spot_img
spot_img

SHIRDI SAI TEMPLE SECURITY TEAM : ಶಿರಡಿ ಸಾಯಿ ದೇಗುಲದ ರಕ್ಷಣಾ ತಂಡ ಸೇರಿದ ಸಿಂಬಾ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Shirdi, Maharashtra News:

ಸಿಂಬಾ ಬಿಡಿಡಿಎಸ್​ ತಂಡ ಸೇರಿದ್ದು, ತರಬೇತಿ ನಂತರ ಶೀಘ್ರದಲ್ಲೇ SHIRDI SAI TEMPLE SECURITY TEAMದಲ್ಲಿ ನಿಯೋಜನೆಯಾಗಲಿದೆ. ಅಷ್ಟಕ್ಕೂ ಯಾರೀ ಸಿಂಬಾ? ತಿಳಿಯಲು ಈ ಸುದ್ದಿ ಓದಿ ಇದು ಶಿರಡಿಯ ಸಾಯಿ ಬಾಬಾ ದೇಗುಲದ ಭದ್ರತಾ ಪಡೆಗೆ ಸಿಂಬಾ ಎಂಬ ಹೊಸ ಶ್ವಾನವೊಂದು ಸೇರ್ಪಡೆಗೊಂಡಿದೆ. ಇದುವರೆಗೂ ವರ್ಧನ್​ ಎಂಬ ಶ್ವಾನ ದೇಗುಲದ ಭದ್ರತೆಯಲ್ಲಿ ತನ್ನದೇ ಸೇವೆಯನ್ನು ಸಲ್ಲಿಕೆ ಮಾಡುತ್ತಿತ್ತು. ಕಳೆದ 10 ವರ್ಷಗಳ ಕಾಲ ಸತತವಾಗಿ ಇಲ್ಲಿನ ಭದ್ರತೆಯಲ್ಲಿ ಕಾರ್ಯ ನಿರ್ವಹಿಸಿದ್ದು, ಈಗ ನಿವೃತ್ತಿಯಾಗಿದೆ. ಹೀಗಾಗಿ ವರ್ಧನ್​ ಸ್ಥಾನಕ್ಕೆ ಇದೀಗ 3 ತಿಂಗಳ ಸಿಂಬಾ ಹೊಸ ಸೇರ್ಪಡೆಯಾಗಿದೆ.

From now on Simba will shoulder the responsibility of:

ದೇಶದ ಪ್ರಮುಖ ಧಾರ್ಮಿಕ ಕೇಂದ್ರದಲ್ಲಿ ಒಂದಾಗಿರುವ ಶಿರಡಿಗೆ, ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇದರ ಜೊತೆಗೆ ವಿವಿಐಪಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿಬಾಬಾ ದರ್ಶನಕ್ಕೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಸಾಯಿ ದೇಗುಲದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ವಿಶೇಷ ಬಿಡಿಡಿಎಸ್​ ತಂಡ ವಹಿಸಿದೆ. SHIRDI SAI TEMPLE SECURITY TEAM ಸಾಯಿ ಬಾಬಾ ದೇಗುಲದ ಪೊಲೀಸ್​ ಆಡಳಿತ ಮುನ್ನೆಚ್ಚರಿಕೆ ನೀಡಲು ಹಾಗೂ ಆಗಬಹುದಾದದ ಅನಾಹುತ ತಡೆಯಲು ವರ್ಧನ್​ ಜಾಗದಲ್ಲಿ ಸಿಂಬಾ ನೇಮಕ ಮಾಡಿಕೊಂಡಿದೆ. ಸಿಂಬಾ ಬಾಂಬ್​ ಪತ್ತೆ ಮತ್ತು ನಿಷ್ಕ್ರೀಯ ತಂಡದಲ್ಲಿ ಕಾರ್ಯ ನಿರ್ವಹಿಸಲಿದೆ. ಸದ್ಯ ಸಿಂಬಾ ಬಿಡಿಡಿಎಸ್​ ತಂಡ ಸೇರಿದ್ದು, ತರಬೇತಿ ಪಡೆದ ಬಳಿಕ, ಶೀಘ್ರದಲ್ಲೇ ಸಾಯಿ ದೇಗುಲದ ಭದ್ರತಾ ತಂಡದಲ್ಲಿ ಸೇರ್ಪಡೆಯಾಗಿ ತನ್ನ ಕೆಲಸ ಆರಂಭಿಸಲಿದೆ.

erification by BDDS Team:

