spot_img
spot_img

ಮಹಿಳಾ ಉದ್ಯಮಿಯನ್ನು ವಿವಸ್ತ್ರಗೊಳಿಸಿ ವಿಚಾರಣೆ : ಡಿವೈಎಸ್‌ಪಿ ಗೆ ಗೇಟ್ ಪಾಸ್

spot_img
spot_img

Share post:

ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣದ ತನಿಖಾಧಿಕಾರಿ ಡಿವೈಎಸ್‌ಪಿ ಕನಕಲಕ್ಷ್ಮೀ ಅವರನ್ನು ಹೊರಗಿಟ್ಟು ಸಿಐಡಿ ತನಿಖೆ ಮುಂದುವರಿಸಲಾಗಿದೆ.

ಉದ್ಯಮಿ, ವಕೀಲೆ ಜೀವಾ ಆತ್ಮಹತ್ಯೆಗೆ ಪ್ರಚೋದನೆ ಹಾಗೂ 25 ಲಕ್ಷ ರೂ.ಲಂಚ ಬೇಡಿಕೆಯಿಟ್ಟಿದ್ದ ಆರೋಪದ ಉರುಳು ಡಿವೈಎಸ್‌ಪಿ ಕನಕಲಕ್ಷ್ಮೀ ಅವರಿಗೆ ಸುತ್ತಿಕೊಂಡಿತ್ತು. ಈ ಬನಶಂಕರಿ ಠಾಣೆಯಲ್ಲಿ ಕನಕಲಕ್ಷ್ಮೀ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಸಂಬಂಧ ಸಿಸಿಬಿ ತನಿಖೆ ನಡೆಸುತ್ತಿದೆ.

ಈ ಬೆಳವಣಿಗೆಗಳ ಬೆನ್ನಲ್ಲೇ ಸಿದ್ದಾಪುರ ಠಾಣೆಯಲ್ಲಿ ಭೋವಿ ನಿಗಮದ ಅಕ್ರಮ ಪ್ರಕರಣದ ತನಿಖಾಧಿಕಾರಿ ಆಗಿದ್ದ ಕನಕಲಕ್ಷ್ಮೀ ಅವರನ್ನು ಬದಲಾಯಿಸಲಾಗಿದೆ. ಭೋವಿ ಅಭಿವೃದ್ಧಿ ನಿಗಮದಲ್ಲಿ ನಕಲಿ ಫಲಾನುಭವಿಗಳ ಹೆಸರಿನಲ್ಲಿ ಸಾಲ ಮಂಜೂರು ಮಾಡಿರುವ ಸುಮಾರು 90 ಕೋಟಿ ರೂ. ಮೊತ್ತದ ಅಕ್ರಮಕ್ಕೆ ಸಂಬಂಧಿಸಿದಂತೆ 2023ರಿಂದ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸುತ್ತಿದೆ.

ಪ್ರತಿ ಪ್ರಕರಣಕ್ಕೆ ಪ್ರತ್ಯೇಕ ತನಿಖಾಧಿಕಾರಿ ನಿಯೋಜಿಸಲಾಗಿದೆ. ಪ್ರಕರಣಗಳು ತನಿಖಾ ಹಂತದಲ್ಲಿದ್ದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿಲ್ಲ ಎಂದು ಮೂಲಗಳು ಹೇಳಿವೆ. ಮತ್ತೊಬ್ಬ ಡಿವೈಎಸ್‌ಪಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ.

25 ಲಕ್ಷ ರೂ.ಗಳಿಗೆ ಲಂಚ ಬೇಡಿಕೆ ಹಾಗೂ ವಿವಸ್ತ್ರಗೊಳಿಸಿ ಜೀವಾ ಅವರನ್ನು ವಿಚಾರಣೆ ನಡೆಸಿದ ಆರೋಪ ಸಂಬಂಧ ತನಿಖಾಧಿಕಾರಿ ಕನಕಲಕ್ಷ್ಮೀ ವಿರುದ್ಧ ಆಂತರಿಕ ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ ಸಿಐಡಿ ಉನ್ನತ ಮೂಲಗಳು ತಿಳಿಸಿವೆ.

ಭೋವಿ ಅಭಿವೃದ್ಧಿ ನಿಗಮದಿಂದ 46 ಮಹಿಳೆಯರಿಗೆ 2021ರಿಂದ 2023ರ ನಡುವಣ ಅವಧಿಯಲ್ಲಿ ತಲಾ ಐದು ಲಕ್ಷ ರೂ. ಸಾಲ ಮಂಜೂರಾಗಿತ್ತು. ಆದರೆ, ಫಲಾನುಭವಿ ಮಹಿಳೆಯರಿಗೆ ಕೇವಲ 50 ಸಾವಿರ ರೂ.ಮಾತ್ರ ಸಿಕ್ಕಿದ್ದು, ಉಳಿದ ಮೊತ್ತವನ್ನು ಅನಿಕಾ ಎಂಟರ್‌ಪ್ರೈಸಸ್‌, ನ್ಯೂ ಡ್ರೀಮ್ಸ್‌ ಎಂಟರ್‌ಪ್ರೈಸಸ್‌ ಸೇರಿದಂತೆ ಹಲವರ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿತ್ತು. ಸುಮಾರು 23 ಕೋಟಿ ರೂ.ವಂಚನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಸಂತ್ರಸ್ತ ಮಹಿಳೆಯರು ದೂರು ನೀಡಿದ್ದರು.

