spot_img
spot_img

ಪ್ರಾಜೆಕ್ಟ್​​​​ ಅಂಕ ನೀಡದೇ ವಿದ್ಯಾರ್ಥಿಗಳು ಫೇಲ್​​ ಆರೋಪ

spot_img
spot_img

Share post:

ವಿಜಯನಗರ: ನಗರದಲ್ಲಿರುವ ಶ್ರೀ ಶಂಕರ್ ಆನಂದಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರಸ್ತೆಗೆ ಇಳಿದು ಪ್ರತಿಭಟನೆ ಮಾಡಿದ್ದಾರೆ.

ಪ್ರಾಜೆಕ್ಟ್ ವರ್ಕ್ ಮಾಡಿದರು ಫಲಿತಾಂಶದಲ್ಲಿ ಫೇಲ್​​​ ಹಾಗೂ ಗೈರು ಎಂದು ಬಂದಿರುವುದಕ್ಕೆ ಹೊಸಪೇಟೆಯ ಶ್ರೀ ಶಂಕರ್ ಆನಂದಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 6ನೇ ಸೆಮಿಸ್ಟರ್​ ಪದವಿ ವಿದ್ಯಾರ್ಥಿಗಳು ರಸ್ತೆಗೆ ಇಳಿದು ಪ್ರತಿಭಟನೆ ಮಾಡಿದ್ದಾರೆ.

“ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು ಕೊನೆಯ ವರ್ಷದ ಫಲಿತಾಂಶ ಮುಖ್ಯ ಅಡಿಪಾಯ. ಆದರೆ ಫಲಿತಾಂಶವೇ ಫೇಲ್​, ಗೈರು ಎಂದು ಅಂತ ಬಂದರೆ ಭವಿಷ್ಯ ಹೇಗೆ. ಮನೆಯಲ್ಲಿ ‘ನೀವು ಇಷ್ಟೆಲ್ಲಾ ಓದಿದ್ದೀರಿ, ಕಾಲೇಜನವರನ್ನು ಕೇಳಕ್ಕಾಗಲ್ವ’ ಎಂದು ಹೇಳಿಯೇ ಹೇಳುತ್ತಾರೆ.

ಈ ಬಗ್ಗೆ ನಾವು ಕೇಳಲು ಶುರು ಮಾಡಿ 20 ದಿನವಾಗಿದೆ. ಆದರೆ ಪ್ರಾಂಶುಪಾಲರು ನಮಗೆ ಪ್ರತಿಕ್ರಿಯಿಸುತ್ತಿಲ್ಲ. ಸಮಸ್ಯೆ ಆಗಿರುವುದೇ ಪ್ರಾಂಶುಪಾಲರ ಲಾಗಿನ್​ ಅಲ್ಲಿ ಅಂಕ ನೀಡದೇ ಇರುವುದರಿಂದ. ಆದರೆ ಪ್ರಾಶುಂಪಾಲರು ನನ್ನಿಂದ ಸಮಸ್ಯೆ ಆಗಿಲ್ಲ ಎಂದು ಹೇಳುತ್ತಾರೆ. ವಿಶ್ವವಿದ್ಯಾನಿಲಯಕ್ಕೆ ಹೋದರೆ ನಮ್ಮಿಂದ ತೊಂದರೆಯಾಗಿಲ್ಲ ಎಂದು ಅವರು ಹೇಳುತ್ತಾರೆ.

ಬಿಎ 6ನೇ ಸೆಮಿಸ್ಟರ್​ನ ಫಲಿತಾಂಶ ಬಂದು 1 ತಿಂಗಳು ಆಗಿದೆ. ಅದರಲ್ಲಿ ನಮ್ಮ ಕಾಲೇಜಿನ ಸುಮಾರು 103 ವಿದ್ಯಾರ್ಥಿಗಳ ಪ್ರಾಜೆಕ್ಟ್​ ಅಂಕ ಹೆಚ್​ಒಡಿ ಲಾಗಿನ್​ ಇಂದ ಆಗಿದೆ, ಪ್ರಾಂಶುಪಾಲರ ಲಾಗಿನ್​ ಇಂದ ಆಗಲಿಲ್ಲ ಎಂಬ ದೂರಿದೆ.

