spot_img
spot_img

ಬಾಂಗ್ಲಾಗೆ ಶಾಕ್‌ ಕೊಟ್ಟ ಆರ್ ಅಶ್ವಿನ್ ಹಾಗಲ್ಲ ; ಇತಿಹಾಸ ನೆನಪಿಸಿದ ಸ್ಟಾರ್ ಆಲ್​​ರೌಂಡರ್..!​ ಏನದು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಟಫ್​ ಟೈಮ್​ನಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳೋರೆ ಹೆಚ್ಚು. ಆದ್ರೆ ಆರ್. ಅಶ್ವಿನ್ ಹಾಗಲ್ಲ. ಸಂಕಷ್ಟದ ಟೈಮ್​​​ನಲ್ಲಿ ಯಾರು ಆಡ್ತಾರೋ, ಬಿಡ್ತಾರೋ ಗೊತ್ತಿಲ್ಲ. ಆದ್ರೆ ಸ್ಟಾರ್ ಆಲ್​ರೌಂಡರ್ ಮಾತ್ರ ಹೆಬ್ಬಂಡೆಯಾಗಿ ನಿಲ್ಲುತ್ತಾರೆ.

ಟೀಮ್ ಇಂಡಿಯಾದ ‘ಆಪ್ತರಕ್ಷಕ’ ಅಶ್ವಿನ್​​​..!

ಆರ್​ ಅಶ್ವಿನ್​ ಯಾರು, ಅವರ ಕೆಪಾಸಿಟಿ ಏನು, ಸಾಧನೆ ಏನು ಅನ್ನೋದು ಎಲ್ಲರಿಗೂ ಗೊತ್ತಿದೆ. ವಿಶ್ವದ ದಿ ಬೆಸ್ಟ್​​ ಆಲ್​ರೌಂಡರ್ ಅನ್ನಿಸಿಕೊಂಡ ಅಶ್ವಿನ್​​​​​ರಂತ ಆಟಗಾರ ಟೀಮ್ ಇಂಡಿಯಾಗೆ ಸಿಗೋದು ನೂರಕ್ಕೆ ಒಬ್ಬ. ಮತ್ತೊಮ್ಮೆ ತಾನೇಕೆ ಸ್ಟಾರ್ ಆಲ್​ರೌಂಡರ್ ಅನ್ನೋದನ್ನ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಭರ್ಜರಿ ಶತಕ ಸಿಡಿಸಿದ ಅಶ್ವಿನ್​ರ​ ಕೆಚ್ಚದೆಯ ಹೋರಾಟಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರ್ತಿದೆ.

ಆರ್​​​​. ಅಶ್ವಿನ್ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಆಸರೆ

2021, ಚೆಪಾಕ್​ ಮೈದಾನದಲ್ಲಿ ನಡೆದ ಇಂಡಿಯಾ-ಇಂಗ್ಲೆಂಡ್​​​​ ಟೆಸ್ಟ್​​​​ ಅನ್ನ ಒಬ್ಬರು ಭಾರತ​ ಕ್ರಿಕೆಟ್ ಪ್ರೇಮಿ ಮರೆಯಲು ಸಾಧ್ಯವಿಲ್ಲ. ಎಸ್ಪೆಷಲಿ ಆರ್​​​ ಅಶ್ವಿನ್​​​​ ಬ್ಯಾಟ್​ನಿಂದ ಮೂಡಿ ಬಂದ ಆ ಶತಕ ಇದೆಯಲ್ಲ. ಅದಂತೂ ಇನ್ನೂ ಕಣ್ಣಂಚಿನಲ್ಲಿದೆ. ಇಂಡಿಯಾ ಟೀಮ್ ಸೆಕೆಂಡ್ ಇನ್ನಿಂಗ್ಸ್​ನಲ್ಲಿ 106 ರನ್​ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಂಗ್ಲೆಂಡ್, ಭಾರತವನ್ನ ಬೇಗನೆ ಕಟ್ಟಿ ಹಾಕಿ ಸಲುವಾಗಿ ಪಂದ್ಯ ಗೆಲ್ಲುವ ಲೆಕ್ಕಚಾರದಲ್ಲಿತ್ತು. ಆದರೆ ಆ ಕನಸಿಗೆ ಕೊಳ್ಳಿ ಇಟ್ಟಿದ್ದು ಇದೇ ಅಶ್ವಿನ್​​​.

7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಶ್ವಿನ್​​​​ ಎಂಟೆದೆ ಬಂಟನಂತೆ ಹೋರಾಡಿದ್ರು. ಆಂಗ್ಲರ ಬಲಿಷ್ಠ ಬೌಲಿಂಗ್ ಪಡೆಯನ್ನ ಛಿದ್ರಗೊಳಿಸಿದ್ರು. ಒತ್ತಡವನ್ನ ಲೆಕ್ಕಿಸದೇ ಬ್ಯಾಟ್ ಬೀಸಿದ ಅಶ್ವಿನ್​​​ ಭರ್ಜರಿ ಸೆಂಚುರಿ ಹೊಡೆದು, ಭಾರತ ತಂಡ ಸ್ಫರ್ಧಾತ್ಮಕ ಮೊತ್ತ ಕಲೆಹಾಕಲು ಕಾರಣರಾಗಿದ್ರು. ಅಶ್ವಿನ್​ ಅಮೋಘ ಶತಕದ ನೆರವಿನಿಂದ ಭಾರತ ತಂಡ ಈ ಪಂದ್ಯವನ್ನ 317 ರನ್​ಗಳಿಂದ ಗೆದ್ದು ಬೀಗ್ತು.