ಫಲಾನುಭವಿ ಮಹಿಳೆಯರಿಗೆ ಮಂಜೂರಾದ ಐದು ಲಕ್ಷ ರೂ. ಮೊತ್ತ ಮೊದಲಿಗೆ ಅನಿಕಾ ಎಂಟರ್‌ಪ್ರೈಸಸ್‌ ಹಾಗೂ ಇತರೆ ಕಂಪನಿಗಳ ಖಾತೆಗೆ ಬ್ಯಾಂಕ್‌ನಿಂದ ವರ್ಗಾವಣೆ ಆಗುತ್ತಿತ್ತು. ಈ ಮೊತ್ತದಲ್ಲಿ 50 ಸಾವಿರ ರೂ. ಫಲಾನುಭವಿ ಮಹಿಳೆಗೆ ವರ್ಗಾಯಿಸಲಾಗಿತ್ತು. ಬಳಿಕ ಪುನಃ ಕಮಿಷನ್‌ ನೆಪದಲ್ಲಿ 25 ಸಾವಿರ ರೂ.ವಾಪಸ್‌ ಪಡೆಯಲಾಗಿತ್ತು ಎಂದು ಮೂಲಗಳು ಹೇಳಿವೆ.

ಈ ಪ್ರಕರಣದ ತನಿಖೆಯಲ್ಲಿವಕೀಲೆ, ಉದ್ಯಮಿ ಜೀವಾ ಅವರು ವ್ಯವಸ್ಥಾಪಕ ನಿರ್ದೇಶಕಿ ಎನ್ನಲಾದ ಅನಿಕಾ ಎಂಟರ್‌ಪ್ರೈಸಸ್‌ ಕಂಪನಿ ಖಾತೆಗೆ ಸುಮಾರು 7.16 ಕೋಟಿ ರೂ. ವರ್ಗಾವಣೆಯಾಗಿತ್ತು. ಅವರ ಸಹೋದರಿ ಸಂಗೀತಾ ಮಾಲೀಕರು ಎನ್ನಲಾದ ಹರ್ನಿತಾ ಎಂಟರ್‌ಪ್ರೈಸಸ್‌ ಖಾತೆಗೆ 3.8 ಕೋಟಿ ರೂ. ಸಂದಾಯವಾಗಿದ್ದ ವಿಚಾರ ಬಯಲಾಗಿತ್ತು ಎಂದು ಸಿಐಡಿ ಮೂಲಗಳು ಹೇಳಿವೆ.

ಅನಿಕಾ ಎಂಟರ್‌ಪ್ರೈಸಸ್‌ ಕಂಪನಿಗೆ ಸ್ವಂತ ಕಚೇರಿಯೇ ಇರಲಿಲ್ಲ. ಪೀಣ್ಯ ಸಮೀಪದ ದನದ ಕೊಟ್ಟಿಗೆ ವಿಳಾಸ ನೀಡಿ ಬ್ಯಾಂಕ್‌ನಿಂದ ಹಣ ಮಂಜೂರು ಮಾಡಿಸಿಕೊಳ್ಳಲಾಗಿತ್ತು. ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಸಿಬಿ ವಿಶೇಷ ವಿಚಾರಣಾ ದಳ ಚುರುಕುಗೊಳಿಸಿದೆ.

ಡಿವೈಎಸ್‌ಪಿ ಕನಕಲಕ್ಷ್ಮೀ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಪುರಾವೆಗಳನ್ನು ಸಂಗ್ರಹಿಸುತ್ತಿದೆ. ಜತೆಗೆ, ದೂರುದಾರರಿಂದ ಮತ್ತಷ್ಟು ಮಾಹಿತಿ ಪಡೆಯುತ್ತಿದೆ. ಆರೋಪಿ ಕನಕಲಕ್ಷ್ಮೀ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ಹೇಳಿವೆ.

ಹರ್ನಿಕಾ ಹಾಗೂ ನ್ಯೂ ಡ್ರೀಮ್ಸ್‌ ಕಂಪನಿ ಕಚೇರಿಗಳ ವಿಳಾಸವನ್ನು ನಿಗಮದ ಮಾಜಿ ಎಂಡಿ ಬಿ.ಕೆ. ನಾಗರಾಜಪ್ಪ ಅವರ ಬಾಡಿಗೆ ಮನೆಗಳ ವಿಳಾಸ ನೀಡಲಾಗಿತ್ತು. ಈ ಮನೆಗಳಲ್ಲಿ ಜೀವಾ, ಸಂಗೀತಾ ಬಾಡಿಗೆಗೆ ವಾಸವಿದ್ದರು. ನಾಗರಾಜಪ್ಪನ ಸೂತ್ರದಂತೆ ಇಡೀ ಅಕ್ರಮದ ಹಣ ವರ್ಗಾವಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...