ಸಿದ್ದನಕೊಳ್ಳ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭ ಜರುಗಿತು. ಜ್ಯೋತಿ ಬೆಳಗಿಸುವ ಮೂಲಕ ಶಾಸಕ ವಿಜಯಾನಂದ ಕಾಶಪ್ಪನವರ ಸಮಾರಂಭಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಚಲನಚಿತ್ರ ಸಂಗೀತ ನಿರ್ದೇಶಕ RAVI BASRUR ಅವರಿಗೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಯನ್ನು ರಾಜು ಕಿನ್ನಾಳ ಅವರಿಗೆ ಸಿದ್ದನಕೊಳ್ಳ ಮಠದಿಂದ ಪ್ರಶಸ್ತಿ ವಿತರಿಸಲಾಯಿತು. ಪ್ರಶಸ್ತಿ ಪಡೆದುಕೊಂಡ ಇಬ್ಬರೂ ಅಭಿಪ್ರಾಯ ಹಂಚಿಕೊಂಡರು.
ಸಂಗೀತ ನಿರ್ದೇಶಕ RAVI BASRUR ಮಾತನಾಡಿ, ಪ್ರತಿಭೆಗಳನ್ನು ಕಂಡೊಡನೆ ಅವರನ್ನು ಎತ್ತಿ ವೇದಿಕೆಗೆ ಬಿಟ್ಟು ಬಿಡಿ. ಅವ್ರು ಬದುಕೊಳ್ತಾರೆ. ನಿಮ್ಮ ಹೆಸರೇಳಿ ಬದುಕೊಳ್ತಾರೆ. ಅದಕ್ಕೆ ನನ್ನ ಜೀವನವೇ ಉದಾಹರಣೆ. ನನ್ನ ಜೀವನವೇ ಬೇಡ ಎಂದುಕೊಂಡಿದ್ದೆ. ಇನ್ನು ಬದುಕು ಸಾಧ್ಯವಿಲ್ಲ ಎನಿಸಿತ್ತು. ಆ ಸಮಯದಲ್ಲಿ ನನಗೆ ಬೆಳಕು ಕೊಟ್ಟವರು RAVI BASRUR .
ಅವರ ಹೆಸರಿನಲ್ಲಿ ನಾನೀಗ ಜೀವಿಸುತ್ತಿದ್ದೇನೆ ಎಂದು ತಿಳಿಸಿದರು. ಇದೇ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು, ಕೆಪಿಸಿಸಿ ಮಹಿಳಾ ಘಟಕ ಮುಖಂಡರು ಆಗಿರುವ ವೀಣಾ ಕಾಶಪ್ಪನವರ ಹಾಗೂ ಸಮಾರಂಭ ಉದ್ಘಾಟಿಸಿದ ಶಾಸಕ ವಿಜಯಾನಂದ ಕಾಶಪ್ಪನವರು ಮಾತನಾಡಿ, ಮಠದ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಿದ್ದನಕೊಳ್ಳದ ಡಾ.ಶಿವಕುಮಾರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.
ಇದನ್ನು ಓದಿರಿ : BUS FIRE INCIDENT : ಹೊತ್ತಿ ಉರಿದ ಬಸ್, ತೆಲಂಗಾಣದ ಓರ್ವ ಸಾವು