spot_img
spot_img

ROMANTIC CITY MUMBAI : ಇಲ್ಲಿ ನೋಡಲೇಬೇಕಾದ ಟಾಪ್ 5 ತಾಣಗಳಿವೆ!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Mumbai (Maharashtra) News:

2025ರ ವಿಶ್ವದ ಅತ್ಯಂತ ROMANTIC CITYಗಳಲ್ಲಿ ಪಟ್ಟಿ ಬಿಡುಗಡೆಯಾಗಿದ್ದು, ಮಹಾರಾಷ್ಟ್ರದ ರಾಜಧಾನಿ ಮುಂಬೈ ದೇಶದ ಅತ್ಯಂತ ROMANTIC CITYವಾಗಿ ಹೊರಹೊಮ್ಮಿದೆ. ಇಲ್ಲಿರುವ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ.2025ರ ವಿಶ್ವದ ಅತ್ಯಂತ ROMANTIC CITYಗಳಲ್ಲಿ ಪಟ್ಟಿ ಬಿಡುಗಡೆಯಾಗಿದ್ದು, ಮಹಾರಾಷ್ಟ್ರದ ರಾಜಧಾನಿ ಮತ್ತು ಭಾರತದ ಆರ್ಥಿಕ ರಾಜಧಾನಿಯಾಗಿರುವ ಮುಂಬೈ 49ನೇ ಸ್ಥಾನ ಪಡೆದಿದೆ.

ಈ ಮೂಲದ ದೇಶದ ಅತ್ಯಂತ ROMANTIC CITYವಾಗಿ ಹೊರಹೊಮ್ಮಿದೆ.ಸಮೀಕ್ಷೆಯ ಪ್ರಕಾರ, ದಕ್ಷಿಣ ಆಫ್ರಿಕಾದ ಕೇಪ್ ಟೌನ್, ಬ್ಯಾಂಕಾಕ್, ನ್ಯೂಯಾರ್ಕ್ ಸಿಟಿ, ಮೆಲ್ಬೋರ್ನ್ ಮತ್ತು ಲಂಡನ್ ಮೊದಲ ಐದು ಸ್ಥಾನಗಳನ್ನು ಅಲಂಕರಿಸಿವೆ. ಮುಂಬೈ 49ನೇ ಸ್ಥಾನದಲ್ಲಿದೆ. ಈ ಪ್ರತಿಯೊಂದು ನಗರ ತನ್ನದೇ ವಿಶಿಷ್ಟ ಸಂಸ್ಕೃತಿ, ವಿಭಿನ್ನ ಆಹಾರ ಶೈಲಿ ಮತ್ತು ಕ್ರಿಯಾತ್ಮಕ ಜೀವನಶೈಲಿಯಿಂದ ಖ್ಯಾತಿ ಪಡೆದಿವೆ.

ಆಹಾರ, ಸಂಸ್ಕೃತಿ, ನೈಟ್​ ಲೈಫ್​, ಜೀವನ ನಿರ್ವಹಣೆಗೆ ಆಗುವ ಖರ್ಚು ಮತ್ತು ಜೀವನದ ಗುಣಮಟ್ಟದ ಆಧಾರದ ಮೇಲೆ ವಿಶ್ವದಾದ್ಯಂತ ಜಾಗತಿಕ ಸಮೀಕ್ಷೆ ನಡೆಸಿ ಅತ್ಯಂತ ROMANTIC CITYಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.ಇನ್ನು ಮುಂಬೈ ನಗರ ಸುದೀರ್ಘ ಇತಿಹಾಸವನ್ನು ಹೊಂದಿದೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ನೀವು ಸಹ ದೇಶದ ಅತ್ಯಂತ ROMANTIC CITYಕ್ಕೆ ಭೇಟಿ ನೀಡಲು ಪ್ಲ್ಯಾನ್​ ಮಾಡಿದ್ದೀರಾ?. ಹಾಗಾದರೆ ಇಲ್ಲಿದೆ ಮುಂಬೈನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿ.

Marine Drive: ಇದು ಪ್ರೇಮಿಗಳ ಮತ್ತು ಕಪಲ್ಸ್​ಗಳ ನೆಚ್ಚಿನ ತಾಣವಾಗಿದೆ. ನೀವು ಇಲ್ಲಿಗೆ ಭೇಟಿ ನೀಡಲು ಬಯಸಿದರೆ, ಮುಂಬೈನ ಚರ್ಚ್‌ಗೇಟ್ ನಿಲ್ದಾಣದಿಂದ ಕೇವಲ ಎರಡು ನಿಮಿಷ ನಡೆದರೆ ಈ ಸ್ಥಳ ಸಿಗುತ್ತದೆ. ಪ್ರತಿ ನೂರಾರು ಜನ ತಮ್ಮ ಪ್ರೀತಿಪಾತ್ರರೊಂದಿಗೆ ಸೂರ್ಯಾಸ್ತವನ್ನು ಆನಂದಿಸಲು ಅಲ್ಲಿಗೆ ಬರುತ್ತಾರೆ.

