spot_img
spot_img

ಬೆಂಗಳೂರು ಪುಸ್ತಕ ಸಂತೆಯಲ್ಲಿ ಮೂರು ಕೋಟಿ ರೂ. ವಹಿವಾಟು

spot_img
spot_img

Share post:

ಬೆಂಗಳೂರು : ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ ನ. 15ರಿಂದ 17ರವರೆಗೆ ಪುಸ್ತಕ ಸಂತೆ -2 ಆಯೋಜಿಸಲಾಗಿತ್ತು. ವೀರಲೋಕ ಪುಸ್ತಕ ಪ್ರಕಾಶನ ಸಂಸ್ಥೆಯ ಸಾರಥ್ಯದಲ್ಲಿ ಆಯೋಜಿಸಲಾಗಿದ್ದ ಈ ಪುಸ್ತಕ ಸಂತೆಯಲ್ಲಿ ಸುಮಾರು 3 ಕೋಟಿ ರೂ.ಗಳಷ್ಟು ಪುಸ್ತಕ ಮಾರಾಟವಾಗಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಮೇಳದಲ್ಲಿ ಕನ್ನಡ ಹಲವಾರು ಖ್ಯಾತ ಲೇಖಕರ, ಉದಯೋನ್ಮುಖ ಲೇಖಕರ ಕೃತಿಗಳನ್ನು ಮಾರಾಟಕ್ಕಿಡಲಾಗಿತ್ತು.

ಕಡೆಯ ದಿನವಂತೂ ಸಾವಿರಾರು ಸಂಖ್ಯೆಯಲ್ಲಿ ಪುಸ್ತಕ ಪ್ರೇಮಿಗಳು ಆಗಮಿಸಿ ಪುಸ್ತಕಗಳನ್ನು ಕೊಂಡು ಹೋಗಿದ್ದಾರೆಂದು ಆಯೋಜಕರು ತಿಳಿಸಿದ್ದಾರೆ.

ಕನ್ನಡ ಪ್ರೇಮ ಮತ್ತು ಓದಿನ ಆಸಕ್ತಿಯನ್ನು ಬೆಳೆಸುವ, ಸಾಹಿತ್ಯಾಭಿರುಚಿಯನ್ನು ಪಸರಿಸಲು ಮೂರು ದಿನಗಳ ಕಾಲ ಆಯೋಜಿಸಿದ್ದ ‘ವೀರಲೋಕ ಪುಸ್ತಕ ಸಂತೆ-2’ ಸಂಪನ್ನಗೊಂಡಿದ್ದು, ಸುಮಾರು 3 ಕೋಟಿ ರೂ.ಮೌಲ್ಯದ ಪುಸ್ತಕಗಧಿಳು ಮಾರಾಟವಾಗಿವೆ.

ಓದುಗರು, ಸಾಹಿತ್ಯಾಸಕ್ತರಿಂದ ಅಭೂತಪೂರ್ವ ಸ್ಪಂದನೆ ದೊರೆಯುವ ಮೂಲಕ ವೀರಲೋಕ ಸಂಸ್ಥೆಯು ಜಯನಗರದ ಶಾಲಿನಿ ಮೈದಾನದಲ್ಲಿಆಯೋಜಿಸಿದ್ದ ಪುಸ್ತಕ ಸಂತೆ ಯಶಕಂಡಿದೆ.

ಶುಕ್ರವಾರ ಮತ್ತು ಶನಿವಾರ ಮಧ್ಯಾಹ್ನ ಕೊಂಚ ಮಳೆ ಅಡಚಣೆ ಮಾಡಿದರೂ, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಕೊನೆಯ ದಿನವಾದ ಭಾನುವಾರ ಪುಸ್ತಕ ಸಂತೆ ಅಕ್ಷರಶಃ ಜಾತ್ರೆಯಂತೆ ಕಳೆಗಟ್ಟಿತ್ತು.

ಮಕ್ಕಳ ಮೇಳದಲ್ಲಿಮಕ್ಕಳೂ ಆಟವಾಡಿ ಸಂಭ್ರಮಿಸಿದರು. ಇದರ ನಡುವೆ ‘ಕವಿತೆ ಹುಟ್ಟುವ ಸಮಯ’ ಎಂಬ ವಿಷಯದ ಕುರಿತು ಕಾರ್ಯಾಗಾರ ನಡೆಯಿತು. ಕವಿ ವಾಸುದೇವ ನಾಡಿಗ್‌ ನಡೆಸಿಕೊಟ್ಟರು.

”ಮೂರು ದಿನಗಳ ಜಾತ್ರೆಯಲ್ಲಿಸುಮಾರು 1.25 ಲಕ್ಷ ಜನರು ಭಾಗವಹಿಸಿದ್ದು, ಸುಮಾರು 3 ಕೋಟಿ ರೂ. ಮೌಲ್ಯದ ಪುಸ್ತಕಗಧಿಳು ಮಾರಾಟವಾಗಿವೆ. ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ,” ಎಂದು ಆಯೋಜಕ, ಪ್ರಕಾಶಕ ವೀರಕಪುತ್ರ ಶ್ರೀನಿವಾಸ್‌ ಸಂತಸ ವ್ಯಕ್ತಪಡಿಸಿದರು.