ದೇಗುಲದ ಕಕಡ್​ ಆರತಿ, ಮಧ್ಯಾಹ್ನದ ಆರತಿ, ದುಪ ಆರತಿ ಹಾಗೇ ರಾತ್ರಿ ಶೆಜಾ ಆರತಿ ಸಮಯದಲ್ಲಿ ಬಿಡಿಡಿಎಸ್​ ತಂಡ ದೇಗುಲದ ಮೂಲೆ ಮೂಲೆ ಸೇರಿದಂತೆ ಸಾಯಿ ಸಮಾಧಿ ಸುತ್ತ ಕಟ್ಟುನಿಟ್ಟಿನ ಪರಿಶೀಲನೆ ಮಾಡಲಾಗುತ್ತದೆ. ಈ ಮೊದಲು ಬಿಡಿಡಿಎಸ್​ ತಂಡ ವರ್ಧನ್​ ಎಂಬ ಶ್ವಾನದ ಸೇವೆಯನ್ನು ಪಡೆದುಕೊಳ್ಳುತ್ತಿತ್ತು. ಇದು ನಿವೃತ್ತಿಯಾದ ಬಳಿಕ ಸಿಂಬಾ ಈ ತಂಡವನ್ನು ಸೇರ್ಪಡೆಗೊಂಡಿದೆ. ಸಿಂಬಾ ಶೀಘ್ರದಲ್ಲೇ ಪುಣೆ ಸಿಐಡಿ ತರಬೇತಿ ನೀಡಲಿದೆ ಎಂದು ಸಾಯಿ ದೇಗುಲದ ಪೊಲೀಸ್​ ಇನ್ಸ್​ಪೆಕ್ಟರ್​ ಸತೀಶ್​ ಘೋಟೆಕರ್​ ತಿಳಿಸಿದ್ದಾರೆ.

Farewell to Vardhan:

ಕಳೆದ 10 ವರ್ಷಗಳಿಂದ ವರ್ಧನ್​​ ಇಂದು ಸೇವೆಯಿಂದ ನಿವೃತ್ತಿಗೊಂಡಿದ್ದಾನೆ. ಅದಕ್ಕೆ ಬಿಡಿಡಿಎಸ್​ ತಂಡ ಭಾವಪೂರ್ವಕ ಬೀಳ್ಕೊಡುಗೆ ನೀಡಿದೆ. ಅದಕ್ಕೆ ಶಾಲು ಮತ್ತು ಹೂವಿನ ಹಾರ ಹಾಕಿ ಅದರ ಸೇವೆಯನ್ನು ಭದ್ರತಾ ಪಡೆ ಸಿಬ್ಬಂದಿ ಸ್ಮರಿಸಿಕೊಂಡರು.

ಇದನ್ನು ಓದಿರಿ : KUD SYLLABUS ISSUE : ಧಾರವಾಡ ಕವಿವಿ ಪಠ್ಯ ವಿವಾದ; ತಜ್ಞರ ಸಮಿತಿ ರಚನೆ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SAFETY OF WOMEN:ಮಹಿಳೆಯರ ಸುರಕ್ಷತೆಗೆ ಶೂ ಡಿವೈಸ್ ಆವಿಷ್ಕರಿಸಿದ ವಿದ್ಯಾರ್ಥಿ

Alwar (Rajasthan) News​: ದುಷ್ಕರ್ಮಿಗಳ ವಿರುದ್ಧ ರಕ್ಷಣೆ ಪಡೆಯಲು ಶಾಕ್​ ನೀಡುವ ಶೂವನ್ನು ವಿದ್ಯಾರ್ಥಿ ವಿನ್ಯಾಸ ಮಾಡಿದ್ದಾರೆ. ಇದರಿಂದ ಧರಿಸಿದವರಿಗೆ ಯಾವುದೇ ಗಂಭೀರ ಸಮಸ್ಯೆ ಅಥವಾ...

UPCOMING SMARTPHONES IN FEBRUARY:ಈ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸ್ಮಾರ್ಟ್ಫೋನ್ಗಳಿವು

  Upcoming Smartphone Launches in February News: ಈ ಫೆಬ್ರವರಿ ತಿಂಗಳಲ್ಲಿ ಸೂಪರ್​ ಫೀಚರ್​ಗಳೊಂದಿಗೆ ಹೊಸ SMARTPHONES​ಗಳನ್ನು ಪರಿಚಯಿಸಲು ಅನೇಕ ಕಂಪೆನಿಗಳು ಕಾತುರವಾಗಿವೆ. ಪ್ರಪಂಚಾದ್ಯದಂತ ಅನೇಕ...

WORLD CANCER DAY: ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು.

  Shivarajkumar News : CANCER ವಿರುದ್ಧ ಧೈರ್ಯದಿಂದ ಹೋರಾಡಿ, ಎಷ್ಟೋ ರೋಗಿಗಳಿಗೆ ಬದುಕಿನ ಭರವಸೆ ಮೂಡಿಸಿದ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ. ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಇತ್ತೀಚೆಗಷ್ಟೇ CANCER...

ARYAN KHAN:ಶಾರುಖ್ ಖಾನ್ ತಾಳ್ಮೆ ಪರೀಕ್ಷಿಸಿದ ಮಗ ಆರ್ಯನ್ ಖಾನ್.

Aryan Khan News: ಶಾರುಖ್ ಇಂಟ್ರೊಡಕ್ಷನ್​​​ ಸೀನ್​​ನೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ನಿರ್ದೇಶಕರ ಕುರ್ಚಿಯಲ್ಲಿ ಕುಳಿತ ARYAN KHAN​​, ಸೂಪರ್‌ ಸ್ಟಾರ್‌ನ ಶಾಟ್ ಅನ್ನು ಮತ್ತೆ ಮತ್ತೆ...