ಶುಕ್ರವಾರ, ಶನಿವಾರ, ಭಾನುವಾರದಂದು ಅಂದರೆ ವಾರಾಂತ್ಯದ ದಿನಗಳಲ್ಲಿ ರಾತ್ರಿ ವಿಹಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಪಲ್​ಗಳು ಇಲ್ಲಿಗೆ ಭೇಟಿ ನೀಡುತ್ತಾರೆ.ಇದು ಮುಂಬೈನ ಅದ್ಭುತ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು. ಇದನ್ನು ರಾಣಿಯ ನೆಕ್‌ಲೆಸ್ ಎಂದೂ ಕರೆಯಲಾಗುತ್ತದೆ. ಇಲ್ಲಿ ಸೂರ್ಯಾಸ್ತದ ನೋಟವನ್ನು ಕಣ್ಣುಂಬಿಕೊಳ್ಳುವುದೇ ಅದ್ಭುತ ಅನುಭವ. ಇದೂ ಮುಂಬೈನ ಹೆಗ್ಗುರುತು.

Gateway of India: ಇನ್ನು ವಿದೇಶಿ ಪಕ್ಷಿಗಳು ಬೋಟ್​ ಮೇಲೆ ಸುಳಿದಾಡುತ್ತವೆ. ಅನೇಕರು ಈ ವಿದೇಶಿ ಪಕ್ಷಿಗಳಿಗೆ ಪ್ರೀತಿಯಿಂದ ಆಹಾರವನ್ನು ನೀಡುತ್ತಾರೆ. ಆದರೆ, ಇದಕ್ಕೆ ನಿಷೇಧ ಇದೆ ಎಂಬುದು ಗೊತ್ತಿರಲಿ. ನೀವು ಗೇಟ್‌ವೇ ಆಫ್ ಇಂಡಿಯಾಕ್ಕೆ ಭೇಟಿ ನೀಡಲು ಬಯಸಿದರೆ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಚರ್ಚ್‌ಗೇಟ್ ನಿಲ್ದಾಣದಿಂದ ಎಸಿ ಬಸ್‌ಗಳು ಲಭ್ಯವಿದ್ದು, ಅಲ್ಲಿಂದ ಹೋಗಬಹುದು.

ಇಲ್ಲಿ ನೀವು ಹೋಟೆಲ್ ತಾಜ್, ಅರಬ್ಬಿ ಸಮುದ್ರದ ಅದ್ಭುತ ನೋಟ, ಸುಂದರವಾದ ಸೂರ್ಯಾಸ್ತವನ್ನು ಆನಂದಿಸಬಹುದು. ಅಲ್ಲದೆ, ನಿಮ್ಮ ಪ್ರೀತಿಪಾತ್ರರ ಜೊತೆ ಬೋಟಿಂಗ್ ಹೋಗಲು ನೀವು ಬಯಸಿದರೆ, ಅದು ಇಲ್ಲಿ ಲಭ್ಯವಿದೆ. ಈ ಬೋಟಿಂಗ್ ತುಂಬಾ ಜನಪ್ರಿಯವಾಗಿದೆ. ಬೋಟ್​ನಲ್ಲಿ ಹೋಗುವಾಗ ಶಾಂತ ಸಮುದ್ರ ಮತ್ತು ಮುಂಬೈ ನಗರದ ಸುಂದರ ದೃಶ್ಯಗಳನ್ನು ನೀವು ನೋಡಬಹುದು.

Girgaon Chowpatty:ಸ್ಟ್ರೀಟ್​ ಫೋಡ್​ಗಳು, ಮಕ್ಕಳು ಆಟವಾಡಲು ಉದ್ಯಾನಗಳು, ಹಿರಿಯ ನಾಗರಿಕರಿಗೆ ನಾನಾ – ನಾನಿ ಪಾರ್ಕ್, ಕುದುರೆ ಸವಾರಿ, ಒಂಟೆ ಸವಾರಿ ಇಲ್ಲಿ ಲಭ್ಯವಿದೆ. ಆದ್ದರಿಂದ ನೀವು ನಿಮ್ಮ ಕುಟುಂಬ ಅಥವಾ ಪ್ರೀತಿಪಾತ್ರರೊಂದಿಗೆ ಇಲ್ಲಿಗೆ ಭೇಟಿ ನೀಡಬಹುದು.

ಈ ಸ್ಥಳ ಕಪಲ್​ಗಳಿಗೆ ಉತ್ತಮ ಆಯ್ಕೆಯಾಗಿದೆ. ಗಿರ್ಗಾಂವ್ ಚೌಪಾಟಿಯ ಆಡಳಿತಾತ್ಮಕ ಹೆಸರು ಕೆಲವೇ ಜನರಿಗೆ ತಿಳಿದಿದೆ. ಗಿರ್ಗಾಂವ್ ಚೌಪಾಟಿಯನ್ನು ಸ್ವರಾಜ್ಯ ಭೂಮಿ ಎಂದೂ ಕರೆಯುತ್ತಾರೆ. ರಜಾದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಬರುತ್ತಾರೆ.

