ ಸಿಐಎಂ ಅಕ್ಬರ್‌ ಅಲಿ ನೇತೃತ್ವದ ಆರ್‌ಪಿಎಫ್‌ ತಂಡ, ಆರ್‌ಪಿಎಫ್‌ ಟ್ರೈನ್‌ ಇಂಟೆಲಿಜೆನ್ಸ್‌ ಟೀಮ್‌ ಮತ್ತು ಕಾಸರಗೋಡು ನಗರ ಠಾಣೆ ಎಸ್‌ಐ ದಿನೇಶ್‌ ಬಾಬು ಅವರನ್ನೊಳಗೊಂಡ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೂಚ್ಚಾಕ್ಕಾಡ್‌ ಎಂಬಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಕಲ್ಲುತೂರಿದ ಈ ಪ್ರಕರಣದಲ್ಲಿ 17 ವರ್ಷದ ಅಪ್ರಾಪ್ತನನ್ನು ರೈಲ್ವೆ ಆರ್‌ಪಿಎಫ್‌ ತಂಡ ಬಂಧಿಸಿದೆ. ಮಂಗಳವಾರ ಬೆಳಗ್ಗೆ ಕಳನಾಡ್‌ ರೈಲು ಹಳಿಗಳ ಮೇಲೆ ಕಲ್ಲುಇರಿಸಿದ ಘಟನೆಯಲ್ಲಿ ಪತ್ತನಂತಿಟ್ಟ ಮೂಲದ ಅಖಿಲ್‌ ಜಾನ್‌ ಮ್ಯಾಥ್ಯೂ (21) ಎಂಬಾತನನ್ನು ಬಂಧಿಸಲಾಗಿದೆ.

ಈತ ಅಮೃತಸರ – ಕೊಚ್ಚುವೇಲಿ ಎಕ್ಸ್‌ಪ್ರೆಸ್‌ ರೈಲು ಹಳಿ ಮೇಲೆ ಜಲ್ಲಿಕಲ್ಲುಇರಿಸಿದ್ದ. ಲೋಕೋ ಪೈಲೆಟ್‌ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಆರ್‌ಪಿಎಫ್‌ ಸಿಐಎಂ ಅಕ್ಬರ್‌ ಅಲಿ ತಿಳಿಸಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...