ಪ್ರಾಂಶುಪಾಲರ ಲಾಗಿನ್​ ಇಂದ ಆಗಬೇಕಾದರೆ ಅವರ ಲಾಗಿನ್​ ಅಲ್ಲಿ ವಿದ್ಯಾರ್ಥಿಗಳ ನಂಬರ್ ತೋರಿಸಬೇಕು. ಹಾಗಿದ್ದಾಗ ಅಂಕ ನೀಡಲು ಸಾಧ್ಯ. ಕೆಲವೊಂದು ಆಗಿಲ್ಲ. ಅವುಗಳೆನ್ನಲ್ಲ ಪರಿಷ್ಕರಣೆ ಮಾಡಿ ನಮ್ಮ ಹಂತ ಅಥವಾ ವಿಶ್ವವಿದ್ಯಾಲಯ ಹಂತದಲ್ಲಿ ಮಾಡಲು ಬರುವಂತದ್ದಲ್ಲ. ವಿಶ್ವವಿದ್ಯಾಲಯದಿಂದ ನಾವು ಮಾಹಿತಿ ಪಡೆದಾಗ ಅವರು ನೀವು ಇದನ್ನು ಟಿಕೆಟ್​ ರೈಸ್​ ಮಾಡಿ ಎಂದು ಹೇಳಿದ್ದಾರೆ.

ಅದಾಗಿ 20 ದಿನವಾಗಿದೆ. ಅಲ್ಲದೇ ಅದು ವಿಶ್ವವಿದ್ಯಾಲಯದ ಲಾಗಿನ್​ಗೆ ಬಂದು, ಮುಂದೆ ಅದು ರಿಜಿಸ್ಟರ್​ ಲಾಗಿನ್​ಗೆ ಬರುತ್ತದೆ. ಅಲ್ಲಿಂದ ಮುಂದೆ ಅದು ಬೆಂಗಳೂರಿಗೆ ಹೋಗಬೇಕಾಗುತ್ತದೆ. ಈಗ ರಿಜಿಸ್ಟರ್​ ಲಾಗಿನ್ ಅಲ್ಲಿ ಇದೆ. ಪ್ರತಿ ದಿನ ನಾವು ಯೂನಿವರ್ಸಿಟಿಯನ್ನು ಸಂಪರ್ಕ ಮಾಡುತ್ತಿದ್ದೇವೆ. ಅಲ್ಲಿಂದ ಆಗುತ್ತೆ, ಆಗುತ್ತೆ ಎಂಬ ಉತ್ತರ ಬರುತ್ತಿದೆ. ಆದರೆ ಮುಂದೆ ಹೋಗುತ್ತಿದೆ. ಇದು ನಮ್ಮ ಕೈಯಲ್ಲಿ ಇರುತ್ತಿದ್ದರೆ ನಾವು ಮಾಡುತ್ತಿದ್ದೆವು. ಈ ಮುಂದೆಯೇ ನಮ್ಮ ವಿದ್ಯಾರ್ಥಿಗಳಿಗೆ ಹೇಳಿದ್ದೆವು, ಆದರೆ ಅವರು ಅದನ್ನು ನೆಗ್​ಲೆಟ್​ ಮಾಡಿದ್ದಾರೆ.

ಒಬ್ಬ ವಿದ್ಯಾರ್ಥಿಗೆ 4 ವರ್ಷದಿಂದ ಮಾರ್ಕ್​ಕಾರ್ಡ್​ ಬಂದಿಲ್ಲವೆಂದರೆ, ಆಗ ಬಂದು ಕೇಳಬೇಕು ತಾನೇ ಅವರು. ಒಬ್ಬರೂ ಬಂದು ಕೇಳಿಲ್ಲ. ಈಗ ಬಂದು ಕೇಳಿದ್ದನ್ನು ತಪ್ಪು ಎಂದು ಹೇಳುತ್ತಿಲ್ಲ. ಇನ್ನು ನಾವು ಆ ತಪ್ಪನ್ನು ಸರಿಪಡಿಸಬೇಕಾಗಿದೆ ಎಂದು ಕಾಲೇಜಿನ ಪ್ರಾಶುಂಪಾಲ ಡಾ. ನಾರಾಯಣ ಹೆಬ್ಬೂರ್​ ಹೇಳಿದ್ದಾರೆ.

ನಾವು ಯಾರನ್ನೂ ಅಂತ ಕೇಳೋಣ. ನಮ್ಮ ಪ್ರಾಜೆಕ್ಟ್​​ ವರ್ಕ್​ಗೆ ಹೆಚ್​ಒಡಿ ಒಂದು ಅಂಕ ನೀಡಬೇಕು, ಹಾಗೇ, ಪ್ರಾಂಶುಪಾಲರು ಒಂದು ಅಂಕ ನೀಡಬೇಕು. ಹೆಚ್​ಒಡಿ ಲಾಗಿನ್​ ಅಲ್ಲಿ ನಮ್ಮ ಅಂಕ ಬಂದಿದೆ. ಆದರೆ ಪ್ರಿನ್ಸಿಪಾಲ್​​ ನಮಗೆ ಅಂಕ ನೀಡಿಲ್ಲ. ಈಗ ಅವರೇ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಅವರೇ ತೆಗೆದುಕೊಳ್ಳದಿದ್ದರೆ ನಾವು ಯಾರ ಹತ್ತಿರ ಹೋಗುವುದು ಎಂದು ಪ್ರಶ್ನಿಸಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...