Bandstand, Bandra:  ನೀವು ಮುಂಬೈಗೆ ಬಂದರೆ ಬ್ಯಾಂಡ್‌ಸ್ಟ್ಯಾಂಡ್‌ನ ಕಲ್ಲಿನ ಮೇಲೆ ಕುಳಿತು ಸ್ವಲ್ಪ ಸಮಯ ಕಳೆಯಬಹುದು. ಇನ್ನು ಪ್ರಸಿದ್ಧ ನಟ ಶಾರುಖ್ ಖಾನ್ ಅವರ ಬಂಗಲೆ ಕೂಡ ಇಲ್ಲಿ ನೀವು ಕಣ್ತುಂಬಿಕೊಳ್ಳಬಹುದು. ನೀವು ಅದೃಷ್ಟವಂತರಾಗಿದ್ದರೆ, ಸಂಜೆಯ ವೇಳೆ ಶಾರುಖ್ ಖಾನ್ ಅವರನ್ನು ನೋಡಬಹುದು.

ಬ್ಯಾಂಡ್‌ಸ್ಟ್ಯಾಂಡ್ ಬಾಂದ್ರಾದ ಕಡಲತೀರದ ಕಲ್ಲಿನ ಮಾರ್ಗವಾಗಿದೆ. ಇದನ್ನು ಹ್ಯಾಂಗ್‌ಔಟ್ ಸ್ಪಾಟ್ ಮತ್ತು ಜೋಗರ್ಸ್ ಪಾರ್ಕ್ ಎಂದೂ ಕರೆಯುತ್ತಾರೆ. ಬ್ಯಾಂಡ್‌ಸ್ಟ್ಯಾಂಡ್ ಕಪಲ್​ಗಳಿಗೆ ನೆಚ್ಚಿನ ತಾಣವಾಗಿದೆ.

Juhu Chowpatty: ಇದು ಮುಂಬೈಕರ್‌ಗಳಿಗೆ ವಿಶೇಷ ಸ್ಥಳವಾಗಿದೆ. ಸಂಜೆ ನೀವು ಸಮುದ್ರತೀರದಲ್ಲಿ ಕುಳಿತು ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಸಮಯ ಕಳೆಯಬಹುದು. ನೀವು ಇಲ್ಲಿ ಸೂರ್ಯಾಸ್ತವನ್ನು ಆನಂದಿಸಬಹುದು. ನೀವು ಆಹಾರಪ್ರಿಯರಾಗಿದ್ದರೆ, ಇಲ್ಲಿಗೆ ಭೇಟಿ ನೀಡಲೇಬೇಕು. ಇವು ಮುಂಬೈನ ಕೆಲವು ಫೋಟೋಜೆನಿಕ್ ಮತ್ತು ROMANTIC CITY ಸ್ಥಳಗಳಾಗಿವೆ.

ಇದನ್ನು ಓದಿರಿ : STAR PLAYER JOINS RCB : ಗುಡ್ ನ್ಯೂಸ್! RCBಗೆ ಸ್ಟಾರ್ ಪ್ಲೇಯರ್ ಎಂಟ್ರಿ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GBS SYMPTOMS PREVENTIVE MEASURES: ಶಿಶುಗಳಲ್ಲಿ ಕಂಡುಬರುವ ಈ ವೈರಸ್ ಲಕ್ಷಣಗಳೇನು?

Guntur, Andhra Pradesh News: ಪ್ರಸ್ತುತ ರಾಜ್ಯಾದ್ಯಂತ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಾಂಕ್ರಾಮಿಕವಲ್ಲದಿದ್ದರೂ, ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇತರ ಸೋಂಕುಗಳಿರುವ ಜನರಲ್ಲಿ...

INDIA AND QATAR SIGNED AN AGREEMENT:ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಮುಂದೆ ಬಂದ ಕತಾರ್

New Delhi News: ಕತಾರ್ INDIAದಲ್ಲಿ 10 ಬಿಲಿಯನ್ ಡಾಲರ್​​ ಹೂಡಿಕೆ ಮಾಡಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, 2 ರಾಷ್ಟ್ರಗಳು...

REMOTE AUSTRALIAN BEACH:ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ 157 ಡಾಲ್ಫಿನ್ಗಳು ಸಾವು

Arthur River (Australia) News: 157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ...

MAHA KUMBHMELA:75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ

Lucknow (Uttar Pradesh) News: ಪವಿತ್ರ KUMBHMELA ಸ್ನಾನಕ್ಕಾಗಿ ಜೈಲು ಸಚಿವರ ಮೇಲ್ವಿಚಾರಣೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿ.ವಿ.ರಾಮಶಾಸ್ತ್ರಿ ತಿಳಿಸಿದ್ದಾರೆ. ಸಂಗಮದಿಂದ...