 

2024, ಚೆಪಾಕ್ ಮೈದಾನ.. ಭಾರತ 166ಕ್ಕೆ 6 ವಿಕೆಟ್​​..!

3 ವರ್ಷಗಳ ನಂತ್ರ ಅಶ್ವಿನ್​​​​​​​​ ಮತ್ತೆ ಭರ್ಜರಿ ಶತಕ ಸಿಡಿಸಿ ಭಾರತ ತಂಡವನ್ನ ಸಂಕಷ್ಟದಿಂದ ಪಾರು ಮಾಡಿದ್ದಾರೆ. ಇಲ್ಲಿ ಎದುರಾಳಿ ಮಾತ್ರ ಬೇರೆ. ಆದ್ರೆ ಮೈದಾನ ಸೇಮ್​​​. ಸಂದರ್ಭವು ಸೇಮ್​​. 166ಕ್ಕೆ ಭಾರತ ಪ್ರಮುಖ 6 ವಿಕೆಟ್ ಕಳೆದುಕೊಂಡಿತ್ತು. ಆಗ ತಂಡಕ್ಕೆ ಆಸರೆಯಾಗಿದ್ದು ನಿಂತಿದ್ದೆ ಮತ್ತದೇ ಅಶ್ವಿನ್​​. ಕಠಿಣ ಸಂದರ್ಭದಲ್ಲಿ ವೀರ ಸೇನಾನಿಯಂತೆ ಹೋರಾಡಿದ ಅಶ್ವಿನ್​ ಶತಕ ಬಾರಿಸಿ ತಂಡದ ಸುಸ್ಥಿತಿಗೆ ಕಾರಣರಾಗಿದ್ದಾರೆ.

2024.. ಬಾಂಗ್ಲಾ ಎದುರಿನ 100

ಈ ಎರಡು ದಿಟ್ಟ ಇನ್ನಿಂಗ್ಸ್​ನಿಂದ ಒಂದಂಥೂ ಅರ್ಥ ಆಗುತ್ತೆ. ಅದೇನಂದ್ರೆ ತಂಡಕ್ಕೆ ಸಂಕಷ್ಟ ಅಂತ ಬಂದ್ರೆ ಅಶ್ವಿನ್​​ ರಕ್ಷಕನಾಗ್ತಾರೆ. ಡೋಂಟ್​​ ವರಿ ನಾನಿದ್ದೇನೆ ಅನ್ನೋ ಆಶಾಕಿರಣ ಅವರು. ಮುಂದೆಯೂ ಸೇವಿಯರ್​ ಅಶ್ವಿನ್ ಬ್ಯಾಟ್​​ನಿಂದ ಇಂತಹ ಇನ್ನಷ್ಟು ದಿಟ್ಟ ಇನ್ನಿಂಗ್ಸ್​ಗಳು ಮೂಡಿ ಬರಲಿ.

 

WhatsApp Group Join Now
Telegram Group Join Now
Instagram Account Follow Now
spot_img

Related articles

KIREN RIJIJU WAQF BILL:ವಕ್ಫ್ ತಿದ್ದುಪಡಿ ಮಸೂದೆಗೆ ಚಂದ್ರಬಾಬು, ನಿತೀಶ್, ಮುಸ್ಲಿಮ್ ಸಂಸದರಿಂದ ಬೆಂಬಲ

Srinagar (Jammu-Kashmir) News : ಬಿಜೆಪಿ ಹೊರತಾಗಿ ಎನ್​ಡಿಎ ಕೂಟದಲ್ಲಿ WAQF ಮಸೂದೆ ತಿದ್ದುಪಡಿಗೆ ಸಮ್ಮತಿ ಇಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ...

AMARTYA SEN DESCRIBE MANMOHAN:ಮನಮೋಹನ್ ಸಿಂಗ್ ಒಬ್ಬ ಮಹಾನ್ ವ್ಯಕ್ತಿ, ಅದ್ಭುತ ಅರ್ಥಶಾಸ್ತ್ರಜ್ಞ

Kolkata (West Bengal) News: ಪಶ್ಚಿಮ ಬಂಗಾಳದ ಬಿರ್ಭೂಮ್​​ನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, MANMOHAN​ ಸಿಂಗ್​ ಮತ್ತು ನಾನು ಕೇಂಬ್ರಿಡ್ಜ್‌ನಲ್ಲಿ ಓದುತ್ತಿರುವ ವೇಳೆ ಉತ್ತಮ...

H D DEVE GOWDA:ರಾಜ್ಯದಲ್ಲಿ ಕೃಷ್ಣ, ಕಾವೇರಿ, ಗೋದಾವರಿ ನದಿ ಜೋಡಣೆಗೆ ಎಲ್ಲರೂ ಧ್ವನಿ ಎತ್ತಬೇಕಿದೆ

Bangalore News: ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ರಾಜ್ಯಸಭೆಯಲ್ಲಿ ಗೋದಾವರಿ, ಕೃಷ್ಣ, ಕಾವೇರಿ ನದಿ ಜೋಡಣೆ ಬಗ್ಗೆ ತಮಿಳುನಾಡಿನ ರಾಜ್ಯಸಭಾ...

MAHINDRA ELECTRIC SUV BOOKING OPEN:ಅಬ್ಬಬ್ಬಾಂದ್ರೆ ಎಷ್ಟಿರಬಹುದು?

Mahindra Electric SUV Booking Open News: ಇವುಗಳನ್ನು ನವೆಂಬರ್ 2024ರಲ್ಲಿ 'XEV 9E' ಮತ್ತು 'BE 6' ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿತ್ತು. ಎಲೆಕ್ಟ್ರಿಕ್...