ಒಟ್ಟಾರೆ ಮೂರು ದಿನಗಳ ಪುಸ್ತಕ ಸಂತೆಯಲ್ಲಿಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಡಾ.ಯಂಡಮೂರಿ ವೀರೇಂದ್ರನಾಥ್‌, ಎಸ್‌.ಎಲ್‌.ಬೈರಪ್ಪ, ರವಿ ಬೆಳಗೆರೆ, ಶಿವರಾಮ ಕಾರಂತ, ವಿಕ್ರಮ ಸಂಪತ್‌, ಸುಧಾಮೂರ್ತಿ, ಕೆ.ಎಸ್‌. ನಾರಾಯಣಾಚಾರ್ಯ, ಬೀಚಿ ಅವರ ಪುಸ್ತಕಗಳು ಹೆಚ್ಚು ಮಾರಾಟವಾಗಿವೆ.

ಬಹುತೇಕ ಹೊಸ ಮತ್ತು ಯುವ ಓದುಗರು ತೇಜಸ್ವಿ, ರವಿ ಬೆಳಗೆರೆ, ಬೈರಪ್ಪ ಅವರ ಪುಸ್ತಕಗಳನ್ನು ಖರೀದಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಕಂಡ ಲೇಖಕಿ ಸಹನಾ ವಿಜಯಕುಮಾರ್‌ ಅವರ ‘ಮಾಗಧ’ ಪುಸ್ತಕದ 400ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ ಎಂದು ವಿವಿಧ ಮಳಿಗೆಗಳ ಪುಸ್ತಕ ಮಾರಾಟಗಾರರು ತಿಳಿಸಿದರು.

ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‌, ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಶ್ರೀರಾಗಂ, ವಿಶ್ವೇಶ್ವರಭಟ್‌, ಎಂ.ಆರ್‌.ದತ್ತಾತ್ರಿ, ದೀಪಾ ಹಿರೇಗುತ್ತಿ, ನಾಗರಾಜ ವಸ್ತಾರೆ, ಡಾ.ಶರಣು ಹಲ್ಲೂರು, ದಾದಾ ಪೀರ್‌ ಜೈಮನ್‌ ಸೇರಿದಂತೆ ಹಲವು ಲೇಖಕರು ಭಾಗವಹಿಸಿ ಓದುಗರ ಜತೆ ಹರಟಿದರು.

ಲೇಖಕರನ್ನು ಕಂಡು ಪುಸ್ತಕಪೇಮಿಗಳು ಪುಳಕಿತರಾದರಲ್ಲದೆ, ಲೇಖಕರ ಹಸ್ತಾಕ್ಷರ ಪಡೆದು, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಡಾ.ಕೆ.ಬಿ.ಸೂರ್ಯಕುಮಾರ್‌ ಅವರ ‘ಮಂಗಳಿ’, ಡಾ.ಮೈಸೂರು ನಾಗರಾಜ ಶರ್ಮ ಅವರ ‘ಸಂಚು ವಂಚನೆಗಳ ಲೋಕದಲ್ಲಿ’, ಸರ್ವಮಂಗಳಾ ಜಯರಾಂ ಅವರ ‘ಸಂಜೆ ಸುರಿದ ಮಳೆ’, ವೆಂಕಟೇಶ ಪಿ.ಮರಕಂದಿನ್ನಿ ಅವರ ‘ಪಡಸಾಲಿ’ ಲೇಖಕಿ ಪಿ.ಚಂದ್ರಿಕಾ ಅವರ ‘ಪ್ಯಾಲೆಟ್‌’, ಮಂಜುನಾಥ್‌ ಚಾಂದ್‌ ಅವರ ‘ಪ್ರಿಯ ಮೀರಾ’, ಡಾ.ಡಿ.ವಿ.ಗುರುಪ್ರಸಾದ್‌ ಅವರ ‘ಸಮರಕಂಡ’, ಡಾ.ಡಿ.ಎಸ್‌.ಚೌಗಲೆ ಅವರ ‘ಸದರ ಬಜಾರ್‌’, ರಾಮ್‌ ಕದಮ್‌ ಅವರ ‘ಮನೆ ಎಂಜಿನಿಯರ್‌’, ಶ್ರೀದೇವಿ ಕಳಸದ ಅವರ ‘ಹಮ್ಮಾ ಹೂ’, ಅನುಬೆಳ್ಳೆ ಅವರ ‘ನಗು ಎಂದಿದೆ ಮಂಜಿನ ಬಿಂದು’ ಪುಸ್ತಕಗಳು ಬಿಡುಗಡೆಗೊಂಡವು.

ಪೊಲೀಸ್‌ ಆಯುಕ್ತ ಬಿ.ದಯಾನಂದ್‌, ನಿರ್ದೇಶಕ ಟಿ.ಎನ್‌.ಸೀತಾರಾಮ್‌, ಪತ್ರಕರ್ತರಾದ ವಿಶ್ವೇಶ್ವರ್‌ ಭಟ್‌, ರಾಧಾ ಹೀರೇಗೌಡ ಅವರು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...